ಬಹಿರಂಗ
ಕರ್ನಾಟಕದ ಅಂಬೇಡ್ಕರ್ ‘ಪ್ರೊ.ಬಿ.ಕೃಷ್ಣಪ್ಪ’..!
ಪ್ರೋ.ಬಿ.ಕೃಷ್ಣಪ್ಪ ಅಂದ್ರೆ ಅದೊಂದು ಅಂಬೇಡ್ಕರ್ ಸಿದ್ದಾಂತದ ಮಾತೃಕೆ.ಕರ್ನಾಟಕದ ಕೋಟ್ಯಂತರ ಶೋಷಿತರ ಎದೆಯೊಳಗೆ ಮನುಷ್ಯತ್ವಕ್ಕಾಗಿ ಹೋರಾಟದ ಕಿಚ್ಚಚ್ಚಿದ ಸಂಘರ್ಷದ ಬೆಂಕಿ. ಭೀಮವಾದವೆಂಬ ಬೀಜವನ್ನು ನಾಡಿನ ದಲಿತರ ತಲೆಯೊಳಗೆ ಬಿತ್ತಿದ ಅಪ್ಪಟ ಅಂಬೇಡ್ಕರ್ ವಾದಿ.
ಸಾಮಾಜಿಕ ಸಂಕಟಗಳಿಗೆ ಸಿಲುಕಿ ನಲುಗಿದ್ದ ಅಸ್ಪೃಶ್ಯರಿಗೆ ಧ್ವನಿಯಾದವರು.ತಾನು ಗಂಧದಂತೆ ತೇದು ನಾಶವಾಗಿ ದಲಿತರಿಗೆ ಸುಗಂದ ನೀಡಿದ ಮಹಾತ್ಮನೆಂದತೆ ಬಿ.ಕೃಷ್ಣಪ್ಪ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಎಂಬ ಹಳ್ಳಿಯಲ್ಲಿ ತಾಯಿ ಚೌಡಮ್ಮ ತಂದೆ ಬಸಪ್ಪರ ಮಗನಾಗಿ ಜನಿಸಿದ ಬಿಕೆ ಬಾಲ್ಯದ ಬದುಕಿನಲ್ಲಿಯೆ ಅನೇಕ ಅವಮಾನ ಅಪಮಾನ ಅನುಭವಿಸಿ ಅದರ ವಿರುದ್ದ ಪ್ರತಿರೋಧ ಒಡ್ಡುತ್ತಿದ್ದ ಛಲಗಾರ.
ಕನ್ನಡದಲ್ಲಿ ಎಮ್ ಎ ಮುಗಿಸಿ ಭದ್ರಾವತಿಯ ಸರ್ ಎಮ್.ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದರು.
ಅಂಬೇಡ್ಕರ್ ಸಿದ್ದಾಂತಕ್ಕೆ ಬದ್ದನಾಗಿದ್ದ ಬಿಕೆ ತಾನು ಪ್ರೀತಿಸಿದ ಬ್ರಾಹ್ಣರ ಹುಡುಗಿಯಾದ ಇಂದಿರಾರವರನ್ನು ಮದುವೆಯಾಗುವುದರ ಮೂಲಕ ಬಸವಾದಿಶರಣರು ಪ್ರೋತ್ಸಾಹಿಸಿದ ಹಾಗು ಬಾಬಸಾಹೇಬರು ಒಪ್ಪಿಕೊಂಡಿದ್ದ ಅಂತರ್ಜಾತಿ ವಿವಾಹವಾದರು.ಇದರೊಂದಿಗೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ ನಡೆಯುತಿದ್ದ ದಲಿತರ ಮೇಲಿನ ದೌರ್ಜನ್ಯಗಳು ದಲಿತ ಸಂಘರ್ಷ ಸಮಿತಿ ಸ್ಥಾಪಿಸಲು ತತ್ ಕ್ಷಣದ ಕಾರಣವಾಯಿತು. 1974ರಲ್ಲಿ ಬಿಕೆಯವರು ಟಿ.ರಾಜಣ್ಣ.ಎಸ್.ಟಿ.ರಾಜು,ಎನ್ .ಗಿರಿಯಪ್ಪ.ಈರಯ್ಯ.ಬೋರಯ್ಯ ಮುಂತಾದ ದಲಿತರ ಸಮ್ಮುಖದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯೆಂಬ ಸಂಘಟನೆಯನ್ನು ಹುಟ್ಟು ಹಾಕಿದರು.
ಎಲ್ಲೆಡೆ ನಡೆಯುತಿದ್ದ ದಲಿತರ ಶೋಷಣೆ. ದೌರ್ಜನ್ಯ. ಕೊಲೆ.ಹಲ್ಲೆಅತ್ಯಾಚಾರಗಳು ನಾಯಿಕೊಡೆಯಂತೆ ರಾರಜಿಸುತಿದ್ದವು ಇದೊಂದು ಸಂದಗ್ದ ಸಮಯ ಬಿಕೆಯವರಿಗೆ ಸಿಕ್ಕಿದ್ದೆ ತಡ ಈ ದಲಿತ ಸಂಘಟನೆ ರಾಜ್ಯಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿತು.ಚಂದ್ರಗುತ್ತಿಯ ಬೆತ್ತಲೆ ಸೇವೆ ವಿರುದ್ದ .ತತ್ತೂರಿನಲ್ಲಿ ದಲಿತರಿಗೆ ಮಲ ತಿನಿಸಿದ ಪ್ರಕರಣ.ಕ್ಯಾಸಿನಕೆರೆ ಅಸ್ಪೃಶ್ಯತೆ ವಿರುದ್ದ.ಪತ್ರಸಂಗಪ್ಪನ ಕೊಲೆ.ದುರ್ಗಪ್ಪನ ಕೊಲೆ.ಭೂಪರವಾನಗಿ ನಿಷೇಧ ಕಾಯ್ದೆಯ ಪರ.ಸಿದ್ಲಿಪುರ ಭೂಮಿ ಹೋರಾಟ. ಮೊದಲಾದ ಅಮಾನವೀಯ ಪ್ರಕರಣಗಳ ವಿರುದ್ದ ಪ್ರತಿಭಟಿಸಿ ದೇಶಾದ್ಯಂತ ಹೆಸರಾಗಿತ್ತು.ಬಿಕೆಯವರು ಬಾಬಸಾಹೇಬರ ಬರಹಗಳನ್ನು ಸಂಪೂರ್ಣವಾಗಿ ಓದಿ ಕೊಂಡಿದ್ದರು ಬುದ್ದನ ಸಿದ್ದಾಂತ ಬಸವಣ್ಣನ ಕಾಯಕ ಪರಂಪರೆ ಬಿಕೆಯವರಿಗೆ ಶಕ್ತಿಸಾಧಕಗಳಾದವು.
ಬಿಕೆ ಕರ್ನಾಟಕದಾದ್ಯಂತ ಯುವಕನಂತೆ ತಿರುಗಿ ಬಾಬಸಾಹೇಬರ ಹೋರಾಟಗಳನ್ನು ತಿಳಿಸುವುದರ ಮೂಲಕ ಕೋಟ್ಯಂತರ ದಲಿತರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿ ಸ್ವಾಭಿಮಾನದ ನಾಯಕರನ್ನು ಹುಟ್ಟುಹಾಕಿದರು. ದೇಶದ ಯಾವುದೆ ಮೂಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೆ ದಸಂಸ ಅದನ್ನು ಖಂಡಿಸುತಿತ್ತು ಬಡಬಗ್ಗರಿಗೆ ದೀನದಲಿತರ ವಿರುದ್ದ ಮಾಡುವ ಕಾನೂನು ಕಾಯ್ದೆಗಳನ್ನು ವಿರೋಧಿಸುತ್ತಾ ಶೋಷಣೆ ತಡೆಯುವಲ್ಲಿ ವಿಪಲವಾದ ಸರ್ಕಾರಗಳಿಗೆ ದಸಂಸ ಸಿಂಹಸ್ವಪ್ನವಾಗಿ ಗುಡುಗುತಿತ್ತು.ಒಂದು ರೀತಿಯಲ್ಲಿ ವಿರೋಧಪಕ್ಷದನಾಯಕಂತೆ ಕಾರ್ಯವನ್ನು ನಿರ್ವಹಿಸುತಿತ್ತು.
ಅದಾಗಲೆ ಉತ್ತರ ಪ್ರದೇಶದಲ್ಲಿ ಬಹುಜನ ಚಳುವಳಿ ಆಳುವ ಮಟ್ಟಿಗೆ ಹಬ್ಬಿರುತ್ತದೆ”ಪೊಲಿಟಿಕಲ್ ಪವರ್ ಇಸ್ ದ ಮಾಸ್ಟರ್ ಕೀ”ಎಂಬ ಬಾಬಸಾಹೇಬರ ಮಹದಾಸೆಯಂತೆ ರಾಕೀಯ ವಿಜ್ಞಾನಿ ದಾದಾಸಾಹೇಬ್ ಕಾನ್ಷಿರಾಂ ಸಾಹೇಬರು ಉತ್ತರದಲ್ಲಿ ದಲಿತರನ್ನು ಬೇಡುವ ವರ್ಗಕ್ಕೆ ಮಾತ್ರ ಸೀಮಿತಗೊಳಿಸದೆ ಆಳುವ ವರ್ಗಮಾಡುವ ಕೆಲಸವನ್ನು ಪೂರ್ವಿಕರ ಇತಿಹಾಸದೊಂದಿಗೆ ರಾಜ್ಯಾಧಿಕಾರದ ಮಹತ್ವನ್ನು ಹೇಳಿ ಯಶಸ್ವಿಯಾಗಿದ್ದರು.ಇದು ಕೇವಲ ಉತ್ತರಪ್ರದೇಶದಕ್ಕೆ ಮಾತ್ರ ಸೀಮಿತವಾಗದೆ ಅಖಂಡ ಭಾರತದಾದ್ಯಂತ ಬಹುಜನ ಚಳುವಳಿಯನ್ನು ಕಟ್ಟಲಿಕೆ ಯೋಚಿಸುತ್ತಾರೆ ಅಂತಹ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಸಿಕ್ಕಿದ ದೊಡ್ಡ ಶಕ್ತಿ ಒಳ್ಳೆ ವ್ಯಕ್ತಿ ಎಂದರೆ ಬಿಕೆಯವರು.
ಕಾನ್ಷೀರಾಮ್ ಸಾಹೇಬರು ಬಿಕೆಯೊಂದಿಗೆ ಮಾತನಾಡಿ ಬಾಬಸಾಹೇಬರ “ಕೊನೆ ಆಸೆ” ಯನ್ನು ಹೇಳುತ್ತಾರೆ.ಅಲ್ಲದೆ ದಲಿತ ಹೋರಾಟಗಳು ಮನವಿ ಕೊಡುವುದಕ್ಕೆ ಸೀಮಿತಗೊಳ್ಳದೆ ಮನಸ್ಸು ಮಾಡಿದರೆ ಮನವಿ ತೆಗೆದುಕೊಳ್ಳಬಹುದು ಎಂಬುದು ಬಿಕೆಯವರಲ್ಲಿ ಚಿಗೊರಡೆಯಿತು.ಬಿಕೆಯವರು ಒಂದು ದಿನ ಇಡೀ ದಲಿತ ನಾಯಕರನ್ನು ಸಭೆಕರೆದು “ನಾನು ಗುಡ್ಡಕ್ಕೆ ಕಲ್ಲೊತ್ತೆ” ಇಷ್ಟು ವರ್ಷ ಏನು ಸಾಧಿಸಲಿಕೆ ಆಗಲಿಲ್ಲ ಆಗಾಗಿ ದಲಿತರ ವಿಮೋಚನೆಗೆ ರಾಜ್ಯಾಧಿಕಾರವೆ ಮೂಲ ಮದ್ದು.ಬಾಬಸಾಹೇಬರ ಮಹದಾಸೆಯು ಇದೆ ಆಗಿತ್ತು ಆಗಾಗಿ ದಸಂಸವನ್ನು ಬಿಎಸ್ ಪಿಗೆ ವಿಲೀನಗೊಳಿಸೋಣ ದೇಶಾದ್ಯಂತ ಬೀಸುತ್ತಿರುವ ಪರಿವರ್ತನೆ ಗಾಳಿ ನಾಡಿನೆಲ್ಲೆಡೆ ಬೀಸಲಿ ಎಂದರು. ಅಲ್ಲದೆ ಎಲ್ಲರು ಒಪ್ಪಿದ್ದರು ರಾತ್ರಿಯ ವೇಳೆ ಜನತಾದಳದ ಬೂಟುನೆಕ್ಕಿ ಬೆಳಿಗ್ಗೆ ದೊಡ್ಡ ದಲಿತನಾಯಕರಂತೆ ನಟಿಸುತಿದ್ದ ಗೋಮುಖವ್ಯಾಘ್ರರು ಒಲ್ಲದ ಮನಸಿನಲ್ಲಿ ಒಪ್ಪುತ್ತಾರೆ.
ಬಿಕೆಯವರಿಗೆ ಈಗ ಆನೆಬಲ ಬರುತ್ತದೆ.”ಪರಿವರ್ತನೆಗಾಗಿ ಬಿಎಸ್ಪಿಗೆ”ಎಂಬ ಸ್ಲೋಗನ್ ಹಿಡಿದು ಊರೂರು ಅಲೆದು ಬಹುಜನ ಚಳುವಳಿಯನ್ನು ಕಟ್ಟುತ್ತಾರೆ.ಅಂಬೇಡ್ಕರ್ ವಾದಕ್ಕಿರುವ ಶಕ್ತಿಯನ್ನು ಎಲ್ಲರಿಗು ತಿಳಿಸುತ್ತಾರೆ.ಹೇಗಾದರು ಮಾಡಿ ಆಳುವ ವರ್ಗವಾಗಲೇಬೇಕು ಎಂಬ ಹಠ ಹಿಡಿಯುತ್ತಾರೆ.
ಅದೆ ಸಮಯದಲ್ಲಿ ಉತ್ತರಪ್ರದೇಶದಲ್ಲಿ ಬಿಎಸ್ಪಿ ಎಸ್ಪಿಯೊಂದಿಗೆ ಮೈತ್ರಿಕಡಿದುಕೊಂಡು ಬಿಜೆಪಿಯೊಂದಿಗೆ ಕೈ ಜೋಡಿಸಿ ಅಕ್ಕಾಮಾಯವತಿಯನ್ನು ಮುಖ್ಯಮಂತ್ರಿ ಮಾಡಿ ಮೈತ್ರಿ ಮುಂದುವರೆಸುತ್ತದೆ.
ಯಾರಾದರೇನು.?ನಮಗೆ ಬೇಕಾಗಿರುವುದು ರಾಜ್ಯಾಧಿಕಾರ.ಎಂಬ ತತ್ವ ಕಾನ್ಷಿರಾಂ ಅವರದಾಗಿತ್ತು.ಆದರೆ ದಲಿತ ಚಳುವಳಿಯ ಮೆದುಳಿನಂತೆ ಕೆಲಸ ಮಾಡುತಿದ್ದ ಬುದ್ದಿಗೇಡಿ ಬುದ್ದಿಜೀವಿಗಳು ಹಾಗು ಜನತಾದಳದ ಮಲಮೂತ್ರಕುಡಿಯಲು ಸಂಧರ್ಭಗಳನ್ನು ಕಾಯುತಿದ್ದ ದಲಿತ ನಾಯಕರು”ಅಯ್ಯೊ ಕೋಮುವಾದಿಗಳೊಂದಿಗೆ ಕೈ ಜೋಡಿಸಿದ್ದಾರೆ ಎಂದು ಡಂಗುರ ಸಾರುತ್ತಲೆ ದಸಂಸವನ್ನು ಕತ್ತಿಯಿಂದ ಎರಡು ಸೀಳು ಮಾಡಿದರು.
ಬಿಕೆಯೊಂದಿಗಿದ್ದ ಡಿಜಿ ಸಾಗರ್ ರವರು ಹೊರಬಂದು ಸಾಗರ್ ಬಣವೆಂದು ಮಾಡಿಕೊಂಡು ಜನತಾದಳಕ್ಕೆ ಬೇಷರತ್ತಾಗಿ ಬೆಂಬಲ ಸೂಚಿಸುತ್ತಾರೆ. ಇನ್ನು ಎದೆಯೊಳಗೆ ಗಾಂಧಿವಾದದ ಬೀಜ ಬೀಳಿಸಿಕೊಂಡಿದ್ದ ದೇವನೂರು ಮಹಾದೇವರು.ಕಮ್ಯುನಿಸ್ಟ್ ಚಳುವಳಿಯನ್ನು ಮೈಗಂಟಿಸಿಕೊಂಡು ಇಕ್ರಲಾ ವದಿರ್ಲಾ ಎಂದು ಹಾಡುತಿದ್ದ ಡಾ.ಸಿದ್ದಲಿಂಗಯ್ಯರವರು ಮುಂತಾದ ಸಾಹಿತಿಗಳು ಉತ್ತರದ ನಿರ್ಧಾರವನ್ನು ಖಡಾಖಂಡಿತವಾಗಿ ವಿರೋಧಿಸಿದರು.
ಇದರೊಂದಿಗೆ ಬಿಕೆಯವರನ್ನು ಒಬ್ಬಂಟಿಗಾರನ್ನಾಗಿ ಮಾಡಿದರು.
ಆದರೆ ಬಿಕೆಗೆ ನೋವಾದರು ಎದೆಗುಂದದೆ “ಕಾನ್ಷಿರಾಂ ಸಾಹೇಬರು ಏನೆ ನಿರ್ಧಾರ ತೆಗೆದುಕೊಂಡರು ಅದು ದಲಿತರಿಗೆ ಬಹುಜನರಿಗೆ ಒಳ್ಳೆಯದಾಗಲಿಕೆ ನಿರ್ಧಾರ ತೆಗೆದು ಕೊಂಡಿದ್ದಾರೆ ಎಂದು ಕಾನ್ಷಿರಾಂರ ಮೈತ್ರಿಯನ್ನು ಸಮರ್ಥಿಸಿಕೊಂಡರು.ಬಿಕೆ ಅಂದ್ರೆ ಅಂಬೇಡ್ಕರ್ ಬಂಡೆಯಂತೆ ಗಟ್ಟಿಯಾಗಿದ್ದರು. ಎಮ್.ಜಯಣ್ಣ. ಶ್ರೀಧರ್ ಕಲ್ವೀರ್.ಹೂಡಿ ವೆಂಕಟೇಶ್.ಕೋಲಾರದ ಶಿವಣ್ಣ.ಮಂಗಳೂರಿನ ಗಂಗಾದರಯ್ಯ.ಚಂದ್ರಪ್ರಸಾಧ್ ತ್ಯಾಗಿ.ಮಾವಳ್ಳಿ ಶಂಕರ್.ಮುಂತಾದ ದಲಿತ ನಾಯಕರನ್ನು ಒಟ್ಟುಗೊಡಿಸಿ ಎಮ್.ಜಯಣ್ಣರವರನ್ನು ದಸಂಸದ ರಾಜ್ಯಸಂಚಾಲಕರನ್ನಾ ಮಾಡಿ ತಾವುಗಳು ಎಲ್ಲರ ಸಹಕಾರದಿಂದ ಬಹುಜನ ಚಳುವಳಿಯನ್ನು ಮುಂದುವರೆಸಿದರು.
ಚಿತ್ರದುರ್ಗದಲ್ಲಿ ಎಮ್ ಜಯಣ್ಣನವರ ನೇತೃತ್ವದಲ್ಲಿ ” ದಲಿತರ ಪುನಶ್ಚೇತನ ಸಮಾವೇಶ” ಮಾಡಲು ನಿಂತಾಗ ಕೆಲವು ಬುದ್ದಿಜೀವಿಗಳು ಬರದೆ ಬರುವವರನ್ನು ಬಿಡದೆ ಬಿಕೆಯವರಿಗೆ ನೋವು ಮಾಡಿದರು.ಆದರೆ ಆ ಸಮಾವೇಶ ತುಂಬಾಯಶಸ್ವಿಯಾಯಿತು.ಕೆಲವು ಘಟಾನುಘಟಿ ದಲಿತ ನಾಯಕರು ಬರದಿದ್ದಕ್ಕೆ ಅಸಮಧಾನವು ಆಯಿತು.
ಬಿ.ಕೆಯವರು ಯಾವ ವಾದವನ್ನು ಬೆನ್ನತ್ತಲಿಲ್ಲ
“ನಮ್ಮ ರಾಷ್ಟನಾಯಕ ಬಾಬಸಾಹೇಬ ಅಂಬೇಡ್ಕರ್.ನಮ್ಮ ಸಿದ್ದಾಂತ ಅಂಬೇಡ್ಕರ್ ವಾದ.ನಮ್ಮ ಪಕ್ಷ ಬಹುಜನ ಸಮಾಜ ಪಕ್ಷ. ನಮ್ಮ ಧರ್ಮ ಬೌದ್ದ ಧರ್ಮ ಎಂಬ ಮಹಾಸಂದೇಶಗಳನ್ನು ದಲಿತರಿಗೆ ನೀಡಿದರು ಇದಲ್ಲದೆ ಇನ್ನ ಯಾವುದರಿಂದಲೂ ನೀವು ಉದ್ದಾರವಾಗುವುದಿಲ್ಲ ಎಂದು ಭವಿಷ್ಯ ನುಡಿದರು.
ಬಿಕೆಯವರಿಗೆ ತುಂಬಾ ನೋವಿನ ದಿನಗಳು ಬರಲಾರಂಬವಾದವು ಮನುವಾದಿಗಳಿಗಿಂತ ತನ್ನವರೆ ತನಗೆ ಮೇಲಿಂದ ಮೇಲೆ ಗಾಯಮಾಡಿದರು.ತಾನು ಬೆಳೆಸಿದ ಹುಡುಗರು ಹಾಗುನಾನು ಕಲಿಸಿದ ಸಂಘರ್ಷದ ಪಾಠವನ್ನು ಇಂದು ತನಗೆ ಕಲಿಸುತ್ತಿರುವುದು.ದಲಿತ ಸಂಘಟನೆಯಲ್ಲಿ.ಚೆಡ್ಡಿಹಾಕುವ ಬಾಲಕರೆಲ್ಲಾ ಬಿಕೆಯವರಿಗೆ ಅರಳುಮರಳು ಎಂದು ಛೇಡಿಸುವುದನ್ನು ಕಣ್ಣಾರೆ ಕಂಡು ಮಮ್ಮಲ ಮರುಗುತಿದ್ದರು.
ಬಿಕೆ ಬಾಬಸಾಹೇಬರಂತೆ ಶಿಸ್ತಿಗೆ ತುಂಬಾ ಒತ್ತುಕೊಡುತಿದ್ದರು ತಮ್ಮ ಬಟ್ಟೆಗಳನ್ನೆಲ್ಲಾ ತಾವೆ ತೊಳೆದುಕೊಳ್ಳುತಿದ್ದರು.ಕುಡಿತ ಸಿಗರೇಟ್ ಮಸ್ತ್ ಮಾಜಾನೆ ಇಲ್ಲದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು.ಸರಾಯಿಬೇಡ “ಹೋಬಳಿಗೊಂದು ವಸತಿಶಾಲೆ” ಬೇಕು ಎಂದು ಬಿಕೆ ಚಳುವಳಿ ಮಾಡಿದರೆ ಕೆಲವು ಬುದ್ದಿಜೀವಿ ದಲಿತನಾಯಕರು ” ಕುಡಿಯುವುದು ದಲಿತರ ಹಕ್ಕು”ಎಂದು ಉದ್ದುದ್ದ ಲೇಖನ ಬರೆದಿದ್ದುಂಟು.
ಇನ್ನು “ಮಹಾತ್ಮಾ ಗಾಂಧಿ” ಸಿನಿಮಾ ಬಂದಾಗ ಅದರಲ್ಲಿ ಪೂನ ಒಪ್ಪಂದದ ಘಟನೆಯನ್ನು ಸಿನಿಮಾದಲ್ಲಿ ಸೇರಿಸಿರಲಿಲ್ಲ ಈ ವಿಚಾರ ತಿಳಿದ ಬಿಕೆ ಹಾಗು ದಸಂಸ ರಾಜ್ಯಾದ್ಯಂತ ಉಗ್ರವಾಗಿ ಹೋರಾಟ ಮಾಡಿ ಪೂನ ಒಪ್ಪಂದ ದೃಶ್ಯವಿಲ್ಲದ ಈ ಸಿನಿಮಾ ಸಂಪೂರ್ಣ ಬ್ಯಾನ್ ಆಗಬೇಕೆಂದು ಖಂಡಿಸಿದರು. ಆದರೆ ದೇವನೂರು ಮಹಾದೇವರವರು ಮಾತ್ರ”ನಾನು ಗಾಂಧಿ ಸಿನಿಮಾ ನೋಡಿದೆ ಅದರಲ್ಲಿ ದಲಿತರಿಗೆ ಅಪಮಾನದ ಅಂಶಗಳಿಲ್ಲ ಎಂದು ಪತ್ರಿಕೆಯಲ್ಲಿ ಲೇಖನ ಬರೆದರು.
ಬಿ.ಕೃಷ್ಣಪ್ಪರ ಕೊನೆಯ ದಿನಗಳು ತುಂಬಾ ನೋವಿನಿಂದ ಕೂಡಿದ್ದವು.ಹೆಜ್ಜೆ ಹೆಜ್ಜೆಗು ಮುಳ್ಳಾಗಿ ಕಾಡುತಿದ್ದ ಮನುವಾದಿಗಳು ಒಂದೆಡೆಯಾದರೆ ತಮ್ಮವರೆ ತನಗೆ ಚೂರಿಹಾಕಿದ್ದು ಒಂದುಕಡೆಯಾಗುತ್ತದೆ.
ಬಿಕೆಯವರು ಕೋಲಾರದಲ್ಲಿ ಚುನಾವಣೆಗೆ ನಿಂತಾಗ ಹೀನಾಯ ಸೋಲನ್ನು ಉಣ್ಣುತ್ತಾರೆ ಅಂದಿನ ಜನತಾದಳ ಹಾಗು ಕಾಂಗ್ರೆಸ್ ಬಿಕೆಯವರನ್ನು ಸೋಲಿಸಿತು.ಅಂದು ಬಾಬಸಾಹೇಬ ಅಂಬೇಡ್ಕರ್ ಅವರನ್ನು ಸೋಲಿಸಿದಂತೆ ಬಿಕೆಯವರನ್ನು ಸೋಲಿಸಿದರು.ಅವರೆ ಸಾಕಿಬೆಳೆಸಿದ ದಲಿತನಾಯಕರಿಂದ ಅವಮಾನಕ್ಕೆ ಗುರಿಯಾದರು.ಇದು ಬಿಕೆಯವರ ಸೋಲಾಗಿರಲಿಲ್ಲ ಅಂಬೇಡ್ಕರ್ ವಾದದ ಸೋಲಾಗಿತ್ತು.
ಅವರೆ ಕಟ್ಟಿ ಬೆಳೆಸಿದ ದಸಂಸ ತನ್ನ ಕಣ್ಣೆದುರಿಗೆ ಹೊಡೆದು ಚೂರುಚೂರಾಗಿರುತ್ತಿರುವುದನ್ನು ಕಂಡು ಸಂಕಟ ವೇಧನೆ ಪಡುತಿದ್ದರು.ಬಹುಸಂಖ್ಯಾತ ಶೋಷಿತರ ಹಕ್ಕುಗಳನ್ನು ರಕ್ಷಿಸುವಂತ ದಲಿತ ಸಾಹಿತಿಬುದ್ದಿಜೀವಿಗಳು ವ್ಯವಸ್ಥೆ ಯೊಂದಿಗೆ ರಾಜಿಯಾಗಿ ಗುಲಾಮರಾಗಿ ಚಮಚಗಳಾಗಿ ಬದುಕುತಿದ್ದು ಬಿಕೆಯವರಿಗೆ ಅಗಾಧ ನೋವು ತರಿಸುತ್ತೆ.ಹೇಗಾದರು ಮಾಡಿ ಬಿಎಸ್ಪಿಯನ್ನು ಅಧಿಕಾರಕ್ಕೆ ತರಬೇಕೆಂದು ಹಾಗು ಕೊನೆ ಪಕ್ಷ ವಿರೋಧ ಪಕ್ಷದ ನಾಯಕನಾಗಬೇಕು ಎಂದು ಬಹುದೊಡ್ಡ ಕನಸ್ಸ ಕಂಡರು.
ಅಂದು ಗದಗದಲ್ಲಿ ಬಾಬಸಾಹೇಬ ಅಂಬೇಡ್ಕರವರ ಜನ್ಮ ದಿನೋತ್ಸವಕ್ಕೆ ಉದ್ಘಾಟಕರಾಗಿ ಹೋಗಿದ್ದರು ಸ್ಟೇಟ್ ಕನ್ವಿನರ್ ಆಗಿದ್ದ ಎಮ್.ಜಯಣ್ಣ ಆ ಕಾರ್ಯಕ್ರಮದ ಉಸ್ತುವಾರಿ ಆಗಿದ್ದರು.ಕಾರ್ಯಕ್ರಮ ಆರಂಭಗೊಂಡಿದೆ .ಬಿಕೆ ಗದಗದ ಲಾಡ್ಜನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತಿದ್ದರು.ಇನ್ನೇನು ಸಾವಿರಾರು ಜನರನ್ನು ಕುರಿತು ಮಾತನಾಡಲು ಎಲ್ಲ ಸಿದ್ದತೆ ಮಾಡಿಕೊಂಡಿದ್ದರು.ಆಯೋಜಕರಿಗೆ ನೀವು ಕಾರ್ಯಕ್ರಮ ಆರಂಭಿಸಿ ನಂತರ ಬರುತ್ತೇನೆ ಎಂದು ಸಂದೇಶ ರವಾನೆ ಮಾಡಿದರು.ಕಾರ್ಯಕ್ರಮ ಆರಂಭವಾಗಿದೆ ಎಲ್ಲರು ಬಿಕೆಯವರ ಮಾತುಗಳನ್ನು ಆಲಿಸಲು ಹಳ್ಳಿಹಳ್ಳಿಗಳಿಂದ ತಂಡೋಪತಂಡವಾಗಿ ಆಗಮಿಸಿ ಕಾದು ಕುಳಿತಿದ್ದಾರೆ.ವೇದಿಕೆ ಮೇಲಿದ್ದ ವ್ಯಕ್ತಿಯೊಬ್ಬ ಮೈಕಿನ ಮುಂದೆ ಬಂದು ಬಿ.ಕೆಯವರಿಗೆ ಹೃದಯಘಾತವಾಯಿತಂತೆ ಆಸ್ಪತ್ರೆಗೆ ದಾಖಲಿಸಿದೆ ಎಂದಾಗ ಇಡೀ ಸಭೆಯೆ ಆತಂಕಕ್ಕೆ ಸಿಲುಕುತ್ತದೆ.
ಏನಾಗುತ್ತೊ..ಎಂಬ ಭಯದಿಂದಲೆ ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸುತಿದ್ದರು.ಆಸ್ಪತ್ರೆಗೆ ಆಗಮಿಸಿದ ಜಯಣ್ಣನವರಿಗೆ ಬಿ.ಕೆ.ಕೇಳಿದ್ದು ಪ್ರೋಗ್ರಾಂ ಚನ್ನಗಾಯ್ತೇನೊ ಎಂದು.ಹೂಂ ಚನ್ನಾಗಾಯ್ತು ನೀವು ಮೊದಲು ಗುಣವಾಗ್ರಿ ಎಂದಾಗ .ನನ್ಗೇನು ಆಗಿಲ್ಲ ನಾ ಚನ್ನಾಗಿದಿನಿ ಎಂದರು.ಬಿಕೆಯವರ ಹೆಂಡತಿಯಾದ ಶ್ರೀಮತಿ ಇಂದಿರಾ ಹಾಗು ಮಕ್ಕಳು ಬಂದು ಬಿಕೆಯವರನ್ನು ನೋಡುತ್ತಾರೆ ,ಬಿಕೆ ಇನ್ನೇನು ಮೇಲೇಳಿ ಮಾತನಾಡಬೇಕೆಂದು ತವಕಿಸುತ್ತಲೇ ಕೊನೆಯುಸಿರೆಳೆದರು. ಈ ಅಘಾತದ ಸುದ್ದಿ ತಿಳಿದ ದಲಿತರಿಗೆ ತಂದೆ ಕಳೆದುಕೊಂಡ ಅನಾಥ ಪ್ರಜ್ಞೆ ಕಾಡಲಾರಂಭಿಸುತ್ತದೆ.ನೆರೆದಿದ್ದವರ ಕಣ್ಣಾಲೆಗಳು ತುಂಬಿ ಬಂದವು.ಕರ್ನಾಟಕದ ಶೋಷಿತರು ದಲಿತಚಳುವಳಿಯ ಮಾತೃಕೆಯನ್ನೆ ಕಳೆದುಕೊಂಡತಾಯಿತು.
ಬಿಕೆ ಎಂದು ಅಧಿಕಾರದ ಆಸೆಗೆ ಒಳಗಾಗಲಿಲ್ಲ.ಮಂತ್ರಿ MLA.MP.ನಿಗಮ ಮಂಡಳಿ ಸ್ಥಾನಮಾನದ ಆಸೆಆಕಾಂಶೆಗಳು ಸಾಲಾಗಿ ಹರಿದು ಬಂದರು ಯಾವುದಕ್ಕೊ ತಲೆ ಕೆಡಿಸಿಕೊಳ್ಳಲಿಲ್ಲ.ಎಲ್ಲವನ್ನು ತಮ್ಮ ಕಾಲಿನಿಂದ ತಳ್ಳಿದರು.ತಾವು ನಂಬಿದ್ದ ಅಂಬೇಡ್ಕರ್ ವಾದಕ್ಕೆ ಯಾವತ್ತು ರಾಜಿಮಾಡಿಕೊಳ್ಳಲಿಲ್ಲ.ಅಂಬೇಡ್ಕರ್ ವಾದವೆಂಬ ಹಣತೆಯನ್ನು ಎಲ್ಲರ ಮನಮನೆಯಲ್ಲೂ ಹಚ್ಚಿದರು. ದಲಿತರು ಅಂಬೇಡ್ಕರ್ ವಾದದಿಂದ ಮಾತ್ರ ಮುಕ್ತಿ ಎಂದು ಸಾರಿಸಾರಿ ಹೇಳುತಿದ್ದರು.
ಬಿಕೆ ಇವತ್ತು ಇಲ್ಲ ಆದರೆ ಅವರು ಹೇಳಿದ” ದಲಿತರ ಗುಡಿಸಲಲ್ಲಿ ಹೋರಾಟದ ಹಣತೆ ಹಚ್ಚಿದ್ದೇನೆ ಹೊರಗೆ ಬಿರುಗಾಳಿ ರಭಸವಾಗಿ ಬೀಸುತ್ತಿದೆ.ಈ ಹಣತೆ ಆರದಂತೆ ನೋಡಿಕೊಳ್ಳಿ.ನಮ್ಮ ನಾಯಕ ಬಾಬಸಾಹೇಬರು,ನಮ್ಮ ಪಕ್ಷ ಬಹುಜನ ಸಮಾಜ ಪಕ್ಷ,ನಮ್ಮ ಸಿದ್ದಾಂತ ಅಂಬೇಡ್ಕರ್ ವಾದ.ನಮ್ಮ ಧರ್ಮ ಬೌದ್ದ ಧರ್ಮ ಈ ನನ್ನ ಮಾತುಗಳೆ ಅಂತಿಮ ನನ್ನ ಮಹದಾಸೆ ಎಂದು ಕಣ್ಣೀರಾಕಿ ಹೇಳಿದ ಬಿಕೆಯವರ ಮಾತುಗಳನ್ನು ಇಂದಿನ ದಲಿತರು ಬಹುಜನರು ಅರ್ಥಮಾಡಿಕೊಳ್ಳಬೇಕಾಗಿದೆ.
ವರ್ತಮಾನವು ಸಂವಿಧಾನ ಹಾಗು ಅಂಬೇಡ್ಕರ್ ವಾದ ಅಪಾಯಕಾರಿ ಸಂಧರ್ಭದಲ್ಲಿ ನಿಂತಿದೆ ಇಗ್ಲಾದ್ರು ತಮ್ಮ ದಲಿತ ನಾಯಕರು ಒಣಪ್ರತಿಷ್ಟೆಗಳನ್ನು ಬಿಟ್ಟು ಬಿಕೆಯವರ ಹಾದಿಯಲ್ಲಿ ನಡೆಯಲಿ.
–ಹುಚ್ಚಂಗಿ ಪ್ರಸಾದ್
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಭಾರತದ ಜನಸಂಖ್ಯೆ ವರವೋ..? ಶಾಪವೋ..?
- ಅಂಬಿಕಾ. ಕೆ
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಬೆಂಗಳೂರು ವಿಶ್ವವಿದ್ಯಾಲಯ
ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.
ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.
ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.
ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.
ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.
ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ
- ವೆನ್ನೆಲಾ ಕೆ.
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು
ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.
ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.
ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.
ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.
ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.
ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಬಹಿರಂಗ
ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!
- ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ ಚಿಂತಕರು, ಬೆಂಗಳೂರು
ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.
ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.
ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.
ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.
ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.
ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.
ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ದಾವಣಗೆರೆ | ವಿನೋಬನಗರದ ಶ್ರೀ ಚೌಡೇಶ್ವರಿ ಜಾತ್ರೆ ಸಂಭ್ರಮ
-
ದಿನದ ಸುದ್ದಿ6 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ4 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ