Connect with us

ದಿನದ ಸುದ್ದಿ

ಮೀಸಲಾತಿಯ ಜನಕ ‘ಛತ್ರಪತಿ ಶಾಹು ಮಹರಾಜ್’ ಬಗ್ಗೆ ನಿಮಗೆಷ್ಟು ಗೊತ್ತು ?

Published

on

ದು ಒಂದು ಪುರೋಹಿತಶಾಹಿಗಳ ಕಾಲ, ಚಾತುರ್ವರ್ಣ ಪದ್ದತಿಗಳು ಶ್ರೇಣೆಕೃತ ಜಾತಿ ವ್ಯವಸ್ಥೆಗಳು ತಾಂಡವವಾಡುತ್ತಿದ್ದಂತಹ ಕಾಲ, ಪುರೋಹಿತಶಾಹಿಗಳು ಬಹುಜನರನ್ನು ಮೂಡನಂಬಿಕೆಗಳಿಗೆ ತಲ್ಲಲ್ಪಟ್ಟಂತಹ ಕಾಲ, ಬಹುಜನರನ್ನು ಬ್ರಾಹ್ಮಣರ ಸೇವಕರಾಗಿ, ಗುಲಾಮರನ್ನಾಗಿ ಮಾಡಿಕೊಂಡಿದ್ದಂತಹ ಕಾಲ, ಅಸ್ಪೃಶ್ಯರನ್ನು ಹಂದಿ ನಾಯಿಗಳನ್ನು ಹೊಡೆದೋಡಿಸುತ್ತಿದ್ದ ಆಗೆ ಹೊಡೆದೋಡಿಸುತ್ತಿದ್ದಂತಹ ಕಾಲ, ಇಂತಹ ಕಾಲದಲ್ಲಿ ಬಹುಜನರಿಗಾಗಿ ಅವರ ರಕ್ಷಣೆಗಾಗಿ, ಏಳಿಗೆಗಾಗಿ ಒಬ್ಬ ಮಹಾ ಮೇಧಾವಿ ಪುರುಷನೊಬ್ಬ ಹುಟ್ಟುತ್ತಾರೆ ಅವರೇ “ಛತ್ರಪತಿ ಶಾಹು ಮಹಾರಾಜ್”. ಶಾಹುರವರು ಹುಟ್ಟಿದ್ದು 26, ಜೂನ್ 1874 ರಂದು. ಶಾಹು ರವರ ಮೊದಲ ಹೆಸರು ಯಶ್ವಂತರಾವ್ ಘಟ್ಗೆ ಇವರ ತಂದೆಯ ಹೆಸರು ಜಯಸಿಂಹರಾವ್ ಘಟ್ಗೆ, ತಾಯಿ ರಾಧಬಾಯಿ ಇವರು ಮೂಲತಃ ಕೊಲ್ಲಾಪುರದ ಮಹಾರಾಣಿ ಆನಂಧಿಬಾಯಿರವರು ಮಾರ್ಚ್ 11, 1884ರಂದು ಶಾಹುರವರನ್ನು ದತ್ತು ಸ್ವೀಕಾರ ಮಾಡಿಕೊಳ್ಳುತ್ತಾರೆ.

ಶಾಹುರವರಿಗೆ ಏಪ್ರಿಲ್ 2, 1894ರಂದು ಮಹರಾಜರಾಗಿ ಪಟ್ಟಾಭಿಷೇಕವಾಗುತ್ತದೆ.
ಕ್ರಿ.ಶ.1900ರಲ್ಲಿ ಒಂದು ಘಟನೆ ನಡೆಯುತ್ತದೆ ಅದೇನೆಂದರೆ ರಾಜನಾದವನು ಗಂಗಾ ಘಾಟ್ ಎಂಬಲ್ಲಿ ಸ್ನಾನ ಮಾಡಬೇಕಾಗಿರುತ್ತದೆ ಆ ಸಂದರ್ಭದಲ್ಲಿ ರಾಜನಿಗೆ ಬ್ರಾಹ್ಮಣರು ಮಂತ್ರಗಳನ್ನು ಪಟಿಸಬೇಕಾಗಿರುತ್ತದೆ ಆದರೆ ಬ್ರಾಹ್ಮಣರು ರಾಜನಿಗೆ ಪಟಿಸಬೇಕಾಗಿರುವ ಮಂತ್ರಗಳನ್ನು ಹೇಳುತ್ತಿರುವುದಿಲ್ಲ ಬದಲಾಗಿ ಶೂದ್ರ ಮಂತ್ರಗಳನ್ನು ಹೇಳುತ್ತಿರುತ್ತಾರೆ ಇದನ್ನರಿತ ರಾಜರ ಆಪ್ತರೊಬ್ಬರು ಈ ವಿಚಾರವನ್ನು ಮಹಾರಾಜರಿಗೆ ತಿಳಿಸುತ್ತಾರೆ. ಕೂಡಲೇ ಶಾಹುರವರು ಪುರೋಹಿತರನ್ನು ಪ್ರಶ್ನಿಸುತ್ತಾರೆ. ಆದರೆ ಪುರೋಹಿತರು ನೀವು ಶೂದ್ರರಾಗಿರುವ ಕಾರಣದಿಂದ ನಾವು ಶೂದ್ರ ಮಂತ್ರಗಳನ್ನೆ ಹೇಳಬೇಕಾಗುತ್ತದೆ ಎಂದು ಬಹಳ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಾರೆ. ಆಗ ಶಾಹುರವರು “ಒಬ್ಬ ಮಹಾರಾಜನಾಗಿ ನನಗೆ ಈ ಬ್ರಾಹ್ಮಣರಿಂದ ಅವಮಾನವಾಗುತ್ತಿದೆ ಜಾತಿ ಶೋಷಣೇಯಾಗುತ್ತಿದೆ ಎಂದರೆ ಇನ್ನು ಸಾಮನ್ಯ ಜನರಿಗೆ ಇವರಿಂದ ಇನ್ನೇಷ್ಟು ಶೋಷಣೆಯಾಗುತ್ತಿರಬಹುದು ಇವರಿಂದ ನಮ್ಮ ಬಹುಜನರು ಇನ್ನೇಷ್ಟು ಅವಮಾನ ಅಪಮಾನಗಳಿಗೆ ಗುರಿಯಾಗುತ್ತಿರಬಹುದು ಇದಕ್ಕೇನಾದರು ಪರಿಹಾರ ಹುಡುಕಬೇಕು” ಎಂದು ಮನಸ್ಸಿನಲ್ಲಿಯೇ ಮರುಕ ಪಡುತ್ತಾರೆ.

ಕೊಲ್ಲಾಪುರ್-ಶಾಹುಮಹಾರಾಜರ ಪ್ಯಾಲೇಸ್

ರಾಜರ ಆಸ್ಥಾನದಲ್ಲಿ ರಾಜೋಪಾಧ್ಯೆ ಎಂಬ ಪ್ರಧಾನ ಪುರೋಹಿತನಿರುತ್ತಾನೆ. ಇವನಿಗೆ ಬಾಲಗಂಗಾದರ್ ತಿಲಕರ ನೆರವಿರುತ್ತದೆ. ಒಂದು ದಿನ ಮಹಾರಾಜರು ಅಡುಗೆ ಮನೆ ಪರಿಶೀಲನೆ ಮಾಡಲೆಂದು ಅರಮನೆಯ ಅಡುಗೆ ಮನೆಯೊಳಗೆ ಹೋಗಲು ಮುಂದಾಗುತ್ತರೆ ಆದರೆ ರಾಜೋಪಾಧ್ಯೆ ಎಂಬ ಪುರೋಹಿತನು ಶಾಹು ಮಹಾರಜರನ್ನು ನೀವು ಶೂದ್ರರು ಅಡುಗೆ ಮನೆಯೊಳಗೆ ಬರಕೂಡದು ಬಂದರೆ ಅಡುಗೆ ಮನೆಯೆಲ್ಲಾ ಮೈಲಿಗೆಯಾಗುತ್ತದೆ ದಯವಿಟ್ಟು ಒಳಗೆ ಬರಬೇಡಿ ಎಂದು ಮಹಾರಜರನ್ನು ತಡೆಯುತ್ತಾನೆ. ಆಗ ಮಹಾರಜರು ಕೆಂಡಾಮಂಡಲವಾಗುತ್ತಾರೆ ಮಹರಾಜನಾದ ನನಗೆ ಜಾತಿನಿಂದನೆ ಮಾಡುತ್ತೀರ? ನಿಮಗೆ ಕೆಲಸ ಕೊಟ್ಟು, ಹಣಕೊಟ್ಟು, ಇರೋದಕ್ಕೆ ಮನೆಕೊಟ್ಟು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟಿರುವ ನನಗೆ ಜಾತಿನಿಂದನೆಯೇ? ಈ ಕ್ಷಣದಿಂದ ನೀನು ನನ್ನ ಆಸ್ಥಾನದಲ್ಲಿರಕೂಡದೆಂದು 06 ಮೇ1902 ರಂದು ಅವನನ್ನು ಸ್ಥಾನದಿಂದ ವಜಾ ಮಾಡುತ್ತಾರೆ.

ಶಾಹುರವರು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲು ಲಂಡನ್ನಿಗೆ ತೆರಲಿರುತ್ತಾರೆ ಅಲ್ಲಿ ಅವರಿಗೆ ತಾವು ಅನುಭವಿಸಿದ ಕೆಲವು ಘಟನೆಗಳು ನೆನಪಿಗೆ ಬರುತ್ತವೆ ಅದಕ್ಕೆ ಅವರು ಒಂದು ತೀರ್ಮಾನ ಮಾಡುತ್ತಾರೆ ಅಲ್ಲಿಂದ ಒಂದು ಸುದ್ಧಿಯನ್ನು ಕಳುಹಿಸುತ್ತಾರೆ ಅದೇನೆಂದರೆ “ಶೂದ್ರರಿಗೆ 50% ಮೀಸಲಾತಿ” ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮೀಸಲಾತಿಯೆಂಬ ಯೋಜನೆಯನ್ನು ಕಂಡುಹಿಡಿದ ಕೀರ್ತಿ ಶಾಹು ಮಹಾರಾಜರಿಗೆ ಸಲ್ಲಬೇಕು.

ಶಾಹು ಮಹಾರಾಜರು ಕಳುಹಿಸಿಕೊಟ್ಟ ಮೀಸಲಾತಿಯ ಸುದ್ಧಿ ಕೇಳಿ ಬ್ರಾಹ್ಮಣರಿಗೆ ಹೃದಯ ಬಡಿತವೇ ನಿಂತಂತಾಯಿತು, ಬಾಲಗಂಗಾದರ್ ತಿಲಕರಿಗಂತೂ ಅಥೀವಾ ಆತಂಕ ಉಂಟಾಯಿತು ಆದ್ದರಿಂದ ಮೀಸಲಾತಿ ವಿಷಯಕ್ಕೆ ಸಂಬಂದಿಸಿದಂತೆ ತಿಲಕರು ವಿರೋದವನ್ನು ವ್ಯಕ್ತಪಡಿಸುತ್ತಾರೆ.

ಮಹಾರಾಜರ ಮೀಸಲಾತಿಯ ವಿಚಾರವನ್ನು ಬಹುತೇಕ ಬ್ರಾಹ್ಮಣರು ವಿರೋಧ ಮಾಡುತ್ತಿರುತ್ತಾರೆ, ಬೇಸೆತ್ತ ಕೆಲವು ಗೂಂಡಗಳಿಂದ ಮಹಾರಾಜರನ್ನು ಕೊಲೆ ಮಾಡುವ ಪ್ರಯತ್ನವು ನಡೆಯುತ್ತದೆ. ಶಾಹುರವರಿದ್ದ ರೈಲಿಗೆ ಬಾಂಬನ್ನು ಸಹ ಇಡಲಾಗುತ್ತದೆ ಆದರೆ ಆ ಕೊಲೆಯ ಪ್ರಯತ್ನವು ವಿಫಲವಾಗಿಬಿಡುತ್ತದೆ.

ಒಮ್ಮೆ ಮಹಾರಾಜರು ಅರಮನೆಯ ಆವರಣದಲ್ಲಿ ಗಾಳಿ ಸಂಚಾರ (walking) ಮಾಡುತ್ತಿರುತ್ತಾರೆ ಆ ಸಮಯದಲ್ಲಿ ಗಣಪತಿರಾವ್ ಎಂಬ ಬ್ರಾಹ್ಮಣ ವಕೀಲ ಶಾಹುರವರನ್ನು ಕಾಣಲು ಬರುತ್ತಾರೆ ಮೀಸಲಾತಿಯ ಬಗ್ಗೆ ಚರ್ಚೆ ಮಾಡುತ್ತಾ ಅರ್ಹತೆಯಿಲ್ಲದವರಿಗೆಲ್ಲಾ ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಹಾಗೂ ಎಲ್ಲಾ ರಂಗಗಳಲ್ಲೂ ನೀವು ಮೀಸಲಾತಿ ಕೊಟ್ಟರೆ ಪ್ರತಿಭೆಗೆ ದಕ್ಕೆಯುಂಟಾಗುವುದಿಲ್ಲವೇ? ಎಂದು ಮಹಾರಾಜರನ್ನು ಪ್ರಶ್ನಿಸುತ್ತಾನೆ. ಆಗ ಶಾಹು ಮಹಾರಾಜರು ಓ.. ನಿಮಗೆ ಆ ರೀತಿ ಅರ್ಥವಾಗಿದೆಯೇ ಬನ್ನಿ ನನ್ನ ಜೊತೆ ಎಂದು ಆ ವಕೀಲನನ್ನು ಕರೆದುಕೊಂಡು ಸಂಚಾರ(walk) ಮಾಡುತ್ತಾ ಮಾಡುತ್ತಾ ಅರಮನೆಯ ಆವರಣದಲ್ಲಿ ಕುದುರೆಗಳನ್ನು ಕಟ್ಟಿರುವ ಜಾಗಕ್ಕೆ ತಲುಪುತ್ತಾರೆ ಅಲ್ಲಿ ಕುದುರೆಗಳನ್ನು ಗುಂಪು ಗುಂಪುಗಳಾಗಿ ಮಾಡಿ ಮೇವನ್ನು ಹಾಕಲಾಗಿರುತ್ತದೆ ಇದನ್ನು ಗಮನಿಸಿದ ಮಹಾರಾಜರು ಯಾರಲ್ಲಿ ಈ ಕುದುರೆಗಳನ್ನು ಕಟ್ಟಿದವರು ಎಂದಾಗ ಸ್ಥಳದಲ್ಲೇ ಇದ್ದ ಕುದುರೆಗಳನ್ನು ನೋಡಿಕೊಳ್ಳುವವನು ನಾನೇ ಪ್ರಭು ಎನ್ನುತ್ತಾನೆ. ಆಗ ಮಹಾರಾಜರು ಅವನನ್ನು “ಏನಯ್ಯ ನಿನಗೆ ಬುದ್ಧಿ ಇದೆಯಾ? ಕುದುರೆಗಳನ್ನು ಏಕೆ ಈ ರೀತಿ ಗುಂಪುಗುಂಪುಗಳನ್ನಾಗಿ ವಿಂಗಡನೆ ಮಾಡಿ ಬೇರೆ ಬೇರೆ ಕಡೆ ಮೇವನ್ನಕಿದ್ದೀಯಾ? ಎಲ್ಲಾ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬಹುದಾಗಿತ್ತಲ್ಲವೇ? ಎಂದು ಪ್ರಶ್ನಿಸಿ ಜೊತೆಯಲ್ಲಿದ್ದ ವಕೀಲನನ್ನು ಕೇಳುತ್ತಾರೆ ಗಣಪತಿರಾವ್ ರವರೇ ನಾನು ಕೇಳಿದ್ದು ಸರಿ ತಾನೆ? ಎಂದಾಗ ಆ ವಕೀಲ ಹೌದು ಮಹಾರಾಜರೇ ನೀವು ಕೇಳಿದ್ದು ಸರಿಯಾಗಿದೆ ಅವನು ಆ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬೇಕಿತ್ತು ಎನ್ನುತ್ತಾನೆ. ಆಗ ಸೇವಕನು ಮಹಾರಾಜರ ಪ್ರಶ್ನೆಗಳನ್ನು ಉದ್ದೇಶಿಸಿ “ಮಹಾರಾಜರೇ ಈ ಕುದುರೆಗಳಲ್ಲಿ ಕೆಲವು ವಯಸ್ಸಾಗಿರುವ ಕುದುರೆಗಳಿವೆ, ಗಾಯಗಳಾಗಿ ಪೆಟ್ಟು ಮಾಡಿಕೊಂಡಿರುವ ಕುದುರೆಗಳಿವೆ, ಸಣ್ಣ ಪ್ರಾಯದ ಕುದುರೆಗಳಿವೆ ಹಾಗೂ ದಷ್ಟಪುಷ್ಟವಾದ ಬಲಿಷ್ಟವಾಗಿರುವ ಕುದುರೆಗಳಿವೆ ಈ ಎಲ್ಲಾ ಕುದುರೆಗಳನ್ನು ಒಂದೇ ಕಡೆ ಸೇರಿಸಿ ಮೇವನ್ನಾಕಿದರೆ ಯಾವ ಕುದುರೆಗಳಿಗೆ ಹೆಚ್ಚು ಶಕ್ತಿ ಇದೆಯೋ ಅಂದರೆ ದಷ್ಟಪುಷ್ಟವಾದ ಕುದುರೆಗಳು ಮೇವೆಲ್ಲಾ ತಿಂದು ಬಿಡುತ್ತವೇ ಆಗ ವಯಸ್ಸಾದ ಕುದುರೆಗಳಿಗೆ, ಗಾಯಗಳಾಗಿರುವ ಕುದುರೆಗಳಿಗೆ, ಸಣ್ಣ ಪ್ರಾಯದ ಕುದುರೆಗಳಿಗೆ ಮೇವು ಸಿಗದೇ ದುರ್ಬಲವಾಗಿ ಹಸಿವಿನಿಂದಲೇ ಸತ್ತು ಹೋಗುತ್ತವೇ ಆದ್ದರಿಂದ ವಯಸ್ಸಾದ ಕುದುರೆಗಳಿಗೆ ಒಂದು ಕಡೆ, ಸಣ್ಣ ಪ್ರಾಯದ ಕುದುರೆಗಳಿಗೆ ಒಂದು ಕಡೆ, ಗಾಯಗೊಂಡಿರುವ ಕುದುರೆಗಳಿಗೆ ಒಂದು ಕಡೆ, ಬಲಿಷ್ಟ ಕುದುರೆಗಳಿಗೊಂದು ಕಡೆ ಮೇವನ್ನಾಕಿದ್ದೇನೆ ಆಗ ಎಲ್ಲಾ ಕುದುರೆಗಳಿಗೂ ಮೇವು ಸಿಗುತ್ತದೆ” ಎಂದು ಉತ್ತರಿಸುತ್ತಾನೆ. ಆಗ ಆ ಬ್ರಾಹ್ಮಣ ವಕೀಲನಿಗೆ ಮೀಸಲಾತಿಯ ಬಗ್ಗೆ ಅರ್ಥವಾಗಿ “ಮಹಾರಾಜರೇ ದಯವಿಟ್ಟು ಕ್ಷಮಿಸಿ ಈಗ ನಿಮ್ಮ ಮೀಸಲಾತಿಯ ಬಗ್ಗೆ ನನಗೆ ಸಂಪೂರ್ಣವಾಗಿ ಅರ್ಥವಾಯಿತೆಂದು” ಅಲ್ಲಿಂದ ಒರಟುಹೋಗುತ್ತಾನೆ.

• ಶಾಹು ಮಹಾರಜರು ಅಸ್ಪೃಶ್ಯರಿಗೋಸ್ಕರ 18 ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸುತ್ತಾರೆ.

• 1908ರಲ್ಲಿ ವಿಧ್ಯಾಸಂಸ್ಥೆಯನ್ನು ಪ್ರಾರಂಭ ಮಾಡುತ್ತಾರೆ.

• 1896 ರಿಂದ 1912ರ ಅವಧಿಯಲ್ಲಿ ಶೂದ್ರರಿಗೆ 22, ಅಸ್ಪೃಶ್ಯರಿಗೆ 27 ಶಾಲೆಗಳನ್ನು ಸ್ಥಾಪಿಸುತ್ತಾರೆ.

• 1918 ರಲ್ಲಿ ಶೂದ್ರರಿಗೆ ಅರಿವು ಮತ್ತು ಜಾಗೃತಿ ಮೂಡಿಸಲು “ಮೂಕ ನಾಯಕ್” ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ.

• 1918 ರಲ್ಲಿ ಮಹಾತ್ಮ ಜೋತಿಬಾಫುಲೆ ರವರ ಸತ್ಯಶೋಧಕ ಸಮಾಜವನ್ನು ಮುನ್ನಡೆಸಲು “ಶಾಹು ಸತ್ಯ ಶೋಧಕ ಸಮಾಜ”ವನ್ನು ಸ್ಥಾಪನೆ ಮಾಡುತ್ತಾರೆ.

1920 ಮಾರ್ಚ 27ರಂದು ಕೊಲ್ಲಾಪುರದ ಜನಗಳನ್ನು ಉದ್ದೇಶಿಸಿ ಮಾತನಾಡುತ್ತ ” ಮಹಾ ಜನಗಳೇ ನನ್ನ ಆಸ್ಥಾನ ಎಷ್ಟಿದೆಯೋ ಅಷ್ಟರಲ್ಲಿ ಶೂದ್ರರಿಗಾಗಿ ಅಸ್ಪೃಷ್ಯರಿಗಾಗಿ ಎಲ್ಲಾವನ್ನು ಮಾಡಿದ್ದೇನೆ ಒಂದು ವೇಳೆ ನಾನು ಇಡೀ ಭಾರತಕ್ಕೆ ಮಹಾರಾಜನಾಗಿದ್ದರೆ ದೇಶದಲ್ಲಿರುವ ಎಲ್ಲಾ ಶೋಷಿತರನ್ನು ಉದ್ದರಿಸುತ್ತಿದ್ದೆ ಆದರೆ ನನ್ನ ಆಸ್ಥಾನ ಕೇವಲ ಕೊಲ್ಲಾಪುರಕ್ಕೆ ಮಾತ್ರ ಸೀಮಿತವಾಗಿರುವ ಕಾರಣದಿಂದ ಅದು ಅಸಾಧ್ಯವಾಗಿದೆ”. ಆದರೆ, ಇನ್ನುಮುಂದೆ “ಅಖಿಲ ಭಾರತ ಮಟ್ಟದಲ್ಲಿ ಬಡವರನ್ನು, ಶೋಷಿತರನ್ನು, ಅಸ್ಪೃಷ್ಯರನ್ನು ಉದ್ದರಿಸಲು ಒಬ್ಬ ಮಹಾನ್ ನಾಯಕ, ದೇಶ-ವಿದೇಶಗಳಲ್ಲಿ ಶಿಕ್ಷಣವನ್ನು ಪಡೆದ ವಿಧ್ಯಾವಂತ, ಬುದ್ಧಿವಂತ, ಮುಂದಿನ ರಾಷ್ಟ್ರೀಯ ನಾಯಕನನ್ನು ಈ ದಿನ ನಿಮಗೆಲ್ಲಾ ಪರಿಚಯಿಸುತ್ತೇನೆ ನೀವೆಲ್ಲಾ ಅವರಿಗೆ ಬೆಂಬಲಕೊಟ್ಟರೆ ಇಡೀ ದೇಶವನ್ನೇ ಬದಲಾಯಿಸತ್ತಾರೆ, ಬಹುಜನರಿಗೋಸ್ಕರ ಹೊಸ ಚರಿತೆಯನ್ನೇ ಸೃಷ್ಟಿಸುತ್ತಾರೆ” ಎಂದು ಆ ವ್ಯಕ್ತಿಯನ್ನು ಪರಿಚಯಿಸುತ್ತಾರೆ ಆ ವ್ಯಕ್ತಿಯೇ ಮಹಾ ಮಾನವತವಾದಿ, ವಿಶ್ವ ಮಾನವ, ರಾಷ್ತ್ರೀಯತಾವಾದಿ, ಕಾನೂನು ತಜ್ನ, ರಾಜಕೀಯ ನೇತಾರ, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತ, ಶ್ರೇಷ್ಟ ಇತಿಹಾಸಗಾರ, ಮಹಾದಾರ್ಶನಿಕ, ಅಪ್ರತಿಮ ಚಿಂತಕ, ಮಾನವಶಾಸ್ತ್ರಜ್ನ, ಖ್ಯಾತ ಅರ್ಥಶಾಸ್ತ್ರಜ್ನ, ಸಮೃದ್ದ ಬರಹಗಾರ, ಕ್ರಾಂತಿಕಾರಿ, ಅಸಾಮಾನ್ಯ ವಾಕ್ಪಟು, ಅಪ್ರತಿಮ ನಾಯಕ, ಬೌದ್ಧ ಧರ್ಮದ ಪುನರುಜ್ಜೀವಕ, ಭಾರತ ರತ್ನ, ಸಂವಿಧಾನ ಶಿಲ್ಪಿ, ಪರಮಪೂಜ್ಯ “ಡಾ. ಬಾಬಾ ಸಾಹೇಬ್ ಅಂಬೇಡ್ಕರ್” ರವರು.

-ಅಜೀತ ಮಾದರ

ಸುದ್ದಿದಿನ.ಕಾಂ|ವಾಟ್ಸಾಪ್|998675401

ದಿನದ ಸುದ್ದಿ

ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್‍ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್‍ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.

ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್‍ಸೆಟ್‍ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ

Published

on

ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.

ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.

ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್‌ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ

Published

on

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.

ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್‌ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.

ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.

ದೂರುಗಳನ್ನು ಆನ್‌ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.

ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ7 hours ago

ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ

ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್‍ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್...

ದಿನದ ಸುದ್ದಿ1 day ago

ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ

ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು...

ದಿನದ ಸುದ್ದಿ2 days ago

ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ. ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ...

ದಿನದ ಸುದ್ದಿ4 days ago

ಕವಿತೆ | ನೆನಪು

ರುದ್ರಪ್ಪ ಹನಗವಾಡಿ ಅಪ್ಪನನ್ನು ಒಪ್ಪ ಮಾಡಿ ವರ್ಷಗಳೇ ಕಳೆದವು ಮುವ್ವತ್ತೇಳು ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ ಅರಸರ ಮೀಸಲಾತಿ ಬಸವಲಿಂಗಪ್ಪನವರ ಬೂಸಾ ಖ್ಯಾತಿ ಮಲ ಹೊತ್ತು ಮಲಗಿದ್ದ ಕಾಲಕ್ಕೆ...

ದಿನದ ಸುದ್ದಿ4 days ago

ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?

ಸುದ್ದಿದಿನ ಡೆಸ್ಕ್ : 2024ರ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಒಂದು ಕೋಟಿ 80 ಲಕ್ಷ ಹೊಸ ಮತದಾರರು ತಮ್ಮ ಅಮೂಲ್ಯ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದಾರೆ. ಇವರೆಲ್ಲ...

ದಿನದ ಸುದ್ದಿ5 days ago

ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ

ಸುದ್ದಿದಿನ,ಬೆಂಗಳೂರು : ದಕ್ಷಿಣ ಭಾರತದಲ್ಲಿ ಭಾರತೀಯ ಜನತಾಪಕ್ಷಕ್ಕೆ, ಕರ್ನಾಟಕ ಹೆಬ್ಬಾಗಿಲಿನಂತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ...

ದಿನದ ಸುದ್ದಿ5 days ago

ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ

ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ ಗ್ರಾಮದವರಾದ ಮೈಬೂಬಸಾಹೇಬ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹುಟ್ಟೂರಲ್ಲಿ ಪಡೆದುಕೊಂಡು ಉನ್ನತ ಶಿಕ್ಷಣವನ್ನು ವಿದ್ಯಾಕಾಶಿ ಧಾರವಾಡದಲ್ಲಿ ಮುಗಿಸಿ, ಪ್ರಸ್ತುತ...

ದಿನದ ಸುದ್ದಿ5 days ago

ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ

ರಾಜ್ಯದ 28ಲೋಕಸಭಾ ಮತಕ್ಷೇತ್ರಗಳನ್ನು ಒಳಗೊಂಡ ಜಿಲ್ಲೆಗಳಲ್ಲಿ ನಡೆದಿರುವ ಚುನಾವಣಾ ಚಟುವಟಿಕೆಗಳ ಬಗ್ಗೆ ಮಾಹಿತಿ ಸುದ್ದಿದಿನ ಡೆಸ್ಕ್ : ದಾವಣಗೆರೆಯಲ್ಲಿ ಚುನಾವಣಾ ಕಾರ್ಯಗಳ ವೀಕ್ಷಣೆ ಮತ್ತು ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ...

ದಿನದ ಸುದ್ದಿ6 days ago

ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ

ಸುದ್ದಿದಿನ,ದಾವಣಗೆರೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಶ್ರೀಕ್ಷೇತ್ರ ನಾಯಕನಹಟ್ಟಿಯಲ್ಲಿ ಮಾರ್ಚ್ 26 ರಂದು ಜರುಗಲಿರುವ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮ ವಿಭಾಗದ...

mallikarjun kharge_suddidina mallikarjun kharge_suddidina
ದಿನದ ಸುದ್ದಿ6 days ago

ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ

ಸುದ್ದಿದಿನ, ದೆಹಲಿ : ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದರಿಂದ ಚುನಾವಣಾ ಖರ್ಚುವೆಚ್ಚ ನಿರ್ವಹಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ಆಡಳಿತ ಪಕ್ಷ ಬಿಜೆಪಿಗೆ ಅನುಕೂಲವಾಗುವಂತೆ...

Trending