ಭಾವ ಭೈರಾಗಿ
ಬ್ಯುಸಿ ಅನ್ನೋ ಭ್ರಮೆ ಜೀವನವನ್ನೇ ತಿಂದುಬಿಡುತ್ತೆ !

ನಾವಂತೂ ತುಂಬಾ ಬ್ಯುಸಿನಪ್ಪಾ ಯಾರಿಗೂ ಫೋನ್ ಮಾಡೋಕಾಗಲ್ಲ, ಊರಿಗೆ ಹೋಗೋಕಂತೂ ಟೈಮೇ ಇಲ್ಲ, ಮೊದಲೆಲ್ಲಾ ಗೆಳೆಯರೊಂದಿಗೆ ಗಂಟೆಗಟ್ಟಲೆ ಮಾತಾಡ್ತಿದ್ವಿ ಈಗ ಅದು ಸಾಧ್ಯವೇ ಇಲ್ಲ, ಪುಸ್ತಕ ಓದುವುದು ದೂರದ ಮಾತು, ಹವ್ಯಾಸಗಳೇನಾದ್ರೂ ಉಳಿದುಕೊಂಡಿದ್ಯಾ ಅಂತ ನೋಡಿದ್ರೆ ಹುಡುಕಿದರೂ ಒಂದೂ ಉಳಿದಿಲ್ಲ. ವಾಕ್ ಹೋಗಲ್ಲ, ವ್ಯಾಯಾಮ ಮಾಡಲ್ಲ, ಜಾತ್ರೆ ನೋಡಲ್ಲ, ಪಕ್ಕದ ಮನೆಯಲ್ಲಿ ಯಾರಾದ್ರೂ ಸತ್ತರೆ ಹೋಗಿ ಒಂದರ್ಧ ಗಂಟೆ ನೋಡಿಕೊಂಡು ಬರೋಕಾಗಲ್ಲ, ಹಳೇ ಗೆಳೆಯ ಗೆಳತಿಯರ ಮದುವೆಗೂ ಹೋಗುವಷ್ಟು ಟೈಮಿಲ್ಲ, ಮಕ್ಕಳ ಜೊತೆಯಂತೂ ಆಟವಾಡೋದು ದೂರದ ಮಾತು, ಹೀಗೆ ಏನು ಮಾಡೋಕು ಟೈಮಿಲ್ಲ. ಅಸಲಿಗೆ ಊಟ ತಿಂಡಿ ಮಾಡೋಕು ಆಗ್ತಿಲ್ಲ, ಎಷ್ಟೋ ಜನ ಅವರವರ ಹೆಂಡತಿ ಮಕ್ಕಳ ಮುಖ ನೋಡಿ ಕಣ್ಣಲ್ಲಿ ಕಣ ್ಣಟ್ಟು ಮಾತಾಡಿ ಅದೆಷ್ಟೋ ದಿನವಾಗಿದೆ. ಯಾಕಂದ್ರೆ ನಾವು ತುಂಬಾ ಬ್ಯುಸಿ.
ನನಗೆ ಒಂದು ಸಣ್ಣ ಪ್ರಶ್ನೆ ಕಾಡ್ತಿದೆ. ಹೌದು ಇದ್ಯಾವುದೂ ಮಾಡೋಕೆ ಟೈಮಿಲ್ಲ ಅಂದ್ರೆ ಇರೋ ಸಮಯದಲ್ಲಿ ನಾವು ಏನು ಮಾಡ್ತಿದ್ದೇವೆ. ಊಟ ತಿಂಡಿ ಕೆಲಸ , ಹವ್ಯಾಸ, ಯಾವುದೂ ಮಾಡ್ತಿಲ್ಲ ಆದರೂ ನಮಗೆ ಸಮಯವಿಲ್ಲ ಎಂಥ ಮಾತು ಅಲ್ವಾ. ಅಸಲಿಗೆ ನಾವು ಮಾಡ್ತಿರೋದಾದ್ರೂ ಏನು ಅಂತ ನೋಡಿದ್ರೆ ಬರೀ ಕೆಲಸ ಅದು ನಮಗೆ ಸಂಬಳ ಕೊಡಬಲ್ಲ ಒಂದು ಕೆಲಸ ಅಷ್ಟೇ. ಅದನ್ನು ಮಾಡ್ತಿರೋದೆ ಜೀವನ ನಿರ್ವಹಣೆಗೆ ಅಂತಲ್ವಾ,,, ನಮಗೆ ನಮ್ಮದೇ ಆದ ಒಂದು ಜೀವನವಿದೆ ಆ ಜೀವನವನ್ನ ಅದೆಷ್ಟು ಚೆಂದಗೆ ರೂಪಿಸಿಕೊಳ್ಳಬಹುದೋ ಅಷ್ಟು ಚೆಂದವಾಗಿ ರೂಪಿಸಿಕೊಳ್ಳಬೇಕಿದೆ. ಹೀಗಾಗಿಯೇ ಆ ಚೆಂದದ ಬದುಕಿಗೆ ಏನೆಲ್ಲಾ ಬೇಕೋ ಅದನ್ನು ಕೊಂಡುಕೊಳ್ಳಲು ನಾವು ಹಾಗೂ ನಮ್ಮವರು ಸಂತೋಷವಾಗಿರಲು ಏನೆನು ಬೇಕೋ ಅದನ್ನು ಕೊಂಡುಕೊಳ್ಳಲು ಹಣ ಬೇಕು ಆ ಹಣಕ್ಕಾಗಿ ನಾವು ಕೆಲಸ ಮಾಡ್ತಿದ್ದೇವೆ, ಆದರೆ ಮೂಲ ಉದ್ದೇಶವನ್ನೇ ಮರೆತು ಎಲ್ಲವನ್ನೂ ಬಿಟ್ಟು ಬರೀ ಕೆಲಸವನ್ನೇ ಇಪ್ಪತ್ನಾಲ್ಕು ಗಂಟೆ ಮಾಡ್ತಿದ್ರೆ ಏನು ಬಂತು ಭಾಗ್ಯ ಅಲ್ವಾ..
ಹಾಗಂತ ನಾವು ಮಾಡೋ ಕೆಲಸದ ಉದ್ದೇಶ ಕೇವಲ ಹಣಗಳಿಕೆ ಅತಲ್ಲ. ಸಾಕಷ್ಟು ಮಂದಿ ಹಣ ಇದ್ದರೂ ಪ್ಯಾಷನ್ ಗಾಗಿ ಕೆಲಸ ಮಾಡುವವರಿದ್ದಾರೆ. ಹಾಗೇ ಸಾಧಿಸುವ ಛಲಕ್ಕಾಗಿ ಏನಾದರೂ ಮಾಡುವವರಿದ್ದಾರೆ. ಅದೆಲ್ಲವೂ ಸರಿ ಆದರೆ ಅದರ ಜೊತೆಗೆ ಈ ಮೇಲೆ ಹೇಳಿದ ಅಷ್ಟೂ ವಿಚಾರಗಳೂ ಮುಖ್ಯ ಅನ್ನೋದನ್ನ ನಾವು ಮರೆತೇ ಬಿಟ್ಟಿದ್ದೇವೆ. ಅದೆಷ್ಟೋ ಜನ ಉದ್ಯಮಿಗಳಿಗೆ ಮನೆ ಯಾವುದು ಆಫೀಸು ಯಾವುದು ಎಂದೇ ಸರಿಯಾಗಿ ನೆನಪಿರುವುದಿಲ್ಲ ಮನೆಯಲ್ಲೂ ವ್ಯವಹಾರದ್ದೇ ಚಿಂತೆ, ಇನ್ನು ಆಫೀಸಿನ ತಲೆನೋವನ್ನು ಮನೆವರೆಗೂ ತಂದು ಮನೆಯವರಿಗೂ ಹಂಚುವ ಮಂದಿಗೇನೂ ಕಡಿಮೆ ಇಲ್ಲ. ಇನ್ನು ಎಲ್ಲವೂ ಸರಿಯಿದ್ದರೂ ಸುಮ್ಮನೇ ಟಿವಿ ನೋಡಿ ಟೈಂ ವೇಸ್ಟ್ ಮಾಡುವ ಮಂದಿಗೂ ಮೇಲಿನ ಎಲ್ಲಾ ವಿಚಾರಗಳೂ ಅನ್ವಯಿಸುತ್ತವೆ.
ಹೌದು ಮಾಡುವ ಕೆಲಸವನ್ನ ಅದೆಷ್ಟು ಶ್ರದ್ಧೆಯಿಂದ ಮಾಡಲು ಸಾಧ್ಯವೋ ಅಷ್ಟು ಶ್ರದ್ದೆಯಿಂದ ಅಷ್ಟು ಅಚ್ಚುಕಟ್ಟಾಗಿ ಮಾಡುವುದರಿಂದ ಏನಾದರೂ ಮಾಡಲು ಸಾಧ್ಯವಿದೆ. ತಪಸ್ಸಿನಂತೆ ಕೆಲಸ ಮಾಡದೆ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಆದರೆ ಬದುಕನ್ನು ಕಂಪಾರ್ಟ್ಮೆಂಟ್ ಆಗಿ ವಿಂಗಡಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತೆ. ನಾವು ಮಾಡುವ ಅಷ್ಟೂ ಕೆಲಸವನ್ನೂ ಅಷ್ಟೇ ಶ್ರದ್ದೆಯಿಂದ ಮಾಡಬೇಕಲ್ಲವೇ, ನಾವು ಗಾಡಿ ಓಡಿಸುವಾಗ ಶುಧ್ಧ ಡ್ರೈವರ್ ಆಗಿ ಕಾರ್ಯ ನಿರ್ವಹಿಸಬೇಕಿದೆ, ಮನೆಯಲ್ಲಿದ್ದಾಗ ಒಬ್ಬ ಯಶಸ್ವೀ ಮಗನಾಗಿ, ತಾಯಿಯೊಂದಿಗಿದ್ದಾಗ ಒಬ್ಬ ಒಳ್ಳೆಯ ಮಗನಾಗಿ, ಮಗಳೊಂದಿಗಿದ್ದಾಗ ಒಬ್ಬ ಸಕ್ಸಸ್ ಫುಲ್ ತಂದೆಯಾಗಿ, ಗೆಳೆಯರೊಂದಿಗಿದ್ದಾಗ ಗೆಳೆಯನಾಗಿ, ಆಫೀಸಿನಲ್ಲಿದ್ದಾಗ ಉತ್ತಮ ಉದ್ಯೋಗಿಯಾಗಿ ಹೀಗೆ ಪ್ರತಿ ಹಂತದಲ್ಲೂ ಅದೇ ಆಗಿ ಕಾರ್ಯ ನಿರ್ವಹಿಸಬೇಕಿದೆ ಇದೆಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದರಲ್ಲೇ ನಮ್ಮ ಶಕ್ತಿ ಅಡಗಿರುತ್ತೆ. ಆಫೀಸಿನಲ್ಲಿ ಟೆನ್ಷನ್ ಅಂತ ಮನೆಯಲ್ಲಿ ಹೆಂಡತಿ ಮೇಲೆ ಕೂಗಾಡಿದರೆ ಏನಾದರೂ ಬಗೆಹರಿಯಲು ಸಾಧ್ಯವಾ,,, ಈ ಪಾತ್ರ ನಿರ್ವಹಣೆಯಲ್ಲಿ ಪಾಸಾದವರು ಜೀವನದಲ್ಲು ಪಾಸಾಗಬಹುದು, ಇಲ್ಲಿ ವಿಫಲರಾದವರು ಜೀವನದಲ್ಲೂ ವಿಫ¯ರಾಗುವ ಅಪಾಯವಿದೆ.
ನಾವು ಹೇಳ್ತೀವಿ ನಮಗೆ ಸಮಯವಿಲ್ಲ ಅಂತ. ಆದರೆ ನಾವೆಲ್ಲರೂ ನೆನಪಿನಲ್ಲಿಡಬೇಕಾದ್ದು ಎಲ್ಲ ದೊಡ್ಡ ದೊಡ್ಡ ಸಾಧಕರಿಗೂ ಇದ್ದದ್ದು ನಮ್ಮಷ್ಟೆ ಸಮಯ. ಒಂದು ಸಣ್ಣ ಉದಾಹರಣೆ ಹೇಳಬೇಕೆಂದರೆ ನಮ್ಮೆಲ್ಲರ ಸ್ಪೂರ್ತಿ ಪೂರ್ಣ ಚಂದ್ರ ತೇಜಸ್ವಿ. ಅವರು ಎಂದಿಗೂ ಒಂದಕ್ಕೊಂದು ಬೆರೆಸಿ ಬ್ಯುಸಿ ಲೈಫ್ ಎಂದವರಲ್ಲ. ಆದರೆ ಈ ಮೇಲೆ ಹೇಳಿದ ಕಂಪಾರ್ಟ್ಮೆಂಟ್ ಮಾಡಿಕೊಳ್ಳುವುದನ್ನು ಚೆನ್ನಾಗಿ ರೂಢಿಸಿಕೊಂಡಿದ್ದರು. ಅವರು ಬರೆಯಲು ಕುಳಿತರೆಂದರೆ ಯಾರೂ ಅವರನ್ನು ಡಿಸ್ಟರ್ಬ್ ಮಾಡುತ್ತಿರಲಿಲ್ಲ. ಕಂಪ್ಯೂಟರ್ ರಿಪೇರಿ ಮಾಡುವಾಗಲೂ ಅವರಿಗೆ ಅಷ್ಟೆ ತಲ್ಲೀನತೆ. ಒಮ್ಮೆ ಮನಸು ಮಾಡಿ ಮೀನು ಹಿಡಿಯಲು ಕುಳಿತರೆಂದರೆ ಮನೆಯಲ್ಲಿ ಏನಾಯ್ತು ಯಾಕಾಯ್ತು ಎಂಬ ಚಿಂತೆ ಮಾಡುತ್ತಿರಲಿಲ್ಲ, ಯಾವುದೋ ಹಕ್ಕಿಯ ಜಾಡು ಹಿಡಿದು ಫೋಟೋ ತೆಗೆಯಲು ನಿರ್ಧರಿಸಿದರೆಂದರೆ ಇತ್ತ ಸರ್ಕಾರವೇ ಉರುಳಿಹೋಗುತ್ತಿದೆ ಎಂದರೂ ತಲೆಕೆಡಿಸಿಕೊಂಡವರಲ್ಲ. ಹೀಗೆ ಯಾವುದನ್ನು ಮಾಡಿದರು ಅಷ್ಟೇ ತಲ್ಲೀನತೆ ಅವರಿಗಿತ್ತು. ಒಮ್ಮೆ ಉದಯ ಟಿವಿಯವರು ಸಂದರ್ಶನವೊಂದಕ್ಕಾಗಿ ಕಷ್ಟಪಟ್ಟು ಒಪ್ಪಿಸಿದ್ದರು. ಶೂಟಿಂಗ್ ಗಾಗಿ ಒಂದು ಗಂಟೆ ಕಾಲಾವಕಾಶವನ್ನೂ ಪಡೆದರು. ಅದಕ್ಕೂ ಮೊದಲೆ ಅಲ್ಲಿ ಹೋಗಿ ತೇಜಸ್ವಿ ದಂಪತಿಯವರನ್ನು ಕಂಡು ಮಾತನಾಡಿಸಿ ಕೆಲಸ ಆರಂಭಿಸಿದರು. ಇವರು ಲೈಟ್ ಸೆಟ್ ಮಾಡಿಕೊಂಡು ಹಾಗೆ ಹೀಗೆ ಮಾಡುವುದರೊಳಗೆ ಇವರು ಪಡೆದಿದ್ದ ಸಮಯ ಮುಗಿದೇ ಹೋಗಿತ್ತು. ತೇಜಸ್ವಿಯವರು ತಮ್ಮಪಾಡಿಗೆ ತಾವು ಏನೂ ಹೇಳದೆ ಪಕ್ಕದ ಕೋಣೆಗೆ ಹೋಗಿ ಬರೆಯಲಾರಂಭಿಸಿದರು. ಎಲ್ಲ ಸಿದ್ಧತೆ ಮುಗಿದ ನಂತರ ಎಸ್,ಎಲ್,ಎನ್ ಸ್ವಾಮಿಯವರು ತೇಜಸ್ವಿಯವರನ್ನು ಕರೆಯಲು ಹೋದರು. ಅತ್ತಕಡೆಯಿಂದ ಬಂದ ಉತ್ತರ ಯಾರು ನೀವು?,,,,, ಅಷ್ಟೇ ಸ್ವಾಮಿಯವರು ಬೆವೆತು ಹೋಗಿದ್ದರು. ಮತ್ತೆ ಪರಿಚಯ ಹೇಳಿಕೊಂಡು ಕರೆದಾಗ ನಿಮಗೆ ಕೊಟ್ಟ ಸಮಯ ಮುಗಿದಿದೆ, ನನಗೀಗ ಬೇರೆ ಕೆಲಸವಿದೆ ಎಂದರು ಆನಂತರ ಶೂಟಿಂಗ್ ಗಾಗಿ ಗೋಗರೆಯಬೇಕಾಯ್ತು.
ಇಲ್ಲಿ ನಾವು ಗಮನಿಸಬೇಕಿರುವುದು, ತೇಜಸ್ವಿಯವರು ಬರೆಯಲು ಕುಳಿತ ನಂತರ ಈ ಗುಂಪು ಅಲ್ಲಿ ಏನು ಮಾಡುತ್ತಿದೆ ಎಂಬುದೇ ಅವರ ಗಮನಕ್ಕಿರಲಿಲ್ಲ. ಸ್ವಾಮಿಯವರನ್ನು ಸ್ವಾಭಾವಿಕವಾಗಿಯೇ ನೀವ್ಯಾರು ಎಂದು ಕೇಳಿದ್ದರು. ಅಷ್ಟರಮಟ್ಟಿಗೆ ಅವರು ಸಮಯವನ್ನು ವಿಭಾಗಿಸಿಕೊಳ್ಳುತ್ತಿದ್ದರು. ಅವರು ಸಕ್ಸಸ್ಫುಲ್ ತಂದೆ, ಒಳ್ಳೆಯ ಗಂಡ ಉತ್ತಮ ಪ್ರಜೆ , ಸಾಧಕ ಎಲ್ಲವೂ ಆಗಿದ್ದೂ ಅವರಿಗೆ ಗುದ್ದಲಿ ಹಿಡಿದು ತೋಟದಲ್ಲಿ ಕೆಲಸ ಮಾಡುವಷ್ಟು ಸಮಯವಿತ್ತು. ಪಂಚರ್ ಅಂಗಡಿಯ ಹುಡುಗನೊಂದಿಗೆ ಹರಟೆಹೊಡೆದು ಇಂಟ್ರೆಸ್ಟಿಂಗ್ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲವಿತ್ತು. ಈಗ ಯೋಚಿಸಿ ನಮಗೆ ಯಾಕೆ ಸಮಯವಿಲ್ಲ.
ಬದುಕೇ ಹಾಗೆ ಇಲ್ಲಿ ಯಾವುದು ಮುಖ್ಯ ಎಂಬ ಪ್ರಶ್ನೆಯ ಮೇಲೆ ನಾವು ಮಾಡುವ ಕೆಲಸ ನಿರ್ಧರಿತವಾಗುತ್ತದೆ. ಹೀಗೆ ಬ್ಯುಸಿಲೈಫ್ ಲೀಡ್ ಮಾಡ್ತಾ ಹೋದವರು ಯಾವತ್ತೋ ಒಂದುದಿನ ಹಿಂದೆ ತಿರುಗಿ ನೋಡಿದರೆ ಎಲ್ಲವೂ ಖಾಲಿ ಖಾಲಿ ಅನ್ನಿಸಬಹುದು, ಯಾತಕ್ಕಾಗಿ ಇದೆಲ್ಲವನ್ನೂ ಮಾಡುತ್ತೇವೆಯೋ ಅದನ್ನೇ ಕಳೆದುಕೊಂಡಿರುತ್ತೇವೆ. ಯಾವುದೋ ಕಂಪಡನಿಗಾಗಿ ಹಗಲು ರಾತ್ರಿ ದುಡಿದವನು ಕಂಪನಿಯಿಂದ ಹೊರಬಂದಾಗ ಕಂಪನಿಗೆ ಆತ ಯಾರೆಂದು ನೋಡುವಷ್ಟೂ ಸಮಯವಿರಲ್ಲ, ಶ್ರಧ್ದೆಯಿಂದ ಸರ್ಕಾರಿ ಕೆಲಸಮಾಡಿದವರು ನಿವೃತ್ತರಾದ ನಂತರ ಅವರಿಗೊಂದು ಥ್ಯಾಂಕ್ಸ್ ಹೇಳುವವರೂ ಇರುವುದಿಲ್ಲ ಹಾಗಾದರೆ ಇದೆಲ್ಲವನ್ನೂ ಯಾರಿಗಾಗಿ ಮಾಡಿದೆಎನಿಸದೇ ಇರಲಾರದು. ಕಳೆದುಕೊಂಡ ಸಮಯಕ್ಕಾಗಿ ಎಂದೋ ಪರಿತಪಿಸುವುದಕ್ಕಿಂತ ಇಂದೇ ಎಚ್ಚೆತ್ತುಕೊಂಡ್ರೆ ಒಳ್ಳೇದಲ್ವಾ, ಎಷ್ಟೋ ಬಾರಿ ನಾವು ತಲುಪುವ ಗುರಿಗಿಂತ ನಾವು ಕ್ರಮಿಸುವ ದಾರಿಯೂ ಮುಖ್ಯವಾಗುತ್ತೆ, ನಾನು ಹೇಳಬೇಕಾದುದು ಇಷ್ಟೆ ಮುಂದಿನದು ನಿಮಗೆ ಬಿಟ್ಟದ್ದು . ಇದು ನನ್ನನ್ನೂ ಸೇರಿದಂತೆ ಹಲವರ ಆತ್ಮವಿಮರ್ಶೆಯಾಗಿರಬಹುದು.
( ಲೇಖಕರು : ದರ್ಶನ್ ಆರಾಧ್ಯ-8495980857)

ಭಾವ ಭೈರಾಗಿ
ಕವಿತೆ | ಬೆಳಕು ಕತ್ತಲ ನಡುವೆ

- ಮೂಲ – ಗನ್ವರ್(ನಾರ್ವೆಯನ್ ಕವಿ), ಕನ್ನಡಕ್ಕೆ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಬೆಳಕು ನುಗ್ಗುತ್ತದೆ
ತೆರೆದ ರೂಮಿನೊಳಕ್ಕೆ
ಮೌನದ ಅಲೆಗಳಂತೆ.
ಕೆಂಪು ಕ್ಯಾಕ್ಟಸ್ ಹೂವು ಎಲ್ಲಕಡೆ ಚೆಲ್ಲಿವೆ,
ನಾಚುತ್ತ ನೋಡಿವೆ
ನುಗ್ಗುತ್ತಿರುವ ಬೆಳಕಿನತ್ತ
ಏನೋ ನಿರೀಕ್ಷಿಸುತ್ತ
ಹಸಿರು ಎಳೆಗಳ ನಡುವೆ
ಹೆಪ್ಪುಗಟ್ಟಿವೆ ಈಗ
ಆನಂದ ಪಾವಿತ್ರ್ಯ.
ಮುಂದೆ ಬರುತ್ತದೆ ರಾತ್ರಿ
ಮೆಲ್ಲಗೆ ಹಾಡಿಕೊಳ್ಳುತ್ತ
ಏನೋ ಪ್ರತೀಕ್ಷೆಯಲ್ಲಿ ಕಾದಿರುವ ಹೂವುಗಳ
ಕಣ್ಣಿಗೆ ಮುತ್ತಿಡುತ್ತ
ಕಂಪಿಸುತ್ತಿವೆ ಹೂವು
ಕಣ್ಣು ಮುಚ್ಚುತ್ತ.
ಕಿಟಕಿಯಾಚೆಗೆ ಮೇಲೆ
ನೀಲಿಯಾಳಗಳಲ್ಲಿ
ಶಾಂತವಾಗಿ
ಜಾರಿ ಸಾಗುತ್ತಿವೆ ಕಪ್ಪು ಮುಗಿಲು
ಉದ್ದ ಮೆರವಣಿಗೆಯಲ್ಲಿ
ಶವದ ಪೆಟ್ಟಿಗೆಯ ಹಿಂದೆ
ನಡೆವ ವೃದ್ಧರ ಹಾಗೆ
ಭಯವಿರದೆ, ವ್ಯಥೆಯಿರದೆ
ಸಂಧ್ಯಾಶಾಂತಿಯ ತುಂಬಿಕೊಂಡು ಒಳಗೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಕಾಮಧೇನು

- ಎಚ್.ಎಸ್. ಬಿಳಿಗಿರಿ
ನಿನ್ನ ಕಣ್ಣಲಿ ಮಿಂಚು, ನನ್ನ ಎದೆಯಲಿ ಸಿಡಿಲು!
ನಿನ್ನ ತುಟಿಯೊಳು ರೋಜ, ನನ್ನ ಎದೆಯಲಿ ಮುಳ್ಳು! ನಿನ್ನೆದೆಯೊಳಮೃತಪೂರಿತ ಕುಂಭ-ಅದ ಕಳ್ಳು
ನನಗೆ; ಕಣ್ಣಿಗೆ ತಂಪು, ಎದೆಗೂ ಉರಿ ಭುಗಿಭುಗಿಲು! ನಿನಗಿದೆಯೆ ತುಂಬಿದೆದೆ, ನನ್ನ ಎದೆಯೋ ತೆರವು!
ನಿನ್ನ ತನುವಿನ ಏರುತಗ್ಗುಗಳ ದಾರಿಯಲಿ
ಸುತ್ತಿ ಕುಲುಕಾಡಿ ಅತ್ತಿತ್ತ ತೇಂಕಾಡುತಲಿ
ಬಿದ್ದು ನೂರಾರು ಚೂರಗಳಾಯ್ತು ಮನ-ರಥವು!
ಬರಿ ಬೂದಿಗುರಿನೆನಪು ಕೆರಳಿ ಕಾಡಿದೆಯೇನು?
ಗೊದ್ದಗಳ ಗೂಡುಗಳ ಹೀರುತ್ತಿರುವುದೂ ಕರಡಿ?
ಎల్ల ಸೋಸುತ ಕಾಮವೊಂದ ನಿಲಿಸುವ ಜರಡಿ?
ಮಗುಚಿ ಕೆಳಗಡೆ ಬೀಳುತ್ತಿದೆಯೋ ಏರೋಪ್ಲೇನು?
ಎದೆಯ ತಲೆಗೂದಲೋಳು ಪಿಚಪಿಚನೆ ಹರಿವ ಹೇನು? ಗಡಿಗೆಗೆಚ್ಚಲ ಸೋರವ ಬಿಟ್ಟಿತೋ ಕಾಮ-ಧೇನು
(‘ಕಾಮಧೇನು’ ಕವಿತೆ ಕನ್ನಡದ ಸಾನೆಟ್ ಅಥವಾ ಸುನೀತ)
‘ಸಾನೆಟ್’ ಒಂದು ಟಿಪ್ಪಣಿ
ಕವಿತೆಯ ಈ ನಿರ್ದಿಷ್ಟ ಸ್ವರೂಪವು 13 ನೇ ಶತಮಾನದಲ್ಲಿ ಇಟಲಿಯಲ್ಲಿ ಹುಟ್ಟಿಕೊಂಡಿತು. ತನ್ನ 15 ಸಾನೆಟ್, ಮತ್ತು ನಂತರದ ಮುಖ್ಯ ಥೀಮ್ ಮತ್ತು ಇತರ ಹದಿನಾಲ್ಕನೇ ಕಲ್ಪನೆ. ಈ ಕಾರಣಕ್ಕಾಗಿ, ನಾವು ಕೊನೆಯಲ್ಲಿ ಕೆಲಸ ಪ್ರಾರಂಭಿಸಿದ್ದಾರೆ.
ಹದಿನೈದನೇ ಸುನೀತ ಪ್ರಮುಖ ಮೊದಲ ಎರಡು ಪ್ಯಾರಾಗಳನ್ನು, ಮತ್ತು ಸಂಪ್ರದಾಯದ ಪ್ರಕಾರ, ಮೊದಲ ಸುನೀತ ಅಗತ್ಯವಾಗಿ ಮೊದಲ ಸಾಲಿನ ಆರಂಭಿಸಲು ಮತ್ತು ಕೊನೆಯ ಎರಡನೇ ಕೊನೆಗೊಳ್ಳಬೇಕು. ಕಡಿಮೆ ಕುತೂಹಲಕಾರಿ ಕೆಲಸವಿತ್ತು-ಪದ್ಯ ಇತರ ಭಾಗಗಳು. ಹಿಂದಿನ ಇತರ ಹದಿಮೂರು ಸಾನೆಟ್ ಕೊನೆಯ ಸಾಲು ಅಗತ್ಯವಾಗಿ ಮುಂದಿನ ಮೊದಲ ಸಾಲು ಇರಬೇಕು.
ವಿಶ್ವದ ಸಾಹಿತ್ಯ ಇತಿಹಾಸದಲ್ಲೇ ರಷ್ಯಾದ ಕವಿಗಳ ಹೆಸರುಗಳು Vyacheslava Ivanova ಎಂದು ಮತ್ತು ವಾಲೆರಿ ಬ್ರ್ಯುಸೋವ್ ನೆನಪಿಡುವ. ಅವರು ಸಂಪೂರ್ಣವಾಗಿ ಏನು ಒಂದು ಸುನೀತ, ಆದ್ದರಿಂದ ಸಾನೆಟ್ ಕಿರೀಟ ಆಸಕ್ತಿಯನ್ನು ತೋರಿಸಲು ಗೊತ್ತು. ರಶಿಯಾದಲ್ಲಿ ಬರವಣಿಗೆಯ ಈ ಫಾರ್ಮ್ 18 ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಜೀನಿಯಸ್ ವ್ಯಾಲೇರಿಯ್ ಬ್ರ್ಯುಸೋವ್ ಈ ಪ್ರಕಾರದ ಬೋಧಕರಾಗಿದ್ದಾರೆ, ಮತ್ತು ಸ್ಥಾಪಿತ ಅಡಿಪಾಯ ಪಾಲಿಸಬೇಕೆಂದು. ಸಾನೆಟ್ ಮಾಲೆಯ ಇವರ ಕೊನೆಯ ಪದ್ಯ ( “ಡೂಮ್ ಸರಣಿ”) ಸಾಲುಗಳನ್ನು ಆರಂಭವಾಗುತ್ತದೆ:
“ಹದಿನಾಲ್ಕು ಅಗತ್ಯ ಹೇಳಿ
ಜೀವಂತವಾಗಿ ನೆಚ್ಚಿನ ನೆನಪುಗಳ ಹೆಸರುಗಳು! ”
ನೀವು ಸಂಯೋಜನೆಯ ಪ್ರಕಾರಕ್ಕೆ ಸ್ವಲ್ಪ ವಿಶ್ಲೇಷಣೆ ಖರ್ಚು ಮಾಡಬೇಕಾಗುತ್ತದೆ ಹೆಚ್ಚು ಅರ್ಥವಾಗುವ ಆಗಿತ್ತು. ಸಂಪ್ರದಾಯದಂತೆ ಮೊದಲ ಸುನೀತ ಅಂತಿಮ ನುಡಿಯು ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ – ಎರಡನೇ; ಮೂರನೇ ಸುನೀತ ಹಿಂದಿನದರ ಕೊನೆಯ ಸಾಲು, ಈ ಸಂದರ್ಭದಲ್ಲಿ ಪ್ರಾರಂಭವಾಗುತ್ತದೆ – “! ಜೀವಂತವಾಗಿ ನೆಚ್ಚಿನ ನೆನಪುಗಳ ಹೆಸರುಗಳು” ಇದು ವ್ಯಾಲೇರಿಯ್ ಬ್ರ್ಯುಸೋವ್ ಈ ಪ್ರಕಾರದಲ್ಲಿ ಪರಿಪೂರ್ಣತೆ ತಲುಪಿದ ವಾದ ಮಾಡಬಹುದು. ಇಲ್ಲಿಯವರೆಗೆ, 150 ಸಾಹಿತ್ಯ ಎಣಿಕೆ ದಂಡೆಗಳು ರಷ್ಯಾದ ಕವಿಗಳು ಸುನೀತಗಳನ್ನು ಮತ್ತು ಕಾವ್ಯದ ಪ್ರಪಂಚದಲ್ಲಿ ಸುಮಾರು 600 ಇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಅವಳು

- ವಾಯ್.ಜೆ.ಮಹಿಬೂಬ
ಅವಳು ಬರೀ ಅವಳಲ್ಲ..!
ದಿನ ಬೆಳಗುವ ಬೆಳಕು-!
ಅವ ಬಯಸುವ ಬದುಕು
ಅವನಿಯೊಳಗಣ ಜನನಿ
ಭಾವದೊಳಗಿನ ಬಾಗಿನ
ಭಾನಿನಗಲದ ಭಕ್ತಿ..!
ಅವನ ಬಯಕೆಯ ಶಕ್ತಿ ..!
ಅವಳು ಬರೀ ಅವಳಲ್ಲ..!
ಬಾಳಿಗಂಟಿದ ಸಮತೆ
ಹಿತವನುಣಿಸುವ ಭಕ್ತೆ
ಮಿತವ ಬಯಸುವ ಶಾಂತೆ
ಅವನು ಆರಾದಿಸುವ ದಾತೆ
ಒಲವ ಉಳಿಸುವ ಕ್ಷಮತೆ
ಬಾಳ ದಂಡೆಯ ದೃಡತೆ..!
ಅವಳು ಬರೀ ಅವಳಲ್ಲ..!
ಕೋಪಗೊಳ್ಳುವ ಕೆಂಡ
ಎಲ್ಲಾ ತಿಳಿಯುವ ಹಂಡ
ಹಠವೂ ಮಾಡುವ ದಿಂಬ
ಕಾಡಿ ಕರೆಯುವ ಬೀಗು
ಮಾವಿನೊಳಗಿನ ಮಾಗು
ಚಂದನದ ಚೆಲುವು..!
ಅವಳು ಬರೀ ಅವಳಲ್ಲ
ಬರಹದೊಳಗಿನ ಭಾವ
ದೇವರೊಳಗಿನ ತ್ಯಾಗ
ನಿತ್ಯ ಬದುಕಿಸುವ ಆಸೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಬಹಿರಂಗ4 days ago
ಗಾಳಿಪಟ ವೇಗದ ರಾಜಕುಮಾರ ‘ಬೀರ್ ಚಿಲಾರಾಯ್’..!
-
ದಿನದ ಸುದ್ದಿ5 days ago
ಕೊಟ್ಟ ಮಾತಿನಂತೆ ನಡೆದ ಡಿ ಬಾಸ್ ದರ್ಶನ್;ಕುದುರೆಯ ತಡಿ ನೀಡಿ, ಎಸ್.ಎಸ್.ಮಲ್ಲಿಕಾರ್ಜುನಗೆ ಕೃತಜ್ಞತೆ
-
ಬಹಿರಂಗ6 days ago
ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ
-
ದಿನದ ಸುದ್ದಿ7 days ago
‘ಅನುಗ್ರಹ’ ಯೋಜನೆ ರಾಜ್ಯದಲ್ಲಿ ಮರುಜಾರಿಗೊಳಿಸದಿದ್ದರೆ ವಿಧಾನಸಭೆಯಲ್ಲಿ ಹೋರಾಟ : ಸಿದ್ದರಾಮಯ್ಯ ಎಚ್ಚರಿಕೆ
-
ನಿತ್ಯ ಭವಿಷ್ಯ5 days ago
ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?ಕಂಕಣಬಲ ಕೂಡಿ ಬರಲು ಏನು ಮಾಡಬೇಕು?
-
ನಿತ್ಯ ಭವಿಷ್ಯ6 days ago
ಈ ಯೋಗ ಇದ್ದರೆ ಖಂಡಿತ ದೊಡ್ಡ ರಾಜಕಾರಣಿ, ಸಮಾಜ ಸೇವಕ, ಜಿಲ್ಲಾಧಿಕಾರಿ(IAS),IPS, ಸಾಹಿತಿಗಳು, ಗಾಯಕರು, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗುವ ಸಂಭವ
-
ದಿನದ ಸುದ್ದಿ4 days ago
24 ಕೆರೆ ತುಂಬಿಸುವ ಯೋಜನೆಗೆ ರೂ.48 ಕೋಟಿಗಳ ಅನುದಾನ ಮಂಜೂರು : ಎಂ.ಪಿ ರೇಣುಕಾಚಾರ್ಯ
-
ಕ್ರೀಡೆ6 days ago
ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಮರಳಿ ತಂಡಕ್ಕೆ..!