ಭಾವ ಭೈರಾಗಿ
ನನ್ನ ಕೆನ್ನೆಯಲ್ಲಿ ಗುಳಿಯಿಲ್ಲ ಕ್ಷಮಿಸಿಬಿಡು ಮಾರಾಯ್ತಿ

ಇಪ್ಪತ್ತೈದು ವರ್ಷ ಕಾಯಿಸಿದ್ದು ಸಾಲದೇ ಇನ್ನೂ ಪಕ್ಕದ ಖಾಲಿ ಜೋಕಾಲಿಗೆ ಉತ್ತರಕೊಡಲಾಗುತ್ತಿಲ್ಲ. ಗುಳಿಕೆನ್ನೆಯ ಹುಡಗನಿಗಾಗಿ ಸಾಕಷ್ಟು ಹುಡುಗಿಯರು ಕನಸು ಕಂಡಿರ್ತಾರೆ. ಹಾಗೇ ನೀನು ಕೂಡ ಕಂಡಿರಬಹುದು. ನಿನ್ನಾಣೆ ನಾನೇನು ಬೇಕು ಅಂತ ಕೆನ್ನಯ ಕುಳಿಯನ್ನ ಮುಚ್ಚಿಕೊಂಡವನಲ್ಲ. ಅದು ಪ್ರೊಡಕ್ಷನ್ ಮಿಸ್ಟೇಕು, ಅಪ್ಪ, ಅಮ್ಮನಿಗಿಲ್ಲದ ಕುಳಿ ನನ್ನ ಕೆನ್ನೆಗೆ ಅದೆಲ್ಲಿಂದ ಬಂದೀತು? ಈ ವಿಚಾರದಲ್ಲಿ ನಾನು ನಿಸ್ಸಹಾಯಕ. ಬೇಕಿದ್ರೆ ಒಂದು ಬೊಗಸೆ ಪ್ರೀತಿ ಹೆಚ್ಚಾಗಿ ಕೊಟ್ಟೇನು ಆದರೆ ಇಲ್ಲದ ಕುಳಿಯನ್ನ ಎಲ್ಲಿಂದ ತರಲಿ? ಆ ಕೋಪಕ್ಕೆ ನೀನು ಮುಂದೆ ದಿನಾ ನನ್ನ ಗುಂಡುಕೆನ್ನೆಗೆ ಹೊಡೆದು ಸೇಡು ತೀರಿಸಿಕೊಳ್ಳುವ ಹಟಕ್ಕೆ ಬಿದ್ರೆ ಅನ್ನೋ ಭಯಕ್ಕೆ ಈಗಲೇ ಹೇಳ್ತಿದೀನಿ.
ನನಗೆ ಲಾಲಿ ಹಾಡೋಕೆ ಬರೋಲ್ಲ ಹಾಗಂತ ನೀನು ತೊಡೆ ಮೇಲೆ ಮಲಗಿದಾಗ ನಿನ್ನ ತಲೆಯಲ್ಲಿ ಕೈಯ್ಯಾಡಿಸುತ್ತಾ ನಾಲ್ಕು ಮುದ್ದಮುದ್ದು ಮಾತಾಡದಷ್ಟು ಪೆದ್ದ ಏನಲ್ಲ. ಗುಳಿಕೆನ್ನೆ ಒಂದು ಬಿಟ್ಟು ನೀನು ಕನಸು ಕಂಡಿರಬಹುದಾದ ಎಲ್ಲದಕ್ಕಿಂತ ಒಂದು ಕೈ ಹೆಚ್ಚೇ ಪ್ರೀತಿ ಕೊಡಬಲ್ಲೆ. ಒಂಚೂರು ಜಾಸ್ತಿನೆ ಮುದ್ದು ಮಾಡುವ ಹುಡುಗ ನಾನು ಅದಕ್ಕಾಗಿ ಮೊದಲೇ ಸಾರಿ ಕೇಳಿಬಿಡ್ತೀನಿ. ನಿಮಪ್ಪನಿಗೆ ನನ್ ಪ್ರೀತಿಲಿ ಪಾಲು ಕೊಡು ಅಂತ ನೀನ್ ಮಾತ್ರ ಹಟ ಮಾಡ್ಬಾರ್ದು. ಅವರೇ ನಿನ್ ಫಸ್ಟ್ ಹೀರೋ ನಾನೇನಿದ್ರು ಸೆಕೆಂಡ್ ಅಂತ ನಂಗೊತ್ತು. ಕಳೆದ ಇಪ್ಪತ್ತು ವರ್ಷ ನಿನ್ನ ಪ್ರೀತಿಯಲ್ಲಿ ನಾನೇನು ಭಾಗ ಕೇಳಿದ್ನಾ ಇಲ್ವಲ್ಲಾ ಮುಂದೆ ಅವರು ಕೇಳಿದ್ರೆ ನಾನ್ ಕೊಡಲ್ಲ. ಹಾಗೆ ಕೊಡದೆನೂ ಇರಲ್ಲ. ಪಾಪ ಅಂತ ಒಂದ್ 30% ಕೊಡ್ತಿನಿ ಅದಕ್ಕಿಂತ ಜಾಸ್ತಿ ಪ್ರೀತಿ ಕೇಳಬಾರದು ಓಕೆನಾ..
ನಿಮ್ಮಪ್ಪನ ರೀತಿ ಹೆಗಲಮೇಲೆ ಹೊತ್ತು ಊರು ತಿರುಗಿಸಿ, ಜಾತ್ರೆಲಿ ಫ್ರಾಕು ಕೊಡಿಸೋ ಭಾಗ್ಯ ನನಗಿಲ್ಲ ಯಾಕಂದ್ರೆ ಈಗ ನೀನು ದೊಡ್ಡವಳಾಗಿದಿಯ. ಹಾಗಂತ ನಾನೇನು ಸುಮ್ನಿರಲ್ಲ, ನನ್ ಪಾಲಿಗೆ ನೀನ್ ಯಾವತ್ತೂ ಮಗೂನೆ, ಇರೋ ಬೈಕಲ್ಲೇ ಊರು ಸುತ್ತಿಸುವ, ಮತ್ತು ಈ ತೋಳಲ್ಲೇ ನಿನ್ನ ಹೊತ್ತು ಬೆಟ್ಟ ಹತ್ತುವ ಬೆಚ್ಚಗಿನ ಪ್ರೀತಿಯನ್ನಂತೂ ಕೊಡಬಲ್ಲೆ.
ಜಿಟಿಜಿಟಿ ಮಳೆಯಲ್ಲಿ ಲಾಲ್ ಭಾಗ್ ರಸ್ತೆ ಬದಿ ಒಬ್ಬನೇ ಕೂತು ಕಾಫಿ ಹೀರುವಾಗ ಈ ಎದೆತುಂಬೆಲ್ಲಾ ನಿನ್ನದೇ ನೆನಪು. ಹಾಳಾದ್ ಸಕಲೇಶಪುರದ ರಸ್ತೆ ತುಳಿದರೆ ಸಾಕು ಜೀವ ನಿನ್ನೊಬ್ಬಳನ್ನು ಬಿಟ್ಟು ಮತ್ತೇನನ್ನೂ ನೆನೆಯಲ್ಲ. ನನ್ನ ಬೈಕಿನ ಹಿಂಬದಿ ಸೀಟು ನನ್ನ ನೋಡಿ ಅಣಕಿಸೋದೆ ಅಂಥ ಟೈಮಲ್ಲಿ, ನಿನಗೆ ಕಾರ್ ಡ್ರೈವಿಂಗ್ ಬರದಿದ್ರೂ ಪರವಾಗಿಲ್ಲ, ನಾನ್ ನಿನಗೆ ಬೈಕ್ ರೈಡಿಂಗ್ ಕಲಿಸಿಕೊಡ್ತೇನೆ. ಅದೊಂದಿನ ಸುರಿವ ಮಳೆಯಲ್ಲಿ ಸಕಲೇಶಪುರದ ರಸ್ತೆ ರಸ್ತೆಯಲ್ಲಿ ನಿನ್ ಹಿಂದೆ ಕೂತು ಬೈಕ್ ರೈಡ್ ಮಾಡಿ ಮರ,ಗಿಡ, ರಸ್ತೆಗಳಿಗೆಲ್ಲಾ ಹೊಟ್ಟೆ ಉರಿಸಬೇಕಿದೆ. ಹಾ ಕಳೆದ ಬಾರಿ ಒಬ್ಬೊಂಟಿ ಅಂತ ನನ್ನ ರೇಗಿಸಿದ ಆ ಮರದ ಹನಿಗಳಿಗೂ ತಕ್ಕ ಉತ್ತರ ನೀಡಿಬರೋಣ.
ಅಂದ ಹಾಗೆ ನಮ್ಮಿಬ್ಬರ ಮೊದಲ ಭೇಟಿಯಲ್ಲಿ ಗಡ್ಡ ಬೋಳಿಸು ಮಾರಾಯ ಅಂತ ಮಾತ್ರ ಹೇಳಬೇಡ ಯಾಕಂದ್ರೆ ಈ ಗಡ್ಡ ಇಲ್ಲದಾಗ ಮುದ್ದುಮಾಡೋಕೆ ನೀನಿಲ್ಲ ಅಂತ ಎಷ್ಟು ಹೊಟ್ಟೆ ಉರ್ಕೊಂಡಿದ್ದೆ ಅಂತ ನನಗೆ ಮಾತ್ರ ಗೊತ್ತು. ನೀ ಬರುವ ದಾರಿ ಕಾಯುತ್ತಿದ್ದೇನೆ ಇಪ್ಪತ್ತೈದು ವರ್ಷ ಕಾಯಿಸಿದ್ದು ಸಾಕು ಬಂದುಬಿಡೆ ಪ್ಲೀಸ್,,,,
ಇತಿ
ದಾರಿ ಕಾಯುತ್ತಿರುವ ನಿನ್ನ ರಾಮ

ಭಾವ ಭೈರಾಗಿ
ಕವಿತೆ | ಕಾಮಧೇನು

- ಎಚ್.ಎಸ್. ಬಿಳಿಗಿರಿ
ನಿನ್ನ ಕಣ್ಣಲಿ ಮಿಂಚು, ನನ್ನ ಎದೆಯಲಿ ಸಿಡಿಲು!
ನಿನ್ನ ತುಟಿಯೊಳು ರೋಜ, ನನ್ನ ಎದೆಯಲಿ ಮುಳ್ಳು! ನಿನ್ನೆದೆಯೊಳಮೃತಪೂರಿತ ಕುಂಭ-ಅದ ಕಳ್ಳು
ನನಗೆ; ಕಣ್ಣಿಗೆ ತಂಪು, ಎದೆಗೂ ಉರಿ ಭುಗಿಭುಗಿಲು! ನಿನಗಿದೆಯೆ ತುಂಬಿದೆದೆ, ನನ್ನ ಎದೆಯೋ ತೆರವು!
ನಿನ್ನ ತನುವಿನ ಏರುತಗ್ಗುಗಳ ದಾರಿಯಲಿ
ಸುತ್ತಿ ಕುಲುಕಾಡಿ ಅತ್ತಿತ್ತ ತೇಂಕಾಡುತಲಿ
ಬಿದ್ದು ನೂರಾರು ಚೂರಗಳಾಯ್ತು ಮನ-ರಥವು!
ಬರಿ ಬೂದಿಗುರಿನೆನಪು ಕೆರಳಿ ಕಾಡಿದೆಯೇನು?
ಗೊದ್ದಗಳ ಗೂಡುಗಳ ಹೀರುತ್ತಿರುವುದೂ ಕರಡಿ?
ಎల్ల ಸೋಸುತ ಕಾಮವೊಂದ ನಿಲಿಸುವ ಜರಡಿ?
ಮಗುಚಿ ಕೆಳಗಡೆ ಬೀಳುತ್ತಿದೆಯೋ ಏರೋಪ್ಲೇನು?
ಎದೆಯ ತಲೆಗೂದಲೋಳು ಪಿಚಪಿಚನೆ ಹರಿವ ಹೇನು? ಗಡಿಗೆಗೆಚ್ಚಲ ಸೋರವ ಬಿಟ್ಟಿತೋ ಕಾಮ-ಧೇನು
(‘ಕಾಮಧೇನು’ ಕವಿತೆ ಕನ್ನಡದ ಸಾನೆಟ್ ಅಥವಾ ಸುನೀತ)
‘ಸಾನೆಟ್’ ಒಂದು ಟಿಪ್ಪಣಿ
ಕವಿತೆಯ ಈ ನಿರ್ದಿಷ್ಟ ಸ್ವರೂಪವು 13 ನೇ ಶತಮಾನದಲ್ಲಿ ಇಟಲಿಯಲ್ಲಿ ಹುಟ್ಟಿಕೊಂಡಿತು. ತನ್ನ 15 ಸಾನೆಟ್, ಮತ್ತು ನಂತರದ ಮುಖ್ಯ ಥೀಮ್ ಮತ್ತು ಇತರ ಹದಿನಾಲ್ಕನೇ ಕಲ್ಪನೆ. ಈ ಕಾರಣಕ್ಕಾಗಿ, ನಾವು ಕೊನೆಯಲ್ಲಿ ಕೆಲಸ ಪ್ರಾರಂಭಿಸಿದ್ದಾರೆ.
ಹದಿನೈದನೇ ಸುನೀತ ಪ್ರಮುಖ ಮೊದಲ ಎರಡು ಪ್ಯಾರಾಗಳನ್ನು, ಮತ್ತು ಸಂಪ್ರದಾಯದ ಪ್ರಕಾರ, ಮೊದಲ ಸುನೀತ ಅಗತ್ಯವಾಗಿ ಮೊದಲ ಸಾಲಿನ ಆರಂಭಿಸಲು ಮತ್ತು ಕೊನೆಯ ಎರಡನೇ ಕೊನೆಗೊಳ್ಳಬೇಕು. ಕಡಿಮೆ ಕುತೂಹಲಕಾರಿ ಕೆಲಸವಿತ್ತು-ಪದ್ಯ ಇತರ ಭಾಗಗಳು. ಹಿಂದಿನ ಇತರ ಹದಿಮೂರು ಸಾನೆಟ್ ಕೊನೆಯ ಸಾಲು ಅಗತ್ಯವಾಗಿ ಮುಂದಿನ ಮೊದಲ ಸಾಲು ಇರಬೇಕು.
ವಿಶ್ವದ ಸಾಹಿತ್ಯ ಇತಿಹಾಸದಲ್ಲೇ ರಷ್ಯಾದ ಕವಿಗಳ ಹೆಸರುಗಳು Vyacheslava Ivanova ಎಂದು ಮತ್ತು ವಾಲೆರಿ ಬ್ರ್ಯುಸೋವ್ ನೆನಪಿಡುವ. ಅವರು ಸಂಪೂರ್ಣವಾಗಿ ಏನು ಒಂದು ಸುನೀತ, ಆದ್ದರಿಂದ ಸಾನೆಟ್ ಕಿರೀಟ ಆಸಕ್ತಿಯನ್ನು ತೋರಿಸಲು ಗೊತ್ತು. ರಶಿಯಾದಲ್ಲಿ ಬರವಣಿಗೆಯ ಈ ಫಾರ್ಮ್ 18 ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಜೀನಿಯಸ್ ವ್ಯಾಲೇರಿಯ್ ಬ್ರ್ಯುಸೋವ್ ಈ ಪ್ರಕಾರದ ಬೋಧಕರಾಗಿದ್ದಾರೆ, ಮತ್ತು ಸ್ಥಾಪಿತ ಅಡಿಪಾಯ ಪಾಲಿಸಬೇಕೆಂದು. ಸಾನೆಟ್ ಮಾಲೆಯ ಇವರ ಕೊನೆಯ ಪದ್ಯ ( “ಡೂಮ್ ಸರಣಿ”) ಸಾಲುಗಳನ್ನು ಆರಂಭವಾಗುತ್ತದೆ:
“ಹದಿನಾಲ್ಕು ಅಗತ್ಯ ಹೇಳಿ
ಜೀವಂತವಾಗಿ ನೆಚ್ಚಿನ ನೆನಪುಗಳ ಹೆಸರುಗಳು! ”
ನೀವು ಸಂಯೋಜನೆಯ ಪ್ರಕಾರಕ್ಕೆ ಸ್ವಲ್ಪ ವಿಶ್ಲೇಷಣೆ ಖರ್ಚು ಮಾಡಬೇಕಾಗುತ್ತದೆ ಹೆಚ್ಚು ಅರ್ಥವಾಗುವ ಆಗಿತ್ತು. ಸಂಪ್ರದಾಯದಂತೆ ಮೊದಲ ಸುನೀತ ಅಂತಿಮ ನುಡಿಯು ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ – ಎರಡನೇ; ಮೂರನೇ ಸುನೀತ ಹಿಂದಿನದರ ಕೊನೆಯ ಸಾಲು, ಈ ಸಂದರ್ಭದಲ್ಲಿ ಪ್ರಾರಂಭವಾಗುತ್ತದೆ – “! ಜೀವಂತವಾಗಿ ನೆಚ್ಚಿನ ನೆನಪುಗಳ ಹೆಸರುಗಳು” ಇದು ವ್ಯಾಲೇರಿಯ್ ಬ್ರ್ಯುಸೋವ್ ಈ ಪ್ರಕಾರದಲ್ಲಿ ಪರಿಪೂರ್ಣತೆ ತಲುಪಿದ ವಾದ ಮಾಡಬಹುದು. ಇಲ್ಲಿಯವರೆಗೆ, 150 ಸಾಹಿತ್ಯ ಎಣಿಕೆ ದಂಡೆಗಳು ರಷ್ಯಾದ ಕವಿಗಳು ಸುನೀತಗಳನ್ನು ಮತ್ತು ಕಾವ್ಯದ ಪ್ರಪಂಚದಲ್ಲಿ ಸುಮಾರು 600 ಇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಅವಳು

- ವಾಯ್.ಜೆ.ಮಹಿಬೂಬ
ಅವಳು ಬರೀ ಅವಳಲ್ಲ..!
ದಿನ ಬೆಳಗುವ ಬೆಳಕು-!
ಅವ ಬಯಸುವ ಬದುಕು
ಅವನಿಯೊಳಗಣ ಜನನಿ
ಭಾವದೊಳಗಿನ ಬಾಗಿನ
ಭಾನಿನಗಲದ ಭಕ್ತಿ..!
ಅವನ ಬಯಕೆಯ ಶಕ್ತಿ ..!
ಅವಳು ಬರೀ ಅವಳಲ್ಲ..!
ಬಾಳಿಗಂಟಿದ ಸಮತೆ
ಹಿತವನುಣಿಸುವ ಭಕ್ತೆ
ಮಿತವ ಬಯಸುವ ಶಾಂತೆ
ಅವನು ಆರಾದಿಸುವ ದಾತೆ
ಒಲವ ಉಳಿಸುವ ಕ್ಷಮತೆ
ಬಾಳ ದಂಡೆಯ ದೃಡತೆ..!
ಅವಳು ಬರೀ ಅವಳಲ್ಲ..!
ಕೋಪಗೊಳ್ಳುವ ಕೆಂಡ
ಎಲ್ಲಾ ತಿಳಿಯುವ ಹಂಡ
ಹಠವೂ ಮಾಡುವ ದಿಂಬ
ಕಾಡಿ ಕರೆಯುವ ಬೀಗು
ಮಾವಿನೊಳಗಿನ ಮಾಗು
ಚಂದನದ ಚೆಲುವು..!
ಅವಳು ಬರೀ ಅವಳಲ್ಲ
ಬರಹದೊಳಗಿನ ಭಾವ
ದೇವರೊಳಗಿನ ತ್ಯಾಗ
ನಿತ್ಯ ಬದುಕಿಸುವ ಆಸೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕರುಣಾಳು ಅವನು, ಅವನು ನನ್ನವನು..!

- ಸಿಂಚನ ಜಿ. ಏನ್, ಮೈಸೂರು
ಯಾರಿಟ್ಟ ಪ್ರೀತಿಯೋ, ಏನು ಇದರ ರೀತಿಯೋ ಎಂಬ ಮಾತಿನಂತೆ ಪ್ರೀತಿಯ ರೀತಿ -ನೀತಿಗಳ ತಿಳಿಯಲು ಇಡೀ ಬದುಕು ಸಾಲುವುದಿಲ್ಲ. ಆದರೂ ನನ್ನ ಮನದಲ್ಲಿ ಮಿಂಚಿದ ಪ್ರೇಮದ ಮಿಂಚೆ ಒಂದು ರೀತಿಯ ರೋಮಾಂಚನಕಾರಿ ಮೊದ ಮೊದಲಿಗೆ ” ಕ್ರಶ್ ” ಎಂದು ನಾಮಕರಣಗೊಂಡಿದ್ದು ತದ ನಂತರ ಆ ಕ್ರಶ್ ನಾ ಅಲ್ಲಿಗೆ ಬಿಡಲಾರದೆ ಮುಂದಿನ ಪೀಠಿಕೆ ಹಾಕಿ ನನ್ನ ಮನಸ್ಸು ಮುಂದೆ ಓಡುತಿತ್ತು.
ಹೂ ಮನಸ್ಸಿನಲ್ಲಿ ಪ್ರೇಮದ ಅರಮನೆಯ ಕಟ್ಟುವ ಛಲ ನನ್ನದು ಹೀಗಿರುವಾಗ ಸುಮ್ಮನೆ ಇರಲು ಮನಸ್ಸು ಬಿಡಬೇಕಲ್ಲ ಮನಸ್ಸು ನನ್ನನ್ನು ಮೋಸಗಾತಿಯಾಗಿ ಕಾಡುವುದಿಲ್ಲವೇ? ಅಷ್ಟಕ್ಕೂ ಅವನು ನನ್ನವನು ಪ್ರೀತಿ ಮಾಡಿದರು , ಪ್ರೀತಿ ಕೊಟ್ಟರು, ಪ್ರೀತಿ ಬಯಸಿದರು ಅದಕೆಲ್ಲ ಪ್ರತಿಧ್ವನಿ ಬರುತ್ತೆ ಯಾಕೆಂದರೆ ಅವನು ನನ್ನವನು.
ಕಣ್ಣು ತೆರೆದು ಅವನನ್ನು ಕಣ್ಣು ತುಂಬಿಸಿಕೊಳ್ಳುವ ಮುನ್ನವೇ ಮನದೊಳಗೆ ಮನೆ ಮಾಡಿದ ಅವನು ನನ್ನವನು, ಪ್ರೇಮ ಲೋಕವೇ ಹಾಗೆ ಕಲ್ಪನೆಯಲ್ಲಿಯೇ ಅರ್ಧ ಜೀವನ ಕಳೆದು ಬಿಡುತ್ತೆ . ಕಲ್ಪನೆಯ ಲೋಕಕ್ಕಿಂತ ನೈಜ್ಯವಾಗಿಯೇ ನನ್ನನು ಕಾಡಿಸಿ , ಪೀಡಿಸಿ ಪ್ರೀತಿ ಕೊಟ್ಟವನು ಅವನು ನನ್ನವನು, ನನ್ನೆಲ್ಲಾ ಪುಟ್ಟ ಆಸೆ ಈಡೇರಿಸುವ ಅವನು ನನಗೆ ಉತ್ತಮ ಗೆಳೆಯನಾದ.
ನನ್ನ ತುಂಟಾಟ ಸಹಿಸುವಾಗ ತಂದೆಯಾಗಿ ಸಲಹಿದ, ಅವನೆಲ್ಲ ಕಷ್ಟಗಳನ್ನು ಕೇಳುವ ನನ್ನೊಳಗೆ ಒಬ್ಬ ಅಮ್ಮ ಇರುತ್ತಿದ್ದಳು, ಅವನೆಲ್ಲ ದುಃಖಗಳಿಗೆ ಸ್ಪಂದಿಸುವಾಗ ಅವನಿಗೆ ಇಷ್ಟ ಆಗುವ ಗೆಳತಿ ನನ್ನೊಳಗೆ ಇರುತ್ತಿದ್ದಳು ಪ್ರೇಮ ಲೋಕದ ಪಾರಿವಾಳಗಳು ನಾವು , ನಿರ್ಭಯವಾಗಿದೆ ನಮ್ಮ ಲೋಕವು ಅವನು ನನ್ನವನು , ಅವನ ಹಠಕ್ಕೆ ಅವನ ಕೋಪಕ್ಕೆ ನಾನೇ ದೊಡ್ಡ ಅಭಿಮಾನಿ.
ಅವನಂತೆ ನನಗೂ ಮುನಿಸು ಕೂಡಲೇ ನನ್ನ ಮುದ್ದು ಮಗುವಾಗಿ ಬೇಡುತ್ತಿದ್ದನು . ಕಾಳಜಿ ತೋರ್ಪಡಿಸದೆ ಮುಚ್ಚಿಡುತ್ತಿದ್ದನ್ನು ಮನದಲ್ಲಿ, ಹುಡುಕಿಸುವ ಗುಂಗಿನಲ್ಲೆ ಕಾಡಿಸುತ್ತಿದ್ದನ್ನು ಅವನು ಏನೆ ಆಗಲಿ ಅವನು ನನ್ನವನು , ನನಗಾಗಿ ಬಂದವನು , ನನಗಾಗಿಯೆ ಬದುಕುವನು ಮೌನವಾಗಿಯೇ ಕಣ್ಣ ಸನ್ನೆಯಲ್ಲಿ ನನ್ನ ಮುದ್ದಾಡಿ ಮುತ್ತು ಇಡುವವನು.
ಪ್ರೇಮ ಲೋಕದ ಬಣ್ಣ ಬಣ್ಣದ ಬದುಕು ಹೇಳಿಕೊಟ್ಟವನು ನನ್ನ ಪ್ರತಿ ಪದಗಳ ಸ್ಫೂರ್ತಿದಾರನು ಅವನು ನನ್ನವನು ಗುಡ್ ಮಾರ್ನಿಂಗ್ ಸಂದೇಶದಿಂದ ಶುರುವಾಗಿ ಹುಷಾರು ಎಂಬ ಜೋಪಾನದ ತವಕದಲ್ಲಿ ನಿದ್ರೆಗೆ ಕಳುಹಿಸುತ್ತಿದ್ದನು ದಿನಕ್ಕೆರಡು ಬಾರಿ ಆದರೂ, ಕೆರಳಿಸಿ ಜಗಳ ಮಾಡುತ್ತಿದ್ದವನು ಒಂದೆರಡು ಮಾತುಗಳ ಕೆಟ್ಟದಾಗಿ ಆಡದೆ, ಮನ ನೋಯಿಸದೆ ಜೀವನವ ಸಂತೈಸುತ್ತ ನನ್ನೊಂದಿಗೆ ಹೆಜ್ಜೆ ಇಟ್ಟವನು ಅವನು ನನ್ನವನು.
ನನ್ನ ಪ್ರಪಂಚವೇ ಅವನು , ನಮ್ಮ ಲೋಕವೇ ಪುಣ್ಯದ ಪ್ರೇಮ ಲೋಕ , ವಿರಸ ಸರಸಗಳ ಸಮ್ಮಿಲನವೇ ನಮ್ಮ ನೂತನ ಶೈಲಿಯ ಪ್ರೀತಿ ಲವ್ ಯು ಎಂಬ ಪದದ ತಿದ್ದುಪಡಿ ನಮ್ಮಲಿಲ್ಲ ಈ ಪದವನ್ನು ಅರ್ಥೈಸುವ ಬಂಧನ ನಮ್ಮದು .
ಐ ವಾಂಟ್ ಯು ಎಂದು ಬೇಡುವುದಿಲ್ಲ ಬೇಕಾಗಿರುವ ಜೀವನ ಜೀವ ಇಬ್ಬರಿಗೂ ದೊರಕಿವೆ ನನ್ನ ಅದೆಷ್ಟೋ ಪತ್ರಗಳ ಮೀರಿ ಮೆರೆದ ಪದಗಳು ಇವು ಕಾರಣ ಅವನು ನನ್ನವನು.
ಬೈ ಸಿಂಪಲ್ ಸಿಂಚು ಹೂ ಮನಸಿಗರಿಗೆಲ್ಲ ಪ್ರೇಮಿಗಳ ದಿನದ ಶುಭಾಶಯಗಳು ನಿಮ್ಮ ಪ್ರೇಮ ಪಲ್ಲಕ್ಕಿಯಿಂದ ಬಿಡಿಸಿಕೊಂಡು ಪಕ್ಷಿಗಳು ಆದಷ್ಟು ಬೇಗ ಆಕಾಶದಲ್ಲಿ ಹಾರಾಡಿ ಎಂದು ಹಾರೈಸುವೆ… ಶುಭವಾಗಲಿ ಸ್ನೇಹಿತರೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್6 days ago
ಏನಿದು ? ಗಡಿಮಾರಿ..!
-
ದಿನದ ಸುದ್ದಿ7 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ರಾಜಕೀಯ5 days ago
ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
-
ದಿನದ ಸುದ್ದಿ7 days ago
ಚನ್ನಗಿರಿ | ಲಂಚ ಸ್ವೀಕರಿಸಿದ್ದ ಗ್ರಾಮ ಲೆಕ್ಕಾಧಿಕಾರಿಗೆ 2 ವರ್ಷ ಜೈಲು
-
ಬಹಿರಂಗ6 days ago
ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್’
-
ನೆಲದನಿ6 days ago
ರೈತ ಹೋರಾಟಗಾರ `ಸಹಜಾನಂದ ಸರಸ್ವತಿ’
-
ರಾಜಕೀಯ5 days ago
ದೇವರಮನೆ ಶಿವಕುಮಾರ್ ಬಿಜೆಪಿ ಸೇರ್ಪಡೆ | ನಾವು ಯಾರಿಗೂ ಆಮಿಷ ಒಡ್ಡಿಲ್ಲ : ಸಂಸದ ಜಿಎಂ ಸಿದ್ದೇಶ್ವರ್
-
ಬಹಿರಂಗ7 days ago
ಪಾಂಡವರಿಗೂ ಭಾವ, ಕೌರವರಿಗೂ ಭಾವ..!