Connect with us

ಸಿನಿ ಸುದ್ದಿ

ಡಾ.ರಾಜ್ ಚಿತ್ರಗಳ, ಹಾಡುಗಳ ಹಬ್ಬವೂ ; ನೆನಪಿನ ಅಲೆಗಳೂ..!

Published

on

  • ರಘೋತ್ತಮ ಹೊ‌.ಬ

ಇಂದು ಡಾ.ರಾಜಕುಮಾರ್ ಹುಟ್ಟುಹಬ್ಬ. ಡಾ.ರಾಜ್ ನಮ್ಮ ನಡುವಿನ, ನಮ್ಮ ನಡುವೆ ಈ ನೆಲದಲ್ಲಿ ನಡೆದಾಡಿದ ಅಪರೂಪದ ನಟ. ಕನ್ನಡದ ಏಕತೆ, ಅಸ್ಮಿತೆಗೆ ರಾಜ್ ಕೊಡುಗೆ ಅನನ್ಯ. ಅವರ ವೈವಿದ್ಯಮಯ ಪಾತ್ರಗಳು “ರಾಮನಿಂದು ಹಿಡಿದು ಗೌತಮ ಬುದ್ಧನವರೆಗೆ… ಲವರ್ ಬಾಯ್‌ನಿಂದ್ ಹಿಡಿದು ಜೇಮ್ಸ್ ಬಾಂಡ್ ಮಾದರಿ ಪತ್ತೇದಾರಿ ಹೀರೋವರೆಗೆ…” ಬಹುಶಃ ಕನ್ನಡದ ಬೇರಾವ ನಟರೂ ಅವರಷ್ಟು ವೈವಿಧ್ಯತೆಯನ್ನು ಮೆರೆಯಲೇ ಇಲ್ಲ, ನೀಡಲು ಸಾಧ್ಯವೇ ಇಲ್ಲ. ಅಂತಹ ಅನನ್ಯ, ಅದ್ಭುತ ಡಾ.ರಾಜ್. ದುರಂತವೆಂದರೆ ನನ್ನಂತಹವರು ಮನೆಯವರ ಅನುಮತಿ ಇಲ್ಲದೆ ಚಲನಚಿತ್ರ ನೋಡುವ ಮಟ್ಟಕ್ಕೆ ಬೆಳೆಯುವಷ್ಟೊತ್ತಿಗೆ ರಾಜ್ ಇರಲೇ ಇಲ್ಲ!

ಈ ನಡುವೆಯೂ ರಾಜ್ ಕುರಿತು ಅದರಲ್ಲೂ ಅವರ ಹಾಡುಗಳ ಕುರಿತು ಹೇಳುವುದಾದರೆ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ 10ನೇ ತರಗತಿಯ ದೊರೆರಾಜು ಹುಡುಗಿಯ ಧ್ವನಿಯಲ್ಲಿ ಮತ್ತು ನನ್ನ ತರಗತಿ ಸಹಪಾಠಿ ಮಿತ್ರ ಹೊನ್ನೂರು ಲಿಂಗರಾಜು ಡಾ.ರಾಜ್ ದನಿಯಲ್ಲಿ ಜ್ವಾಲಾಮುಖಿ ಚಿತ್ರದ “ಏಕೋ ಏನೋ… ಈ ನನ್ನ ಮನವು…” ಹಾಡನ್ನು ಕೀಬೋರ್ಡ್ ಮತ್ತು ಗಿಟಾರ್ ಸಮೇತ ಹಾಡಿದಾಗ ಮಕ್ಕಳಾದ ನಮಗಂತೂ ರಾಜ್ ನಮ್ಮ ಕಣ್ಣಮುಂದೆಯೇ ಹಾದು ಹೋದ ಅನುಭವ. ಆ ನೆನಪು ಈಗಲೂ ಚಿರಸ್ಥಾಯಿ. ಅಂದಹಾಗೆ ನಾನು ಕೇಳಿದ ಆ ಗಾಯನ ರಾಜ್ ಮೇಲಿನ ನನ್ನ ಅಭಿಮಾನವನ್ನು ಮತ್ತಷ್ಟು ಅವರ ಬಳಿ ಹೊಯ್ದಿತು. ಮುಂದೆ ಆರ್ಕೆಸ್ಟ್ರಾವೊಂದರಲ್ಲಿ ಅಶ್ವಮೇಧ ಚಿತ್ರದ “ಹೃದಯ ಸಮುದ್ರ ಕಲಕಿ…’ ಹಾಡನ್ನು ಕೇಳಿದಾಗ ಅಂತಹದ್ದು ಮತ್ತೂ ಹೆಚ್ಚಾಯಿತು. ಹ್ಞಾಂ, ಹಾಗೆಯೇ ಬಾಲ್ಯದಲ್ಲಿ ನಮ್ಮ ಎದುರು ಮನೆಯ ಗುರುದಾಸ ತಾತಾ ಟೈಲರಿಂಗ್ ಕೆಲಸ ಮಾಡುತ್ತಾ ಡಾ.ರಾಜ್‌ರ “ಬಾನಿಗೊಂದು ಎಲ್ಲೆ ಎಲ್ಲಿದೆ…” ಹಾಡನ್ನು ಹಾಡುತ್ತಿದ್ದರೆ… ಚಿಕ್ಕ ಹುಡುಗನಾಗಿ ನಾನದನ್ನು ಕೇಳುತ್ತಿದ್ದರೆ… ಆ ಅನುಭವವೇ ಒಂದು ರೋಚಕ! ಆ ಕಾರಣಕ್ಕೆ ಈಗಲೂ ನಾನು ಡಾ.ರಾಜ್ ಸ್ವರದಲ್ಲಿ ಆಗಾಗ ಅನುಕರಿಸಿ ಹಾಡುತ್ತಿರುತ್ತೇನೆ. ಡಾ.ರಾಜ್ ಹಾಡುಗಳ ಸ್ವರ್ಗದಲ್ಲಿ ತೇಲುತ್ತಿರುತ್ತೇನೆ.

ಇನ್ನು ರಾಜಕುಮಾರ್‌ರ ನಟನೆ ಬಗ್ಗೆ ಹೇಳುವುದಾದರೆ, ನಮ್ಮೂರ ಬೀದಿಯಲ್ಲಿ ಯಾವುದೋ ಹಬ್ಬದ ಸಂದರ್ಭದಲ್ಲಿ ಹಾಕಿದ್ದ ವಿಡಿಯೋದಲ್ಲಿ ಡಾ.ರಾಜ್‌ರ ‘ಭಾಗ್ಯವಂತರು’ ಸಿನಿಮಾ ನೋಡಿದಾಗ, ಆ ಸಿನಿಮಾದಲ್ಲಿ “3 ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು, ಅಪ್ಪ-ಅಮ್ಮ ಇಷ್ಟೇ ಇದ್ದ ನಮ್ಮಿಡೀ ಕುಟುಂಬ”ವೇ ಅದರಲ್ಲಿ ನಟಿಸಿದ ಅನುಭವವಾಗಿತ್ತು! ಹಾಗೆಯೇ ಊರ ಮಾರಿಹಬ್ಬದಲ್ಲಿ ಮೈಕ್‌ನಲ್ಲಿ ಆಗಿನ ಕಾಲದಲ್ಲಿ ಕಾಂತೀಯ ಪ್ಲೇಟ್‌ಗಳನ್ನು ಬಳಸಿ ಹಾಕುತ್ತಿದ್ದ ಡಾ.ರಾಜ್ ಚಿತ್ರಗಳ ಗೀತೆಗಳ ಕೇಳುತ್ತಿದ್ದಾಗ ಅನುಭವಿಸುತ್ತಿದ್ದ ಆನಂದ ಬಹುಶಃ ನೆನೆಪಿನ ಬಹುದೊಡ್ಡ ಹಿನ್ನೆಲೆಗೆ ರಾಜ್ ನಮ್ಮನ್ನು ಕರೆದೊಯ್ಯುತ್ತಾರೆ. ಮುಂದೆ ಟೇಪ್‌ರಿಕಾರ್ಡರ್ ಬಂದಾಗ ಕೇಳಿದ ‘ಅನುರಾಗ ಅರಳಿತು’, ‘ಪರಶುರಾಮ್’ ಚಿತ್ರಗಳ ಸ್ಟೋರಿ… ಅಬ್ಬಾ! ಅಂದಹಾಗೆ ತೆರೆಯಲ್ಲಿ ಅವರ ಚಿತ್ರಗಳನ್ನು ವಯಕ್ತಿಕವಾಗಿ ನಾನು ಸ್ವತಂತ್ರವಾಗಿ ನೋಡುವ ಮಟ್ಟಕ್ಕೆ ಬೆಳೆದಾಗ ನಾನು ನೋಡಿದ ಚಿತ್ರ ‘ಶಬ್ಧವೇಧಿ’ಯಾಗಿತ್ತು. ದುರಂತವೆಂದರೆ ಅದೇ ರಾಜ್ ರ ಕೊನೆಯ ಚಿತ್ರವಾಗಿತ್ತು!

ಆದರೆ ಈಗೀಗ ಟಿವಿಯಲ್ಲಿ, ಯೂಟ್ಯೂಬ್‌ನಲ್ಲಿ, ‘ಗಾನಾ’ app ನಲ್ಲಿ ರಾಜ್‌ರ ಎಲ್ಲಾ ಹಳೆಯ ಚಿತ್ರಗಳನ್ನು, ಹಾಡುಗಳನ್ನು ನೋಡಿದ್ದೇ ನೋಡಿದ್ದು, ಕೇಳಿದ್ದೇ ಕೇಳಿದ್ದು. ಅದರಲ್ಲೂ ಶಂಕರ್ ಗುರು ಚಿತ್ರದ ‘ಲವ್ ಮಿ ಆರ್ ಹೇಟ್ ಮಿ…’, ಹುಲಿಯ ಹಾಲಿನ ಮೇವು ಚಿತ್ರದ ‘ಚಿನ್ನದ ಮಲ್ಲಿಗೆ ಹೂವೇ’ ಹಾಡುಗಳನ್ನು ಕೇಳುತ್ತಿದ್ದರೆ… ಜತೆಗೆ ದನಿಗೂಡಿಸುತ್ತಿದ್ದರೆ… ಬಹುಶಃ ಬದುಕಿನ ಮೇಲಿನ ಪ್ರೀತಿಗೆ ರಾಜ್ ಒಂದು ಸಹಜ ಮಾದರಿಯಾಗುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಲೋಕಸಭಾ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ : ಇತರೆ ಪ್ರಮುಖ ಸುದ್ದಿಗಳು

Published

on

ಮದ್ಯಾಹ್ನದ ಸುದ್ದಿಮುಖ್ಯಾಂಶಗಳು

  1. ಮಹಿಳೆಯರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ನಾರಿಶಕ್ತಿಯ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
  2. ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನವದೆಹಲಿಯಲ್ಲಿ ’ಸಶಕ್ತ ನಾರಿ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಅವರು ’ನಮೋ ಡ್ರೋನ್ ದೀದಿ’ ಯೋಜನೆಯಲ್ಲಿ ಏರ್ಪಡಿಸಿರುವ ಕೃಷಿಗೆ ಸಂಬಂಧಿಸಿದ ಡ್ರೋನ್ ಪ್ರದರ್ಶನ ವೀಕ್ಷಿಸಿದರು.
  3. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಗುರುಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ರಾಜ್ಯಗಳಿಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
  4. ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿಂದು ಸಂಜೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯದ 18 ರಿಂದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
  5. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕರು, ಕಾರ್ಮಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ಇಂದಿನಿಂದ ಆರಂಭಿಸಲಾಗಿದೆ.
  6. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ಹಾಲಿವುಡ್‌ನ ಪ್ರಮುಖ ತಾರೆಯರು 96 ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ’ಯೊರ್ಗೊಸ್ ಲ್ಯಾಂಥಿಮೋಸ್ ಪೂರ್ ಥಿಂಗ್ಸ್’ ಚಿತ್ರದ ’ಬೆಲ್ಲಾ ಬ್ಯಾಕ್ಸ್ಟರ್’ ಪಾತ್ರದ ಅಭಿನಯಕ್ಕಾಗಿ ’ಎಮ್ಮಾ ಸ್ಟೋನ್’ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
  7. ಐಸಿಸಿ ವಿಶ್ವ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನಕ್ಕೆ ಮರಳಿದೆ. ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 3ನೇ ಸ್ಥಾನದಲ್ಲಿದೆ. ಇದರೊಂದಿಗೆ ಕ್ರಿಕೆಟ್‌ನ ಎಲ್ಲಾ ಮೂರೂ ಮಾದರಿಯಲ್ಲೂ ಭಾರತ ತಂಡ ನಂ. 1ಸ್ಥಾನ ಪಡೆದಿದೆ.
  8. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿಂದು ಗುಜರಾತ್ ಜಯಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರದ ಟಿಕೆಟ್‍ ಮೇಲೆ ಶೆ.20ರಷ್ಟು ಕಡಿತ

Published

on

ಸುದ್ದಿದಿನ ಡೆಸ್ಕ್ : ರಕ್ಷಿತ್‍ ಶೆಟ್ಟಿ ಮತ್ತು ರುಕ್ಷಿಣಿ ವಸಂತ್‍ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್‍ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್‍ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್‍, ಅಚ್ಯುತ್‍ ಕುಮಾರ್‍, ರಮೇಶ್‍ ಅರವಿಂದ್‍ ಮುಂತಾದವರು ನಟಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ‌ ಪ್ರೇಕ್ಷಕ ದರ್ಶನ್

Published

on

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್‍ ಅಂಬರೀಶ್‍ ಅಭಿನಯಿಸಿರುವ ‘ಬ್ಯಾಡ್‍ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್‍ ಮತ್ತು ಸುಮಲತಾ ಅಂಬರೀಷ್‍ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್‍, ಅಭಿ ಬೆನ್ನಿಗೆ ‘ನಿಮ್ಮ‌ಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.

“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್‍ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್‍ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending