Connect with us

ದಿನದ ಸುದ್ದಿ

ಎಲ್ಲಾ ಬುದ್ಧರುಗಳ ಬೋಧನೆಯ ತಿರುಳೆ ಈ ಗಾಥೆ..!

Published

on

  • ಶಿವಸ್ವಾಮಿ, ಬೌದ್ಧುಪಾಸಕರು

ಸಬ್ಬ ಪಾಪಸ್ಸ ಅಕರಣಂ,
ಕುಸಲಸ್ಸ ಉಪಸಂಪದಾ,
ಸಚಿತ್ತ ಪರಿಯೋದಪನಂ,
ಏತಂ ಬುದ್ಧಾನಸಾಸನಂ “

– ಧಮ್ಮಪದ, -183.

ಈ ಗಾಥೆಯು ಒಬ್ಬ ಸಾಧಕನು ಅಷ್ಟಾಂಗ ಮಾರ್ಗವನ್ನು ತನ್ನ ನಿತ್ಯಜೀವನದಲ್ಲಿ ಹೇಗೆ ಪಾಲಿಸಬೇಕೆಂಬುದನ್ನು ಹೇಳುತ್ತದೆ.

ಸಬ್ಬ ಪಾಪಸ್ಸ ಅಕರಣಂ‘ – ಕೆಟ್ಟದನ್ನು ಮಾಡದಿರುವುದು ಅಂದರೆ ಸರಿಯಾದ ಮಾತಾನ್ನಾಡುವ,ಸರಿಯಾದ ಕೆಲಸವನ್ನು ಮಾಡುವ ಮತ್ತು ಸರಿಯಾದ ಜೀವನೋಪಾಯದ ವಿಚಾರಕ್ಕೆ ಸಂಬಂಧಿಸಿದೆ.ಯಾರು ಮಾತು,ಕೃತಿ ಮತ್ತು ಸಂಪಾದನೆಯಲ್ಲಿ ಕೆಡಕನ್ನು ಮಾಡುವುದಿಲ್ಲವೋ ಅವರು ಶೀಲವನ್ನು ಪಾಲಿಸುತ್ತಾರೆ.

ಕುಸಲಸ್ಸ ಉಪಸಂಪದಾ‘, ಕುಶಲವನ್ನು ಸಂಪಾದಿಸುವುದು ಧ್ಯಾನಕ್ಕೆ (ಸಮಾಧಿ) ಸಂಬಂದಿಸಿರುವುದು ಸರಿಯಾದ ಪ್ರಯತ್ನ,ಸರಿಯಾದ ಮಾನಸಿಕ ಜಾಗ್ರತೆ ಮತ್ತು ಸರಿಯಾದ ಏಕಾಗ್ರತೆ ಒಳಗೊಂಡಿದೆ. ಯಾರು ಸಮತಾ ಧ್ಯಾನದ ಮೂಲಕ ಮನಸ್ಸನ್ನ ತರಬೇತಿಗೊಳಿಸಿಕೊಳ್ಳುತ್ತಾರೊ ಅವರು ಅನಂದವನ್ನು ಬೆಳೆಸಿಕೊಳ್ಳುತ್ತಾರೆ.ಆ ಮೂಲಕ ಚೇತೋ ವಿಮುಕ್ತಿಯನ್ನು ( ಮನಸ್ಸಿನಿಂದ ಬಿಡುಗಡೆ) ಪಡೆಯುತ್ತಾರೆ.

ಸಚಿತ್ತ ಪರಿಯೋದಪನಂ‘, ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳುವುದು ಪ್ರಜ್ಞೆಗೆ ಸಂಬಂಧಪಟ್ಟಿದೆ. ಈ ಪ್ರಜ್ಞೆಯಲ್ಲಿ ಸರಿಯಾದ ದೃಷ್ಟಿ ಮತ್ತು ಸರಿಯಾದ ಸಂಕಲ್ಪ ಅಥವಾ ಆಲೋಚನೆ ಸೇರಿಕೊಂಡಿವೆ. ಯಾರು ವಿಪಸ್ಸನ ಧ್ಯಾನದ ಮೂಲಕ ಮನಸ್ಸನ್ನು ವಿಕಸನಗೊಳಿಸುತ್ತಾರೊ ಅವರು ಎಷ್ಟೇ ಸೂಕ್ಷ್ಮ ವಿರುವ ಮಾನಸಿಕ ಕೊಳಕುಗಳನ್ನು ಬುಡಮೇಲು ಮಾಡಿ ಆ ಮೂಲಕ ಮನಸ್ಸು ಪರಿವರ್ತನೆಯಾಗಿ ಸಂಸಾರ ಬಂಧನದಿಂದ (ಮತ್ತೆ ಮತ್ತೆ ಹುಟ್ಟುವ) ಬಿಡುಗಡೆ ಹೊಂದುತ್ತಾರೆ.

ಶೀಲ ಸಮಾಧಿ ಪ್ರಜ್ಞೆ ಈ ಮೂರನ್ನು ಸಾಧನೆಯಲ್ಲಿ ತರುವುದೆಂದರೆ ಮೂರು ರೀತಿಯ ಭಿನ್ನವಾಗಿದೆ ಮಾನಸಿಕ ಕ್ರಿಯೆಗಳು ಮತ್ತು ಬದುಕಿನ ರೀತಿಗಳಾಗಿವೆ.ಇವು ಯಾವುವೆಂದರೆ ಸಿಕ್ಖಾ (ತರಬೇತಿ), ಭಾವನಾ (ಮನಸ್ಸಿನ ಬೆಳವಣಿಗೆ) ಮತ್ತು ವಿಶುದ್ಧಿ (ಮನಸ್ಸಿನ ಶುದ್ಧೀಕರಣ) ಸಿಕ್ಖಾ ಎಂದರೆ ಶೀಲದ ಮೂಲಕ ತನ್ನನ್ನು ತಾನೇ ತಯಾರು ಮಾಡಿಕೊಳ್ಳುವುದು – ಅದು ಪಂಚಶೀಲಗಳು ಮತ್ತು ಅಷ್ಟಶೀಲಗಳು ದಶಶೀಲಗಳು ಹಾಗೆಯೇ 227 ಭಿಕ್ಕು ನಿಯಮಗಳು ಅಥವಾ ಸನ್ಯಾಸಿ ನಿಯಮಗಳು.

ಒಬ್ಬನು ತನ್ನನ್ನು ಕಮ್ಮ ವಾಚಾ,ಕಮ್ಮ ಕಮ್ಮಂತ, ಕಮ್ಮ ಆಜೀವ(ಮಾತು ಕ್ರಿಯೆ ಜೀವನೋಪಾಯ) ಶೀಲಗಳ ಮೂಲಕ ಗುಣವರ್ಧನೆ ಮತ್ತು ನೈತಿಕ ಬಲವನ್ನು ಹೊಂದುತ್ತಾನೆ.ಶೀಲವನ್ನು ಶ್ರಿಮಂತಗೊಳಿಸಿದಷ್ಟೂ ಆತನ ನಡವಳಿಕೆ ಶುದ್ಧವಾಗಿ ಮನಸ್ಸು ಪರಿಶುದ್ಧವಾಗುತ್ತದೆ.

ಯಾರು ಧ್ಯಾನದಲ್ಲೇ ಸಾಧನೆಗೈದು ಮುಂದುವರಿಯುತ್ತಾರೊ ಅವರು ಮಾನಸಿಕ ಏಕಾಗ್ರತೆಯನ್ನು ಬೆಳೆಸಿಕೊಳ್ಳುತ್ತಾರೆ.ಈ ಮೂಲಕ ಮಾನಸಿಕ ಸ್ಥಿತಿಗಳಿಗೂ ಮೀರಿದ ಸಮಾಧಿ ಸ್ಥಿತಿ ಅಥವಾ ಜಾನದ ಹಂತಕ್ಕೆ ತಲುಪುತ್ತಾರೆ. ಬೌದ್ಧ ಧಮ್ಮದಲ್ಲಿ 40 ಕ್ಕೂ ಹೆಚ್ಚು ರೀತಿಯ ಧ್ಯಾನಗಳಿವೆ ಪ್ರಮುಖವಾದವು ಸಮತಾ ಮತ್ತು ವಿಪಸ್ಸನಾ,ಸಮತಾ ಧ್ಯಾನವು ಸಮಾಧಿಯ ವಿವಿಧ ಸ್ತರಗಳಿಗೆ ಕೊಂಡೊಯ್ದು ಮನಸ್ಸನ್ನು ಉನ್ನತ ಸ್ಥಿತಿಗಳಿಗೆ ಕರೆದೊಯ್ಯುತ್ತದೆ,ಮನಸ್ಸು ಎಲ್ಲ ರೀತಿಯ ಮಾನಸಿಕ ಅಡೆತಡೆಗಳಿಂದ ಅಂದರೆ ಧ್ಯಾನ ಶೀಲ ಪಾರಮಾರ್ಥಿಕ ಬೆಳವಣಿಗೆಗೆ ಅಡ್ಡಿ ಬರುವ ಸಂಗತಿಗಳಿಂದ ಮುಕ್ತವಾಗುತ್ತದೆ.ಹೀಗೆ ಒಬ್ಬನು ಉತ್ತಮ ಸ್ಥಿತಿಗಳತ್ತ ಸಾಗುತ್ತಾನೆ.

ಈ ಮಾನಸಿಕ ಅಡೆತಡೆಗಳು ಇಂದ್ರಿಯ ಸಂಬಂಧ ಆಸೆಗಳು,ದ್ವೇಷ, ಸೋಮಾರಿತನ, ಅಶಾಂತಿ ಅನುಮಾನ.ಒಮ್ಮೆ ಮನಸ್ಸು ಅಡೆತಡೆಗಳಿಂದ ಹೊರತಾದಲ್ಲಿ ಚಿತ್ತವಿಶುದ್ಧಿಯಾಗುತ್ತದೆ.ಮನಸ್ಸೊಂದೇ ಶುದ್ಧಿಯಾಗುವುದರಿಂದ ಸಂಸಾರಿಕ ತಾಪತ್ರಯಗಳಿಂದ ಮುಕ್ತಿ ದೊರಕದು.ಉತ್ತಮ ಮಾನಸಿಕ ಸ್ಥಿತಿಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಒಬ್ಬನು ಹಲವಾರು ಲೋಕೋತ್ತರ ಶಕ್ತಿಗಳನ್ನು ಅಥವಾ ಜ್ಞಾನದ ಸ್ಥಿತಿಗಳನ್ನು ಪಡೆಯುತ್ತಾನೆ.

ಯಾರು ಸಮತಾ ಧ್ಯಾನಕ್ಕಿಂತ ಭಿನ್ನವಾದ ವಿಪಸ್ಸನಾ ಧ್ಯಾನದಲ್ಲಿ ಸಾಧನೆಗೈಯುತ್ತಾರೊ ಅವರು ವಾಸ್ತವತೆಗಳ ವಿಭಿನ್ನ ಹಂತಗಳನ್ನು ಬೆಳೆಸಿಕೊಳ್ಳುತ್ರಾರೆ. ಧ್ಯಾನಾವಸ್ಥೆಯ ಈ ವಿವಿಧ ಮಜಲುಗಳು ಮಾನಸಿಕ ಕೊಳಕುಗಳನ್ನು ಬುಡಮೇಲು ಮಾಡಿ ಮನಸ್ಸನ್ನು ಪರಿಶುದ್ಧಗೊಳಿಸುವುದಲ್ಲದೆ ಪರಿವರ್ತನೆಯನ್ನು ಮಾಡುತ್ತವೆ. ಪರಿವರ್ತಿತಗೊಂಡ ಮನಸ್ಸು ಲೋಕೀಯ ಚಿತ್ತದಿಂದ ಲೋಕೋತ್ತರ ಚಿತ್ತಸ್ಥಿತಿಗೆ ಹೊಗುತ್ತದೆ.

4 ರೀತಿಯ ಲೋಕೋತ್ತರ ಚಿತ್ತ ಸ್ಥಿತಿಗಳಿವೆ;ಅಂದರೆ ಧ್ಯಾನದ ಉನ್ನತ ಸ್ಥಿತಿಯನ್ನು ಮೀರಿರುವ ನಿಬ್ಬಾಣವನ್ನು ಮುಟ್ಟಿರುವ ಚಿತ್ತ ಸ್ಥಿತಿ,ಕಾಮಲೋಕ (ಇಂದ್ರಿಯ ಸಂಬಂಧ ಆಸೆಗಳಿಂದ ಕೂಡಿದ ವಲಯ) ರೂಪಲೋಕ (ಸೂಕ್ಷ್ಮ ವಸ್ತುಗಳಿಂದ ಕೂಡಿದ ವಲಯ) ಅರೂಪ ಲೋಕ (ರೂಪರಹಿತ ಸಂಗತಿಗಳಿಂದ ಕೂಡಿದ ವಲಯ) ಈ ಮೂರು ರೀತಿಯ ಅಸ್ತಿತ್ವಗಳಿಂದ ಕೂಡಿದ ಲೋಕೀಯ ಚಿತ್ತಸ್ಥಿತಿಯನ್ನು ಮೀರಿರುವ ಲೋಕೋತ್ತರ ಚಿತ್ತ.

ತಾನೇ ತನ್ನ ಅಕುಶಲ ಕರ್ಮಗಳಿಂದ (ಪಾಳಿಯಲ್ಲಿ ಕಮ್ಮಗಳು )ಸೃಷ್ಟಿಸಿಕೊಂಡ ಸಂಯೋಜನೆಗಳನ್ನು ನಾಶಮಾಡಿಕೊಂಡ ಮೇಲೆ ಮನಸ್ಸು ಮೇಲೆ ಹೇಳಿದ ಮೂರು ಅಸ್ತಿತ್ವ ವಲಯಗಳನ್ನು ಮೀರುತ್ತಾ ಬಿಡುಗಡೆಯತ್ತಾ ಪಯಣಿಸುತ್ತಾದೆ.ಈ ಸಂಯೋಜನೆಗಳೇ ಮುಂದಿನ ಹುಟ್ಟಿಗೆ ಅಥವಾ ಪುನಬ್ಭವಕ್ಕೆ ಕೊಂಡಿಯಾಗುತ್ತವೆ.ಒಮ್ಮೆ ಈ ಸಂಯೋಜನೆಗಳು ಮುರಿದವೆಂದರೆ ಮನಸ್ಸು ಪ್ರಾಪಂಚಿಕ ಅಸ್ತಿತ್ವದಿಂದ ವಿಮುಕ್ತಿಗೊಳ್ಳುತ್ತದೆ.4 ಲೋಕೋತ್ತರ ಫಲ ಚಿತ್ತದಿಂದ ಉದ್ಭವವಾಗುವ 4 ಹಂತಗಳ ಬಿಡುಗಡೆ ಇದೆ.ಈ 4 ಲೋಕೋತ್ತರ ಸ್ಥಿತಿಗಳ ಸಂಯೋಜನೆಗಳನ್ನು ನಾಶ ಮಾಡುತ್ತಾ ಹೋಗುತ್ತದೆ ಈ ಮೂಲಕ ಮನಸ್ಸು ಬಿಡುಗಡೆಗೊಂಡು ಪರಿಶುದ್ಧವಾಗುತ್ತದೆ.

ಕೊನೆಯ ಸಾಲು “ಏತಂ ಬುದ್ಧಾನುಸಾಸನಂ” ಇದರಲ್ಲಿ 3 ರೀತಿಯ ತರಬೇತಿ ಭೋಧನೆ ಇದೆ

ಅವು ಸಿಕ್ಖಾ (ಮನಸ್ಸಿನ ತರಬೇತಿ),
ಭಾವನ (ಮನಸ್ಸಿನ ಬೆಳವಣಿಗೆ), ಮತ್ತು ವಿಶುದ್ಧಿ (ಪರಿಶುದ್ಧಿ) ಇವೇ ಎಲ್ಲಾ ಬುದ್ಧರುಗಳ ಭೋಧನೆಯ ತಿರುಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending