ರಾಜಕೀಯ
ಆದರೆ ಒಂದಂತೂ ಸತ್ಯ…
ಇಂದು ಬೆಳಿಗ್ಗೆ ಬಿಜೆಪಿ ಬೆಂಬಲಿಗನೊಬ್ಬ ಇನ್ ಬಾಕ್ಸ್ ನಲ್ಲಿ ಬಂದು After long time how is the Josh? ಇಡೀ ದೇಶ ಮೋದಿಜಿ ಗೆಲುವಿಗೆ ಸಂತೋಷ ಪಡ್ತಿದೆ, ನೀವು ಬನ್ನಿ ಎಂದು ಆಹ್ವಾನಿಸಿದ. ಬಹುಶ ಆ ವ್ಯಕ್ತಿ ಹಿಂದೆ ಯಾವಾಗಲೋ ನನ್ನೊಂದಿಗೆ ವಾದ ನಡೆಸಿರಬಹುದು. ನನಗೆ ಸರಿಯಾಗಿ ನೆನಪಿಲ್ಲ…
ಆತ ಈ ಮೆಸೇಜ್ ಹಾಕಿದ ನಂತರ ಸುಮಾರು ಹೊತ್ತು ಚಾಟ್ ನಡೆಯಿತು. ನನ್ನ ಕೆಲವು ಉತ್ತರ ನೋಡ ಅವನು, “ಕೋಪದಲ್ಲಿ ಏನೇನೋ ಮಾತಾಡ್ತೀರಾ, ಸ್ವಲ್ಪ ದಿನ ಹೋಗಲಿ, ಯೋಚನೆ ಮಾಡಿ… ಬಿಜೆಪಿಗೆ ಬನ್ನಿ ನಿಮಗೂ ಒಳ್ಳೆಯದಾಗಲಿ” ಅಂತ ಕೇಳಿಕೊಂಡ.
ಕೊನೆಯಲ್ಲಿ ನಾನು ಒಂದು ಮಾತು ಹೇಳಿದೆ.
“ಬ್ರದರ್, ನಿಮ್ಮಲ್ಲಿ ಮನುಷ್ಯತ್ವ, ಪ್ರಾಮಾಣಿಕತೆ, ಒಳ್ಳೆಯತನ, ಪ್ರಜಾಪ್ರಭುತ್ವ ಚಿಂತನೆ, ದೇಶದ ಆರ್ಥಿಕ ಸಾಮಾಜಿಕ ಪ್ರಗತಿ ಬಗ್ಗೆ ಕಾಳಜಿ, ಇಷ್ಟೂ ಇರುವುದು ನಿಜವಾಗಿದ್ದರೆ ಇನ್ನೂ ಮೂರೇ ವರ್ಷದಲ್ಲಿ ಬಿಜೆಪಿ ಬಿಟ್ಟು ಬರುತ್ತೀರಿ. ಆದರೆ ನಿಮ್ಮೊಳಗೆ ಅಪ್ರಾಮಾಣಿಕತೆ, ಭ್ರಷ್ಟತೆ, ಕೋಮು ದ್ವೇಷ ಇತ್ಯಾದಿ ಇದ್ದರೆ ಏನೂ ಮಾಡಕಾಗಲ್ಲ, ಆಲ್ ದ ಬೆಸ್ಟ್, ಒಳ್ಳೆಯದಾಗಲಿ” ಎಂದೆ.
2002ರಲ್ಲಿ ಮೋದಿಯ ಕ್ರಿಮಿನಲ್ ಕೆಲಸಗಳನ್ನು ಓದಿ, ಕೇಳಿದಾಗಿನಿಂದಲೂ ನಿರ್ದಿಷ್ಟವಾಗಿ ನರೇಂದ್ರ ಮೋದಿಯನ್ನಿ ವಿರೋಧಿಸುತ್ತಾ ಬಂದಿರುವ ಹಾಗೂ ಅದಕ್ಕಿಂತ ಮೊದಲೇ ಬಿಜೆಪಿ ಮತ್ತು ಸಂಘಪರಿವಾರವನ್ನು ಸೈದ್ಧಾಂತಿಕ ಕಾರಣಕ್ಕಾಗಿ ವಿರೋಧಿಸುವ ನನ್ನನ್ನು ಅಥವಾ ನನ್ನಂತಹ ಹಲವರನ್ನು ಈ ಗೆಳೆಯನಂತವರು ತಪ್ಪಾಗಿ “ಮಹಾಘಟಬಂಧನ್” ನಾಯಕರ ಫಾಲೋವರ್ ಎಂದುಕೊಂಡುಬಿಟ್ಟಿರುತ್ತಾರೆ. ಹಾಗಾಗಿಯೇ ನಾವು ಅವರಿಗೆ ಭ್ರಷ್ಟರ ಪರ ಬ್ಯಾಟಿಂಗ್ ಮಾಡುವವರಾಗಿ ಕಾಣುತ್ತೇವೆ. ಪಾಪ ಅದು ಅವರ ತಿಳುವಳಿಕೆಯ ಮಿತಿ.
“ಮಹಾಘಟಬಂಧನ್ ನಾಯಕರೆಲ್ಲಾ ಭ್ರಷ್ಟರು ಮತ್ತು ಸ್ವಾರ್ಥಿಗಳು ಮೋದಿ ಮಾತ್ರ ಒಳ್ಳೆಯ ವ್ಯಕ್ತಿ” ಎಂಬ ಕಟ್ಟುಕತೆಯನ್ನು ಮುಗ್ಧವಾಗಿ ನಂಬಿಕೊಂಡಿರುವ ಇಂತಹ ಯುವಕರು ಈಗ ಅಡಿಗಡಿಗೂ ಸಿಗುತ್ತಾರೆ. ಇವರಲ್ಲಿ ಅನೇಕರು ನಿಜಕ್ಕೂ ತಮ್ಮನ್ನು ತಾವು ಒಳ್ಳೆಯದರ ಪರವಾಗಿ ನಿಂತವರು ಎಂದು ನಂಬಿಕೊಂಡವರೂ ಹೌದು.
ನಾವು ಈಗ ಕೇಳಿಕೊಳ್ಳಬೇಕಾದ ನಿಜವಾದ ಪ್ರಶ್ನೆ ಇದು. ದೇಶದಾದ್ಯಂತ ಬಿಜೆಪಿ ಇಂತಹುದೇ ಮನಸ್ಥಿತಿಯನ್ನು ಹೊಸ ತಲೆಮಾರಿನ ಯುವಕರಲ್ಲಿ ಬಿತ್ತಿದ್ದು ಹೇಗೆ? ಕಳೆದ ಐದು ವರ್ಷಗಳಲ್ಲಿ ಅಗಾಧ ಮಟ್ಟದಲ್ಲಿ ಜನರಿಗೆ ತೊಂದರೆ ಆಗುವ ನೀತಿಗಳನ್ನೇ ಜಾರಿಗೊಳಿಸಿದರೂ, ದೇಶದ ಆರ್ಥಿಕತೆಯನ್ನೇ ಬಿಕ್ಕಟ್ಟಿನ ಸ್ಥಿತಿಗೆ ತಂದಿಟ್ಟಿದ್ದರೂ ಸಹ ಇದಾವುದರ ನೋವು ಸಂಕಟಗಳೂ ಅರಿವಾಗದಂತೆ 16-25 ವರ್ಷದೊಳಗಿನ ಯುವ ಸಮೂಹವನ್ನು ಇವರು ಪ್ರಭಾವಿಸಿದ್ದು ಹೇಗೆ? ಇದಕ್ಕಾಗಿ ಅವರು ನಡೆಸಿದ್ದ ತಂತ್ರಗಳೇನು? ಕೃತಿಯೇ ಇಲ್ಲದೇ ಮಾತಿನಿಂದಲೇ ಮೋದಿ ದೇಶವನ್ನು ವಂಚಿಸಲು ಸಾಧ್ಯವಾದದ್ದು ಹೇಗೆ?
ಬಹಳ ಮುಖ್ಯವಾಗಿ ಮೋದಿ ಪಡೆ ಇಷ್ಟೆಲ್ಲಾ ಮಾಡುತ್ತಿದ್ದಾಗ ಅದಕ್ಕೆ ಪ್ರತಿಯಾಗಿ ನಾವೆಲ್ಲಾ ಸೇರಿ ಯಾವ ಬಗೆಯ ನರೆಟಿವ್ ಕಟ್ಟಬೇಕಿತ್ತು…? ಕೇವಲ ಪ್ರತಿಕ್ರಿಯಾತ್ಮಕ ಕೆಲಸ, ಮಾತುಗಳಿಗೇ ನಮ್ಮನ್ನು ನಾವು ಸೀಮಿತಗೊಳಿಸಿಕೊಂಡದ್ದು ಇಂದಿನ ಸ್ಥಿತಿಗೆ ಕಾರಣವಲ್ಲವೇ? ಯುವಜನರು ಆತುಕೊಂಡಿರುವ ಹುಸಿ “ದೇಶಭಕ್ತಿ” ಯನ್ನು ಮೀರಿ ದೇಶದ ಒಳಿತಿಗಾಗಿ ಆಲೋಚಿಸುವ ಯಾವ ಕಾರ್ಯಕ್ರಮಗಳ ನಮ್ಮ ಬಳಿ ಇದ್ದವು?/ಇವೆ? ಅಥವಾ ದೇಶದ ಜನರ ಒಳಿತಿಗೂ ದೇಶಭಕ್ತಿಗೂ ಇರುವ ಸಂಬಂಧವನ್ನು ಸರಿಯಾಗಿ ಎತ್ತಿ ಹೇಳಲಾಗದ ಮಿತಿ ಯಾವದು? ಇವೆಲ್ಲಾ ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆಗಳು.
ಮುಂದಿನ ದಿನಗಳು ಈ ದೇಶದ ರೈತರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿ ಯುವಜನರಿಗೆ, ದಲಿತ, ಮುಸ್ಲಿಮರಿಗೆ, ಕ್ರೈಸ್ತರಿಗೆ, ಮಹಿಳೆಯರಿಗೆ, ಜನರ ಪರವಾಗಿ ದನಿ ಎತ್ತುವವರಿಗೆ ಎಂತಹ ಸನ್ನಿವೇಶ ತರಲಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಆದರೆ ಒಂದಂತೂ ಸತ್ಯ….ಮೋದಿ ಸರ್ಕಾರ ಅತಿ ಬೇಗನೇ ದೇಶದ ಆರ್ಥಿಕತೆಯನ್ನು ತೀವ್ರ ಬಿಕ್ಕಟ್ಟಿಗೆ ತಳ್ಳಲಿದೆ. ಇದರ ಕಾರ್ಪೊರೇಟ್ ತುಷ್ಟೀಕರಣ ರಭಸವಾಗಿ ನಡೆದಷ್ಟೂ ಸಂಕಷ್ಟಗಳ ಸರಮಾಲೆ ದೇಶದ ರೈತ ಕಾರ್ಮಿಕರಿಗೆ ಸುತ್ತಿಕೊಳ್ಳಲಿದೆ… ಸಂಸತ್ ಸದಸ್ಯರೆಲ್ಲಾ ಮೋದಿ ಮತ್ತು ಅಮಿತ್ ಷಾ ಗಳ ಹಾಗೂ ಅಂಬಾನಿ ಆದಾನಿಗಳ ಗುಲಾಮರಾಗಿರುವಾಗ ಸಂಸತ್ತು ಎಂದು ಪ್ರಜಾಪ್ರಭುತ್ವದ ಬದಲು ಸರ್ವಾಧಿಕಾರ ಮತ್ತು ಗುಲಾಮಗಿರಿಯ ರಕ್ಷಕನಾಗಿ ಬದಲಾಗಲಿದೆ.
ಅಂತಹ ಪರಿಸ್ಥಿತಿಯಲ್ಲಿ ಜನರನ್ನು ನಿಜ ಸಮಸ್ಯೆಗಳಿಂದ ದಿಕ್ಕಿತಪ್ಪಿಸುವ ನಾನಾ ಬಗೆಯ ದ್ವೇಷಕಾರಿ, ದಮನಕಾರಿ, ಉನ್ಮಾದಕಾರಿ ನೀತಿಗಳು ಈಗಾಗಲೇ ಬಿಜೆಪಿ ಜೋಳಿಗೆಯಲ್ಲಿ ಇವೆ. ಅಯೋಧ್ಯೆ ವಿವಾದದಿಂದ ಹಿಡಿದು, ಕಾಶ್ಮೀರ, ಆರ್ಟಿಕಲ್ 370, ಆರ್ಟಿಕಲ್ 42, ಸಮಾನ ನಾಗರಿಕ ಸಂಹಿತೆ, ಇತ್ಯಾದಿ ಯಾವುದೇ ವಿಷಯವಾದರೂ ಸಾಕು.ಬೆಂಕಿ ಹಚ್ಚಲು.
ದೇಶದ ನಿಜ ಸಮಸ್ಯೆಗಳನ್ನು ಯಾರೂ ಪ್ರಶ್ನಿಸದಂತೆ ಮಾಡಲು, ಜನರ ಸಂಕಷ್ಟಗಳೇ ಮರೆಮಾಚುವಂತೆ ಮಾಡಲು ಹಿಂದೂ-ಮುಸ್ಲಿಂ ದ್ವೇಷವನ್ನು ಯಾವ ರೀತಿ ಬೇಕಾದರೂ, ಯಾವ ಕ್ಷಣ ಬೇಕಾದರೂ ಉತ್ತೇಜಿಸಬಲ್ಲ ಮಶಿನರಿ ಇವರ ಬಳಿ ಸನ್ನದ್ಧವಾಗಿದೆ.
ಖಂಡಿತವಾಗಿ ಬಂದೊದಗಲಿರುವ ಅಂತಹ ಸನ್ನಿವೇಶಗಳನ್ನು ಎದುರಿಸಲು ದೇಶದ ಬಗೆಗೆ ಕಾಳಜಿ ಇರುವ ಜನರ ಬಳಿ ಇರುವ ಜನಹಿತದ ತಂತ್ರಗಳೇನು? ಅವರ ಕ್ರಿಯೆಗೆ ನಮ್ಮ ಪ್ರತಿಕ್ರಿಯೆ ಮಾದರಿಯಿಂದ ಬಹಳ ಸಮಯ ಲಾಭ ಪಡೆಯುವುದು ಅವರೇ ಹೊರತು ನಾವಲ್ಲ.
ಭಾರತದ ಅನನ್ಯ ಕೂಡುಸಂಸ್ಕೃತಿಯ ರಕ್ಷಣೆಗೆ, ಈ ದೇಶದ ರೈತ, ಕಾರ್ಮಿಕರ, ದಲಿತ, ಅಲ್ಪಸಂಖ್ಯಾತ, ಮಹಿಳೆಯರೆಲ್ಲರ ರಕ್ಷಣೆಗೆ, ನಾಡಿನ ವೈವಿಧ್ಯಮಯ ಜನ ಸಂಸ್ಕೃತಿಯ ಉಳಿವಿಗೆ pro active, ಕೆಲಸಗಳಿಗೆ ನಾವು ಮುಂದಾಗದಿದ್ದರೆ ಮುಂದಿನ ಪೀಳಿಗೆಗಳು ನಮ್ಮನ್ನು ಕ್ಷಮಿಸುವುದಿಲ್ಲ.
ಅವನು ಕಾಂಗ್ರೆಸ್, ಇವನು ಕಮ್ಯುನಿಸ್ಟ್, ಅವನು ಬಿಎಸ್ಪಿ ಇತ್ಯಾದಿ ಸಂಕುಚಿತ ಗೂಡುಗಳಿಂದ ಹೊರಬಂದು ಈ ಭಾರತವನ್ನು ರಕ್ಷಿಸಬೇಕಾದ ದೊಡ್ಡ ಕೈಂಕರ್ಯದಲ್ಲಿ ಒಬ್ಬೊಬ್ಬರೂ ದಂಡನಾಯಕರಾಗಬೇಕಾದ ಹೊತ್ತು ಇದು. ನಿಜದೇಶಪ್ರೇಮಿಗಳಾಗಿ ಮೈಮರೆಯದೇ ತೊಡಗಿಸಿಕೊಳ್ಳುವ ಸಮಯ ಇದು.
ರಾಹುಲ್ ಗಾಂಧಿಗೋ, ದೇವೇ ಗೌಡ್ರಿಗೋ, ಮಮತಾ, ಮಾಯಾವತಿ, ಕೇಜ್ರಿವಾಲ್ ಅಥವಾ ಮತ್ಯಾರಿಗೋ ಮಾಡಬೇಕಾದ ಕೆಲಸವಲ್ಲ. ಇಡೀ ಜಗತ್ತಿನಲ್ಲಿ ಅತ್ಯದ್ಭುತ ಜನಸಂಸ್ಕೃತಿಯನ್ನು, ಬುದ್ಧನ ಕಾಲದಿಂದಲೂ ಸಮತೆ, ಪ್ರಜಾಪ್ರಭುತ್ವಗಳ ಉದಾತ್ತ ಮೌಲ್ಯಗಳನ್ನು ರೂಪಿಸಿದ ಈ ಮಹಾನ್ ದೇಶವನ್ನು ಆ ಮೌಲ್ಯಗಳೊಂದಿಗೆ ಉಳಿಸಿಕೊಳ್ಳಬೇಕಾದ ಹೊಣೆ ಇದು.
– ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
ಸುದ್ದಿದಿನ ಡೆಸ್ಕ್ : 2024ರ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಒಂದು ಕೋಟಿ 80 ಲಕ್ಷ ಹೊಸ ಮತದಾರರು ತಮ್ಮ ಅಮೂಲ್ಯ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದಾರೆ. ಇವರೆಲ್ಲ 18-19ರ ಪ್ರಾಯದವರು.
ಮೊದಲ ಬಾರಿಗೆ ಮತ ಚಲಾಯಿಸುವ ಯುವಕರಿಗೆ ಅವರ ಈ ಪವಿತ್ರ ಕರ್ತವ್ಯದ ಮಹತ್ವವನ್ನು ಮನಗಾಣಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ’ನಾನು ಖಂಡಿತ ಮತ ಚಲಾಯಿಸುತ್ತೇನೆ’ ಎನ್ನುವ ಪ್ರಚಾರ ಆಂದೋಲನಗಳು ನಡೆಯುತ್ತಿವೆ.
ಈ ಬಾರಿ ಚುನಾವಣೆಯಲ್ಲಿ ಭಾಗವಹಿಸುವ ಯುವ ಮತದಾರರ ಪೈಕಿ 20ರಿಂದ 29ವರ್ಷ ವಯೋಮಾನದ ಅಂದಾಜು 19 ಕೋಟಿ 74 ಲಕ್ಷ ಮತದಾರರು ಪಾಲ್ಗೊಳ್ಳಲಿದ್ದಾರೆ. 18 ವರ್ಷಕ್ಕೆ ಮತದಾನದ ಹಕ್ಕು ದೊರೆಯುವುದಾದರೂ ಈಗ 17 ವರ್ಷ ತುಂಬಿರುವ ಯುವಜನ ಸಮೂಹದಿಂದ 13.4ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಮುಂಚಿತವಾಗಿಯೇ ಸ್ವೀಕರಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಯುವ ಜನರಿಗೆ ಮತದಾನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸಚಿನ್ ತೆಂಡುಲ್ಕರ್ ಮತ್ತು ರಾಜಕುಮಾರ್ ರಾವ್ ಅವರಂತಹ ರಾಷ್ಟ್ರೀಯ ದಿಗ್ಗಜರಿಂದ ಸಂದೇಶಗಳನ್ನು ಪ್ರಸಾರ ಮಾಡುತ್ತಿದೆ. ಸಾಮಾಜಿಕ ಮಾಧ್ಯಮ ಅಭಿಯಾನಗಳು ಮತ್ತು ರೇಡಿಯೋ ಮೂಲಕವೂ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
ಸುದ್ದಿದಿನ,ಬೆಂಗಳೂರು : ದಕ್ಷಿಣ ಭಾರತದಲ್ಲಿ ಭಾರತೀಯ ಜನತಾಪಕ್ಷಕ್ಕೆ, ಕರ್ನಾಟಕ ಹೆಬ್ಬಾಗಿಲಿನಂತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬರಲಿರುವ ಮಹಾಚುನಾವಣೆಗೆ ಪಕ್ಷದ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಲಿರುವ ನೂತನ ಮಾಧ್ಯಮ ಕೇಂದ್ರದಲ್ಲಿ ಪಕ್ಷದ ರಾಜ್ಯ ನಾಯಕರು ಇಂದು ಬೆಳಿಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜನಪರ ಆಡಳಿತ ನೀಡುವಲ್ಲಿ ಮತ್ತು ಬರಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು.
ಜನವಿರೋಧಿ ಕ್ರಮಗಳಿಂದಾಗಿ ರಾಜ್ಯದ ಜನತೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಲು ತನ್ನ 200ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಕಾರ್ಯಾಗಾರ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ನಡುವೆ ಲೋಕಸಭಾ ಚುನಾವಣೆ ಕುರಿತಂತೆ ದೆಹಲಿಯಲ್ಲಿ ಇಂದು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯ ಸಭೆ ನಡೆಯಲಿದೆ.
ಚುನಾವಣೆಗೆ ಪಕ್ಷದ ಕಾರ್ಯತಂತ್ರಗಳನ್ನು ಕುರಿತು ಸಮಾಲೋಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಚುನಾವಣಾ ಸಮಿತಿಯ ಸದಸ್ಯರು ಮತ್ತಿತರ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
"ವಿಕಸಿತ ಭಾರತಕ್ಕಾಗಿ
ಮತ್ತೊಮ್ಮೆ ಮೋದಿ ಸರ್ಕಾರ"ಮಲ್ಲೇಶ್ವರಂನ ಜಿ.ಎಂ. ರಿಜಾಯ್ಸ್ ಹೋಟೆಲ್ನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ನೆರವೇರಿಸಲಾಯಿತು. ರಾಜ್ಯದೆಲ್ಲೆಡೆ ಪ್ರಧಾನಿ ಮೋದಿ ಜೀ ಅವರ ಪರವಾದ ಅಲೆ ವ್ಯಾಪಕವಾಗಿದ್ದು 'ಮೋದಿ ಮತ್ತೊಮ್ಮೆ' ಎಂಬುದು ಜನಸಾಮಾನ್ಯರ ಸಂಕಲ್ಪವಾಗಿದೆ. ದೇಶದಲ್ಲಿ 400 ಹಾಗೂ… pic.twitter.com/gYbNmo1Poo
— Vijayendra Yediyurappa (Modi Ka Parivar) (@BYVijayendra) March 23, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ