ಲೈಫ್ ಸ್ಟೈಲ್
‘ಕೊರೊನ’ ಇದು ಪ್ರಕೃತಿ ಸೃಷ್ಟಿಸೋ ಅವತಾರ..! HANDS UP ಮಾನವನೇ..!
“ಮಾನವ ಸಂಕುಲದ ನಾಗಲೋಟಕ್ಕೊಂದು ಮಾರಕ ತಡೆ” “LOCK DOWN : ಇದೊಂದು ಆತ್ಮ ವಿಮರ್ಶೆಯ ಸಮಯ.”
- ಡಾ. ಬಿನಯ್ ಕುಮಾರ್ ಸಿಂಗ್ , ಸನ್ಶೈನ್ ಪುರಂತರ ಆಸ್ಪತ್ರೆ, ದಾವಣಗೆರೆ
ಅಸಂಖ್ಯಾತ ಜೀವರಾಶಿಗಳ ನೆಲೆಯಾಗಿರುವ ಪ್ರಕೃತಿ ಮತ್ತು ಭೂಮಿಯ ಮೇಲೆ ತನ್ನನ್ನು ತಾನು ಪರಮಶಕ್ತನೆಂದು ಬಿಂಬಿಸಿಕೊಂಡಿರುವ ಅತ್ಯಂತ ನೀಚ ಬುದ್ದಿಯ ಜೀವಿಯಾದ ಮನುಷ್ಯ ಇವುಗಳ ಮಧ್ಯೆ ಯುದ್ದ ಸಾರಿದಂತಿದೆ.ಇದು ಒಂದು ರೀತಿಯ ಮೂರನೇ ಮಹಾಯುದ್ದವನ್ನು ಸಾರಿದಂತಿದೆ. ಇಲ್ಲಿ ಭೂಮಿಯ ಮೇಲಿನ ಅತ್ಯಂತ ಸೂಕ್ಷ್ಮ ಜೀವಿಯಾದ ವೈರಾಣು ತಮ್ಮ ಉಳಿವಿಗೋಸ್ಕರ ತಮ್ಮ ಸ್ಥಾನವನ್ನು ಆಕ್ರಮಿಸುತ್ತಿರುವ ಮಾನವನ ವಿರುದ್ದ ತಿರುಗಿ ಬಿದ್ದಂತಿದೆ.
ಸಂಶೋಧನೆಗಳು ಧೃಡಪಡಿಸಿರುವ ಪ್ರಕಾರ ಸಕಲ ಜೀವರಾಶಿಗಳಿಗೆ ಜೀವಿಸಲು ಯೋಗ್ಯವಾದ ಸ್ಥಳ ಭೂಮಿ ಮಾತ್ರ. ಭೂಮಿಯ ಮೇಲೆ ಜೀವಿಸಲು ಒಂದು ಸಾಮಾನ್ಯ ನಿಯಮವಿದ್ದು,ಅದೇನೆಂದರೆ ಎಲ್ಲಾ ಜೀವರಾಶಿಗಳು ಪರಸ್ಪರ ಗೌರವಿಸುವುದು, ಎಲ್ಲರುಗಳ ಸ್ವಂತಂತ್ರವನ್ನು ಕಾಪಾಡುವುದು ಮತ್ತು ಪರಿಸರವನ್ನು ರಕ್ಷಿಸುವುದು ಈ ನಿಯಮಗಳಿಗೆ ಚ್ಯುತಿ ಬಂದಾಗ ಈ ತರಹದ ಸ್ವಯಂಕೃತ ವಿಪತ್ತುಗಳಿಗೆ (MANMADE DISASTER) ಎಡೆ ಮಾಡಿಕೊಡುತ್ತದೆ. ಇಂದಿನ ಈ ಸನ್ನಿವೇಶಕ್ಕೆ ಇದೇ ಮೂಲಭೂತವಾದ ಕಾರಣವಾಗಿದೆ.
ಕೇವಲ ಕಳೆದ ನೂರು ವರ್ಷಗಳಲ್ಲಿ ಮಾನವ ತನ್ನ ಆಸೆ ಮತ್ತು ಲಾಭಕ್ಕೋಸ್ಕರ ಪರಿಸರ ಮತ್ತು ಜೀವರಾಶಿಗಳ ಮೇಲೆ ಅಟ್ಟಹಾಸ ಮೆರೆದಿದ್ದಾನೆ. ಪ್ರಕೃತಿಯ ಆಗಿಂದಾಗ್ಗೆ ಅತಿವೃಷ್ಠಿಯಿಂದಲೋ, ಅನಾವೃಷ್ಠಿಯಿಂದಲೋ, ಬಿರುಗಾಳಿಗಳಿಂದಲೋ ತನ್ನ ಮೇಲೆ ಮಾನವ ನೀಡುತ್ತಿರುವ ದೌರ್ಜನ್ಯದ ವಿರುದ್ದ ಸೂಚನೆ ಸಂಕೇತಗಳನ್ನು ನೀಡುತ್ತಿದ್ದರೂ ತಾತ್ಸಾರ ಮಾಡುವ ಮನುಷ್ಯ ತನ್ನ ನೀಚ ಕೃತ್ಯದಿಂದಾಗಿ ಭೂ ತಾಯಿಯನ್ನು ವಿನಾಶಗೊಳಿಸುವುದರಲ್ಲಿ ತೊಡಗಿದ್ದಾನೆ.
ಮಹಾಭಾರತದಲ್ಲಿ ಉಲ್ಲೇಖಿಸಿದಂತೆ, “ಅಭ್ಯುತ್ಥಾನಂ ಅಧರ್ಮಸ್ಯ,ಸಂಭವಾಮಿ ಯುಗೇ ಯುಗೇ..” ಮಾನವನ ಪಾಪ ಕರ್ಮಗಳು ಪರಿಸರ ಮತ್ತು ಜೀವರಾಶಿಗಳ ಮೇಲೆ ಎಲ್ಲಾ ಎಲ್ಲೆಯನ್ನು (ಮಿತಿಗಳನ್ನು) ದಾಟಿವೆ. (ಈ)ಇಂತಹ ಸನ್ನಿವೇಶದಲ್ಲಿ ಮನುಷ್ಯನ ಕಣ್ಣಿಗೆ ಕಾಣದ ಒಂದು ವೈರಾಣು ತಿರುಗಿಬಿದ್ದಿದೆ. ಕೇವಲ ಒಂದೇ ಒಂದು ವೈರಾಣು ಇಡೀ ಮಾನವ ಸಂಕುಲವನ್ನೇ ಮಂಡಿಯೂರಿ ಪರಿತಪಿಸುವಂತೆ ಮಾಡಿದೆ. ಎಲ್ಲವನ್ನೂ ತಾನು ಜಯಿಸಬಹುದೆಂಬ ದುರಹಂಕಾರದಲ್ಲಿ ಮೆರೆಯುತ್ತಿರುವ ಮಾನವನಿಗೆ, ಆ ಭಗಂವಂತ ತನ್ನ ಜೀವರಾಶಿಗಳಲ್ಲೇ ಇರುವ ಅತ್ಯಂತ ಸೂಕ್ಷ್ಮ ಜೀವಿಯಿಂದ, ಮಾನವನನ್ನು ಸಂಹರಿಸುವುದು ಎಷ್ಟು ಸುಲಭವೆಂದು ತೋರಿಸುತ್ತಿರುವಂತಿದೆ. ಹೀಗಿರುವಾಗ ಮಾನವ ತನ್ನನ್ನು ತಾನು ಜಗತ್ತಿನ ಪ್ರಭುವೆಂದು ಭಾವಿಸುವುದರಲ್ಲಿ ಅರ್ಥವಿದೆಯೇ?
ಈ ಸಂಧರ್ಭದಲ್ಲಿ ” ಪ್ರಕೃತಿಯು ಎಲ್ಲವನ್ನು ಸಮತೋಲನಗೊಳಿಸುತ್ತದೆ ” ಎಂಬ ಮಾತು ಎಷ್ಟು ಅರ್ಥಗರ್ಭಿತವಾಗಿದೆ ಮತ್ತು ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಅದು ನಿಜವೆನ್ನಿಸುತ್ತದೆ. ಅತ್ಯಂತ ಶಕ್ತಿಶಾಲಿಯಾದ ಮಾನವ ಸಂಕುಲ ತನ್ನನ್ನು ಸಂರಕ್ಷಿಸಿಕೊಳ್ಳಲು ಪಂಜರದಲ್ಲಿ (ಮನೆಗಳಲ್ಲಿ–HOME QUARANTINE) ಬಂಧಿಯಾಗಿದ್ದಾನೆ. ಆದರೆ ಉಳಿದ ಎಲ್ಲಾ ಜೀವರಾಶಿಗಳು ತಮ್ಮ ಜೀವನವನ್ನು ಪರಿಸರದಲ್ಲಿ ಯಾವ ಅಡೆತಡೆಗಳಿಲ್ಲದೆ ಆನಂದದಿಂದ ಅನುಭವಿಸುತ್ತಿವೆ. ಸೂರ್ಯನ ಸುತ್ತಲಿರುವ ಪ್ರಭೆಯಂತೆ ಗೋಚರಿಸುತ್ತಿರುವ ಕಾಂತಿಯು (CORONA) ಈ ಅವಕಾಶವು ಮಾನವನು ಪರಿಸರದ ಮೇಲೆ ಮಾಡಿರುವ ದೌರ್ಜನ್ಯಗಳನ್ನು ಆತ್ಮಾವಲೋಕನ ಮಾಡುವ ಸಮಯ ಇದಾಗಲಿ.
ನಾವೀಗ ವೈರಾಣುಗಳ ಪ್ರಪಂಚದ ಬಗ್ಗೆ ಅವಲೋಕಿಸೋಣ
- ವೈರಾಣುಗಳು ಕೇವಲ ರಾಸಾಯನಿಕ ಸೂಕ್ಷ್ಮತೆಗಳು (Chemical Living Beings) ಇವುಗಳನ್ನು ಜೀವಕೋಶಗಳೆಂದು ಕರೆಯಲಾಗುವುದಿಲ್ಲ. ಏಕೆಂದರೆ ಜೀವಕೋಶಗಳಲ್ಲಿ ಕಂಡುಬರುವ ವಿವಿಧ ಭಾಗಗಳು ಇರುವುದಿಲ್ಲ. ಒಂದು ವೈರಾಣುವಿನಲ್ಲಿ ಕೇವಲ ಜೀನೋಮ್ (Genome) ಮತ್ತು ಅದರ ಮೇಲ್ಮೈಯಲ್ಲಿ ಪ್ರೋಟೀನ್ನ ಕವಚವಿರುತ್ತದೆ. ವೈರಾಣುಗಳಲ್ಲಿ ತಾವು ಸ್ವತಂತ್ರವಾಗಿ ಬೆಳೆದು ದ್ವಿಗುಣವಾಗುವ ಸಾಮಾಥ್ರ್ಯವಿರುವುದಿಲ್ಲ. ಇವುಗಳು ತಮ್ಮ ಬೆಳೆವಣಿಗೆಗೆ ಆಶ್ರಯದಾತನ (ಮನುಷ್ಯನ) ಜೀವಕೋಶಗಳ ಮೇಲೆ ಅವಲಂಭಿತವಾಗಿರುತ್ತದೆ. ಮಾನವ ಸೃಷ್ಟಿಯಾದ ಕಾಲದಿಂದಲೂ ಈ ವೈರಾಣುಗಳೂ ಭೂಮಿಯ ಮೇಲಿವೆ. ಅವುಗಳ ಸಹಜವಾದ ಆಶ್ರಯ ತಾಣಗಳು ಯಾವುವೆಂದರೆ ಮಾನವ, ಸಸ್ತನಿಗಳು(mammals) ಮತ್ತು ಪಕ್ಷಿಗಳು(birds). ಭೂಮಿಯ ಮೇಲೆ ಅನೇಕ ವಿಧದ ವೈರಾಣುಗಳಿದ್ದು, ಅದರಲ್ಲಿ ಬಹಳಷ್ಟು ವೈರಾಣುಗಳು ರೋಗಕಾರಕಗಳಲ್ಲ.
- ಕೊರೊನ ವೈರಸ್ RNA ಗುಂಪಿನ ವೈರಾಣುವಾಗಿದ್ದು ಇದರ ಮೇಲ್ಮೈಯಲ್ಲಿ ಚೆಂಡು ಹೂವಿನ ಆಕಾರದ ಬಹು ಪ್ರಕ್ಷೇಪಗಳ ಹಂಚನ್ನು ಹೊಂದಿದ್ದು, ಸೌರ ಕೊರೊನವನ್ನು ಹೋಲುತ್ತದೆ ಆದ್ದರಿಂದ ಈ ವೈರಾಣು ಸೃಷ್ಠಿಸುವ ವಿಶೇಷ ನೋಟಕ್ಕೆ ಕೊರೊನ ವೈರಸ್ ಎಂದು ಹೆಸರಿಸಲ್ಪಟ್ಟಿದೆ. ಇದರ ಗಾತ್ರ ಕೇವಲ 100nM ( 10-9 ).
- ಈ corona ವೈರಾಣುಗಳು ಮನುಷ್ಯರು, ಪಕ್ಷಿಗಳು, ಪ್ರಾಣಿಗಳು, ಕೀಟಗಳು ಮತ್ತು ಜಲಚರಗಳಲ್ಲಿ ಸಹಜವಾಗಿ ಬದುಕಿರುತ್ತವೆ. ಮಾನವರಲ್ಲಿ ಸಾಮಾನ್ಯ ನೆಗಡಿ(common cold) ಕಾಯಿಲೆಯನ್ನು ಭರಿಸುವ ಪ್ರಮುಖ ವೈರಾಣುಗಳಲ್ಲಿ ಎರಡನೆಯದಾಗಿದೆ. (Rhino virus ಗಳು ಮೊದಲನೆಯದಾಗಿದೆ).
- ಈ ಕೋರೊನ ವೈರಸ್ ನಮಗೆ ಹೊಸದೇನಲ್ಲ, ಈ ಹಿಂದೆಯೇ 2002ರಲ್ಲಿ SARS ಎಂಬ ಸಾಂಕ್ರಮಿಕ ರೋಗವನ್ನು ಮತ್ತು 2012ರಲ್ಲಿ MERS ಎಂಬ ಸಾಂಕ್ರಮಿಕ ರೋಗವನ್ನು ಕೊರೊನ ವೈರಸ್ನ ತಳಿಗಳು ಹರಡಿ ಹೆಸರುವಾಸಿಯಾಗಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಈ ಹಿಂದೆ SARS ಎಂಬ ಸಾಂಕ್ರಮಿಕವು 30 ರಾಷ್ಟ್ರಗಳಲ್ಲಿ ಹರಡಿತ್ತು ಮತ್ತು ಅದರ ನಿಯಂತ್ರಣವನ್ನು ಪಡೆಯಲು ಸುಮಾರು 15-18 ತಿಂಗಳುಗಳ ಕಾಲ ಸೆಣಸಾಡಬೇಕಾಯಿತು ಮತ್ತು ಅದೇ ತರಹ MERS ಸಾಂಕ್ರಾಮಿಕ ರೋಗವು 7 ದೇಶಗಳಲ್ಲಿ ಹರಡಿ ಅದನ್ನು ನಿಯಂತ್ರಿಸಲು ಸುಮಾರು 12 ತಿಂಗಳುಗಳ ಕಾಲ ಸೆಣಸಾಡಬೇಕಾಯಿತು.
ಇಷ್ಟೆಲ್ಲಾ ತಿಳಿದ ಮೇಲೆ ಕಾಡುವ ಯಕ್ಷ ಪ್ರಶ್ನೆ ಏನೆಂದರೆ ಹೀಗಿರುವ corona virus ಇಷ್ಟೊಂದು ಮಾರಾಣಾಂತಿಕ ಏಕೆ? [covid-19= COrona VIrus Disease-2019]
- ಈ ವೈರಾಣುವಿನ ಮುಖ್ಯ ಲಕ್ಷಣವೇನೆಂದರೆ ಅವುಗಳು ಪದೇ ಪದೇ ಅನುವಂಶಿಕ ಬದಲಾವಣೆಯನ್ನು ಹೊಂದುವುದು (Genetic Modification) ಈ ಪ್ರಕ್ರಿಯೆಯಲ್ಲಿ ಒಂದೇ ಕುಲಕ್ಕೆ ಸೇರಿದ ಎರಡು ತಳಿಗಳ ವೈರಾಣುಗಳು ಒಂದೇ ಜೀವಕೋಶದಲ್ಲಿ ಪ್ರವೇಶಿಸಿದಾಗ ಅವೆರಡರ ಮದ್ಯೆದಲ್ಲಿ genomeನ ಒಂದು ಭಾಗವು ವಿನಿಮಯವಾಗಿ (RECOMBINATION) ಮೂರನೇಯ ತಳಿಯು ಸೃಷ್ಠಿಯಾಗುತ್ತದೆ. ಹೀಗೆ ಸೃಷ್ಠಿಯಾದ ಹೈಬ್ರೀಡ್ ತಳಿಯು ತನ್ನ ಮಾತೃ ವೈಶಿಷ್ಠ್ಯಗಳ ಜೊತೆಗೆ ಹೊಸದಾದ ಗುಣಗಳನ್ನು ಹೊಂದಿರುತ್ತದೆ. ಈ ಹೊಸ ಗುಣಗಳೇ ಇದನ್ನು ಮತ್ತಷ್ಟು ಆಕ್ರಮಣಕಾರಿಯಾಗಿ ಸೃಷ್ಠಿಸುತ್ತದೆ.
- ಒಂದು ಶಂಕೆಯ ಪ್ರಕಾರ covid-19 ಎಂಬ ವೈರಾಣು ಹಾವು ಮತ್ತು ಬಾವಲಿಗಳಲ್ಲಿ ಕಂಡುಬರುವ corona ವೈರಾಣುಗಳ ಹೈಬ್ರೀಡ್ ತಳಿಯಾಗಿರಬಹುದು ಆದ್ದರಿಂದ ಈ ವೈರಾಣುವು ಅಷ್ಟೊಂದು ಮಾರಕವಾಗಿದೆ. ಒಂದು ಗಮನಿಸಬೇಕಾದ ಅಂಶವೆಂದರೆ ಇಂತಹ ವೈರಾಣು ಮನುಷ್ಯನಲ್ಲಿ ಕಾಣಬೇಕಾದರೆ, ಮಾನವರು ವೈರಾಣುಗಳ ನಿಕಟ ಸಂಪರ್ಕದಲ್ಲಿರಬೇಕಾಗುತ್ತದೆ. ಇಂತಹ ಸನ್ನಿವೇಶ ಕೇವಲ ಚೈನಾ (china) ದೇಶದಲ್ಲಿ ಸಹಜವಾಗಿ ಕಾಣಬಹುದಾಗಿದೆ. ಏಕೆಂದರೆ ಇಲ್ಲಿಯ ಜನರು ಮೇಲೆ ತಿಳಿಸಿದ ಹಾವು & ಬಾವಲಿಗಳ ನಿಕಟ ಸಂಪರ್ಕದಲ್ಲಿ ಬರುವುದಲ್ಲದೇ ಅವುಗಳನ್ನು ಭಕ್ಷಿಸುತ್ತಾರೆ ಆದ್ದರಿಂದ ಈ ಹೈಬ್ರೀಡ್ ವೈರಾಣು (covid-19) ಮಾನವನಲ್ಲಿ ಸುಲಭವಾಗಿ ಪ್ರವೇಶಿಸಿರಬಹುದಾಗಿದೆ. ಆದ್ದರಿಂದಲೇ ಚೈನಾ ದೇಶದ WUHAN ಪ್ರಾಂತ್ಯವು (covid-19)ಉತ್ಪತ್ತಿ ತಾಣವಾಗಿದ್ದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿದೆ.
- covid-19 ವೈರಾಣು ಮೂಗು, ಬಾಯಿ, ಕಣ್ಣಿನ ಮುಖಾಂತರ ಮನುಷ್ಯನಲ್ಲಿ ಪ್ರವೇಶಿಸುತ್ತದೆ. ಈ ವೈರಾಣು Upper Respiratory Tract ನಲ್ಲಿ ದ್ವಿಗುಣಗೊಳ್ಳುವ (replication) ಪ್ರಕ್ರಿಯೆಯನ್ನು ಆಂರಭಿಸುತ್ತದೆ. ಸೊಂಕು ತಗುಲಿದ ಸುಮಾರು5 ರಿಂದ 10 ದಿನಗಳ ಕಾಲದವರೆಗೆ ಈ ದ್ವಿಗುಣಗೊಳ್ಳುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇದೇ ಸಮಯದಲ್ಲಿ ಈ ವೈರಾಣುವಿನ ವಿಶಿಷ್ಠ ಲಕ್ಷಣವಾದ ಶ್ವಾಸಕೋಶದ ALVEOLI ಗಳವರೆಗೂ ತಲುಪಿ ಅಲ್ಲಿಯೂ replication process (ಪ್ರಕ್ರಿಯೆ) ಯನ್ನು ಮುಂದುವರೆಸುತ್ತದೆ. ಈ ವೈರಾಣುಗಳು ನಮ್ಮ ದೇಹದಲ್ಲಿ ಬೆಳೆಯುವಾಗ ಅದರ ಸುತ್ತಮುತ್ತಲಿನ ಜೀವಕೋಶಗಳನ್ನು ನಾಶ ಪಡಿಸುತ್ತದೆ. ಈ ಪ್ರಕ್ರಿಯೆಯು ಗಂಟಲು ಮತ್ತು ಶ್ವಾಸನಾಳದಲ್ಲಿ ನಡೆಯುವುದರಿಂದ ಅನಿಯಮಿತವಾದ ಒಣ ಕೆಮ್ಮು ಬರುತ್ತದೆ. ಈ ವೈರಾಣುವಿನಹಾವಳಿಯೂ ಶ್ವಾಸಕೋಶಗಳಲ್ಲು ನಡೆಯುವುದರಿಂದ ಆಮ್ಲಜನಕ ವಿನಿಮಯ ಪ್ರಕ್ರಿಯೆಯಲ್ಲಿ ಭಾದಿಸುತ್ತದೆ ಮತ್ತು ALVEOLI ಗಳನ್ನು ನಷ್ಟಪಡಿಸಿ ಕೀವುಂಟು ಮಾಡಿ VIRAL-PNEMONIA ವನ್ನು ಉಂಟು ಮಾಡುತ್ತದೆ ಆದ್ದರಿಂದಲೇ covid-19 ಪೀಡಿತ ಜನರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಇದರಿಂದ ನಮ್ಮ ದೇಹದ ಅಂಗಾಂಗಳಲ್ಲಿ ಆಮ್ಲಜನಕದ ಕೊರತೆಯಾಗಿ, ಬಹು ಅಂಗಾಂಗಳ ವೈಪಲ್ಯಕ್ಕೆ ಎಡೆ ಮಾಡಿಕೊಡುತ್ತದೆ, ಆದ್ದರಿಂದಲೇ ಈ covid-19 ಸೊಂಕು ಇಷ್ಟೊಂದು ಮಾರಾಣಾಂತಿಕ.
ಈ ಕೊವಿಡ್-19 ಸೊಂಕಿನ ಲಕ್ಷಣಗಳು
- ಇದರ ಪ್ರಾರಂಭಿಕ ಲಕ್ಷಣಗಳು ತನ್ನ ಮೂಲ ವೈರಾಣುವಿನಂತೆಯೇ ಸಾಮಾನ್ಯ ನೆಗಡಿ/ಸೀನು/ಜ್ವರ/ಮೈ ಕೈ ನೋವು ಕ್ರಮೇಣವಾಗಿ ಒಣಕೆಮ್ಮು/ ಅತಿಯಾದ ಜ್ವರ ಶುರುವಾಗಿ ತದನಂತರ ಉಸಿರಾಟದಲ್ಲಿ ತೊಂದರೆ ಕಂಡುಬರುತ್ತದೆ.
- ವೈರಸ್ನ ಸೊಂಕು ತಗುಲಿ ಅದರ ಲಕ್ಷಣಗಳು ಗೋಚರಿಸುವ ಸಮಯವಾದ 5 ರಿಂದ 10 ದಿನಗಳಲ್ಲಿ ಈ ವೈರಾಣುಗಳು Upper Respiratory Tract ನಲ್ಲಿ ಅಸಂಖ್ಯಾತವಾಗಿ ನೆಲೆಯೂರಿರುತ್ತದೆ. ನಾವು ಸೀನುವಾಗ, ಕೆಮ್ಮುವಾಗ, ಉಗುಳುವಾಗ, ಮಾತಾನಾಡುವಾಗ ಈ ವೈರಾಣುಗಳು ಗಾಳಿಯಲ್ಲಿ ಹೊರಬರುತ್ತವೆ. ಒಂದು ಹನಿಯಷ್ಟು ಬಾಯಿ-ಮೂಗಿನಿಂದ ಬರುವ ದ್ರಾವರಸದಲ್ಲಿ ಲಕ್ಷಾಂತರ ವೈರಾಣುಗಳಿರುತ್ತವೆ. ಆದ್ದರಿಂದ ಈ ಸೊಂಕು ಹತ್ತಿರದ ಸಂಪರ್ಕದಲ್ಲಿ ಬರುವವರಿಗೆಲ್ಲಾ ಸಹಜ ಮತ್ತು ಸುಲಭವಾಗಿ ತಗಲುತ್ತದೆ. ಈ ಸಮಯದಲ್ಲಿ ರೋಗಿಯಲ್ಲಿ ಕಾಯಿಲೆಯ ಲಕ್ಷಣಗಳು ಕಾಣದೆ ಇರುವುದರಿಂದ ಇಬ್ಬರ ಗಮನಕ್ಕೂ ಬಾರದೆ ಸೊಂಕು ಹರಡುವ ಪ್ರಕ್ರಿಯೆ ಶುರುವಾಗಿರುತ್ತದೆ. ನಾವು ಮಾತಾನಾಡುವಾಗ ಬಾಯಿಂದ (Droplet) ಬರುವ ದ್ರಾವಣ ಸುಮಾರು 1 ರಿಂದ 1ಳಿ ಅಡಿಯವರೆಗೂ ಪಸರಿಸುತ್ತದೆ. ಅದೇ ತರಹ ಸೀನುವಾಗ ಮತ್ತು ಕೆಮ್ಮುವಾಗ ಬಾಯಿಯಿಂದ ಬರುವ ದ್ರಾವರಸ ಸುಮಾರು 1 ಮೀಟರ್ ವರೆಗು ಚಲಿಸುತ್ತದೆ. ಇದರಿಂದ ತಿಳಿಯುವುದೇನೆಂದರೇ ಸಾಮಾಜಿಕ ಅಂತರವನ್ನು (SOCIAL DISTANCING)ಕನಿಷ್ಟ 1 ಮೀಟರ್ ಪಾಲಿಸಿದರೆ, ಒಬ್ಬರಿಂದೊಬ್ಬರಿಗೆ ವೈರಾಣು ಹರಡುವುದನ್ನು ಸರಳವಾಗಿ ಮತ್ತು ಸಹಜವಾಗಿ ತಡೆಯಬಹುದು.
- ಸುಮಾರು 60 ರಿಂದ 70% ಜನರಲ್ಲಿ ಈ ಸೊಂಕು ಸಾಮಾನ್ಯ ವೈರಲ್ ಜ್ವರದಂತೆ ವರ್ತಿಸುತ್ತದೆ. ಇಂತಹ ಜನರಲ್ಲಿ ರೋಗ ನಿರೋಧಕ ಶಕ್ತಿ ಬಹಳ ಚೆನ್ನಾಗಿರುತ್ತದೆ.
- ಸುಮಾರು 10 ರಿಂದ 25% ಜನರಲ್ಲಿ, ಈ ಸೊಂಕು ಹೆಚ್ಚು ತೊಂದರೆ ನೀಡುತ್ತದೆ. ಅವರಲ್ಲಿ ಹೆಚ್ಚಿನ ಜ್ವರ, ನಿರಂತರ ಒಣಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಬಹುದು. ಈ ತರಹದ ಸೊಂಕು ಎಲ್ಲಾ ವಯೋಮಾನದವರಿಗೂ ಬರಬಹುದು ಮತ್ತು ಇವರಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೂ, ಇದರ ಜೊತೆಗೆ ಸುಸಜ್ಜಿತವಾದ ಔಷಧೋಪಚಾರದಿಂದ ಇವರನ್ನು ಸೊಂಕಿನಿಂದ ಮುಕ್ತಗೊಳಿಸಬಹುದು.
- ಸುಮಾರು 5 ರಿಂದ 15% ಜನರಲ್ಲಿ ಈ ಸೊಂಕು ತೀವ್ರವಾಗುವ ಸಂಭವವಿರುತ್ತದೆ. ಅದರಲ್ಲಿ 2 ರಿಂದ 5% ಜನರು ಮರಣವನ್ನು ಹೊಂದಬಹುದು ಅವರುಗಳಲ್ಲಿ ಪ್ರಮುಖವಾಗಿ ಗಂಭೀರ ಖಾಯಿಲೆಗಳ ಹಿನ್ನಲೆ ಇರುತ್ತದೆ.
ಉದಾಹರಣೆಗೆ
- ಸಕ್ಕರೆ ಖಾಯಿಲೆ
- ಕಿಡ್ನಿ ಸಮಸ್ಯೆ (Chronic kidney Dieseas)
- ಶ್ವಾಸಕೋಶದ ತೊಂದರೆಗಳು
- ಕೀಮೋ ಥೆರೆಫಿ ರೋಗಿಗಳು (Chemotherapy)
- Steroid ಬಳಸುವವರು
- Bone marrow ತೊಂದರೆ ಇರುವವರು
- ಮಧ್ಯಪಾನ ಮತ್ತು ಧೂಮಪಾನಿಗಳು
- 8.8 ವರ್ಷದ ಕೆಳಗಿನ ಮಕ್ಕಳು
- 9.60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು
- ಗರ್ಭಿಣಿಯರು
- ರೋಗ ನಿರೋಧಕ ಶಕ್ತಿ ಕಡಿಮೆಯಿರುವ (ಯಾವುದೇ ಕಾರಣದಿಂದ)
ವೈರಾಣುವಿನ ಸೊಂಕನ್ನು ತಡೆಯಲು ನಮ್ಮ ದೇಹದಲ್ಲಿನ ರಕ್ಷಣಾ ವ್ಯವಸ್ಥೆಗಳು ಮಾನವನ ಶರೀರವು ಎರಡು ರೀತಿಯ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ.
- ಸಹಜ ರಕ್ಷಣೆ (Innate immunity) -ಜನ್ಮ ತಳಿ ಬಂದಿರುವುದು
- ಅರ್ಜಿಸಿದ ರಕ್ಷಣೆ (acquired immunity)
- ಅರ್ಜಿಸಿದ ರಕ್ಷಣೆ – ಲಸಿಕಾ ವಿದಾನದಿಂದ
ಒಂದು ವೈರಾಣು ದೇಹದಲ್ಲಿ ಪ್ರವೇಶಿಸುತ್ತಿದ್ದ ಹಾಗೆಯೇ ಅದನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು lymphocytes ಮತ್ತು microphages ಗಳಿಂದ ಶುರುವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ವೈರಾಣುವು ಬಹಳ ಪ್ರಭಲವಾಗಿದ್ದಲ್ಲಿ, ಖಾಯಿಲೆ ಪ್ರಕ್ರಿಯೆಯು ಮುಂದುವರೆಯುತ್ತದೆ. ಇಲ್ಲವಾದಲ್ಲಿ ಈ ಪ್ರಕ್ರಿಯೆಯು ಇಲ್ಲಿಗೆ ನಿಲ್ಲುತ್ತದೆ.ಇದೇ ಸಮಯದಲ್ಲಿ ನಮ್ಮ ದೇಹದಲ್ಲಿರುವ IgA antibodyಗಳು ಮತ್ತು INTERFERONS ಗಳು ಸಹ ತಕ್ಷಣ ರಕ್ಷಣೆಗೆ ಬಂದು ವೈರಸ್ನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತದೆ.
ಮೇಲೆ ತಿಳಿಸಿದ ಎರಡೂ ವಿಧಾನಗಳು ಯಶಸ್ವಿಯಾಗದಿದ್ದಾಗ ನಮ್ಮ B-LYMPHOCYTES (Plasma Cells) ಗಳು ಸಕ್ರಿಯವಾಗಿ ವೈರಾಣುವಿನ ವಿರುದ್ದ ನಿರ್ದಿಷ್ಟವಾದ ಚಿ antibody ಗಳನ್ನು ಉತ್ಪನ್ನ ಮಾಡುತ್ತದೆ. ಅದರಂತೆಯೇ T-Lymphocytes ಗಳು ವೈರಸ್ಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯದಲ್ಲಿ ತೊಡಗುತ್ತದೆ. ಈ ಎರಡು ಕ್ರಿಯೆಗಳು ರೋಗ ಲಕ್ಷಣ ಶುರುವಾದ 48 ರಿಂದ 72 ತಾಸುಗಳ ನಂತರ ಶುರುವಾಗುತ್ತದೆ. ಸುಮಾರು 2 ರಿಂದ 3 ವಾರಗಳ ಕಾಲ ಮುಂದುವರೆದು ಮೈಯಲ್ಲಿ ಒಂದು ವೈರಾಣು ಇರದ ಹಾಗೆ ನೋಡಿಕೊಳ್ಳುತ್ತವೆ. ಈ ಎರಡೇ ವಿಧಾನದಿಂದ ಮೈಯಲ್ಲಿ ಬರುವ ರೋಗನಿರೋಧಕ ಶಕ್ತಿಯು ಆ ವೈರಾಣುವಿನ ವಿರುದ್ದ ಜೀವನ ಪೂರ್ತಿ ಉಳಿಯುತ್ತದೆ. ಮತ್ತೊಮ್ಮೆ ಇದೇ ವೈರಾಣು ದೇಹದಲ್ಲಿ ಸೊಂಕು ಬರದ ಹಾಗೆ ನೋಡಿಕೊಳ್ಳುತ್ತದೆ (ಈ ಮೇಲೆ ತಿಳಿಸಿದ ಪ್ರಕ್ರಿಯೆಯನ್ನೆ ನಾವು ಲಸಿಕಾ ವಿಧಾನದಿಂದ ಬಳಸಿ, ದೀರ್ಘಕಾಲದ ರೋಗ ನಿರೋಧಕ ಶಕ್ತಿ ಬರುವ ಹಾಗೆ ಮಾಡಲಾಗುತ್ತದೆ Vaccination/ Immunization process) ನಮ್ಮ ದೇಹದ ರಕ್ಷಣಾ ವ್ಯವಸ್ಥೆಯ ಪ್ರಕ್ರಿಯೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಒಬ್ಬ ವ್ಯಕ್ತಿಯ ಅನುವಂಶಿಕತೆ, ವಯಸ್ಸು, ಊಟೋಪಚಾರ ಮತ್ತು ಆರೋಗ್ಯ ಸ್ಥಿತಿಯ ಮೇಲೆ ಅವಲಂಭಿಸಿರುತ್ತದೆ.
ಈ ವೈರಾಣುವನ್ನು ತಡೆಗಟ್ಟುವ ಬಗೆ
- ನಮ್ಮ ದೇಹದ ರೋಗ ನಿರೋಧಕ ಶಕ್ತಿ
- ಸದ್ಯದಲ್ಲಿ ಯಾವುದೇ ಪರಿಣಾಮಕಾರಿ ಔಷಧಿಗಳಿಲ್ಲ. ಹಾಗೆಂದು ನಿರಾಶೆಗೊಳ್ಳುವುದು ಬೇಕಿಲ್ಲ. ಈ ಮೊದಲು ಸಂಶೋಧನೆಗೊಂಡಿರುವ ಕೆಲವೊಂದು anti-viral medicine ಗಳನ್ನು ವಿವಿಧ ಸಂಯೋಜನೆಯಲ್ಲಿ ಬಳಸಿ ಸಕಾರಾತ್ಮಕವಾದ ಫಲಿತಾಂಶವನ್ನು ಪಡೆದ ನಿದರ್ಶನಗಳಿವೆ.
- ಇವೆಲ್ಲದಕ್ಕಿಂತ ಪರಿಣಾಮಕಾರಿ ಮತ್ತು ಸರಳವಾದ ವಿಧಾನವೆಂದರೆ
- A. ಖಾಯಿಲೆ ಇರುವವರನ್ನು ಪ್ರತ್ಯೇಕಿಸುವುದು. (isolation)
- ಖಾಯಿಲೆ ಇದ್ದವರ ನಿಕಟ ಸಂಪರ್ಕದಲ್ಲಿದ್ದವರನ್ನು ಬೇರ್ಪಡಿಸುವುದು. (Home Quarantine)
- C. ಸಮುದಾಯದಲ್ಲಿ ಸಾಮಾಜಿಕ ಅಂತರವನ್ನು (Social Distancing) ಕಡ್ಡಾಯವಾಗಿ ಪಾಲಿಸುವುದು.
ಮೇಲೆ ತಿಳಿಸಿದ ವಿಚಾರದ ಸಾರಾಂಶವೇನೆಂದರೆ ನಮ್ಮ ಶತ್ರುವಾದ ವೈರಸ್ನಿಂದ ದೂರವಿರುವುದು ಅಥವಾ ತಪ್ಪಿಸಿಕೊಂಡು ಓಡುವುದು. ಇದು ಕೇಳಲಿಕ್ಕೆ ಎಷ್ಟು ಹಾಸ್ಯಸ್ಪದವಲ್ಲವೇ??? ಜಗತ್ತಿನ ಅತ್ಯಂತ ಬಲಿಷ್ಠ ಮತ್ತು ಬುದ್ದಿಶಾಲಿ ಜೀವಿ ಒಂದು ಸೂಕ್ಷ್ಮಾಣುವಿನಿಂದ ತಪ್ಪಿಸಿಕೊಂಡು ಓಡುವುದು. ಆದರೆ ಈ ಸೊಂಕನ್ನು ಮತ್ತು ಸಾಂಕ್ರಮಿಕವನ್ನು ಯಶಸ್ವಿಯಾಗಿ ತಡೆಯಬೇಕೆಂದರೆ ಮೇಲೆ ತಿಳಿಸಿರುವ ವಿಧಾನವೇ ಅತ್ಯಂತ ಸರಳ ಮತ್ತು ಸೂಕ್ತ.
covid-19 ವೈರಸ್ ಮೇಲೆ ಬಾಹ್ಯ ವಸ್ತುಗಳ ಪ್ರಭಾವವೇನು?
- >540c ಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ವೈರಾಣು ಸಾಯುತ್ತದೆ.
- ರಾಸಾಯನಿಕ ದ್ರವಗಳಾದ ÁzÀ FORMALDEHYDE, GLUTARALDEHYDE, SODIUM HYPOCHLORIDE (BLEECHING POWDER), BETA PROPIO-LACTONE ಈ ದ್ರವಗಳ ಸಿಂಪಡನೆಯಿಂದ ವೈರಾಣುವನ್ನು ಕೆಲವು ನಿಮಿಷಗಳಲ್ಲೆ ನಿಷ್ಕ್ರಿಯೆಗೊಳಿಸಬಹುದು. ಮೇಲೆ ತಿಳಿಸಿದ ಉಳಿದ ರಾಸಾಯನಿಕ ದ್ರವಗಳನ್ನು ಸಮುದಾಯ ಸ್ವಚ್ಛತೆಗೆ ಬಳಸಬೇಕು. ಈ ದ್ರವ ರಾಸಾಯನಿಕಗಳ ಸಂಪರ್ಕವನ್ನು ನಮ್ಮ ಚರ್ಮಕ್ಕೆ ದುಷ್ಪರಿಣಾಮ ಮಾಡುವುದರಿಂದ ಎಚ್ಚರಿಕೆ ವಹಿಸುವುದು ಸೂಕ್ತ.
- >70% alcohol ಇರುವ ದ್ರಾವಣಗಳಿಂದ ಕೆಲವು ಸೆಕೆಂಡ್ಗಳಲ್ಲಿಯೇ ವೈರಸ್ ನಿಷ್ಕ್ರಿಯಗೊಳ್ಳುತ್ತದೆ. ನಾವು ಬಳಸುವ ಹ್ಯಾಂಡ್ ಸ್ಯಾನಿಟೈಜರ್ಗಳಲ್ಲಿ ಚಿಟಛಿohoಟ ನ ಪ್ರತಿಶತ >70% ಇರುತ್ತದೆ. ಆದ್ದರಿಂದ ಅದು ಬಹು ಉಪಯೋಗಿಯಾಗಿರುತ್ತದೆ.
- ನಿರ್ಜೀವ ವಸ್ತುಗಳ ಮೇಲೆ ಹತ್ತಿರುವ ವೈರಾಣು 15-20ನಿಮಿಷದವರೆಗೆ ಮಾತ್ರ ಬದುಕಿರುತ್ತದೆ.
ಈ ರೋಗ ಹರಡುವ ಹಂತಗಳು
stage I:-ಸೊಂಕಿರುವ ದೇಶದಿಂದ, ಸೊಂಕಿರುವ ವ್ಯಕ್ತಿ ಸ್ವದೇಶಕ್ಕೆ ಆಗಮಿಸಿರುವುದು. (ನಮ್ಮ ದೇಶದಲ್ಲಿ ಸೊಂಕು ಪ್ರಾರಂಭ) (Primary/ Index Case)
stage II:- ಸೊಂಕಿತರ ನಿಕಟ ಸಂಪರ್ಕದಲ್ಲಿರುವವರಲ್ಲಿ ಸೊಂಕು ಕಾಣಿಸಿಕೊಳ್ಳುವುದು.
stage III:- ವಿದೇಶದಿಂದ ಬಂದಿರದೇ, ಮತ್ತು ಬಂದಿರುವವರ ನಿಕಟ ಸಂಪರ್ಕದಲ್ಲಿರದ, ವ್ಯಕ್ತಿಗಳಲ್ಲಿ ಕಂಡುಬರುವ ಸೊಂಕು (Community Spread)
stage IV:- ದೇಶದ ವಿವಿಧ ಭಾಗಗಳಲ್ಲಿ ಸೋಂಕು ಹರಡುವುದು. (ex:- ನಿಜಾಮುದ್ದೀನ್ ಪ್ರಕರಣ)
ಈಗ ಲಭ್ಯವಿರುವ ಮಾಹಿತಿಯ ಪ್ರಕಾರ ದೇಶದ ಬಹಳಷ್ಟು ಭಾಗಗಳು ಎರಡನೇ ಹಂತದಲ್ಲಿದ್ದು, ಕೆಲವೊಂದು ಭಾಗಗಳು 3ನೇ ಹಂತ ಪ್ರವೇಶಿಸುತ್ತಿದೆ.
ದೇಶವನ್ನು Lock-down ಮಾಡುವುದು ಹೇಗೆ ಸಹಕಾರಿ?
ಈ ವೈರಾಣುವು ತಾನಾಗಿಯೇ ಚಲನಶೀಲವಲ್ಲ. ಈ ವೈರಾಣುವನ್ನು ಸೊಂಕಿತ ವ್ಯಕ್ತಿಯೇ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತೆಗೆದುಕೊಂಡು ಹೋಗಬಹುದು. ಮತ್ತು ಸೊಂಕಿತ ವ್ಯಕ್ತಿಯಿಂದಲೇ ಮತ್ತೊಂದು ನಿಕಟ ಸಂಪರ್ಕದಲ್ಲಿ ಬಂದ ವ್ಯಕ್ತಿಗೆ ಹರಡಬೇಕು. Lock-down ಮತ್ತು Social-distancing ನ ಮರ್ಮ ಮೇಲಿನ ವಿಚಾರದಲ್ಲಿ ಅಡಗಿದೆ.
covid-19 ಭಾರತದಲ್ಲಿ ಏನಿದರ ಪಾಡು?
ಈಗಾಗಲೇ ಅತಿಯಾಗಿ ಸೋಂಕು ಪೀಡಿತರಾಗಿರುವ ಪಾಶ್ಚಿಮಾತ್ಯ ದೇಶಗಳನ್ನು ಗಮನಿಸಿವಿಶ್ಲೇಶಿಸುವುದಾದರೆ ಕೆಲವೊಂದು ದಿಗ್ಬ್ರಮೆಗೊಳಿಸುವ ವಿಚಾರಗಳು ಹೊರಹೊಮ್ಮುತ್ತದೆ.
1) ಈ ವೈರಾಣುವಿನ ಸೊಂಕು ತಾಗಿಸುವ ಕ್ಷಮತೆ(Infectivity) ತುಂಬಾ ಹೆಚ್ಚಾಗಿದೆ. ಅಂದರೆ ಕ್ಷಣ ಮಾತ್ರದಲ್ಲಿ ದೊಡ್ಡ ಸಮುದಾಯವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಮಥ್ರ್ಯವಿದೆ
2) ವೃದ್ಧರಲ್ಲಿ ಮತ್ತು ದೀರ್ಘಸ್ವರೂಪದ ಖಾಯಿಲೆಗಳ ಹಿನ್ನೆಲೆಯವರಿಗೆ ಮಾರಣಂತಿಕವಾಗಿದೆ. (Virulence)
3) ಕನಿಷ್ಠ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ಮತ್ತು ಸ್ವಯಂ ಪ್ರತ್ಯೇಕಿಸಿಕೊಳ್ಳದವರು (Self Quarantine) ಸೊಂಕಿಗೆ ಗುರಿಯಾಗಿದ್ದಾರೆ.
4) ಅತ್ಯಂತ ಪರಿಣಾಮಕಾರಿ ಆರೋಗ್ಯ ಸೇವೆಗಳನ್ನು ಹೊಂದಿದ್ದರೂ, ಸೊಂಕಿತರ ಸಂಖ್ಯೆ ಕ್ಷಿಪ್ರಗತಿಯಲ್ಲಿ ಮಿತಿಮೀರುವ ಪರಿಸ್ಥಿತಿಯಿಂದ, ಒಂದು ಒಳ್ಳೆಯ ಆರೋಗ್ಯ/ಆಸ್ಪತ್ರೆಯ ವ್ಯವಸ್ಥೆಯನ್ನು ಸಹ ವಿಫಲಗೊಳಿಸಿ, ನರಳುವ-ಸಾಯುವ ರೋಗಿಗಳನ್ನು ಮೂಕ ಪ್ರೇಕ್ಷಕರಾಗಿ ನೋಡುವಂತೆ ಮಾಡುತ್ತದೆ.
5) ಸರ್ಕಾರಗಳು ನೀಡಿದ ಮಾರ್ಗಸೂಚಿಗಳನ್ನು ಪಾಲಿಸದೇ ತಮ್ಮನ್ನು ತಾವು ಶಿಸ್ತುಬದ್ಧಗೊಳಿಸದೇ ಇರುವುದರಿಂದ, ಅವರಲ್ಲಿ (ಪಾಶ್ಚಿಮಾತ್ಯ ದೇಶಗಳು) ಸೋಂಕಿತರ ಸಂಖ್ಯೆಯು ಕೈ ಮೀರಿ ಹೋಗಿರುವುದನ್ನು ಕಾಣಬಹುದಾಗಿದೆ.
ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಬಹಳ ಪೂರಕ ವಾತವರಣವಿದೆ. ನಮ್ಮ ಜನರು ವಿದೇಶಿಗರು ಮಾಡಿದ ತಪ್ಪುಗಳನ್ನು ಪುನಾರವರ್ತಿಸಬಾರದಷ್ಟೇ.
ಮುಂದುವರೆದ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ನಮ್ಮ ದೇಶವು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ನಮ್ಮಲ್ಲಿ ಆರೋಗ್ಯ ಸೇವೆಯು ಅಷ್ಟಕ್ಕಷ್ಟೆ ಮತ್ತು ನಮ್ಮ ಜೀವನಶೈಲಿಯೂ ಅತ್ಯಂತ ಉತ್ಕøಷ್ಟವಾಗಿಲ್ಲದಿರುವುದರಿಂದ, ನಾವು ಚಿಕ್ಕ ವಯಸ್ಸಿನಿಂದಲೇ ಬಹಳಷ್ಟು ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ಸಾಮ್ಯವಾದ ಸೋಂಕುಗಳಿಗೆ ತುತ್ತಾಗಿರುತ್ತೇವೆ. ಇದರಿಂದ ನಮ್ಮ ದೇಹದಲ್ಲಿ ಸಾಕಷ್ಟು ಆರ್ಜಿಸಿದ ರೋಗ ನಿರೋಧಕ ಶಕ್ತಿ ಬಂದಿರುತ್ತದೆ. ಇದು ಇಂತಹ ಸನ್ನಿವೇಶಗಳಲ್ಲಿ ಬಹಳಷ್ಟು ಸಹಾಯಕಾರಿ. ನಮ್ಮ ದೇಶದಲ್ಲಿ ಯುವ ಪೀಳಿಗೆಯ ಜನಸಂಖ್ಯೆ ಯಥೇಚ್ಛವಾಗಿರುವುದರಿಂದ, ಈ covid-19 ವೈರಸ್ನ ಪ್ರಭಾವ ಮತ್ತು ಹಾವಳಿಯನ್ನು ತಡೆಗಟ್ಟುವಲ್ಲಿ ಅನೂಕೂಲಕರವಾದ ವಾತಾವರಣವಿದೆ.
ನಮ್ಮ ದೇಶದಲ್ಲಿ ಒಟ್ಟಾರೆ ಸುಮಾರು 10ಲಕ್ಷ ಜನರನ್ನು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಕೊಡುವ ವ್ಯವಸ್ಥೆ ಇದೆ ಮತ್ತು ಸುಮಾರು 12 ಸಾವಿರ ಜನರಿಗೆ ತೀವ್ರಾ ನಿಗಾ ಘಟಕದಲ್ಲಿಟ್ಟು ventilator ನಲ್ಲಿ ಇರಿಸಿ, ಚಿಕಿತ್ಸೆ ಮಾಡುವ ಸಾಮಾಥ್ರ್ಯವಿದೆ.
ಹೀಗೊಂದು ಪರಿಸ್ಥಿತಿಯನ್ನು ಅವಲೋಕಿಸೋಣ
ನಮ್ಮ ದೇಶದ ಜನಸಂಖ್ಯೆ ಸುಮಾರು130 ಕೋಟಿ, ಅದರಲ್ಲಿ ಕೇವಲ 15% ಜನರಿಗೆ ಸೊಂಕು ತಗುಲಿದರೆ 2 ಕೋಟಿ ಜನ ಆಸ್ಪತ್ರೆ ಕಡೆ ಮುಖ ಮಾಡಿ, ಅದರಲ್ಲಿ ಕೇವಲ 15% ಜನರಿಗೆ ಅಂದರೆ 30 ಲಕ್ಷ ಜನರಿಗೆ ಒಳರೋಗಿಯಾಗಿ ಚಿಕಿತ್ಸೆ ಕೊಡುವುದು ಮತ್ತು ಅದರಲ್ಲಿ ಕೇವಲ 15% ಜನರಿಗೆ ಅಂದರೆ 45 ಸಾವಿರ ರೋಗಿಗಳಿಗೆ ತೀವ್ರಾ ನಿಗಾ ಘಟಕದ ಅವಶ್ಯಕತೆ ಬಂದಲ್ಲಿ ನಮ್ಮಲ್ಲಿ ಅವರಿಗೆ ಚಿಕಿತ್ಸೆ ಕೊಡುವ ಶಕ್ತಿ ಇದೆಯೇ?? ಇದು ಸಾದ್ಯವೇ??
ಇದು ನಮ್ಮ ಕನಸಿನಲ್ಲಿ ಊಹಿಸಿದರೂ ಸಾದ್ಯವಾಗದ ಕಟು ಸತ್ಯ, ಆದ್ದರಿಂದ ಆ ದುಸ್ಥಿತಿಗೆ ತಲುಪದ ಹಾಗೆ ಮಾಡಬೇಕೆಂದರೆ ಇದುವರೆಗೂ ನಮ್ಮ ಸರ್ಕಾರವು ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಸಂಕಲ್ಪದಿಂದ ಸಮರೋಪಾದಿಯಲ್ಲಿ ಕಾರ್ಯೊನ್ಮುಖರಾಗೋಣ ಮತ್ತು ದೇಶವನ್ನು ಉಳಿಸುವ ಪ್ರಕ್ರಿಯೆಯಲ್ಲಿ ನಮ್ಮದೊಂದು ಅಳಿಲು ಸೇವೆಯನ್ನು ಮಾಡಿ ದೇಶದ ಋಣ ತೀರಿಸೋಣ.
ಅನುಸರಿಸಬೇಕಾದ ಮುಂಜಾಗ್ರತೆಗಳು
- ಮನೆಯಲ್ಲಿ ಯಾವುದೇ ಸೋಂಕಿಲ್ಲದವರು ಪಾಲಿಸಬೇಕಾದ ನಿಯಮಗಳು.
- A. Lock down ಪಾಲಿಸಿ
- ಪದೇ ಪದೇ ಹ್ಯಾಂಡ್ವಾಷ್ ಮಾಡುವುದು ಮತ್ತು ಸ್ಯಾನಿಟೈಜರ್ ಗಳನ್ನು ಬಳಸುವ ಅವಶ್ಯಕತೆ ಇಲ್ಲ.
- C. ಮನೆಯಲ್ಲಿ AC ಇದ್ದರೆ 270C ಗಿಂತ ಅಧಿಕ ತಾಪಮಾನದಲ್ಲಿ ಇಡುವುದು.
- D. ಪ್ರೋಟೀನ್ಗಳು ಮತ್ತು vit-c (ಹುಳಿ ಇರುವ ಹಣ್ಣುಗಳು) ಮತ್ತು vit-a (ಕೆಂಪು ಬಣ್ಣದ ತರಕಾರಿಗಳು) ಯಥೇಚ್ಛವಾಗಿ ಬಳಸುವುದರಿಂದ ರೋಗ ನಿರೋಧಕ ಶಕ್ತಿಯು ಉತ್ತಮವಾಗಿರುತ್ತದೆ.
- ಶ್ವಾಸಕೋಶದ ಸಾಮಾಥ್ರ್ಯವನ್ನು ಬಲಗೊಳಿಸಲು ಯೋಗ ಮತ್ತು ಪ್ರಾಣಯಾಮ ಕ್ರಿಯೆಗಳನ್ನು ಮಾಡುವುದು.
- ಮನೆಯಲ್ಲಿ ಯಾರಾದರೂ ಸೋಂಕಿತರ ಸಂಪರ್ಕಕ್ಕೆ ಬಂದು ಸ್ವಯಂ ಪ್ರತ್ಯೇಕಿಸಲ್ಪಟ್ಟಾಗ (Home Quarantine)
- A. ಮೇಲೆ ತಿಳಿಸಿದ ಎಲ್ಲಾ ನಿಯಮಗಳನ್ನು ಪಾಲಿಸುವುದು.
- Quarantine ನಲ್ಲಿರೋ ವ್ಯಕ್ತಿಯನ್ನು ಪ್ರತ್ಯೇಕ ಕೊಠಡಿಯಲ್ಲಿಡುವುದು.
- C. ಅವರ ನಿಕಟ ಸಂಪರ್ಕದಲ್ಲಿ ಮನೆಯ ಯಾವ ಸದಸ್ಯರು ಬರದಂತೆ ನೋಡಿಕೊಳ್ಳುವುದು.
- D. Quarantine ನಲ್ಲಿರೋ ವ್ಯಕ್ತಿ ಮತ್ತು ಅವರ ಸೇವೆಯಲ್ಲಿರುವವರು ನಿಯಮಿತವಾಗಿ ಕೈ ಗಳನ್ನು ತೊಳೆಯುವುದು ಮತ್ತು ಆಗಾಗ ಸ್ಯಾನಿಟೈಜರ್ ಬಳಸುವುದು.
- Quarantine ನಲ್ಲಿರೋ ವ್ಯಕ್ತಿಯ ಬಟ್ಟೆಗಳು ಮತ್ತು ಹೊದಿಕೆಗಳನ್ನು ಅವರ ಕೊಠಡಿಯಲ್ಲೆ ಒಂದು ಬಕೇಟ್ ಕುದಿಯುವ ನೀರಿನಲ್ಲಿ 20 ನಿಮಿಷಗಳ ಕಾಲ ಇಡುವುದು.
ಜಿ. Quarantine e ನಲ್ಲಿರೋ ವ್ಯಕ್ತಿ ಬಳಸುವ ದಿನನಿತ್ಯದ ಎಲ್ಲಾ ಸಾಮಾನುಗಳನ್ನು (ತಟ್ಟೆ, ಲೋಟ, ಮೋಬೈಲ್ ಇತ್ಯಾದಿ) ಇತರರು ಮುಟ್ಟದಂತೆ ಕ್ರಮ ತೆಗೆದುಕೊಳ್ಳುವುದು.
- ಕೆಮ್ಮುವಾಗ ಅಥವಾ ಸೀನುವಾಗ ಭುಜ ಮತ್ತು ಮೊಣಕೈನಿಂದ ಬಾಯಿಯನ್ನು ಮುಚ್ಚಿಕೊಳ್ಳುವುದು.
- ರೋಗದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ, ತಕ್ಷಣ ನಿರ್ದಿಷ್ಟವಾದ ಆಸ್ಪತ್ರೆಯ ವೈದ್ಯರ ತಪಾಸಣೆಗೆ ಒಳಪಡುವುದು.
- ಸುಮಾರು 14 ದಿನಗಳ Quarantine ಅವಧಿಯ ನಂತರ ಯಾವುದೇ ಲಕ್ಷಣಗಳು ಕಂಡುಬರದೆ ಇದ್ದಲ್ಲಿ, ಸಾಮಾನ್ಯವಾಗಿ ಮನೆಯವರೊಂದಿಗೆ ಬೆರೆಯಬಹುದು.
III. ಈ ಸಾಂಕ್ರಮಿಕವನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿರುವ ಕಾರ್ಯ ಪಡೆಯವರು.
- ಕಡ್ಡಾಯವಾಗಿ ಓ-95 ಮಾಸ್ಕ್ಗಳನ್ನು ಬಳಸುವುದು
- ಸಾಮಾಜಿಕ ಅಂತರ ಕಾಯ್ದುಕೊಳ್ಳುವುದ
- ಯಾವುದೇ ಸೋಂಕಿತ ವ್ಯಕ್ತಿಯನ್ನು ಮುಟ್ಟಬೇಕಾದ ಪರಿಸ್ಥಿತಿಯಲ್ಲಿ Hand Glove ಮತ್ತು Transperent Face Shield ಬಳಸುವುದು.
- ಮನೆಗೆ ಹಿಂದುರುಗಿದಾಗ ಧರಿಸಿದ ಬಟ್ಟೆಗಳನ್ನು ಹೊರಗಡೆಯೇ ಕುದಿಯುವ ನೀರಿನಲ್ಲಿ ಹಾಕುವುದು ಮತ್ತು ಸ್ನಾನ ಮಾಡುವುದು.
- ಮನೆಯಲ್ಲಿ ಯಾವುದೇ ವಸ್ತುವನ್ನು ಮುಟ್ಟುವ ಮುಂಚೆ ಹ್ಯಾಂಡ್ ಸ್ಯಾನಿಟೈಜರ್ ಬಳಸುವುದು.
STAY HOME | STAY SAFE |SAVE NATION|ಮನೆಯಲ್ಲೇ ಇರಿ | ಸುರಕ್ಷಿತವಾಗಿರಿ | ದೇಶವನ್ನು ರಕ್ಷಿಸಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್
ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.
ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಹೇಳಿಕೆ
- ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.
| ಸಚಿವ ದಿನೇಶ್ ಗುಂಡೂರಾವ್
ಟ್ವೀಟ್
In consideration of public health, we are banning the use of artificial colours in Gobi Manchurian and cotton candy. Violation of this ban may result in imprisonment for up to 7 years and a fine of up to 10 lakhs.
Following reports of substandard quality and the presence of… pic.twitter.com/z2KWHi8Jbd
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 11, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಲೈಫ್ ಸ್ಟೈಲ್
ನೀಲಿ ಪರ್ವತಗಳ ನಾಡಿನಲ್ಲಿ ಕೀಚಕರ ಹಾವಳಿ
- ಡಾ. ಸಿದ್ದಯ್ಯ ರೆಡ್ಡಿಹಳ್ಳಿ
ಜಗತ್ತಿನ ಪ್ರತಿ ಜನಾಂಗವು ತನ್ನ ಪೂರ್ವಜರ ಪ್ರತಿಭೆ ಹಾಗೂ ಹಿರಿಮೆಯನ್ನು ಹೇಳಿಕೊಳ್ಳಲು ಕಾತರಿಸುತ್ತದೆ. ಅದರಂತೆಯೇ ನಮ್ಮ ಭರತ ಖಂಡದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ ಮಣಿಪುರಿ ಜನರು ಕ್ರಿಸ್ತಪೂರ್ವದಲ್ಲಿಯೇ ಅತ್ಯಾಧುನಿಕ ಸಾಮ್ರಾಜ್ಯವನ್ನು ಕಟ್ಟಿದ್ದರಂತೆ ಎಂದು ಹೇಳಿಕೊಳ್ಳುತ್ತಾರೆ.
ನಿಜ ಮಣಿಪುರಿಗಳು ಬೆಟ್ಟಗಳ ನಡುವೆ ಬೆಚ್ಚನೆಯ ಜೀವನವನ್ನು ಸಾಗಿಸಿದವರು. ಆದರೆ ಅಲ್ಲಿ ಕೊಳ್ಳಿ ಇಡುವ ಕೆಲಸಗಳು ಬಹಳ ಹಿಂದಿನಿಂದಲೇ ಪ್ರಾರಂಭವಾಗಿರುವುದು ತಿಳಿದುಬರುತ್ತದೆ. ವಾಸ್ತವದಲ್ಲಿ ಹಲವು ಬುಡಕಟ್ಟುಗಳ ಸಂಮಿಶ್ರಣವೇ ಮಣಿಪುರವಾಗಿದೆ. ಆದರೆ ಮಣಿಪುರಿಗಳು ಮಾತ್ರ ಈ ನೆಲದ ಮೂಲ ನಿವಾಸಿಗಳು, ಅವರಿಗೆ ಮಾತ್ರ ಸಕಲ ಸೌಕರ್ಯಗಳು ಸಿಗಬೇಕು, ಉಳಿದವರು ರಾಜ್ಯ ಬಿಡಬೇಕು ಎಂದು ಉಯಿಲ್ಲೆಬ್ಬಿಸುತ್ತಿರುವವರು ಯಾರು? ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೆ ಇರುವಂತೆ ಹೇರಳವಾದ ಜಾನಪದ ಕಥೆ, ಪುರಾಣ ಮತ್ತು ದಂತಕಥೆಗಳ ಸಂಪತ್ತು ಇಲ್ಲಿನ ಬುಡಕಟ್ಟು ಜನಾಂಗಗಳಿಗೂ ಇದೆ.
ಮಣಿಪುರದ ರಾಜಧಾನಿ ಇಂಫಾಲ್ನಲ್ಲಿ ವಾಸಿಸುತ್ತಿದ್ದ ಜನರನ್ನು ಮಿತೇಯಿ ಅಥವಾ ಮೈತೇಯಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರವು ಬಾಂಗ್ಲಾದ ಗುಡ್ಡುಗಾಡು ಜಿಲ್ಲೆಗಳಲ್ಲಿ ಒಂದಾಗಿತ್ತು. ಭಾರತ ಸ್ವಾತಂತ್ರ್ಯಗೊಂಡು ಎರಡು ವರ್ಷ ಎರಡು ತಿಂಗಳು ಕಳೆದ ನಂತರ ಅಂದರೆ ಅಕ್ಟೋಬರ್ 15, 1949ರಂದು ಭಾರತದೊಂದಿಗೆ ಏಕೀಕೃತವಾಯಿತು.
ಮಣಿಪುರದಲ್ಲಿ ಅಂತರ-ಜನಾಂಗೀಯ ಹಿಂಸಾಚಾರವು ಇದೇ ಮೊದಲೇನಲ್ಲ, ಇದಕ್ಕೆ ಸುದೀರ್ಘವಾದ ಇತಿಹಾಸವಿದೆ. ಮಣಿಪುರಿಗಳ ಅತಿರೇಕ ಎಲ್ಲಿಯವರೆಗೆ ಹೋಗಿತ್ತು ಎಂದರೆ 1964ರಲ್ಲಿ ಭಾರತದಿಂದ ಬಿಡುಗಡೆ ಹೊಂದಿ, ಹೊಸ ದೇಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ದಂಗೆಯನ್ನು ಎಬ್ಬಿಸಲಾಗಿತ್ತು. ಇದರಲ್ಲಿ ಹಲವಾರು ಗುಂಪುಗಳು ಕೂಡಿಕೊಂಡಿದ್ದವು. ಅವರಿಗೆ ಅವರದೇ ಆದ ಗುರಿಗಳು ಇದ್ದುದರಿಂದ ಈ ದಂಗೆ ವಿಫಲವಾಯಿತು.
ಚೀನಾ ದೇಶದ ಕುಮ್ಮಕ್ಕಿನಿಂದಾಗಿ ‘ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್’ ಮತ್ತು ‘ಪೀಪಲ್ಸ್ ಲಿಬರೇಶನ್ ಆರ್ಮಿಗಳು’ ಹುಟ್ಟಿಕೊಂಡವು. ಇವರು ಶಸ್ತ್ರಾಸ್ತ್ರ ತರಬೇತಿಯನ್ನು ಹೊಂದಿ, ಬ್ಯಾಂಕ್ ದರೋಡೆಗಳನ್ನು ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. 1980 ರಿಂದ 2004ರವರೆಗೂ ಭಾರತ ಸರ್ಕಾರ ಮಣಿಪುರವನ್ನು ಪ್ರಕ್ಷÄಬ್ದ ಪ್ರದೇಶ ಎಂದು ಉಲ್ಲೇಖಿಸಿತ್ತು.
ಈ ಸಂದರ್ಭದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟವರ್ತನೆಗಳನ್ನು ಮಾಡುತ್ತಿದ್ದರೆ, ಯಾವುದೇ ವಾರಂಟ್ಗಳಿಲ್ಲದೆ ಬಂಧಿಸಬಹುದಾಗಿತ್ತು. ಕಾನೂನುಗಳನ್ನು ಉಲ್ಲಂಘಿಸುವ, ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಅಥವಾ ದೊಡ್ಡ ದೊಡ್ಡ ಗುಂಪುಗಳಲ್ಲಿ ಸೇರಿದ್ದವರನ್ನು ಗುಂಡಿಕ್ಕಿ ಕೊಲ್ಲುವ ಅವಕಾಶವನ್ನು ಮಿಲಿಟರಿಗೆ ಕೊಡಲಾಗಿತ್ತು. ಮಿಲಿಟರಿಯ ಪರವಾಗಿರುವ ಈ ಕಾನೂನು ಅನಿಯಂತ್ರಿತ ಹತ್ಯೆಗಳು, ಚಿತ್ರಹಿಂಸೆ, ಕ್ರೂರ ಅಮಾನವೀಯತೆ, ಅಪಹರಣದಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು.
ಈ ಮಾನವ ವಿರೋದಿ ಮಿಲಿಟರಿ ಕಾನೂನಿನ ವಿರುದ್ಧ ಹಲವಾರು ಪ್ರತಿಭಟನೆಗಳು, ಹೋರಾಟಗಳು ಜರುಗಿದವು. ಇರೋಮ್ ಶರ್ಮಿಳಾ ಚಾನು ಎಂಬ ದಿಟ್ಟ ಮಹಿಳೆ ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಆದರೂ 2004ರಲ್ಲಿ ಸ್ಥಳೀಯ ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಯಿತು. ಇದಕ್ಕೆ ಪ್ರತಿರೋಧವಾಗಿ ಪ್ರತಿಭಟನೆಗಳು ತೀವ್ರಮಟ್ಟಕ್ಕೆ ತಲುಪಿದಾಗ ಸರ್ಕಾರವು ಮಣಿಪುರದಲ್ಲಿದ್ದ ಗೊಂದಲದ ಸ್ಥಿತಿಯನ್ನು ತೆಗೆದುಹಾಕಿತು.
ಮಣಿಪುರವು ನೀಲಿ ಪರ್ವತಗಳಿಂದ ಸುತ್ತುವರೆದಿರುವ ನಾಡಾಗಿದೆ. ಈ ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿಯನ್ನು ಮಣಿಪುರಿಗಳಿಗೆ ತಲುಪದಂತೆ ತಡೆಯುತ್ತವೆ. ಆದರೆ ಮಣಿಪುರಿಗಳಲ್ಲಿಯೇ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅವುಗಳಿಗೆ ಸಾಧ್ಯವೇ!? ಅವುಗಳು ಚಂಡಮಾರುತದ ಬಿರುಗಾಳಿಗಳನ್ನು ತಡೆಯಬಹುದು, ಆದರೆ ಅವರಲ್ಲಿರುವ ಮೌಢ್ಯವನ್ನು ತೊಡೆದುಹಾಕಲು ಸಾಧ್ಯವೇ?!
ಮಣಿಪುರ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಪಶ್ಚಿಮಕ್ಕೆ ಅಸ್ಸಾಂ ಮತ್ತು ಪೂರ್ವಕ್ಕೆ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ.
ಮಣಿಪುರದಲ್ಲಿ ಮಳೆಗೆ, ನೀರಿಗೆ ಕೊರತೆಯಿಲ್ಲ. ಇದರ ಪಶ್ಚಿಮಕ್ಕೆ ಬರಾಕ್ ನದಿಯ ಜಲಾನಯನ ಪ್ರದೇಶ, ಪೂರ್ವದಲ್ಲಿ ಯು ನದಿಯ ಜಲಾನಯನ ಪ್ರದೇಶ, ಉತ್ತರದಲ್ಲಿ ಲಾನ್ಯೆ ನದಿಯ ಜಲಾನಯನ ಪ್ರದೇಶ, ಮಧ್ಯದಲ್ಲಿ ಮಣಿಪುರ ನದಿಯ ಜಲಾನಯನ ಪ್ರದೇಶವನ್ನು ಹೊಂದಿ ಸಮೃದ್ಧವಾಗಿರುವಂತೆ, ಅಲ್ಲಿನ ಮಹಿಳೆಯರು ಧಾರಾಕಾರವಾಗಿ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣೀರಿಗೆ ಮೊದಲನ್ನು ಗುರುತಿಸುವುದಕ್ಕೆ, ಕೊನೆಯನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ಮಣಿಪುರದ ಅತಿದೊಡ್ಡ ನದಿ ಬರಾಕ್. ಇದು ಇರಾಂಗ್, ಮಕು ಮತ್ತು ತುವೈ ಉಪನದಿಗಳನ್ನು ಹೊಂದಿ ಅಸ್ಸಾಂ ರಾಜ್ಯವನ್ನು ಪ್ರವೇಶಿಸುತ್ತದೆ. ಮಣಿಪುರ ನದಿಯ ಜಲಾನಯನ ಪ್ರದೇಶವು ಮಣಿಪುರ, ಇಂಫಾಲ್, ಇರಿಲ್, ನಂಬುಲ್, ಸೆಕ್ಮೆಂ, ಚಕ್ಪಿ, ತೌಬಲ್ ಮತ್ತು ಖುಗಾ ಎಂಬಂತಹ ಎಂಟು ನದಿಗಳನ್ನು ಹೊಂದಿದೆ. ಈ ಎಲ್ಲಾ ನದಿಗಳು ಸುತ್ತಮುತ್ತಲಿನ ಬೆಟ್ಟಗಳಿಂದಲೇ ಹುಟ್ಟಿಕೊಂಡಿವೆ. ಈ ನದಿಗಳ ಒಳಹರಿವಿನ ಮರ್ಮ ನಮ್ಮ ರಾಜಕಾರಣಿಗಳ ಮರ್ಮದಂತೆ ಯಾರಿಗೂ ತಿಳಿಯದಂತಹ ಕಗ್ಗಂಟಾಗಿದೆ. ನದಿಯು ತಣ್ಣಗಿದ್ದು, ಒಂದೇ ಭಾರಿ ಬೋರ್ಗರೆದು ತಣ್ಣಗಾಗುವಂತೆ ನಮ್ಮ ಪ್ರಧಾನಮಂತ್ರಿಗಳು ಮೂರು ತಿಂಗಳ ಕಾಲ ದಿವ್ಯ ಮೌನವಾಗಿದ್ದು, ಜನರ ನಿತ್ಯ ಜೀವನವು ಅಲ್ಲೋಲ-ಕಲ್ಲೋಲ ಆದಮೇಲೆ ತಣ್ಣಗೆ ಮಾತನಾಡಿದ್ದಾರೆ.
ಆದರೆ ಅಲ್ಲಿಗೆ ಹೋಗುವ ಧೈರ್ಯವನ್ನು ಮಾಡಿಲ್ಲ. ಚುನಾವಣೆ ಇದ್ದರೆ ಹತ್ತು-ಹದಿನೈದು ಬಾರಿ ರೋಡ್-ಶೋ ಮಾಡುವ ಇವರು ಕಷ್ಟದ ಕಾಲದಲ್ಲಿ ಆ ಕಡೆ ತಿರುಗಿಯು ನೋಡದೇ ಇರುವುದು ಭಾರತೀಯರು ಪಶ್ಚಾತ್ತಾಪಪಡುವಂತೆ ಮಾಡಿದೆ.
ಮಣಿಪುರವನ್ನು ಭೌತಿಕ ಲಕ್ಷಣಗಳಲ್ಲಿ ವಿಭಿನ್ನವಾಗಿರುವ ಎರಡು ವಿಭಿನ್ನ ಭೌತಿಕ ಪ್ರದೇಶಗಳಾಗಿ ನಿರೂಪಿಸಬಹುದು. ಒಂದು ಒರಟಾದ ಬೆಟ್ಟಗಳು, ಕಿರಿದಾದ ಕಣಿವೆಗಳ ಹೊರ ಪ್ರದೇಶ ಮತ್ತೊಂದು ಸಮತಟ್ಟಾದ ಬಯಲಿನ ಒಳ ಪ್ರದೇಶ. ಇಲ್ಲಿನ ಕಣಿವೆ ಪ್ರದೇಶವು ಸಮತಟ್ಟಾದ ಮೇಲ್ಮೈ ಮೇಲೆ ಏರುತ್ತಿರುವ ಬೆಟ್ಟಗಳು ಮತ್ತು ದಿಬ್ಬಗಳಿಂದ ಕೂಡಿದೆ.
ಇಲ್ಲಿನ ಲೋಕ್ಟಾಕ್ ಸರೋವರವು ಕೇಂದ್ರ ಬಯಲಿನಿಂದ ನಾಗಾಲ್ಯಾಂಡ್ನ ಗಡಿಯವರೆಗೂ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಇಲ್ಲಿನ ಮಣ್ಣಿನ ಹೊದಿಕೆಗೂ ಗಂಡು-ಹೆಣ್ಣಿನ ಸಂಬಂಧಕ್ಕೂ ನಿಕಟವಾದ ಹೋಲಿಕೆ ಇರುವಂತೆ ಕಂಡುಬರುತ್ತದೆ. ಬೆಟ್ಟದ ಪ್ರದೇಶದಲ್ಲಿ ಕೆಂಪು ಫೆರುಜಿನಸ್ ಮಣ್ಣು ಮತ್ತು ಕಣಿವೆಯಲ್ಲಿ ಮೆಕ್ಕಲು ಮಣ್ಣು ಇದೆ. ಕಣಿವೆಯ ಮಣ್ಣು ಇಲ್ಲಿನ ಗಂಡಿನ ರೀತಿಯಲ್ಲಿ ಕಠಿಣವಾಗಿದ್ದರೆ, ಕಡಿದಾದ ಇಳಿಜಾರುಗಳಲ್ಲಿರುವ ಮಣ್ಣು ಹೆಣ್ಣಿನಂತೆ ಹೆಚ್ಚಿನ ಸವೆತಕ್ಕೆ ಒಳಗಾಗಿದೆ, ಒಳಗಾಗುತ್ತಿದೆ. ಇದರ ಪರಿಣಾಮವಾಗಿ ಬಂಜರು ಬಂಡೆಗಳ ಇಳಿಜಾರುಗಳು ಸೃಷ್ಟಿಯಾಗುವಂತೆ ಅಲ್ಲಿನ ಪುರುಷರ ಮನಸ್ಸುಗಳು ಬಂಡೆಯಂತೆ ಆಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.
ಬೆಟ್ಟದ ತಪ್ಪಲಿನಲ್ಲಿ ರತ್ನಗಂಬಳಿಯನ್ನು ಹಾಸಿಹೊದಿಸಿರುವಂತೆ ಕಾಣುವ ಫ್ಲೋರಾ ಹೂವುಗಳು ಅಲ್ಲಿನ ಬುಡಕಟ್ಟು ಮಹಿಳೆಯರ ಸೌಂದರ್ಯವನ್ನು ಬಿತ್ತರಿಸಿದರೆ, ಬೆಟ್ಟಗಳು ಪುರುಷಾಂಕಾರದಂತೆ ಕಾಣುತ್ತವೆ. ಇಲ್ಲಿ ಏನಿಲ್ಲ ಹೇಳಿ, ನೈಸರ್ಗಿಕವಾದ ಸಸ್ಯವರ್ಗವಿದೆ. ನಾಲ್ಕು ರೀತಿಯ ವಿಶಾಲವಾಗಿ ಹರಡಿರುವ ಉಷ್ಣವಲಯದ ಅರೆ-ನಿತ್ಯಹರಿದ್ವರ್ಣ, ಒಣ ಸಮಶೀತೋಷ್ಣ ಅರಣ್ಯ, ಉಪ-ಉಷ್ಣವಲಯದ ಪೈನ್ ಕಾಡುಗಳು ಮತ್ತು ಉಷ್ಣವಲಯದ ತೇವಾಂಶವುಳ್ಳ ಅರಣ್ಯಗಳಿವೆ. ತೇಗ, ಪೈನ್, ಓಕ್, ಯುನಿಂಗ್ದೌ, ಲಿಹಾವೊ, ಬಿದಿರಿನ ಮರಗಳಿವೆ. ತಮ್ಮ ಕಷ್ಟಗಳ ನಡುವೆಯೂ ರಬ್ಬರ್, ಟೀ, ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುತ್ತಾರೆ. ಆದರೆ ಅವರು ಹೆಚ್ಚು ಬೆಳೆಯುವ ಮತ್ತು ಇಷ್ಟಪಡುವ ಅಕ್ಕಿಯಂತೆ ಅಲ್ಲಿನ ಪುರುಷರ ಮನಸ್ಸುಗಳು ಬೇಗನೇ ಹಾಳಾಗುತ್ತಿರುವುದು ಜಾತಿ, ಧರ್ಮಗಳೆಂಬ ಕೀಟಗಳಿಂದ ಎಂಬುದನ್ನು ಅವರು ತಿಳಿಯದಿರುವುದು ದುರದೃಷ್ಟಕರ.
ಮಣಿಪುರ ಮತ್ತು ನಾಗಾಲ್ಯಾಂಡ್ಗಳ ಗಡಿಗಳ ನಡುವೆ ಇರುವ ಝುಕೊ ಎಂಬ ಕಣಿವೆಯು ಸಮಶೀತೋಷ್ಣ ಹವಾಮಾನವನ್ನು ಹೊಂದಿರುವಂತೆ, ಅಲ್ಲಿನ ಜನರಿಗೆ ಸಮಚಿತ್ತತೆಯನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಭಾರತದ ಈಶಾನ್ಯ ಮೂಲೆಯು ಸಾಮಾನ್ಯವಾಗಿ ಸೌಹಾರ್ದಯುತವಾದ ಹವಾಮಾನವನ್ನು ಹೊಂದಿದೆ. ಆದರೆ ಅಲ್ಲಿನ ಜನರು ಸೌಹಾರ್ದಯುತವಾದ ಮನೋಭಾವನೆಯನ್ನು ಹೊಂದಿಲ್ಲ. ಅಲ್ಲಿನ ವಾತಾವರಣದಂತೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವಂತೆ, ಬೇಸಿಗೆಯಲ್ಲಿ ಬಿಸಿಲು ಗರಿಷ್ಠ ಮಟ್ಟಕ್ಕೆ ಹೋಗುವಂತೆ ಅಲ್ಲಿನ ಜನರು ಆವೇಶಕ್ಕೊಳಗಾಗುತ್ತಾರೆ.
ಇಂಫಾಲದ ಮೈತೇಯಿ ಜನರು ವಾರ್ಷಿಕ ಸರಾಸರಿ 933 ಮಿಲಿಮೀಟರ್ ಮಳೆಯನ್ನು ಪಡೆಯುತ್ತಾರೆ. ಆದರೂ ಕೂಡ ತಮ್ಮದೇ ನೆಲದಲ್ಲಿರುವ ಕುಕಿ ಜನಾಂಗದ ಮಹಿಳೆಯರು ಕಣ್ಣೀರು ಸುರಿಸುವಂತೆ ನಡೆದುಕೊಳ್ಳುತ್ತಾರೆ.
ನೈರುತ್ಯ ಮಾನ್ಸೂನ್ ಮಾರುತಗಳು ಬಂಗಾಳಕೊಲ್ಲಿಯಿAದ ತೇವಾಂಶವನ್ನು ಎತ್ತಿಕೊಂಡು ಪೂರ್ವ ಹಿಮಾಲಯ ಶ್ರೇಣಿಗಳ ಕಡೆಗೆ ಹೋಗುವಾಗ ಈ ಪ್ರದೇಶದಲ್ಲಿ ಮಳೆಯಾಗುವಂತೆ ಪ್ರಕೃತಿಯೇ ನೋಡಿಕೊಂಡರೂ ಮಹಿಳೆಯರ ಕಣ್ಣೀರು ಮಾತ್ರ ಧಾರಾಕಾರವಾಗಿ ಹರಿಯುವಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಮಣಿಪುರದಲ್ಲಿ ಹವಾಮಾನದಲ್ಲಿ ಬದಲಾವಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಮಳೆ ಮತ್ತು ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಹೆಚ್ಚಾಗುತ್ತಿವೆ. ಆದರೆ ಅಲ್ಲಿನ ಜನಾಂಗಗಳ ನಡುವಿನ ಬಾಂಧವ್ಯದ ಬದ್ಧತೆಗಳು ಏರುಪೇರಾಗುತ್ತಿರುವುದು ಸಾಕಷ್ಟು ಹಿಂದಿನಿAದಲೇ ನಡೆಯುತ್ತಿರುವುದು ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಿರುವುದರ ದ್ಯೋತಕವಾಗಿದೆ. ಕಣಿವೆ ಅಥವಾ ಬಯಲು ಪ್ರದೇಶಗಳಲ್ಲಿ ಮೈತೇಯಿ ಮಾತನಾಡುವ ಅಂದರೆ ಮಣಿಪುರಿ ಭಾಷಿಕರು ನೆಲೆಸಿದ್ದಾರೆ. ಬೆಟ್ಟಗಳಲ್ಲಿ ನಾಗಾಗಳು, ಕುಕಿಗಳು ಮೊದಲಾದ ಸಣ್ಣ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇವರು ಬೆಟ್ಟಗಳ ಮೇಲ್ಮೈ ಮಣ್ಣಿನಂತೆ ಮೈತೇಯಿ ಜನರ ಹಾವಳಿಗೆ ಕೊಚ್ಚಿ ಹೋಗುತ್ತಿದ್ದಾರೆ. ಅಲ್ಲಿ ಮೈತೇಯಿ ಭಾಷೆಯು ಮಣಿಪುರಿ ಭಾಷೆಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದರಿಂದ ಇಲ್ಲಿನ ಬಹುಪಾಲು ಜನಸಂಖ್ಯೆ ಮೈತೇಯಿಯರೇ ಎಂದು ಕರೆಸಿಕೊಂಡಿದ್ದಾರೆ.
ಇವರು ಮಣಿಪುರದ ಮುಖ್ಯ ಜನಾಂಗ ಎಂಬುದೇನೋ ಸರಿ. ಆದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗಗಳನ್ನು ಹಲವಾರು ಬುಡಕಟ್ಟು ಜನಾಂಗಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ನಮ್ಮ ಬೇಳೆ ಬೇಯ್ಯುವುದಿಲ್ಲ ಎಂಬ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥಿತವಾಗಿ ಬಹಳ ಹಿಂದಿನಿAದಲೇ ಇವರನ್ನು ಹೊಡೆದು ಹೊಡೆದು ಹಾಳುತ್ತಿದೆ.
ಮಣಿಪುರದಲ್ಲಿ ಮೇ 4ರಂದು ಜರುಗಿದ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯು ಜುಲೈ 20ರಂದು ಹೊರ ಜಗತ್ತಿಗೆ ತಿಳಿಯಿತು. ಈ ಘಟನೆಯು ಪ್ರಪಂಚದ ಜನರನ್ನು ತಲ್ಲಣಗೊಳಿಸಿತು.
ಇಡೀ ಜಗತ್ತೇ ಈ ಕೃತ್ಯವನ್ನು ವಿರೋಧಿಸಿದರೂ ಕೂಡ, ಒಟ್ಟು ದೇಶವನ್ನೇ ತನ್ನ ಕುಟುಂಬ ಎಂದು ಕರೆದುಕೊಳ್ಳುವ ನಮ್ಮ ಪ್ರಧಾನಿಗಳು ಬೆಂಕಿ ಹೊತ್ತಿಕೊಂಡ ಮೂರು ತಿಂಗಳು ದಿವ್ಯ ಮೌನದಿಂದ ಇದ್ದರು ಎಂಬುದನ್ನು ಜಗತ್ತು ಮರೆಯುತ್ತದೆಯೇ? 140 ಕೋಟಿ ಜನರು ನನ್ನ ಕುಟುಂಬಸ್ಥರೇ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಅದರಲ್ಲಿ ಮಹಿಳೆಯರೂ ಇದ್ದಾರೆ ಎಂಬುದನ್ನು ಮರೆತಿದ್ದಾರೆಯೇ!? ಒಟ್ಟಾರೆ ನಮ್ಮ ಪ್ರಧಾನಿಗಳ ಮೌನ, ಮೈತೇಯಿ ಮತಾಂಧರ ಆರ್ಭಟ ಕುಕಿ ಜನಾಂಗದ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡಿರುವುದಂತೂ ಖಚಿತ.
(ಡಾ. ಸಿದ್ದಯ್ಯ ರೆಡ್ಡಿಹಳ್ಳಿ, 9449899520)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮದ್ರಾಸ್ ಐ ವೈರಾಣುವಿಗೆ ಭಯ ಪಡಬೇಕಾಗಿಲ್ಲ : ಡಾ. ನಾಗರಾಜ
ಸುದ್ದಿದಿನ,ದಾವಣಗೆರೆ : ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮದ್ರಾಸ್ ಐ ವೈರಾಣು ಅತೀ ವೇಗವಾಗಿ ಹರಡುತ್ತಿದ್ದು ಇದಕ್ಕೆ ಭಯ ಪಡಬೇಕಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ ತಿಳಿಸಿದ್ದಾರೆ.
ಮದ್ರಾಸ್ ಐ ಈ ಬಾರಿ ಮಳೆಗಾಲದಲ್ಲಿ ಆರಂಭವಾಗಿದ್ದು ರಾಜ್ಯದ ಜನರಕಣ್ಣು ಕೆಂಪಾಗಿಸುತ್ತಿದೆ, ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಾಸ್ಟಲ್ ವಿದ್ಯಾರ್ಥಿಗಳಲ್ಲಿ “ಮದ್ರಾಸ್ ಐ” ವೇಗಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ, ಕಂಜಕ್ವಿಟಿಸ್ ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ ಕಣ್ಣು ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ನೇರವಾಗಿಕಣ್ಣಿ ಮೇಲೆ ಪರಿಣಾಮಉಂಟು ಮಾಡುತ್ತವೆ, ರಾಜ್ಯದಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬಿಸಿಲು ಇಲ್ಲದಂತಾಗಿದೆ ಇದರ ಪರಿಣಾಮತೇವಾಂಶ ಹೆಚ್ಚಾಗಿ ಅವಧಿಗೂ ಮೊದಲೇ ಈ ವೈರಾಣು ದಾಂಗುಡಿ ಇರಿಸಿದೆ.
ರೋಗದ ಲಕ್ಷಣಗಳು
ಕಸ ಬಿದ್ದದಂತೆಆಗುವ ರೀತಿಯಾಗಿಕಣ್ಣುಚುಚ್ಚುವುದು, ಬೆಳಗ್ಗೆ ಎದ್ದಾಗ ಹೆಚ್ಚು ಪಿಸುರು (ಪಿಚ್ಚು) ಬರುತ್ತದೆ, ಕಣ್ಣುಗಳು ಕೆಂಪಾಗಿ, ಕಿರಿಕಿರಿ ಹೆಚ್ಚುವುದು, ಕಣ್ಣಲ್ಲಿ ನೀರು ಬರುವುದು, ರೆಪ್ಪೆ ಕಣ್ಣು ದಪ್ಪ ಆಗುವುದು ಕಂಡು ಬರುತ್ತದೆ.
ಮುಂಜಾಗೃತಾ ಕ್ರಮಗಳು
ಸಮಸ್ಯೆ ಇರುವವರು ಕೆಲದಿನ ಪ್ರತ್ಯೇಕ ವಾಸ ಮಾಡಿ, ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ, ಕಣ್ಣಿಗೆಔಷಧ ಹಾಕಿಸಿಕೊಳ್ಳಬೇಡಿ, ದಿನಕ್ಕೆ 8-10 ಬಾರಿ ಸ್ಯಾನಿಟೈಸರ್, ಸೋಪು ಬಳಸಿ ಕೈ ತೊಳೆದುಕೊಳ್ಳಿ, ವೈರಸ್ ಕಾಣಿಸಿಕೊಂಡಾಗ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ಪಡೆಯಬೇಕು, ವೈದ್ಯರ ತಪಾಸಣೆ ಮಾಡಿಸದೇ, ಔಷಧಿ ಅಂಗಡಿಗಳಲ್ಲಿ ಸಿಗುವ ಡ್ರಾಪ್ಸ್ಗಳನ್ನು ಬಳಸಬಾರದು, ಕಣ್ಣು ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು.
ಪರಿಹಾರ
ಸಮಸ್ಯೆ ಉಳ್ಳವರು ಇತರರಿಂದದೂರಇರಬೇಕು, ವೈದ್ಯರ ಬಳಿ ತೋರಿಸಿ, ಐ ಡ್ರಾಪ್ಸ್ ಮಾತ್ರ ಹಾಕಬೇಕು, ಸಮಸ್ಯೆ ಕಡಿಮೆ ಆಗುವವರೆಗೆ ಗಾಳಿಗೆ ಹೋಗಬಾರದು, ದ್ವಿಚಕ್ರ ವಾಹನ ಓಡಿಸಬಾರದು, ಟಿ.ವಿ,ಮೊಬೈಲ್, ಕಂಪ್ಯೂಟರ್ಗಳನ್ನು ನೋಡುವುದನ್ನ ಕಡಿಮೆ ಮಾಡಿ ಕಣ್ಣಿಗೆ ವಿಶ್ರಾಂತಿಕೊಡಬೇಕು.
ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ನಗರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾಆಸ್ಪತ್ರೆಗೆ ಭೇಟಿ, ವೈದ್ಯರ ಹತ್ತಿರತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವುದು ಸೂಕ್ತ. ವೈರಾಣುವಿನ ಸಮಸ್ಯೆ ಆಗಿರುವ ಕಾರಣ ನಿರ್ದಿಷ್ಟ ಚಿಕಿತ್ಸೆ ಇಲ್ಲ ಮುನ್ನೆಚ್ಚರಿಕೆಯೇ ಮದ್ದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಕವಿತೆ | ನೆನಪು