ಸಿನಿ ಸುದ್ದಿ
ಸ್ನೇಹ, ಪ್ರೀತಿಗಿಲ್ಲ ಅಂತರದ ಭೇದಭಾವ
ಸುದ್ದಿದಿನ ಡೆಸ್ಕ್ “ಅಂಕಲ್” ಕಾಲಿವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಮಮ್ಮುಟ್ಟಿ ನಟನೆಯ ಚಿತ್ರ. ಪ್ರಸ್ತುತ ಸಾಮಾಜಿಕ ವ್ಯವಸ್ಥೆ ಪ್ರತಿಬಿಂಬಿಸುವ ಉತ್ತಮ ನಿದರ್ಶನದ ಚಿತ್ರ. ಈ ಚಿತ್ರದಲ್ಲಿ ಒಬ್ಬ ಯುವತಿ ತನ್ನ ತಂದೆಯ ಸ್ನೇಹಿತನ ಜತೆಗಿನ ಸಂಬಂಧದ ಬಗ್ಗೆ ಹರಡುವ ಗಾಸಿಪ್ ಕುರಿತಾಗಿದೆ.
ಮನುಷ್ಯ ಜೀವನದಲ್ಲಿ ಸ್ನೇಹ, ಪ್ರೀತಿ ಎಂಬುದು ಎಲ್ಲ ಎಲ್ಲೆಗಳ ಮೀರಿ ನಿಂತಿರುವಂಥ. ಇದಕ್ಕೆ ಧರ್ಮ, ಜಾತಿ, ವಯಸ್ಸು ಎಲ್ಲವೂ ಅಗಣಿತ. ಇಂತಹ ಸಂಬಂಧವನ್ನು ತೆರೆದಿಡುವ ಪ್ರಯತ್ನ ಮಾಡುತ್ತಿರುವ ಚಿತ್ರ (ಬಿಡುಗಡೆ ಆಗಿಲ್ಲ) ಇದಾಗಿರಬಹುದೆಂಬ ಪರಿಕಲ್ಪನೆ ನಮ್ಮದು. ಇದರಲ್ಲಿ ಈ ಲೇಖನದ ಉದ್ದೇಶ ಬೇರೆಯದು.
ಈಚೆಗಷ್ಟೇ ಖಾತ್ಯ ನಟ ಮಿಲಿಂದ್ ಸೋಮನ್ ಮದುವೆಯಾಗಿದ್ದಾರೆ. ಅದು ತಮಗಿಂತ ೨೫ ಸಣ್ಣ ವಯಸ್ಸಿನ ಯುವತಿಯನ್ನ. ಇವರಿಬ್ಬರ ಸ್ನೇಹವಾಗಿದ್ದು ಕೆಲ ವರ್ಷಗಳ ಹಿಂದೆಯಷ್ಟೆ. ಪರಸ್ಪರ ಪ್ರೀತಿಸುವ ಇಬ್ಬರ ನಡುವೆ ದೈಹಿಕ, ಮಾನಸಿಕವಾಗಿ ಅಜಗಜ ಅಂತರವಿದೆ. ಆದರೆ, ಈ ಅಂತರ ಅವರಿಬ್ಬರ ಸ್ನೇಹ, ಪ್ರೀತಿಯಲ್ಲಿ ಶೂನ್ಯವಾಗಿದೆ.
27ವರ್ಷದ ಯುವತಿಯೊಂದಿಗೆ ಮದುವೆಯಾದ 54 ವರ್ಷದ ಮಿಲಿಂದ್: 54 ವರ್ಷಗಳ ಮಾಡೆಲ್ ಮಿಲಿಂದ್ ಸೋಮನ್ ತಮಗಿಂತ 27 ವರ್ಷದ ಅಸ್ಸಾಂನ ಯುವತಿ, ಗಗನಸಖಿ ಅಂಕಿತಾ ಕೊನ್ವಾರ್ ಭಾನುವಾರ ಮದುವೆಯಾಗಿದ್ದಾರೆ.
ಮಿಲಿಂದ್- ಅಂಕಿತಾದ್ದು ಫಸ್ಟ್ ಸೈಟ್ ಅಟ್ ಲವ್:
ಮಿಲಿಂದ್ ಅಂಕಿತಾ ಅವರನ್ನು ನೋಡಿದ್ದು ಚೆನ್ನೈನ ನೈಟ್ ಕ್ಲಬ್ ಒಂದರಲ್ಲಿ. ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿತ್ತು. ಕೂಡಲೇ ಮಿಲಿಂದ್ ತಮ್ಮ ಮೊಬೈಲ್ ನಂಬರ್ ನ್ನು ಅಂಕಿತಾ ಅವರೊಂದಿಗೆ ಶೇರ್ ಮೊಡಿಕೊಂಡಿದ್ದರು. ಚಾಟಿಂಗ್, ಡೇಟಿಂಗ್ ಅಂಥ ಅನೇಕ ವರ್ಷಗಳ ಮುಂದುವರಿತ್ತು. ಇದು ಏಪ್ರಿಲ್ 22ರಂದು ವೈವಾಹಿಕ ಸಂಬಂಧದೊಂದಿಗೆ ಗಟ್ಟಿಕೊಂಡಿತು.
ಯಾರೀ ಅಂಕಿತಾ ಕೋನ್ವಾರ್: ಅಸ್ಸಾಂ ನ ಗುವಾಹತಿ ನಗರದವರಾದ ಅಂಕಿತಾ ಕೋನ್ವಾರ್ ಅವರ ಮೊದಲ ಹೆಸರು ಸುನ್ಕುಸ್ಮಿತಾ. ಇವರ ತಂದೆ ನಿರಂಜನ ಕೋನ್ವಾರ್. ತಾಯಿ ನಾಗೇನ್ ಕೋನ್ವಾರ್. ಜಾರ್ಣ ಕೋನ್ವಾರ್ ಬರುಹ.
2013ರಲ್ಲಿ ಏರ್ ಏಷ್ಯಾ ನಾಗರಿಕ ವಿಮಾನಯಾನ ಕಂಪನಿಯಲ್ಲಿ ಕ್ಯಾಬಿನ್ ಕ್ರೂ ಎಕ್ಸಿಕ್ಯುಟಿವ್ ಆಗಿ ವೃತ್ತಿ ಆರಂಭಿಸಿದ ಅಂಕಿತಾ, ಅಸ್ಸಾಮಿ, ಹಿಂದಿ, ಇಂಗ್ಲಿಷ್, ಫ್ರೆಂಚ್ ಭಾಷೆಗಳನ್ನು ಬಲ್ಲವರು.
2015ರ ನವೆಂಬರ್ನಲ್ಲಿ 10k ಮ್ಯಾರಥಾನ್ ನ್ನು ಮಿಲಿಂದ್ ಜತೆ ಓಡಿದ್ದಾರೆ. ಪ್ರಯಾಣವನ್ನು ಇಷ್ಟಪಡುವ ಕೋನ್ವಾರ್, 2018 ಫೆಬ್ರವರಿಯಲ್ಲಿ ಸೀನಿಯರ್ ಫ್ಲೈಟ್ ಅಟೆಂಡೆಂಟ್ ಹುದ್ದೆಗೆ ರಾಜೀನಾಮೆ ಕೊಟ್ಟರು.
ಮಿಲಿಂದ್ ಹುಟ್ಟಿದ್ದು ಎಲ್ಲಿ ಗೊತ್ತಾ? ಸೋಮನ್ ಹುಟ್ಟಿದ್ದು ಸ್ಕಾಟ್ಲೆಂಡಿನ ಗ್ಲ್ಯಾಸ್ಗೋದಲ್ಲಿ. ನಂತರ ಅವರ ಪಾಲಕರು ಇಂಗ್ಲೆಂಡ್, ನಂತರ ಭಾರತಕ್ಕೆ ಮರಳಿದರು. 1973ರಲ್ಲಿ ಮುಂಬೈನ ದಾದರ್ ನಲ್ಲಿ ನೆಲೆಯೂರಿದರು. ಎಂಎಚ್ ಸಾಬೂ ಸಿದ್ದಿಕ್ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೋಮಾ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಪಡೆದಿದ್ದಾರೆ.
ಮಿಲಿಂದ್ ವೃತ್ತಿ ಯಾವುದು ಗೊತ್ತಾ? ಡಿಪ್ಲೋಮಾ ಇಂಜಿನಿಯರಿಂಗ್ ಪಡೆದಿದ್ದರೂ ಆ ವೃತ್ತಿ ಆಯ್ಕೆ ಮಾಡಿಕೊಳ್ಳದೇ ಮಾಡೆಲ್ ಆಗಿ, ಮ್ಯಾರಥಾನ್ ಓಟಗಾರ ಆಗಿ ಪ್ರಸಿದ್ಧಿ ಪಡೆದಿದ್ದಾರೆ. 62000 ಮಹಿಳೆಯರು ಸಂಘದ ಸದಸ್ಯರಿರುವ ಮ್ಯಾರಥಾನ್ ಸಂಘದಲ್ಲಿ ಮಿಲಿಂದ್ ಸಕ್ರಿಯರಾಗಿದ್ದಾರೆ.
ಮಿಲಿಂದ್ ಅವರು ಐರನ್ ಮ್ಯಾನ್ ಮತ್ತು ಅಲ್ಟ್ರಾಮ್ಯಾನ್ ನಂತಹ ಜಗತ್ತಿನ ಪ್ರತಿಷ್ಠಿತ ಮ್ಯಾರಥಾನ್ ಮತ್ತು ಟ್ರಯಥ್ಲಾನ್ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಮಧು ಸಪ್ರೆ ಅವರ ಜತೆಗಿತ್ತು ಲಿವಿಂಗ್ ಟುಗೆದರ್ ಸಂಬಂಧ: ಮಿಲಿಂದ್ ಅವರು ಮೊದಲು ಮಧು ಸಪ್ರೆ ಅವರ ಜತೆಗೆ 1995ರವರೆಗೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದರು. 1992ರ ಮಿಸ್ ಯೂನಿವರ್ಸ್ ಸ್ಪರ್ಧೆಯ ಎರಡನೇ ರನ್ನರ್-ಅಪ್ ಆಗಿ ಕಿರೀಟ ಮುಡಿಗೇರಿಸಿಕೊಂಡವರು.
ಜಾಹಿರಾತಿಗಾಗಿ ಬೆತ್ತಲಾಗಿದ್ದರು: ಮಿಲಿಂದ್ ಸೋಮನ್ ಕೆಲ ವರ್ಷಗಳ ಹಿಂದೆ ರೂಪದರ್ಶಿ, ನಟಿ ಮಧು ಸಪ್ರಯೊಂದಿಗೆ ಬೆತ್ತಲೆಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಇವರ ವಿರುದ್ಧ ಮುಂಬೈ ಪೊಲೀಸರು ದೂರು ದಾಖಲಿಸಿದ್ದರು.
ಮಿಲಿಂದ್ ಅವರ ಮೊದಲ ಪತ್ನಿ ಯಾರು?: ಮಿಲಿಂದ್ ಸೋಮನ್ ಮತ್ತು ಅಂಕಿತಾ ಕೋನ್ವಾರ್ ಎರಡನೇ ಪತ್ನಿ. ಮಿಲಿಂದ್ ಫ್ರೆಂಚ್ ನಟಿ ಮೈಲೆನೆ ಜಂಪನಾಯ್ ಅವರೊಂದಿಗೆ ಮದುವೆ ಆಗಿದ್ದರು. ವ್ಯಾಲಿ ಆಫ್ ಫ್ಲವರ್ ಚಿತ್ರದಲ್ಲಿ ನಟಿಸಿದ್ದರು. 2008ರಲ್ಲಿ ಮಿಲಿಂದ್ ಮತ್ತು ಮೈಲೆನೆ ಬೇರೆಯಾದರು. 2009ರಲ್ಲಿ ದಂಪತಿ ವಿಚ್ಛೇದನ ಪಡೆದರು. ಇದಾದ 9 ವರ್ಷಗಳ ನಂತರ ಮದುವೆಯಾಗಿದ್ದಾರೆ.


ಸಿನಿ ಸುದ್ದಿ
ರಾಬರ್ಟ್ ನ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ : ಬೇಬಿ ಡಾನ್ಸ್ ವಿಡಿಯೋ ನೀವೂ ನೋಡಿ..!

ಸುದ್ದಿದಿನ ಡೆಸ್ಕ್ : ಕನ್ನಡದ ಬಹುನಿರೀಕ್ಷಿತ ಸಿನೆಮಾ ಡಿ ಬಾಸ್ ತೂಗುದೀಪ ದರ್ಶನ್ ಅಭಿನಯದ ರಾಬರ್ಟ್. ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ತೆಲುಗು ಅವತರಣಿಕೆಯ ಪ್ರಚಾರಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಂದ್ರಪ್ರದೇಶದದಲ್ಲೂ ರಾಬರ್ಟ್ ತೆರೆಗೆ ಸಿದ್ಧಾವಾಗಿದ್ದಾನೆ.
ತರುಣ್ ಸುಧೀರ್ ಈ ಸಿನೆಮಾದ ನಿರ್ದೇಶನ ಮಾಡಿದ್ದು, ಉಮಾಪತಿ ಅವರು ಹಣ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಸಿನೆಮಾದ ಮೊದಲ ಹಾಡು ಇದೀಗ ಯ್ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಡಿ ಬಾಸ್ ಗೆ ನಾಯಕಿಯಾಗಿ ಆಶಾ ಭಟ್ ಜತೆಯಾಗಿದ್ದು, ಚಿಕ್ಕಣ್ಣ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ಧಾರೆ.
Here comes the 1st video track #BabyDanceFloorReady from our movie #Roberrt. Watch and share your thoughts 🙂https://t.co/mNX5RLUGa5@UmapathyFilms @TharunSudhir @StarAshaBhat @aanandaaudio pic.twitter.com/7LS2r0pePy
— Darshan Thoogudeepa (@dasadarshan) February 28, 2021
ನಮ್ಮ #Roberrt ಚಿತ್ರದ ಮೊದಲ ವಿಡಿಯೋ ಸಾಂಗ್ #BabyDanceFloorReady ಈಗ ನಿಮ್ಮ ಮುಂದೆ. ನೋಡಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿhttps://t.co/8Zjsf8DN72@UmapathyFilms @TharunSudhir @StarAshaBhat @aanandaaudio pic.twitter.com/IaDVLdk4yh
— Darshan Thoogudeepa (@dasadarshan) February 28, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ
ಇಂದು ಕನ್ನಡ ಬಿಗ್ ಬಾಸ್ ಸೀಸನ್ 8 ಗ್ರ್ಯಾಂಡ್ ಓಪನಿಂಗ್ | ಒಂಟಿ ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ..?

ಸುದ್ದಿದಿನ,ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 8 ಕ್ಕೆ ಇಂದು ಗ್ರ್ಯಾಂಡ್ ಒಪನಿಂಗ್ ನಡೆಯಲಿದ್ದು, ಬಿಗ್ ಬಾಸ್ ಮನೆಗೆ ಬರುವ ಸ್ಪರ್ಧಿಗಳು ಫೈನಲ್ ಆಗಿದ್ದಾರೆ.
ಸ್ಯಾಂಡಲ್ವುಡ್ ನ ಸ್ಟಾರ್ ನಟ-ನಟಿಯರು ಹಾಗೂ ಇತರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಹಲವರ ಹೆಸರು ಕೇಳಿಬರುತ್ತಿತ್ತು. ಆದರೆ ಇಂದು ಕೇಳಿ ಬಂದಿರುವ ಹೆಸರುಗಳು ಬಿಗ್ ಬಾಸ್ ಮನೆಯಲ್ಲಿ ಆಟ ಆಡಲು ಬರುತ್ತಿದ್ದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಬಿಗ್ ಬಾಸ್ ಸ್ಪರ್ಧಿಗಳು
ನಟಿ ನಿಧಿ ಸುಬ್ಬಯ್ಯ, ಹಿರಿಯ ನಟ ಶಂಕರ್ ಅಶ್ವಥ್, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ, ಬ್ರಹ್ಮಗಂಟು ಧಾರವಾಹಿಯ ನಟಿ ಗೀತಾ ಭಾರತಿ ಭಟ್, ಹಾಸ್ಯ ಕಲಾವಿದ ಮಂಜುಪಾವಗಡ, ಪಟ್ಟಗೌರಿ ಖ್ಯಾತಿಯ ಚಂದ್ರಕಲಾ ಮೋಹನ್, ಹಾಡು ಕರ್ನಾಟಕ ಫೇಮ್ ವಿಶ್ವನಾಥ್ ಹಾವೇರಿ, ನಾಯಕ ಸುನಿಲ್ ರಾವ್ ಮತ್ತು ಓರ್ವ ಬೈಕ್ ರೈಡರ್ ಸೇರಿದಂತೆ ಹಲವು ಕಿರುತೆರೆಯ ನಟನಟಿಯರು ಹಾಗೂ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ದೊಡ್ಡ ಬಿಗ್ ಬಾಸ್ ಮನೆಯಲ್ಲಿ ಲಾಕ್ ಆಗಲಿದ್ದಾರೆ.
ಇಂದು ಸಂಜೆ 6ಕ್ಕೆ
ಬಿಗ್ ಬಾಸ್ ಸೀಸನ್ 8 | ಪ್ರತಿ ರಾತ್ರಿ 9.30#BBK8 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/3B8kujM5HO
— Colors Kannada (@ColorsKannada) February 28, 2021
ಹಾಡುವ ಕೋಗಿಲೆಗಳು, ನಟಿಸುವ ಗೊಂಬೆಗಳು, ನಕ್ಕುನಗಿಸುವ ಹಾಸ್ಯ ಕಲಾವಿದರು, ಹಿರಿಯ ಕಲಾವಿದರು ಹೀಗೆ ಹಲವರು ಬಿಗ್ ಬಾಸ್ ಮನೆಗೆ ಎಂಟ್ರಿಕೊಟಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ
100 ದಿನಗಳ ಆಟ ಇಂದಿನಿಂದ ಪ್ರಾರಂಭಾವಾಗಲಿದೆ.ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಬಿಗ್ಬಾಸ್ ಕಾರ್ಯಕ್ರಮದ ಗ್ರ್ಯಾಂಡ್ ಒಪನಿಂಗ್ ನಡೆಯಲಿದ್ದು, ಕಂಟೆಸ್ಟೆಂಟ್ಗಳು ವೇದಿಕೆಗೆ ಏರುವುದರ ಜೊತೆಗೆ ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಇರುತ್ತವೆ.
#BigBoss Season 8,, from Tmrw. pic.twitter.com/TVW7KSFONR
— Kichcha Sudeepa (@KicchaSudeep) February 26, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ
ಪೊಗರು ವಿವಾದ ಅಂತ್ಯ | ಸೀನ್ ಕಟ್ ; ಶುಭಹಾರೈಸಿದ ಬ್ರಾಹ್ಮಣ ಸಮುದಾಯ

ಸುದ್ದಿದಿನ, ಬೆಂಗಳೂರು : ಕೊನೆಗೂ ‘ಪೊಗರು’ ಸಿನಿಮಾದ ಕಾಂಟ್ರವರ್ಸಿ ಸುಖಾಂತ್ಯ ಕಂಡಿದ್ದು, ಸಿನಿಮಾ ನೋಡಿ ಬ್ರಾಹ್ಮಣ ಸಭಾದ ಸದಸ್ಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ನಂದ ಕಿಶೋರ್ ನಿರ್ದೇಶಸಿ, ಧ್ರುವ ಸರ್ಜಾ ನಟಿಸಿರುವ ‘ಪೊಗರು’ ಸಿನಿಮಾ ಕಳೆದ ಶುಕ್ರವಾರ ತೆರೆ ಕಂಡಿತ್ತು. ಬ್ರಾಹ್ಮಣರನ್ನು ಅವಹೇಳನ ಮಾಡುವ ಸಂಭಾಷಣೆ ಮತ್ತು ದೃಶ್ಯಗಳನ್ನ ಸಿನಿಮಾದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ ಎಂದು ಕ ಬ್ರಾಹ್ಮಣ ಸಮುದಾಯು ‘ಪೊಗರು’ ಸಿನಿಮಾ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಮಂಗಳವಾರ ಬ್ರಾಹ್ಮಣ ಸಭಾದ ಸದಸ್ಯರು ಫಿಲ್ಮ್ ಚೇಂಬರ್ ಗೆ ಹೋಗಿ ‘ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಿರುವ ದೃಶ್ಯಗಳನ್ನ ತೆಗೆಯುವಂತೆ ಆಗ್ರಹಿಸಿದ್ದರು. ಸಿನಿಮಾದ ನಿರ್ಮಾಪಕ ಬಿ.ಕೆ ಗಂಗಾಧರ್ ಹಾಗೂ ನಿರ್ದೇಶಕ ನಂದ ಕಿಶೋರ್ ಅವರು ಬ್ರಾಹ್ಮಣ ಸಮುದಾಯದ ಜೊತೆ ಚರ್ಚಿಸಿ ಅವಹೇಳನದಂತೆ ಕಾಣುವ ದೃಶ್ಯಗಳನ್ನು ಎಡಿಟ್ ಮಾಡುವಂತೆ ತಿಳಿಸಿದ್ದರು.
ಬುಧವಾರ ಬ್ರಾಹ್ಮಣ ಸಮುದಾಯದ ಸದಸ್ಯರು ಎಡಿಟ್ ಮಾಡಿದ ‘ಪೊಗರು’ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಾಹ್ಮಣ ಸಮುದಾಯದ ಸದಸ್ಯರು ಹೇಳಿದ ದೃಶ್ಯಗಳಿಗೆ ‘ಪೊಗರು’ ಚಿತ್ರತಂಡ ಕತ್ತರಿ ಹಾಕಿದ್ದು, ಬ್ರಾಹ್ಮಣ ಸಮುದಾಯದ ಸದಸ್ಯರು ‘ಪೊಗರು’ ತಂಡಕ್ಕೆ ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್6 days ago
ಏನಿದು ? ಗಡಿಮಾರಿ..!
-
ದಿನದ ಸುದ್ದಿ7 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ರಾಜಕೀಯ5 days ago
ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
-
ಬಹಿರಂಗ6 days ago
ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್’
-
ನೆಲದನಿ6 days ago
ರೈತ ಹೋರಾಟಗಾರ `ಸಹಜಾನಂದ ಸರಸ್ವತಿ’
-
ರಾಜಕೀಯ5 days ago
ದೇವರಮನೆ ಶಿವಕುಮಾರ್ ಬಿಜೆಪಿ ಸೇರ್ಪಡೆ | ನಾವು ಯಾರಿಗೂ ಆಮಿಷ ಒಡ್ಡಿಲ್ಲ : ಸಂಸದ ಜಿಎಂ ಸಿದ್ದೇಶ್ವರ್
-
ರಾಜಕೀಯ6 days ago
ಗುಜರಾತ್ | ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
-
ಬಹಿರಂಗ7 days ago
ಪಾಂಡವರಿಗೂ ಭಾವ, ಕೌರವರಿಗೂ ಭಾವ..!