ಭಾವ ಭೈರಾಗಿ
ಆ ಒಂಟಿತನವನ್ನ ‘ದಿವ್ಯ ಏಕಾಂತ’ ಅಂದುಕೊಂಡುಬಿಡಿ

ಆ ಪರಿಸ್ಥಿತಿಯನ್ನ ಒಂದಲ್ಲಾ ಒಂದು ಕಾಲಘಟದಲ್ಲಿ ಎಲ್ಲರೂ ಅನುಭವಿಸಿರ್ತಾರೆ. ಏನುಬೇಕಾದ್ರೂ ಅನುಭವಿಸಬಹುದು ಆದರೆ ಈ ಒಂಟಿತನ ಇದೆಯಲ್ಲ ಅದರಷ್ಟು ಭಯಾನಕ ಹಾಗೂ ಅಪಾಯಕಾರಿ ಮತ್ತೊಂದಿಲ್ಲ. ಯಾಕಂದ್ರೆ ಈ ಒಂಟಿತನ ಬಹಳಷ್ಟು ಜನರ ಜೀವನವನ್ನ ಉದ್ದಾರ ಮಾಡಿದ್ರೆ ಅಷ್ಟೇ ಪ್ರಮಾಣದಲ್ಲಿ ಹಾಳಾಗುವ ದಾರಿಯನ್ನೂ ತೋರಿಸಿದೆ.
ಆರಂಭದಲ್ಲಿ ಒಂಟಿತನ ಅಂದರೇನು ಅಂತಾನೇ ಗೊತ್ತಿರಲ್ಲ. ಜೊತೆಲಿ ಯಾರಾದ್ರೂ ಇದ್ದು ಯಾವುದೋ ಒಂದು ಘಟ್ಟದಲ್ಲಿ ಅವರು ನಮ್ಮನ್ನ ಬಿಟ್ಟು ಹೋದಾಗಲೇ ಮೊದಲಬಾರಿಗೆ ಒಂಟಿತನದ ಅನುಭವವಾಗೋದು. ಅದು ನಮ್ಮೊಂದಿಗೆ ಬೆಳೆದ ಗೆಳೆಯನೊ, ಬೆಚ್ಚಗಿನ ಪ್ರೀತಿ ನೀಡಿದ್ದ ಗೆಳತಿಯೋ, ನಿನ್ನೆವರೆಗೂ ಜೊತೆಗೆ ಆಡಿ ಇಂದು ಮದುವೆಯಾಗಿ ಹೋದ ಅಕ್ಕನೋ, ಅಥವಾ ಮರೆತೂ ಮರೆಯಲಾರೆ ಎಂಬ ನಿಮ್ಮ ಜೀವನದ ಯಾವುದಾದರೂ ಒಂದು ಪಾತ್ರವೋ ನೀವು ನಿರೀಕ್ಷಿಸದ ಯಾವುದೋ ಒಂದು ದಿನ ನಿಮ್ಮಿಂದ ಇದ್ದಕ್ಕಿದ್ದಂತೆ ದೂರವಾಗಿಬಿಡ್ತಾರೆ. ನಿನ್ನೆವರೆಗೂ ಆ ಮಗುವಿನ ಭವಿಷ್ಯದ ಕುರಿತು ಸಾವಿರಾರು ಕನಸುಕಟ್ಟಿದ ತಾಯಿ ಇದ್ದಕ್ಕಿದ್ದಂತೆ ಮಗುವಿನ ಉಸಿರು ನಿಂತು ಮಡಿಲು ಬರಿದಾದಾಗ ಸಹಿಸುವುದಾದರೂ ಹೇಗೆ ಅಲ್ವಾ,,,
ಇವೆಲ್ಲ ಒಂದು ಥರಾ ಆದರೆ ಬಹುತೇಕ ಯುವ ಮನಸ್ಸುಗಳು ಅನುಭವಿಸೋದು ಅದೊಂದೇ ರೀತಿಯ ಒಂಟಿತನ . ಅದೇ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಯಾವುದೋ ಊರಿಂದ ಬಂದ ಅವನನ್ನೋ ಅವಳನ್ನೋ ಜೀವ ಹೋಗುವಷ್ಟು ಇಷ್ಟಪಟ್ಟುಬಿಡ್ತೀವಿ, ಅವಳ ಅಥವಾ ಅವನ ಹಿನ್ನೆಲೆ ಏನು ಅವರ ಮನೋಧರ್ಮ ಹೇಗಿದೆ, ಆಲೋಚನೆಗಳಾದ್ರೂ ನಮಗೆ ಹೊಂದಿಕೊಳ್ಳುತ್ತಾ ಇದ್ಯಾವುದನ್ನೂ ಅಷ್ಟು ಸೀರಿಯಸ್ಸಾಗಿ ಯೋಚನೇನೆ ಮಾಡಿರಲ್ಲ, ಅದೆಲ್ಲದನ್ನೂ ಮೀರಿದ ಅದ್ಯಾವುದೋ ಒಂದು ಕಾರಣಕ್ಕೆ ಅವರನ್ನ ಹಚ್ಚಿಕೊಂಡಿರ್ತೀವಿ, ಎಷ್ಟರಮಟ್ಟಿಗೆ ಅಂದ್ರೆ ಜಗತ್ತಿನಲ್ಲಿ ಯಾರೂ ಇಲ್ಲದಿದ್ರೂ ಪರವಾಗಿಲ್ಲ ಅವರೊಬ್ಬರಿದ್ರೆ ನಾನು ಖುಷಿಯಾಗಿರಬಲ್ಲೆ ಅನ್ನುವಷ್ಟರಮಟ್ಟಿಗೆ. ಇದೆಲ್ಲದಕ್ಕೂ ರಾಯಭಾರಿಯಾಗೋದು ಅದೇ ಮೊಬೈಲ್ ಫೋನ್, ಅದು ಬಡಿದುಕೊಳ್ತು ಅಂದ್ರೆ ಅದು ಅವನೊಬ್ಬನದೇ ಕಾಲ್ ಆಗಿದ್ರೆ ಸಾಕು ಅನ್ನುವಷ್ಟರ ಮಟ್ಟಿಗೆ ಅವಳು ಅವನನ್ನ ಇಷ್ಟ ಪಟ್ಟಿರ್ತಾಳೆ. ಅವನೂ ಅಷ್ಟೆ ಮೊಬೈಲ್ ರಿಂಗಿಂಗ್ ಮೋಡ್ ನಲ್ಲಿದೆ ಅಂತ ಗೊತ್ತಿದ್ದರೂ ಅವಳ ಫೋನಿಗಾಗಿ ಕಾದು ಕಾದು ಐದುನಿಮಿಷಕ್ಕೊಮ್ಮೆ ತನ್ನ ಮೊಬೈಲ್ ನ ಜೇಬಿಂದ ತೆಗೆದು ಚೆಕ್ ಮಾಡ್ತಾನೆ. ಹೀಗಿದ್ದ ಅವರಿಬ್ಬರೂ ಪ್ರೇಮಿಗಳಾಗಿರಲೇಬೇಕು ಅಂತ ನಿಯಮವೇನಿಲ್ಲ, ಹೆಸರೇ ಇಡಲಾಗದ ಅದ್ಯಾವುದೋ ಬಂಧ ಅವರಿಬ್ಬರನ್ನ ಕಟ್ಟಿಹಾಕಿರುತ್ತೆ. ಹೀಗಿದ್ದವರು ಅದ್ಯಾವುದೋ ಒಂದು ಸಂಧರ್ಭದಲ್ಲಿ ಒಬ್ಬರು ಮಾಡಿದ ದುಡುಕಿಗೋ, ಸಣ್ಣ ತಪ್ಪಿಗೋ ಅಥವಾ ಕಾರಣವೇ ಅಲ್ಲದ ಯಾವುದೋ ಕಾರಣಕ್ಕೊ ತಮ್ಮ ತಮ್ಮ ಈಗೋಗಳಿಗಾಗಿ ದೂರ ಆಗ್ಬಿಡ್ತಾರೆ. ಆಗ ಶುರುವಾಗುತ್ತೆ ನೋಡಿ ಈ ಒಂಟಿತನ, ಬದುಕಿನಲ್ಲಿ ನನಗೂ ಇಂಥಾ ಒಂದು ಕ್ಷಣ ಬರಬಹುದು ಅಂತ ದೇವರಾಣೆ ಯಾರೂ ಊಹಿಸಿರಲ್ಲ. ಇದುವರೆಗೂ ಸಾವಿರಬಾರಿ ಕೇಳಿದರೂ ಏನೂ ಅನ್ನಿಸದ ಅದ್ಯಾವುದೋ ಫೀಲಿಂಗ್ ಸಾಂಗ್ ನ್ನ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ ಅದೇ ಒಮಟಿತನ.
ಈ ಒಂಟಿತನವನ್ನ ಸರಿಯಾಗಿ ನಿಭಾಯಿಸಬಲ್ಲವರು ಏನು ಬೇಕಾದ್ರೂ ಸಾಧಿಸಬಹುದು. ನನಗೆ ಜೀವನವೇ ಬೇಡ ನನ್ನಪಾಡಿಗೆ ನನ್ನ ಬಿಟ್ಟುಬಿಡಿ ಅಮತ ಅಂದವನು ಯಾವ ಕೆಲಸವನ್ನೂ ಮಾಡದೇ ಜೀವನ ಹಾಳುಮಾಡಿಕೊಳ್ಳಬಹುದು ಅಥವಾ ಇದೇ ಒಂಟಿತನವನ್ನ ಏಕಾಂತ ಅಂತ ಅಂದುಕೊಮಡು ಕೈಗೆ ಸಿಕ್ಕ ಪುಸ್ತಕವನ್ನೆಲ್ಲಾ ಓದಿ ದೊಡ್ಡ ಜ್ಞಾನಿಯಾಗಬಹುದು. ಈ ಸಮಯದಲ್ಲಿ ಮನಸಲ್ಲಿ ಹುಟ್ಟೋ ಹಟ ಇದೆಯಲ್ಲ ಆ ಹಠ ಬೆಂಕಿಯಿದ್ದಂತೆ ಆ ಬೆಂಕಿಯನ್ನ ಸರಿಯಾಗಿ ಬಳಸಿಕೊಂಡು ಒಲೆ ಹಚ್ಚಿ ಅಡುಗೆ ಮಾಡಿ ಸಾವಿರಾರು ಜನರಿಗೆ ಊಟ ಹಾಕಬಹುದು ಅಥವಾ ಮತ್ತೊಂದು ರೀತಿಯಲ್ಲಿ ಬಳಸಿ ಯಾರದಾದರೂ ಮನೆಗೆ ಬೆಂಕಿಹಚ್ಚಿ ಮಸಣ ಮಾಡಿಬಿಡಬಹುದು. ಈ ಆಯ್ಕೆ ನಮ್ಮಕೈಯ್ಯಲ್ಲೇ ಇರುತ್ತೆ.
ಆ ಒಂಟಿತನದಲ್ಲಿ ಹುಚ್ಚುಹಿಡಿದವರಂತೆ ಯಾವುದಾದರೂ ಸಾಹಸಗಳನ್ನು ಮಾಡಬಹುದು. ನಮ್ಮಿಂದ ಕಲಿಯಲು ಅಸಾಧ್ಯ ಅನ್ನುವಂಥದ್ದೇನೋ ಒಂದನ್ನು ಕಲಿತು ಮುಗಿಸಿಬಿಡಬಹುದು ಯಾಕಂದ್ರೆ ಆಗ ನಮಗೆ ನಾವು ಬ್ಯುಸಿಯಾಗಿರಬೇಕು ಅಷ್ಟೇ. ಹೌದು ಇದೇ ಅದಕ್ಕಿರುವ ಏಕೈಕ ಮಾರ್ಗ. ಅಂತಹಾ ಒಂದು ಒಂಟಿತನ ನಿಮ್ಮಬಾಳಲ್ಲಿ ಬಂದಾಗ ನಿಮ್ಮನ್ನ ನೀವು ಎಷ್ಟು ಸಾಧ್ಯವೋ ಅಷ್ಟು ಬ್ಯುಸಿಯಾಗಿಟ್ಟುಕೊಳ್ಳುವುದು ಉತ್ತಮ.
ಕೈಗೆ ಸಿಕ್ಕ ಕೆಲಸ ಮಾಡಿ, ಯಾರೊಮದಿಗೆ ಮಾತಾಡಿದ್ರೆ ಮನಸಿಗೆ ನೆಮ್ಮದಿ ಅನ್ನಿಸುತ್ತೋ ಅವರೊಂದಿಗೆ ಮಾತಾಡಿ. ಮನಸಿಗೆ ಮುದ ಅನ್ನೋ ಪುಸ್ತಕ ಓದಿ, ಹೊಸದಾಗಿ ಏನಾದರೂ ಕಲಿಯಿರಿ. ಹೀಗೆ ಬ್ಯುಸಿಯಾಗಿರೋಕೆ ಪ್ರಯತ್ನಿಸಿದರೆ ನಿಮಗೆ ಗೊತ್ತಿಲ್ಲದೇ ಈ ಹಾಳು ಒಂಟಿತನ ದಿವ್ಯ ಏಕಾಂತವಾಗಿ ಪರಿಣಮಿಸಿರುತ್ತೆ. ಆ ದಿವ್ಯ ಏಕಾಂತ ನಮ್ಮಿಂದ ಯಾವುದಾದರೂ ಒಂದು ಸಾಧನೆ ಮಾಡಿಸಿಬಿಟ್ಟಿರುತ್ತೆ. ಇವನಿಮದ ಇದು ಹೇಗೆ ಸಾಧ್ಯ ಅನ್ನುವಷ್ಟರ ಮಟ್ಟಿಗೆ ನಾವು ಯಾವುದೋ ಒಂದು ಸಾಧನೆ ಮಾಡಿರ್ತೇವೆ, ಆಮೇಲೆ ಯಾರಾದರೂ ನಮ್ಮ ಏಕಾಂತಕ್ಕೆ ಭಂಗ ತಂದರೆ ಅವರಬಗ್ಗೆಯೇ ಕೋಪ ಬರುತ್ತೆ.
ದಿನೇ ದಿನೇ ನಾವು ನಮ್ಮನ್ನ ನೋಡಿಕೊಳ್ಳುವ ರೀತಿಯನ್ನ ಬದಲಿಸಿಕೊಳ್ತಾ ಅದ್ಯಾವತ್ತೋ ಒಂದು ದಿನ ನಮ್ಮಬಗ್ಗೆ ನಾವು ಹೆಮ್ಮೆ ಪಡ್ತಿರ್ತೀವಿ. ಒಬ್ಬರೇ ಇರೋ ಆ ಕ್ಷಣವನ್ನ ನಮ್ಮದೇ ರೀತಿಯಲ್ಲಿ ಎಂಜಾಯ್ ಮಾಡ್ತಿರ್ತೀವಿ. ಆ ನಂತರದಲ್ಲಿ ಎಷ್ಟೇ ಒತ್ತಡದ ಕೆಲಸವಿದ್ದರೂ ಸ್ವಲ್ಪಹೊತ್ತು ಈ ಏಕಾಂತ ಅನ್ನೋ ಥೆರಪಿ ತಗೊಂಡ್ರೆ ಎಲ್ಲಾ ಸುಲಭ ಅನ್ನಿಸಿಬಿಡುತ್ತೆ. ಯಾಕಂದ್ರೆ ನಾವು ನಮ್ಮ ಜೊತೆಗೂ ಸ್ವಲ್ಪಕಾಲ ಕಳೆಯಬೇಕಿರುತ್ತೆ. ಊರೆಲ್ಲರ ಜೊತೆಗು ಮಾತಾಡೋ ನಾವು ನಮ್ಮ ಆತ್ಮದ ಜೊತೆ ಮಾತಾಡಬೇಕಲ್ವಾ, ನಮ್ಮ ಬಗ್ಗೆಯೂ ನಾವು ಸ್ವಲ್ಪ ಚಿಂತಿಸಬೇಕಲ್ವಾ, ಯಾಕೆ ಹುಟ್ಟಿದ್ದೆ, ಏನು ಮಾಡಿದೆ, ಮುಂದೇನು ಮಾಡಬೇಕಿದೆ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬಹುದಾದ ಏಕೈಕ ಸಮಯ ಆ ಏಕಾಂತ. ಅದನ್ನೊಮ್ಮೆ ಯೋಚಿಸಿನೊಡಿ ಅಲ್ವಾ,,,,,
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ಅಂತರಂಗ
ಲಂಕೇಶರ ‘ಅವ್ವ’ ಕವಿತೆ : ಇನ್ನೊಂದು ನೋಟ ; ‘ತಾಯ್ತನ’ ಗಂಡಿನಲ್ಲೂ ಇರಲಿ

- ರಂಗನಾಥ ಕಂಟನಕುಂಟೆ
‘ಅಮ್ಮ’ ಎನ್ನುವುದು ಕಳ್ಳುಬಳ್ಳಿಯ ನಂಟಿನವಾಚಿಯಾಗಿರುವಂತೆ ಅದೊಂದು ಭಾವನಾತ್ಮಕ ಪರಿಕಲ್ಪನೆಯೂ ಹೌದು. ಅಲ್ಲದೆ ಇದು ‘ತಾಯ್ತನ’ ಎಂಬ ಜೀವಕಾರುಣ್ಯದ ಮೂಲವೂ ಹೌದು. ನಮ್ಮ ಸಾಹಿತ್ಯದಲ್ಲಿ ಈ ‘ಮೌಲ್ಯ’ ಪ್ರತಿಪಾದನೆ ಅತ್ಯಂತ ಶಕ್ತಿಯಾಲಿಯಾಗಿ ಮೂಡಿಬಂದಿದೆ. ವಿಶೇಶವೆಂದರೆ ಈ ಮೌಲ್ಯವನ್ನು ಮಹಿಳೆಯರು ವ್ಯಕ್ತಪಡಿಸಿರುವುದಕ್ಕಿಂತ ಪುರುಶರು ವ್ಯಕ್ತಪಡಿಸಿರುವುದೇ ಹೆಚ್ಚು!
ಅಂದರೆ ಹೆಣ್ಣು ತಾಯಿಯಾಗಿ ‘ತಾಯ್ತನ’ದ ಪರವಾಗಿ ವಕಾಲತ್ತು ವಹಿಸಿರುವುದಕ್ಕಿಂತ ಪುರುಶರು ತಾಯ್ತನದ ಬಗೆಗೆ ವಕಾಲತ್ತು ವಹಿಸಿರುವುದೇ ಹೆಚ್ಚು. ಇದು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮತ್ತು ಮಾತುಕತೆಗಳಲ್ಲಿ ಮತ್ತೆ ಮತ್ತೆ ಮಾರ್ದನಿಗೊಳ್ಳುವ ‘ಮೌಲ್ಯ’ವಾಗಿದೆ. ಅದರ ಎತ್ತುಗೆಯಾಗಿ ಕವಿ ಲಂಕೇಶ್ ಅವರ ‘ಅವ್ವ’ ಕವಿತೆಯೂ ಒಂದು. ಅದರ ಹಿನ್ನೆಲೆಯಲ್ಲಿ ‘ತಾಯ್ತನ’ ಕುರಿತು ಕೆಲವು ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗುವುದು.
ಈ ಕವಿತೆಯಲ್ಲಿ ‘ಅಮ್ಮ’ನ ವ್ಯಕ್ತಿತ್ವವು ಮೊದಲಿಗೆ ದೈಹಿಕವಾಗಿ ಮಗುವಿಗೆ ಜನ್ಮನೀಡುವುದರಿಂದ ಚಿಗುರೊಡೆಯುತ್ತದೆ. ಅದಕ್ಕೆ ಮೊದಲು ಆಕೆ ಫಲವತ್ತಾದ ಕಪ್ಪು ನೆಲದಂತಹ ಹೆಣ್ಣು. ಆಕೆ ಮುಂಗಾರು ಮಳೆಯನುಂಡ ನೆಲದಂತೆ ಚಿಗುರೊಡೆಯುವಳು. ಅಂದರೆ ಜೈವಿಕ ಮೂಲ ಆಕೆಯ ತಾಯ್ತನದ ಮೊದಲ ನೆಲೆ. ಅಲ್ಲಿ ಆರಂಭವಾಗಿ ಅಲ್ಲಿಗೆ ಆಕೆಯ ವ್ಯಕ್ತಿತ್ವದ ವ್ಯಾಪ್ತಿ ಸೀಮಿತವಾಗುವುದಿಲ್ಲ.
ಬದಲಿಗೆ ಲಾಲನೆ ಪಾಲನೆ ಪೋಷಣೆ ಮತ್ತು ಯಾವುದೇ ಶರತ್ತುಗಳಿಲ್ಲದೆ ನಿಸ್ವಾರ್ಥದಿಂದ ಪ್ರೀತಿ ಹಂಚುವ ಗುಣವುಳ್ಳ ಕರುಣಾಮಯಿ. ಹಾಗೆಯೇ ಬೇಸಾಯದಲ್ಲಿ ಸ್ವತಃ ತೊಡಗಿ ದುಡಿದು ಹೊಟ್ಟೆಬಟ್ಟೆ ಕಟ್ಟಿ ಕಾಸು ಕೂಡಿಟ್ಟು ಸಂಸಾರವನ್ನು ಸ್ವಾಭಿಮಾನದಿಂದ ನಡೆಸುವ ದಿಟ್ಟತನವುಳ್ಳವಳು. ಇಂತಹ ಗುಣವುಳ್ಳ ‘ಅವಳು’ ಮಗ ಕೆಟ್ಟಾಗ, ಗಂಡ ಬೇರೆ ಕಡೆ ಹೋದಾಗ ಸಿಡಿದೇಳುವ ಗುಣವನ್ನೂ ಉಳ್ಳವಳು. ಅಲ್ಲದೆ ಬೇಜವಾಬ್ದಾರಿ ಗಂಡನನ್ನು ಸಂಭಾಳಿಸಿಕೊಂಡು ಹೋಗುವ ಹೊಣೆಗಾರಿಕೆಯುಳ್ಳವಳೂ ಹೌದು.
ಈ ದೃಶ್ಟಿಯಿಂದ ನೋಡಿದಾಗ ನಮ್ಮ ಗ್ರಾಮೀಣ ಸಮಾಜದ ಯಾವುದೇ ದುಡಿಯುವ ಮಹಿಳೆಯ ವ್ಯಕ್ತಿತ್ವವೂ ಹೀಗೆಯೇ ಇರುತ್ತದೆ. ಹಾಗಾಗಿ ಈ ಕವಿತೆ ಗ್ರಾಮೀಣ ದುಡಿಯುವ ಮಹಿಳೆಯ ವ್ಯಕ್ತಿತ್ವವನ್ನು ಖಚಿತವಾಗಿ ಕಟ್ಟಿಕೊಡುತ್ತದೆ. ಮತ್ತೆ ಇಲ್ಲಿನ ಹೆಣ್ಣು ವೈದಿಕ ಪರಂಪರೆ ಕಟ್ಟಿಕೊಟ್ಟಿರುವ ಸತಿ ಸಾವಿತ್ರಿ, ಊರ್ಮಿಳೆಯರಂತಹ ‘ಭಾರತೀಯ ನಾರಿ’ಯಲ್ಲ. ಬದಲಿಗೆ ಶೂದ್ರ ಸಮುದಾಯಗಳಲ್ಲಿನ ದುಡಿವ ಸ್ವಾಭಿಮಾನಿ ರೈತ ಮಹಿಳೆ.
ಇದನ್ನೂ ಓದಿ |ಆತ್ಮನಿರ್ಭರ ಭಾರತದ ಆತ್ಮವಂಚಕ ಮುಖಗಳು..!
ಇಂತಹ ಮಹಿಳೆಯನ್ನು ತಾಯಾಗಿ ‘ಕಂಡ’ ಮಗ ಆಕೆಗೆ ‘ವಿನಯ ಮತ್ತು ಮೌನ’ದಿಂದ ತಲೆಬಾಗುತ್ತ ಕೃತಜ್ಞತೆಯ ಕಣ್ಣೀರು ಅರ್ಪಿಸುವ ಹಾಗೂ ಸಾರ್ಥಕ ಬದುಕನ್ನು ಬದುಕಿದ ಅಮ್ಮನಿಗೆ ಬೆಳೆದು ದೊಡ್ಡವನಾಗಿರುವ ಮಗ ತೋರುತ್ತಿರುವ ಗೌರವವೂ ಇಲ್ಲಿದೆ. ಅಂದರೆ ಮಗ ಎನ್ನುವುದೇ ಒಂದು ಗಂಡು ಕೇಂದ್ರಿತ ನೆಲೆ. ಇಡೀ ಕವಿತೆಯನ್ನು ಸೂಕ್ಶ್ಮವಾಗಿ ಗಮನಿಸಿದರೆ ಸದೂರದಲ್ಲಿದ್ದು ಹೆಣ್ಣಿನ ವ್ಯಕ್ತಿತ್ವವನ್ನು ಗಂಡು ನೆಲೆಯಿಂದ ವರ್ಣಿಸುವ ಮತ್ತು ವ್ಯಾಖ್ಯಾನಿಸುವ ದಾಟಿ ಇಲ್ಲಿದೆ.
ಇಂತಹ ತಾಯ್ತನದ ಗುಣವು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಯಾವುದೇ ತಾಯಂದಿರಲ್ಲಿ ಕಾಣಬಹುದು. ಉದಾ.ಗೆ ದೇವನೂರು ಮಹಾದೇವ ಅವರ ‘ಒಡಲಾಳ’ದ ಸಾಕವ್ವ ಇಂತಹ ಪಾತ್ರಗಳು. ಇಂತಹ ಅಸಂಖ್ಯ ಪಾತ್ರಗಳನ್ನು ನಮ್ಮ ಸಾಹಿತ್ಯ ಕೃತಿಗಳಲ್ಲಿ ಮತ್ತು ಸಮಾಜದಲ್ಲಿ ಕಾಣಬಹುದು. ಈ ಎಲ್ಲ ಪಾತ್ರಗಳು ಕರಡಿಯಂತೆ ಮಕ್ಕಳ ಬಗೆಗೆ ಕಾಳಜಿ ಮಾಡುವುದನ್ನು ಕಾಣಬಹುದು. ಅಲ್ಲದೆ ಮಕ್ಕಳ ಜನನದ ನಂತರ ಅವರ ಜೊತೆ ಹೆಚ್ಚು ಹೊತ್ತು ಸಮಯ ಕಳೆಯುವುದು ತಾಯಿಯೇ ಆಗಿರುತ್ತಾಳೆ. ಮತ್ತು ತಾಯಿ ನಿಜಕ್ಕೂ ಮಕ್ಕಳ ಬಗೆಗೆ ಕಾಳಜಿ ಮಾಡುತ್ತಾಳೆ.
ಆದ್ದರಿಂದಲೇ ಮಹಿಳೆಯರಲ್ಲಿ ತಾಯ್ತನವು ‘ಸಹಜ’ ಎಂಬಂತೆ ಗೋಚರಿಸುತ್ತದೆ. ಹೀಗೆ ಗೋಚರವಾಗುವ ಒಂದು ಗುಣವನ್ನೇ ತಾಯ್ತನವೆಂದು ಕರೆಯಲಾಗುತ್ತದೆ. ಹಾಗೆ ಕರೆಯುವ ಮೂಲಕ ಅದನ್ನು ದೈವೀಕರಿಸುವ ಕೆಲಸವನ್ನೂ ಮಾಡಲಾಗುತ್ತದೆ. ಆದರೆ ಇದು ತಾಯಂದಿರಲ್ಲಿ ಸಹಜವಾಗಿರುವುದೋ? ಇದನ್ನು ಸಹಜವೆಂದು ಒಪ್ಪಿಕೊಳ್ಳುವುದಾದರೆ ಅಂತಹ ಮೌಲ್ಯ ಪುರುಶರಲ್ಲಿಯೂ ಯಾಕಿರಬಾರದು? ತಾಯ್ತನ ಎನ್ನುವುದು ಪುರುಶ ಪ್ರಧಾನ ಸಮಾಜದ ಅಪೇಕ್ಶೆಯೋ? ಪಿತೃ ಪ್ರಧಾನ ಸಮಾಜ ಹೊರಿಸಿರುವ ಹೊಣೆಗಳನ್ನು ಅನಿವಾರ್ಯವಾಗಿ ಹೊತ್ತು ತಾಯ್ತನದ ಭಾರಕ್ಕೆ ಸಿಕ್ಕಿಕೊಂಡಿದ್ದಾಳೆಯೇ? ಹೀಗೆ ಹಲವು ಕೇಳ್ವಿಗಳು ಹುಟ್ಟುತ್ತವೆ.
ಯಾಕೆಂದರೆ ಜನ್ಮ ನೀಡುವುದು ಹೆಣ್ಣಿನ ನೈಸರ್ಗಿಕ ಸಾಮಥ್ರ್ಯವಾದರೂ, ‘ತಾಯ್ತನ’ ಎಂಬ ಮೌಲ್ಯವು ಹೆಣ್ಣು ಮತ್ತು ಗಂಡು ಇಬ್ಬರಲ್ಲಿಯೂ ಇರಬೇಕಾದ ಮೌಲ್ಯ. ಯಾಕೆಂದರೆ ಕೆಲವು ಪ್ರಾಣಿಗಳಲ್ಲಿ ಮತ್ತು ಪಕ್ಶಿಗಳಲ್ಲಿ ಇದನ್ನು ಕಾಣಬಹುದು. ಪಕ್ಶಿಗಳಲ್ಲಿ ಹೆಣ್ಣು ಮೊಟ್ಟೆಯನಿಟ್ಟರೂ ಗಂಡು ಹೆಣ್ಣುಗಳು ಕೂಡಿಯೇ ಕಾವು ಕೊಟ್ಟು ಮರಿಮಾಡುತ್ತವೆ. ನಂತರ ಅವುಗಳಿಗೆ ಆಹಾರವನ್ನು ಸಂಗ್ರಹಿಸಿ ಮರಿಗಳಿಗೆ ಉಣಿಸುತ್ತವೆ. ಎರಡೂ ಕೂಡಿ ಲಾಲಿಸಿ ಪಾಲಿಸಿ ರಕ್ಶಿಸಿ ಬೆಳೆಸುತ್ತವೆ.
ಅವುಗಳು ಬೆಳೆದು ಸ್ವತಂತ್ರಗೊಳ್ಳುವವರೆಗೂ ಎರಡು ಕೂಡಿಯೇ ಕಾಳಜಿ ಮಾಡುತ್ತವೆ. ಅವುಗಳಲ್ಲಿ ಗಂಡು ಮತ್ತು ಹೆಣ್ಣು ಎರಡು ಕೂಡಿ ಗೂಡು ಕಟ್ಟುವ ಹೊತ್ತಿನಿಂದಲೂ ಸಮನಾಗಿಯೇ ಕೆಲಸ ಮಾಡುತ್ತವೆ. ತಾಯ್ತನವನ್ನು ಎರಡೂ ಅನುಭವಿಸುತ್ತವೆ. ಹಾಗಾಗಿ ಪಕ್ಶಿ ಜಗತ್ತಿನಲ್ಲಿ ಹೆಣ್ಣಿಗೆ ಮಾತ್ರ ತಾಯ್ತನವನ್ನು ಸೀಮಿತಗೊಳಿಸಲು ಸಾಧ್ಯವಿಲ್ಲ. ಆದರೆ ಸಸ್ತನಿಗಳಲ್ಲಿ ಮಾತ್ರವೇ ‘ತಾಯ್ತನ’ವು ಹೆಣ್ಣಿಗೆ ಮಾತ್ರ ಎಂಬಂತಾಗಿದೆ. ಉಳಿದ ಪ್ರಾಣಿ ಜಗತ್ತಿಗೆ ಅರಿವು ಇಲ್ಲವೆಂದುಕೊಂಡರೂ ‘ನಾಗರಿಕ’ ಎಂದು ತನ್ನನ್ನು ತಾನು ಕರೆದುಕೊಂಡಿರುವ ಮಾನವರ ಜಗತ್ತಿನಲ್ಲಿಯೂ ತಾಯ್ತನ ಹೆಣ್ಣಿಗೆ ಮಾತ್ರ ಎಂಬಂತೆ ಭಾವಿಸಲಾಗಿದೆ.
ಇದು ಹೆಣ್ಣಿಗೆ ತೋರುವ ವಿಶೇಶ ಗೌರವವೋ? ಇಲ್ಲವೇ ತಾಯ್ತನ ಹೆಸರಿನಲ್ಲಿ ಆಕೆಯ ಮೇಳೆ ಇನ್ನಶ್ಟು ಕೆಲಸಗಳನ್ನು ಹೇರುವುದೋ? ಎಂಬ ಪ್ರಶ್ನೆ ಹುಟ್ಟುತ್ತದೆ. ಯಾಕೆಂದರೆ ಕನ್ನಡದ ಹೆಸರಾಂತ ಚಿಂತಕಿಯಾದ ಡಾ. ಎಚ್. ಎಸ್ ಶ್ರೀಮತಿ ಅವರು ‘ತಾಯ್ತನ’ ಒಂದು ಶಾಪವಾಗಿರುವ ಬಗೆಯನ್ನು ಹಲವು ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಇದು ಅವರು ಎತ್ತಿರುವ ಬಹಳ ಗಂಭೀರವಾದ ಪ್ರಶ್ನೆ. ಇದು ಹೆಚ್ಚು ವ್ಯಾಪಕವಾಗಿ ಚರ್ಚೆಯಾಗಬೇಕಾದ ಅಗತ್ಯವಿದೆ.
ಹಾಗೆ ನೋಡಿದರೆ ‘ತಾಯ್ತನ’ ಎನ್ನುವುದು ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದಲ್ಲ. ಈ ಕಾರಣಕ್ಕಾಗಿಯೇ ತಾಯ್ತನ ಎನ್ನುವುದು ಹೆಣ್ಣಿನ ವಿಶೇಶ ಗುಣವೆಂದು ಭಾವಿಸುವ ಪುರುಶ ಜಗತ್ತು ಅಂತಹ ಗುಣವನ್ನು ಯಾಕೆ ರೂಢಿಸಿಕೊಳ್ಳಬಾರದು? ಎಂಬ ಪ್ರಶ್ನೆಗಳನ್ನು ಅನೇಕ ಮಹಿಳೆಯರು ಈಗಾಗಲೇ ಕೇಳಿದ್ದಾರೆ. ಈ ಪ್ರಶ್ನೆ ಸರಿಯಾದುದೂ ಆಗಿದೆ. ಸಂತಾನ ವೃದ್ಧಿಯಲ್ಲಿ ಗಂಡು ಹೆಣ್ಣುಗಳು ತೊಡಗುವುದು ಸಹಜ ಕ್ರಿಯೆ. ಆದರೆ ‘ತಾಯ್ತನ’ ಎನ್ನುವುದು ಜೈವಿಕವಾದ ಕಲ್ಪನೆಯಾಗಿರದೇ ಅದು ಸಾಮಾಜಿಕವಾದ ಒಂದು ಕಲ್ಪನೆ.
ಅದರಲ್ಲಿಯೂ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಪುರುಶರೇ ಕಟ್ಟಿಕೊಟ್ಟಿರುವ ಒಂದು ಕಲ್ಪನೆ. ಹಾಗಾಗಿ ತಾಯ್ತನ ಎಂಬುದನ್ನು ಒಂದು ಆತ್ಯಂತಿಕ ಜೀವನ ಮೌಲ್ಯ ಮತ್ತು ಸಾಹಿತ್ಯಕ ಮೌಲ್ಯ ಎಂದು ಮಂಡಿಸುವಾಗ ಈ ಬಗೆಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಆದರೆ ಬಹುತೇಕ ಪುರುಶ ಲೇಖಕರು ತಾಯ್ತನವನ್ನು ಒಂದು ಮೌಲ್ಯವಾಗಿ ಮಂಡಿಸುವಾಗ ಈ ಪ್ರಶ್ನೆಗಳನ್ನು ಕೇಳಿಕೊಳ್ಳದೇ ಕೇವಲ ಭಾವನಾತ್ಮಕವಾಗಿ ಮಂಡಿಸುತ್ತಾರೆ. ಕುಪ್ಪಳಿಯಲ್ಲಿ ನಡೆದ ಸಾಹಿತ್ಯಕ ಚರ್ಚೆಯಲ್ಲಿ ಕನ್ನಡದ ಪ್ರಸಿದ್ಧ ಲೇಖಕ ಕುಂ. ವೀರಭದ್ರಪ್ಪ ಅವರು ಸಾಹಿತ್ಯದಲ್ಲಿ ‘ತಾಯ್ತನ’ದ ಗುಣ ಇರಬೇಕು ಎಂದರು.
ಕೂಡಲೇ ಅಲ್ಲಿದ್ದ ಪ್ರಸಿದ್ಧ ಚಿಂತಕಿ ಡಾ. ಎಚ್. ಎಸ್. ಶ್ರೀಮತಿ ಅವರು ತಾಯ್ತನ ಎಂದರೇನು? ಎಂಬ ಪ್ರಶ್ನೆ ಕೇಳಿದರು. ಈ ಪ್ರಶ್ನೆ ನಿರೀಕ್ಶಿಸಿರದ ವೀರಭದ್ರಪ್ಪನವರು ತಬ್ಬಿಬ್ಬಾದರು. ಕೊನೆಗೆ ಆ ಚರ್ಚೆಯೇ ಮುಂದುವರೆಯಲಿಲ್ಲ. ತಾಯ್ತನದ ಬಗೆಗೆ ಭಾವುಕವಾಗಿ ಮಾತನಾಡುವ ಜನರಿಗೆ ಈ ಪ್ರಶ್ನೆಯನ್ನು ಕೇಳಿದರೆ ಬಹುತೇಕರು ತಬ್ಬಿಬ್ಬಾಗುವರು. ಇಲ್ಲವೇ ಅದನ್ನು ಒಂದು ಮೌಲ್ಯವಾಗಿ ವಿವರಿಸಲು ತೊಡಗಿದರೆ ಅಂತಹ ಮೌಲ್ಯಗಳನ್ನು ಪುರುಶರು ರೂಢಿಸಿಕೊಳ್ಳಲು ಕಶ್ಟವೇನು? ಎಂಬ ಪ್ರಶ್ನೆ ಹುಟ್ಟುತ್ತದೆ.
ಈ ಪ್ರಶ್ನೆಗೆ ಉತ್ತರಿಸುವುದು ಕೊಂಚ ಕಶ್ಟ. ಇಂತಹ ಪ್ರಶ್ನೆಗಳಿಲ್ಲದೆ ಭಾವುಕವಾಗಿ ಮಂಡಿಸುವುದೇ ನಮ್ಮಲ್ಲಿ ಹೆಚ್ಚು ರೂಢಿಯಾಗಿದೆ. ಹಾಗೆ ಭಾವುಕವಾಗಿ ಮಂಡನೆ ಮಾಡುವುದರ ಹಿಂದೆ ಹೆಣ್ಣಿನ ಶೋಶಣೆಯನ್ನು ಒಪ್ಪಿಕೊಂಡಿರುವ ಮತ್ತು ಶೋಶಣೆಯ ಮತ್ತೊಂದು ಮುಖವೇ ಆಗಿರುವ ಸಾಧ್ಯತೆಗಳಿರುತ್ತವೆ. ಈ ನಡುವೆ ಜರ್ಮನಿಯ ಪ್ರಸಿದ್ದ ಕವಿ ಮತ್ತು ನಾಟಕಕಾರ ಬೆರ್ಟೋಲ್ಟ್ ಬ್ರೆಕ್ಟ್ ತನ್ನ ‘ಕಕೇಶಿಯನ್ ಚಾಕ್ ಸರ್ಕಲ್’ ಎಂಬ ನಾಟಕದಲ್ಲಿ ತಾಯಿ ಪರಿಕಲ್ಪನೆಯನ್ನು ವಿಸ್ತರಿಸಿದ್ದಾನೆ.
ಈ ನಾಟಕದಲ್ಲಿ ‘ತಾಯ್ತನ’ ಎನ್ನುವುದು ದೈಹಿಕವಾಗಿ ಜನ್ಮ ನೀಡುವುದರಿಂದ ಬರುವುದಿಲ್ಲ ಎಂಬುದನ್ನು ಸ್ಪಶ್ಟಪಡಿಸಿದ್ದಾನೆ. ಅಲ್ಲಿ ಪ್ರೀತಿ ಮತ್ತು ಕಾಳಜಿ ಮಾಡುವ ಬಗೆ ಹಾಗೂ ಮಗುವಿನ ನೋವಿನೊಂದಿಗೆ ಮಿಡಿಯುವುದು ಕಾಣುತ್ತದೆ. ಅಂತಹ ಭಾವನೆಯನ್ನು ಯಾರೇ ಹೊಂದಿದ್ದರೂ ಅವರು ತಾಯ್ತನಕ್ಕೆ ಅರ್ಹರಾಗುತ್ತಾರೆ. ಇನ್ನು ರಶ್ಯನ್ ಲೇಖಕ ಮ್ಯಾಕ್ಸಿಂ ಗಾರ್ಕಿ ತನ್ನ ‘ತಾಯಿ’ ಕಾದಂಬರಿಯಲ್ಲಿ ತಾಯಿ ಪಾತ್ರವನ್ನು ಇನ್ನೊಂದು ಬೇರೆಯದೇ ನೆಲೆಯಲ್ಲಿ ಚಿತ್ರಿಸಿದ್ದಾನೆ. ಅಲ್ಲಿ ತಾಯಿ ಒಂದು ಕ್ರಾಂತಿಯ ತಾಯಿಯಾಗಿ ಕಾಣಿಸಿಕೊಳ್ಳುತ್ತಾಳೆ. ಕ್ರಾಂತಿಯ ಕಾಳಜಿಯೊಂದಿಗೆ ಅದರ ಲಾಲನೆ ಪಾಲನೆ ಪೋಶಣೆಯಲ್ಲಿ ತೊಡಗುತ್ತಾಳೆ.
ಲಂಕೇಶರ ಈ ಕವಿತೆಯಲ್ಲಿ ಅಂತಹ ಯಾವ ಹೊಸ ಸಾಧ್ಯತೆಗಳ ಅಭಿವ್ಯಕ್ತಿ ಇಲ್ಲ. ಬದಲಿಗೆ ರೂಡಿಗತವಾದ ಕಲ್ಪನೆಯ ಅವ್ವನನ್ನು ಚಿತ್ರಿಸಲಾಗಿದೆ. ಇಲ್ಲಿ ಆತ್ಮ ವಿಮರ್ಶಾತ್ಮಕ ನೆಲೆಯ ದಾಟಿಯಿರದೆ ರೂಢಿಗತ ನೆಲೆಯ ತಾಯ್ತನದ ಚಿತ್ರಣವೇ ಇದೆ. ಆದರೆ ಗಮನಿಸಬೇಕಾದ ಸಂಗತಿಯಂದೆ ಆಕೆ ದುಡಿವ ವರ್ಗದ ರೈತಾಪಿ ಮಹಿಳೆಯ ಚಿತ್ರಣ ಎದ್ದು ಕಾಣಿಸುತ್ತದೆ.
ಅಳುಬುರುಕು ಹೆಣ್ಣಿನ ಚಿತ್ರಕ್ಕೆ ಬದಲಾಗಿ ಸ್ವಾಭಿಮಾನಿ ದಿಟ್ಟ ಮಹಿಳೆಯ ಚಿತ್ರವನ್ನು ಕಟೆದಿರುವುದು ಗಮನಾರ್ಹ ಸಂಗತಿ. ಹಾಗೆ ದಿಟ್ಟವಾದ ತಾಯಿಯನ್ನು ಚಿತ್ರಿಸುವ ಹೊತ್ತಿನಲ್ಲಿ ಗಂಡು ಜವಾಬ್ದಾರಿಯಿಂದ ನುಣುಚಿಕೊಂಡಿರುವ ಬಗೆ ಚರ್ಚೆಗೆ ಒಳಗಾಗುವುದಿಲ್ಲ. ಅಲ್ಲದೆ ಗಂಡಿನ ಹೊಣೆಗೇಡಿತನದಿಂದ ಅನಿವಾರ್ಯವಾಗಿ ಎಲ್ಲ ಭಾರವನ್ನು ಹೊತ್ತು ನಡೆಯಬೇಕಾದ ಅನಿವಾರ್ಯತೆಗೆ ಸಿಕ್ಕಿದ ಹೆಣ್ಣು ಕುಟುಂಬವೆಂಬ ಆವುಗೆಯಲ್ಲಿ ಬೆಂದು ಮಾಗಿದ್ದಾಳೆ.
ಆದರೆ ಈ ಬಗೆಗೆ ಹೆಚ್ಚು ಚರ್ಚೆ ಮಾಡದೆ ರೂಢಿಗತವಾದ ತಾಯ್ತನದ ಮೌಲ್ಯವು ಲಂಕೇಶರಲ್ಲಿ ಮತ್ತು ನಮ್ಮ ಸಾಹಿತ್ಯದಲ್ಲಿ ಅಂತರ್ಗತವಾಗಿ ಹರಿಯುತ್ತಿದೆ. ಮತ್ತೆ ಇಂತಹ ಮೌಲ್ಯವನ್ನು ಹೆಚ್ಚು ಪ್ರತಿಪಾದಿಸುವವರು ಮಹಿಳೆಯರಲ್ಲ. ಬಹುತೇಕ ಪುರುಷ ಲೇಖಕರು. ಈ ಪುರುಶರು ಕಟ್ಟಿಕೊಟ್ಟಿರುವ ಈ ಕಲ್ಪನೆಯನ್ನು ಮಹಿಳೆಯರು ಹೇಗೆ ಗ್ರಹಿಸುತ್ತಾರೆ? ಎಂಬುದು ಮುಖ್ಯ ಸಂಗತಿ.
ಇದುವರೆಗೂ ಈ ಬಗೆಗೆ ನಡೆದಿರುವ ಚರ್ಚೆಗಳನ್ನು ಗಮನಿಸಿದರೆ ಗಂಡುನೋಟ ಕಟ್ಟಿರುವ ತಾಯ್ತನದ ಕಲ್ಪನೆಯನ್ನು ಒಂದು ಆದರ್ಶದ ಮತ್ತು ಮಾದರಿಯಾದ ಮೌಲ್ಯವಾಗಿ ಮಾನ್ಯ ಮಾಡಿಲ್ಲ. ಹಾಗಾಗಿ ತಾಯ್ತನದ ಬಗೆಗೆ ಜನಪ್ರಿಯವಾಗಿರುವ ರೂಢಿಗತ ವಿಚಾರವನ್ನು ಮರುವಿಮರ್ಶೆಗೆ ಒಳಪಡಿಸಬೇಕಾದ ಅಗತ್ಯವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಬೆಳಕು ಕತ್ತಲ ನಡುವೆ

- ಮೂಲ – ಗನ್ವರ್(ನಾರ್ವೆಯನ್ ಕವಿ), ಕನ್ನಡಕ್ಕೆ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಬೆಳಕು ನುಗ್ಗುತ್ತದೆ
ತೆರೆದ ರೂಮಿನೊಳಕ್ಕೆ
ಮೌನದ ಅಲೆಗಳಂತೆ.
ಕೆಂಪು ಕ್ಯಾಕ್ಟಸ್ ಹೂವು ಎಲ್ಲಕಡೆ ಚೆಲ್ಲಿವೆ,
ನಾಚುತ್ತ ನೋಡಿವೆ
ನುಗ್ಗುತ್ತಿರುವ ಬೆಳಕಿನತ್ತ
ಏನೋ ನಿರೀಕ್ಷಿಸುತ್ತ
ಹಸಿರು ಎಳೆಗಳ ನಡುವೆ
ಹೆಪ್ಪುಗಟ್ಟಿವೆ ಈಗ
ಆನಂದ ಪಾವಿತ್ರ್ಯ.
ಮುಂದೆ ಬರುತ್ತದೆ ರಾತ್ರಿ
ಮೆಲ್ಲಗೆ ಹಾಡಿಕೊಳ್ಳುತ್ತ
ಏನೋ ಪ್ರತೀಕ್ಷೆಯಲ್ಲಿ ಕಾದಿರುವ ಹೂವುಗಳ
ಕಣ್ಣಿಗೆ ಮುತ್ತಿಡುತ್ತ
ಕಂಪಿಸುತ್ತಿವೆ ಹೂವು
ಕಣ್ಣು ಮುಚ್ಚುತ್ತ.
ಕಿಟಕಿಯಾಚೆಗೆ ಮೇಲೆ
ನೀಲಿಯಾಳಗಳಲ್ಲಿ
ಶಾಂತವಾಗಿ
ಜಾರಿ ಸಾಗುತ್ತಿವೆ ಕಪ್ಪು ಮುಗಿಲು
ಉದ್ದ ಮೆರವಣಿಗೆಯಲ್ಲಿ
ಶವದ ಪೆಟ್ಟಿಗೆಯ ಹಿಂದೆ
ನಡೆವ ವೃದ್ಧರ ಹಾಗೆ
ಭಯವಿರದೆ, ವ್ಯಥೆಯಿರದೆ
ಸಂಧ್ಯಾಶಾಂತಿಯ ತುಂಬಿಕೊಂಡು ಒಳಗೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಕಾಮಧೇನು

- ಎಚ್.ಎಸ್. ಬಿಳಿಗಿರಿ
ನಿನ್ನ ಕಣ್ಣಲಿ ಮಿಂಚು, ನನ್ನ ಎದೆಯಲಿ ಸಿಡಿಲು!
ನಿನ್ನ ತುಟಿಯೊಳು ರೋಜ, ನನ್ನ ಎದೆಯಲಿ ಮುಳ್ಳು! ನಿನ್ನೆದೆಯೊಳಮೃತಪೂರಿತ ಕುಂಭ-ಅದ ಕಳ್ಳು
ನನಗೆ; ಕಣ್ಣಿಗೆ ತಂಪು, ಎದೆಗೂ ಉರಿ ಭುಗಿಭುಗಿಲು! ನಿನಗಿದೆಯೆ ತುಂಬಿದೆದೆ, ನನ್ನ ಎದೆಯೋ ತೆರವು!
ನಿನ್ನ ತನುವಿನ ಏರುತಗ್ಗುಗಳ ದಾರಿಯಲಿ
ಸುತ್ತಿ ಕುಲುಕಾಡಿ ಅತ್ತಿತ್ತ ತೇಂಕಾಡುತಲಿ
ಬಿದ್ದು ನೂರಾರು ಚೂರಗಳಾಯ್ತು ಮನ-ರಥವು!
ಬರಿ ಬೂದಿಗುರಿನೆನಪು ಕೆರಳಿ ಕಾಡಿದೆಯೇನು?
ಗೊದ್ದಗಳ ಗೂಡುಗಳ ಹೀರುತ್ತಿರುವುದೂ ಕರಡಿ?
ಎల్ల ಸೋಸುತ ಕಾಮವೊಂದ ನಿಲಿಸುವ ಜರಡಿ?
ಮಗುಚಿ ಕೆಳಗಡೆ ಬೀಳುತ್ತಿದೆಯೋ ಏರೋಪ್ಲೇನು?
ಎದೆಯ ತಲೆಗೂದಲೋಳು ಪಿಚಪಿಚನೆ ಹರಿವ ಹೇನು? ಗಡಿಗೆಗೆಚ್ಚಲ ಸೋರವ ಬಿಟ್ಟಿತೋ ಕಾಮ-ಧೇನು
(‘ಕಾಮಧೇನು’ ಕವಿತೆ ಕನ್ನಡದ ಸಾನೆಟ್ ಅಥವಾ ಸುನೀತ)
‘ಸಾನೆಟ್’ ಒಂದು ಟಿಪ್ಪಣಿ
ಕವಿತೆಯ ಈ ನಿರ್ದಿಷ್ಟ ಸ್ವರೂಪವು 13 ನೇ ಶತಮಾನದಲ್ಲಿ ಇಟಲಿಯಲ್ಲಿ ಹುಟ್ಟಿಕೊಂಡಿತು. ತನ್ನ 15 ಸಾನೆಟ್, ಮತ್ತು ನಂತರದ ಮುಖ್ಯ ಥೀಮ್ ಮತ್ತು ಇತರ ಹದಿನಾಲ್ಕನೇ ಕಲ್ಪನೆ. ಈ ಕಾರಣಕ್ಕಾಗಿ, ನಾವು ಕೊನೆಯಲ್ಲಿ ಕೆಲಸ ಪ್ರಾರಂಭಿಸಿದ್ದಾರೆ.
ಹದಿನೈದನೇ ಸುನೀತ ಪ್ರಮುಖ ಮೊದಲ ಎರಡು ಪ್ಯಾರಾಗಳನ್ನು, ಮತ್ತು ಸಂಪ್ರದಾಯದ ಪ್ರಕಾರ, ಮೊದಲ ಸುನೀತ ಅಗತ್ಯವಾಗಿ ಮೊದಲ ಸಾಲಿನ ಆರಂಭಿಸಲು ಮತ್ತು ಕೊನೆಯ ಎರಡನೇ ಕೊನೆಗೊಳ್ಳಬೇಕು. ಕಡಿಮೆ ಕುತೂಹಲಕಾರಿ ಕೆಲಸವಿತ್ತು-ಪದ್ಯ ಇತರ ಭಾಗಗಳು. ಹಿಂದಿನ ಇತರ ಹದಿಮೂರು ಸಾನೆಟ್ ಕೊನೆಯ ಸಾಲು ಅಗತ್ಯವಾಗಿ ಮುಂದಿನ ಮೊದಲ ಸಾಲು ಇರಬೇಕು.
ವಿಶ್ವದ ಸಾಹಿತ್ಯ ಇತಿಹಾಸದಲ್ಲೇ ರಷ್ಯಾದ ಕವಿಗಳ ಹೆಸರುಗಳು Vyacheslava Ivanova ಎಂದು ಮತ್ತು ವಾಲೆರಿ ಬ್ರ್ಯುಸೋವ್ ನೆನಪಿಡುವ. ಅವರು ಸಂಪೂರ್ಣವಾಗಿ ಏನು ಒಂದು ಸುನೀತ, ಆದ್ದರಿಂದ ಸಾನೆಟ್ ಕಿರೀಟ ಆಸಕ್ತಿಯನ್ನು ತೋರಿಸಲು ಗೊತ್ತು. ರಶಿಯಾದಲ್ಲಿ ಬರವಣಿಗೆಯ ಈ ಫಾರ್ಮ್ 18 ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಜೀನಿಯಸ್ ವ್ಯಾಲೇರಿಯ್ ಬ್ರ್ಯುಸೋವ್ ಈ ಪ್ರಕಾರದ ಬೋಧಕರಾಗಿದ್ದಾರೆ, ಮತ್ತು ಸ್ಥಾಪಿತ ಅಡಿಪಾಯ ಪಾಲಿಸಬೇಕೆಂದು. ಸಾನೆಟ್ ಮಾಲೆಯ ಇವರ ಕೊನೆಯ ಪದ್ಯ ( “ಡೂಮ್ ಸರಣಿ”) ಸಾಲುಗಳನ್ನು ಆರಂಭವಾಗುತ್ತದೆ:
“ಹದಿನಾಲ್ಕು ಅಗತ್ಯ ಹೇಳಿ
ಜೀವಂತವಾಗಿ ನೆಚ್ಚಿನ ನೆನಪುಗಳ ಹೆಸರುಗಳು! ”
ನೀವು ಸಂಯೋಜನೆಯ ಪ್ರಕಾರಕ್ಕೆ ಸ್ವಲ್ಪ ವಿಶ್ಲೇಷಣೆ ಖರ್ಚು ಮಾಡಬೇಕಾಗುತ್ತದೆ ಹೆಚ್ಚು ಅರ್ಥವಾಗುವ ಆಗಿತ್ತು. ಸಂಪ್ರದಾಯದಂತೆ ಮೊದಲ ಸುನೀತ ಅಂತಿಮ ನುಡಿಯು ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ – ಎರಡನೇ; ಮೂರನೇ ಸುನೀತ ಹಿಂದಿನದರ ಕೊನೆಯ ಸಾಲು, ಈ ಸಂದರ್ಭದಲ್ಲಿ ಪ್ರಾರಂಭವಾಗುತ್ತದೆ – “! ಜೀವಂತವಾಗಿ ನೆಚ್ಚಿನ ನೆನಪುಗಳ ಹೆಸರುಗಳು” ಇದು ವ್ಯಾಲೇರಿಯ್ ಬ್ರ್ಯುಸೋವ್ ಈ ಪ್ರಕಾರದಲ್ಲಿ ಪರಿಪೂರ್ಣತೆ ತಲುಪಿದ ವಾದ ಮಾಡಬಹುದು. ಇಲ್ಲಿಯವರೆಗೆ, 150 ಸಾಹಿತ್ಯ ಎಣಿಕೆ ದಂಡೆಗಳು ರಷ್ಯಾದ ಕವಿಗಳು ಸುನೀತಗಳನ್ನು ಮತ್ತು ಕಾವ್ಯದ ಪ್ರಪಂಚದಲ್ಲಿ ಸುಮಾರು 600 ಇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಬಹಿರಂಗ4 days ago
ಗಾಳಿಪಟ ವೇಗದ ರಾಜಕುಮಾರ ‘ಬೀರ್ ಚಿಲಾರಾಯ್’..!
-
ದಿನದ ಸುದ್ದಿ6 days ago
ಕೊಟ್ಟ ಮಾತಿನಂತೆ ನಡೆದ ಡಿ ಬಾಸ್ ದರ್ಶನ್;ಕುದುರೆಯ ತಡಿ ನೀಡಿ, ಎಸ್.ಎಸ್.ಮಲ್ಲಿಕಾರ್ಜುನಗೆ ಕೃತಜ್ಞತೆ
-
ಬಹಿರಂಗ7 days ago
ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ
-
ಕ್ರೀಡೆ7 days ago
ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಮರಳಿ ತಂಡಕ್ಕೆ..!
-
ದಿನದ ಸುದ್ದಿ5 days ago
24 ಕೆರೆ ತುಂಬಿಸುವ ಯೋಜನೆಗೆ ರೂ.48 ಕೋಟಿಗಳ ಅನುದಾನ ಮಂಜೂರು : ಎಂ.ಪಿ ರೇಣುಕಾಚಾರ್ಯ
-
ನಿತ್ಯ ಭವಿಷ್ಯ7 days ago
ಈ ಯೋಗ ಇದ್ದರೆ ಖಂಡಿತ ದೊಡ್ಡ ರಾಜಕಾರಣಿ, ಸಮಾಜ ಸೇವಕ, ಜಿಲ್ಲಾಧಿಕಾರಿ(IAS),IPS, ಸಾಹಿತಿಗಳು, ಗಾಯಕರು, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗುವ ಸಂಭವ
-
ದಿನದ ಸುದ್ದಿ5 days ago
ಮಾಧ್ಯಮ ಉದ್ಯಮವಾಗಿರುವ ಈ ಕಾಲಘಟ್ಟದಲ್ಲಿ ಜನರೇ ಜನಾಭಿಪ್ರಾಯ ರೂಪಿಸುವ ಹೊಣೆ ಹೊರಬೇಕು : ಹಿರಿಯ ಪತ್ರಕರ್ತ ಬಸವರಾಜ್ ದೊಡ್ಮನಿ
-
ನಿತ್ಯ ಭವಿಷ್ಯ6 days ago
ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?ಕಂಕಣಬಲ ಕೂಡಿ ಬರಲು ಏನು ಮಾಡಬೇಕು?