ಸಿನಿ ಸುದ್ದಿ
#MeToo | ಎಲ್ಲವನ್ನೂ ಒಪ್ಪಿಕೊಂಡೇ ಆಕ್ಟ್ ಮಾಡಿದ್ದಾರೆ ಸಂಜನಾ : ನಿರ್ದೇಶಕ ರವಿ ಶ್ರೀವತ್ಸ ಸ್ಪಷ್ಟನೆ
ಸುದ್ದಿದಿನ, ಬೆಂಗಳೂರು : ನಟಿ ಸಂಜನಾ #ಮೀಟೂ ಆರೋಪವನ್ನು ನಿರ್ದೇಶಕ ರವಿ ಶ್ರೀವತ್ಸ ಮೇಲೆ ಹೊರಿಸಿದ ನಂತರ ಇಂದು ಸುದ್ದಿ ಗೋಷ್ಟಿ ಕರೆದು ಮಾತನಾಡಿದ ಅವರು, ಗಂಡ ಹೆಂಡತಿ ಚಿತ್ರಕ್ಕೆ ಮೊದಲು ಆಯ್ಕೆ ಆಗಿದ್ದು ರಕ್ಷಿತಾ. ಆದರೆ ರಕ್ಷಿತಾ ರಿಜೆಕ್ಟ್ ಮಾಡಿದ್ರು. ಆಗ ಹೊಸಬರನ್ನ ಆಯ್ಕೆ ಮಾಡಿಕೊಳ್ಳೋಣಾ ಅಂತ ಸಂಜಾನರಾನ್ನ ಆಯ್ಕೆ ಮಾಡಿಕೊಂಡ್ವಿ.ಆ ಕ್ಯರೆಕ್ಟ್ ಮಾಡೋದಕ್ಕೆ ಮಡಿವಂತಿಕೆ ಹೆಣ್ಣುಮಕ್ಕಳೂ ಸೂಟ್ ಆಗ್ತಿರಲ್ಲಿ.
ಹೀಗಾಗಿ ಸಂಜನಾ ಗೆ ಕಥೆ ಹೇಳಿದ್ವಿ.ಅವರು ಈ ಕಥೆಗೆ ಒಪ್ಪಿಕೊಂಡೇ ಮಾಡಿದ್ರು. ಸಂಜನಾ ಈಗ ಹೇಳ್ತಾರೆ ನನಗೆ ಆಗ 16 ವರ್ಷ ಅಂತಾ ಹೇಳ್ತಾರೆ.ಆದರೆ ಅವರ ನಿಜವಾದ ವರ್ಷ ಆ ಟೈಂ ನಲ್ಲಿ ಎಷ್ಟಿತ್ತು ಅಂತ ಅವರಿಗೆ ಗೊತ್ತು. ವಿಕಿಪೀಡಿಯಾದಲ್ಲಿ ಎಲ್ಲವೂ ಇದೆ. ಗಂಡ ಹೆಂಡತಿ ಸಂಜನಾರ ಮೊದಲ ಸಿನಿಮಾ ಅಲ್ಲ. 5 ಸಿನಿಮಾ ಇದು. ಆದರು ಗಂಡ ಹೆಂಡತಿ ಮೊದಲ ಸಿನಿಮಾ ಅಂತಾರೆ. ನನ್ನ ತಂದೆ ಸಿನಿಮಾ ನೋಡಿ ನೊಂದುಕೊಂಡ್ರು ಅಂತ ಸಂಜನಾ ಹೇಳ್ತಾರೆ. ಆದರೆ ಸಂಜನಾ ಸಿನಿಮಾ ಶುರುವಾದಾಗಿನಿಂದ ಇಲ್ಲಿ ವರೆಗು ತಂದೆಯನ್ನು ನಮಗೆ ಪರಿಚಯಿಸೇ ಇಲ್ಲ ಎಂದು ಹೇಳಿದರು.
ನಿರ್ದೇಶಕರ ಬೆಂಬಲ ಕೋರಿರೋ ವಾಯ್ಸ್ ನೋಟ್ ಮತ್ತು ಗಂಡ ಹೆಂಡತಿ ಚಿತ್ರದ ಡೈರೆಕ್ಟರ್ ರವಿ ಶ್ರೀವತ್ಸ ಮನದಾಳ ಮಾತು
ಸಾಕ್ಷಿ ಸಮೇತ ಸಂಜನಾ ಮಾಡಿರೋ ಆರೋಪ ಸುಳ್ಳು ಅಂತ ಸಾಬೀತು ಪಡಿಸಲಿದ್ದಾರೆ ರವಿ ಶ್ರೀವತ್ಸ್ ಇಂದು ನಡೆಯೋ ಸಭೆ ಬಗ್ಗೆ ನಿನ್ನೆ ರವಿ ಶ್ರೀವತ್ಸ್ ವಾಯ್ಸ್ ನೋಟ್ ಕಳಿಸಿರೋದು ನಂಬಿಕೆ ಇಟ್ಟು ಸಭೆಗೆ ಬನ್ನಿ. ನಾನು ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೆ ಎಂದು ನಿರ್ದೇಶಕರಲ್ಲಿ ರವಿ ಶ್ರೀವತ್ಸ ಬೆಂಬಲಿಸುವಂತೆ ಮನವಿಸಂಜನಾ ಮೀ ಟೂ ಆರೋಪ ನಿರ್ದೇಶಕ ಸಂಘದ ಪತ್ರಿಕಾಗೋಷ್ಠಿ ಆರಂಭವಾದಾಗ
ರವಿ ಶ್ರೀವತ್ಸ, ಗಂಡ ಹೆಂಡತಿ ಚಿತ್ರದ ಸಹ ನಿರ್ದೇಶಕ ಮುಸಂಜೆ ಮಹೇಶ್ ಹಾಜರಾಜಿದ್ದರು. ಈ ಕುರಿತು ಮೊನ್ನೆನೆ ಸಂಘದ ಸದಸ್ಯರ ಜತೆ ಚರ್ಚೆ ಆಗಿದೆ.ಸಂಜನಾ ವಿರುದ್ದ ಏನ ಕ್ರಮ ತೆಗೆದು ಕೊಳ್ತಾರೆಂಬ ಕುತೂಹಲ
ಈ ಕುರಿತು ಮೊನ್ನೆನೆ ಸಂಘದ ಸದಸ್ಯರ ಜತೆ ಚರ್ಚೆ ಆಗಿದೆ. ಯಾವ ದಾಖಲೆ ಮಾಧ್ಯಮಕ್ಕೆ ಕೊಡ್ತಾರೆ ರವಿ ಶ್ರೀವತ್ಸ.
ಸಂಜನಾ ಆರೋಪಕ್ಕೆ ರವಿ ಶ್ರೀವತ್ಸ ಏನ್ ಹೇಳ್ತಾರೆ ? ರವಿ ಶ್ರೀವತ್ಸ ಬಳಿ ಏನಿದೆ ದಾಖಲೆ ?
ಬೆತ್ತಲಾದ,ಚರ್ಮವನ್ನ ಎಷ್ಟುದಿನ ಅಂತ ಜನ ನೋಡ್ತಾರೆ ಅಂದಿದ್ದರು. ನವ ನಟಿಯರು ಚಿತ್ರರಂಗದಲ್ಲಿ ನೆಲೆ ಕಾಣಬೇಕು ಅಂದರೆ ವಸ್ತ್ರತ್ಯಾಗ ಮಾಡಲೇಬೇಕು ಅಂದಿದ್ದರು. ಸಂಜನಾ ಈ ಹೇಳಿಕೆಯನ್ನ ಪ್ರಕಟಿಸಿದ್ದ ಪತ್ರಿಕೆಯನ್ನ ಆಧಾರವಾಗಿ ಇಟ್ಟು ಕೊಂಡು ಮಾತ್ ಆಡಿದ ಗಂಡ ಹೆಂಡತಿ ಸಹ ನಿರ್ದೇಶಕ ಮಹೇಶ ವಿಜಯನಗರದ ನಿರ್ದೇಶಕರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.
ಬೀದಿಗೆ ಬಂದ ಗಂಡ ಹೆಂಡತಿ ಜಗಳ
ಸಂಜನಾ ಆರೋಪಕ್ಕೆ ರವಿ ಶ್ರೀವತ್ಸ ಉತ್ತರ
ರವಿ ಶ್ರೀ ವತ್ಸ ಗಂಡ ಹೆಂಡತಿ ಸಿನಿಮಾ ನಿರ್ದೆಶಕ
ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ವಿಜಯನಗರದಲ್ಲಿ ಸುದ್ದಿಗೋಷ್ಠೀ- # mee too ಅಭಿಯಾನಕ್ಕೆ ನಿರ್ದೇಶಕರ ಸಂಘ ಬೆಂಬಲ ಸೂಚಿಸಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ 12 ವರ್ಷಗಳ ನಂತರ ಆರೋಪ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ಕ್ರೀಡೆ
ಲೋಕಸಭಾ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ : ಇತರೆ ಪ್ರಮುಖ ಸುದ್ದಿಗಳು
ಮದ್ಯಾಹ್ನದ ಸುದ್ದಿಮುಖ್ಯಾಂಶಗಳು
- ಮಹಿಳೆಯರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ನಾರಿಶಕ್ತಿಯ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
- ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನವದೆಹಲಿಯಲ್ಲಿ ’ಸಶಕ್ತ ನಾರಿ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಅವರು ’ನಮೋ ಡ್ರೋನ್ ದೀದಿ’ ಯೋಜನೆಯಲ್ಲಿ ಏರ್ಪಡಿಸಿರುವ ಕೃಷಿಗೆ ಸಂಬಂಧಿಸಿದ ಡ್ರೋನ್ ಪ್ರದರ್ಶನ ವೀಕ್ಷಿಸಿದರು.
- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಗುರುಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ರಾಜ್ಯಗಳಿಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
- ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿಂದು ಸಂಜೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯದ 18 ರಿಂದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕರು, ಕಾರ್ಮಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ಇಂದಿನಿಂದ ಆರಂಭಿಸಲಾಗಿದೆ.
- ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿರುವ ಡಾಲ್ಬಿ ಥಿಯೇಟರ್ನಲ್ಲಿ ಹಾಲಿವುಡ್ನ ಪ್ರಮುಖ ತಾರೆಯರು 96 ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ’ಯೊರ್ಗೊಸ್ ಲ್ಯಾಂಥಿಮೋಸ್ ಪೂರ್ ಥಿಂಗ್ಸ್’ ಚಿತ್ರದ ’ಬೆಲ್ಲಾ ಬ್ಯಾಕ್ಸ್ಟರ್’ ಪಾತ್ರದ ಅಭಿನಯಕ್ಕಾಗಿ ’ಎಮ್ಮಾ ಸ್ಟೋನ್’ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
- ಐಸಿಸಿ ವಿಶ್ವ ಟೆಸ್ಟ್ ರ್ಯಾಂಕಿಂಗ್ನಲ್ಲಿ ಭಾರತ ಅಗ್ರಸ್ಥಾನಕ್ಕೆ ಮರಳಿದೆ. ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 3ನೇ ಸ್ಥಾನದಲ್ಲಿದೆ. ಇದರೊಂದಿಗೆ ಕ್ರಿಕೆಟ್ನ ಎಲ್ಲಾ ಮೂರೂ ಮಾದರಿಯಲ್ಲೂ ಭಾರತ ತಂಡ ನಂ. 1ಸ್ಥಾನ ಪಡೆದಿದೆ.
- ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿಂದು ಗುಜರಾತ್ ಜಯಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರದ ಟಿಕೆಟ್ ಮೇಲೆ ಶೆ.20ರಷ್ಟು ಕಡಿತ
ಸುದ್ದಿದಿನ ಡೆಸ್ಕ್ : ರಕ್ಷಿತ್ ಶೆಟ್ಟಿ ಮತ್ತು ರುಕ್ಷಿಣಿ ವಸಂತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ರಮೇಶ್ ಅರವಿಂದ್ ಮುಂತಾದವರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ ಪ್ರೇಕ್ಷಕ ದರ್ಶನ್
ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್ ಮತ್ತು ಸುಮಲತಾ ಅಂಬರೀಷ್ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್, ಅಭಿ ಬೆನ್ನಿಗೆ ‘ನಿಮ್ಮಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.
“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243