ದಿನದ ಸುದ್ದಿ
ಅನ್ನದಾತನ ಉನ್ನತಿಗಾಗಿ ಸಮಾಜಮುಖಿ ಶ್ರಾವಣಾನುಷ್ಟಾನ ಕೈಗೊಂಡಿರುವ ತರಳಬಾಳು ಶ್ರೀ ಜಗದ್ಗುರುವರ್ಯರು
ಕನ್ನಡನಾಡಿನ ಹಬ್ಬ ಹರಿದಿನಗಳ ಸಂಖ್ಯೆಗೆ ಕಡಿವಾಣವ ಹಾಕುವ ಕಾರ್ಯ ಆ ವಿಧಾತನಿಂದಲೂ ಸಾಧ್ಯವಿಲ್ಲ.ಜನರ ಉದ್ದಾರಕ್ಕೂ ? ತಮ್ಮ ಅಸ್ತಿತ್ವದ ಕಡ್ಡಾಯ ಅಭಿವ್ಯಕ್ತಿಗೋ ? ಮುಗ್ಧ ಭಕ್ತರ ಭಾವನೆಯ ಬಂಡವಾಳದ ಸದುಪಯೋಗಕ್ಕೊ,? ಧಾರ್ಮಿಕ ದಬ್ಬಾಳಿಕೆಯ ಪ್ರತಿಷ್ಠೆಗೋ ? ಪ್ರಶ್ನೆ ಮಾಡಲು ಯಾವ ಬುದ್ಧಿವಂತನೂ ಇಲ್ಲ ಎನ್ನುವ ಪರಿಸ್ಥಿತಿಯ ಲಾಭ ಹಾಗೂ ಸ್ವಪ್ರಶಂಸೆಯಿಂದಲೊ ? ಈ ನೆಲದ ಕರ್ಮವೋ,ಎಂಬಂತೆ ನಿತ್ಯವೂ ಸರ್ವಅಲಂಕಾರ ಭೂಷಿತ ಸ್ವಘೋಷಿತ ದೇವಮಾನವ ಕಪಟ ಕಾವಿಧಾರಿಗಳಿಂದಅಡ್ಡ ಪಲ್ಲಕ್ಕಿ, ಉದ್ದಪಲ್ಲಕ್ಕಿ ,ಹೋಮ,ಹವನ,ಯಜ್ಞ ,ಲಕ್ಷ ಪೂಜೆ, ಕೋಟಿ ಪೂಜೆ ಹೀಗೆ ಹೊಸ ಹೆಸರಿಡಲು ಸಾಧ್ಯವಿರದಷ್ಟು ಅತೀರೇಖದ ಅವಿವೇಕಿಗಳ ನಾಟಕಕ್ಕೆ ಮುಗ್ದ ಸಮಾಜ ‘ಭಕ್ತರು ‘ ‘ ಶಿಷ್ಯರು’ ಎಂಬ ಹೆಸರಲ್ಲಿ ಕಣ್ಣಿದ್ದು ಕುರುಡರಾಗಿ,ಕಿವಿ ಇದ್ದು ಕಿವುಡರಾಗಿ ಅವರಾಡುವ,ಆಡಿಸುವ ಡೋಂಗಿ ನಾಟಕಕ್ಕೆ ಪ್ರೇಕ್ಷಕರಾಗಿ ಕೆಲವೊಮ್ಮೆ ದಿಢೀರ್ ಪಾತ್ರಧಾರಿಗಳಾಗಿ ಪ್ರಬುದ್ಧ ನಾಗರಿಕ ಸಮಾಜ ಹಂಗಿಸುವ ಗುಲಾಮರಂತೆ ಚಾಚು ತಪ್ಪದೆ ಕಾರ್ಯಪ್ರವೃತ್ತರಾಗಿರುವುದು ಸಮಾಜದ ದುರಂತವೇ ಸರಿ.
ಈ ಶ್ರಾವಣ ಮಾಸವೆಂದರೆ ಅದು ಪೂಜೆ ಅನುಷ್ಠಾನಗಳಿಗೆ ಒಳ್ಳೆಯ ಮಾರುಕಟ್ಟೆ. ಉತ್ಸವ ಹಾಗೂ ಪಲ್ಲಕ್ಕಿ ಪ್ರಿಯರಾದ ಕಾವಿಧಾರಿಗಳಿಗಂತೂ ಫುಲ್ ಕಲೆಕ್ಷನ್ ಹಾಗೂ ಸಂವಿಧಾನದಲ್ಲೇ ಉಲ್ಲೇಖ ಇಲ್ಲದ ಸ್ವಯಂ ಘೋಷಿತ ಕಾನೂನಿನ ನಿರ್ಮಾತೃಗಳಂತೆ
ತಮ್ಮ ಸರಹದ್ದಿನ ವ್ಯಾಪ್ತಿಯಲ್ಲಿ ಮತ್ತೋರ್ವ ಮಠಾಧೀಶರು ಬಂದರೆ ತಮ್ಮ ವ್ಯಾಪರಕ್ಕೆ ಎಲ್ಲಿ ಭಂಗ ಬರುತ್ತದೆಯೋ ಎಂಬ ಉದರ ಸಂಕಟದಿಂದ ತಮ್ಮ ಸುತ್ತಲಿನ ಅರೆಬೆಂದ ಮತಿಹೀನರನ್ನು ಧರ್ಮದ ಹೆಸರಿನಲ್ಲಿ ಎತ್ತಿಕಟ್ಟಿ ಧಮಕೀ ಹಾಕಿದ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ.ಇಂತಹ ವಿಷ ವರ್ತುಲದಲ್ಲಿ ಕಾಯಕವೇ ಕೈಲಾಸ ಅದುವೇ’ ಕರ್ತವ್ಯದ ಉದ್ದೇಶ’ ಎಂದು,ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ ಎಂಬ ಶರಣರ ಸಂಕಲ್ಪದಂತೆ ರೈತರ ಬದುಕು ನಿತ್ಯವೂ ಶ್ರಾವಣವಾಗಲೆಂದು ತ್ರೀಕಾಲವೂ ಅನ್ನಧಾತನ ಅಭ್ಯುಧಯಕ್ಕೆ ಕೈಂಕರ್ಯ ಬದ್ದರಾಗಿರುವ ರೈತಮೆಚ್ಚಿದ ಗುರುವಾಗಿ ಪ್ರತ್ಯಕ್ಷ ದೇವರೆಂದೇ ನಾಮಾಂಕಿತರಾದ ಪರಮ ಪೂಜನೀಯ ಶ್ರೀ ಮದುಜ್ಠಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಶ್ರಾವಣಾನುಷ್ಟಾನ ದೇಶವೇ ಮೆಚ್ಚುವಂತಹದ್ದು.
ಭರಪೂರ ಮಳೆಯ ಪರಿಣಾಮ ನಾಡಿನ ಎಲ್ಲಾ ಜಲಾಶಯಗಳು ಭರ್ತಿಯಾಗಿ ಪ್ರತಿದಿನವೂ 3 ರಿಂದ 4 ಲಕ್ಷ ಕ್ಯೂಸೆಕ್ಸ್ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿಯುತ್ತಿರುವ ದೃಶ್ಯವನ್ನು ಹಳ್ಳಿಯ ಜನ ತಮ್ಮ ಬಿರುಕುಬಿಟ್ಟ ಕೆರೆಯ ದಡಗಳಲ್ಲಿ ನಿಂತು ನೋಡುತ್ತಿದ್ದರೆ ಹೃದಯ ಕಲಕುತ್ತದೆ.ಆಳುವ ಸರ್ಕಾರಗಳ ದೂರದರ್ಶಿತ್ವದ ಶಾಶ್ವತ ರೈತ ಸ್ನೇಹಿ ಯೋಜನೆಗಳು ರೂಪುಗೊಳ್ಳದ ಫಲವಾಗಿ ಅನ್ನಧಾತ ಇಂದು ಆತ್ಮಹತ್ಯೆಯ ಜಾಡು ಹಿಡಿದಿದ್ದಾನೆ.
ತರಳಬಾಳು ಶ್ರೀ ಜಗದ್ಗುರುವರ್ಯರ ಮಾತಿನಲ್ಲಿಯೇ ಹೇಳುವುದಾದರೆ ರೈತರಿಗೆ ಯಾವ ಭಾಗ್ಯವೂ ಬೇಡ ಸಮರ್ಪಕವಾದ ನೀರು ಮತ್ತು ವಿದ್ಯುತ್ ನೀಡಿದರೆ ರೈತರೇ ಸರ್ಕಾರಕ್ಕೆ ಸಾಲ ನೀಡುವಂತಾಗುತ್ತಾರೆ ಎಂಬುದರಲ್ಲಿ ಎಷ್ಟೊಂದು ಅರ್ಥವಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಮೇಲಿನ ನಂಬಿಕೆ ಅನ್ನಧಾತನ ಮನದಲ್ಲಿ ಅಳಿದು. ಧಾರ್ಮಿಕ ನೇತಾರರ ಸಾಮಿಪ್ಯದಿ ನಮ್ಮ ಕಾರ್ಪಣ್ಯಕ್ಕೆ ಉತ್ತರವಿದೆ ಎಂಬ ಆಶಾಭಾವನೆ ಉಳಿದಿದೆ. ಸಂಪ್ರದಾಯಸ್ಥ ಸತ್ಯ ತತ್ವಾದಾರ್ಶ ಧಾರ್ಮಿಕ ಪೀಠದ ಅಧಿಪತಿಗಳಿಗೆ ಶ್ರಾವಣ ಮಾಸವನ್ನು ಸಮಾಜದ ಶ್ರೇಯೋಭಿವೃದ್ದಿಯ ಪೂಜಾ ಕೈಂಕರ್ಯಗಳ ಅಣಿಯಾಗಿದ್ದರೆ ಕಪಟ ಕಾವಿಧಾರಿಗಳಿಗೆ ಶ್ರಾವಣ ಮಾಸ ಕೇವಲ ಅತ್ಯುತ್ತಮ ವಹಿವಾಟಿನ ತಿಂಗಳಾಗಿದೆ. ಇವೆರೆಡಕ್ಕಿಂಲೂ ಬಿನ್ನವಾಗಿ ಬಸವ ಮರುಳಸಿದ್ದರ ವೈಚಾರಿಕ ತತ್ವ ಪರಂಪರೆಯ ವಿದ್ವತ್ತಿನ ಸಂಗಮವಾದ ತರಳಬಾಳು ಶ್ರೀ ಗಳು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ತರಳಬಾಳು ಕೇಂದ್ರದಲ್ಲಿ ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ, ಎಲ್ಲಾ ಪರಿಣಿತ ಎಂಜಿನಿಯರ್ ಗಳ ಸಭೆಯನ್ನು ತಮ್ಮ ಸಾನ್ನಿಧ್ಯದಲ್ಲಿ ಏರ್ಪಡಿಸಿ.ರಾಜಕೀಯ ರಂಗದ ಅಪರೂಪ ಜನಸ್ನೇಹಿ ಚಿಂತಕ ಬಿ.ಎಲ್.ಶಂಕರ್ ಅಧ್ಯಕ್ಷತೆಯಲ್ಲಿ ದಾವಣಗೆರೆಯಿಂದ ವ್ಯರ್ಥವಾಗಿ ಹರಿಯುತ್ತಿರುವ ಭದ್ರಾ ನದಿಯ ನೀರನ್ನು ಜಗಳೂರು ಹಾಗೂ ಭರಮಸಾಗರ ವ್ಯಾಪ್ತಿಯ ಕೆರೆಗಳಿಗೆ ಶೀಘ್ರವಾಗಿ ಮತ್ತು ಸಮರ್ಪಕವಾಗಿ ಹರಿಸುವ ವಿಸ್ತೃ ಯೋಜನೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸುತ್ತಿರುವ ಮಾಹಿತಿಯನ್ನು ಸಮಾಜ ಭಾಂಧವರಿಗೆ ತಿಳಿಸಲೇಬೇಕಾಗುತ್ತದೆ .
ರಾಜನಹಳ್ಳಿ ಏತ ನೀರಾವರಿಯ ಯೋಜನೆಯ1 ನೇ ಹಂತದ ಯೋಜನೆಯಲ್ಲಿ ದಾವಣಗೆರೆ ಮತ್ತು ಜಗಳೂರು ತಾಲ್ಲೂಕಿನ 23ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಳೆದ ವರ್ಷದಿಂದಲೇ ಜಾರಿಯಲ್ಲಿದೆ.ಆದರೂ ಹಲವು ತಾಂತ್ರಿಕ ದೋಷಗಳಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಫಲಪ್ರದವಾಗಿರಲಿಲ್ಲ, ಮಲೆನಾಡಿನಲ್ಲಿ ವಿಪರೀತ ಮಳೆಯಾಗಿ ತುಂಗಾ ಮತ್ತು ಭದ್ರಾ ಜಲಾಶಯಗಳು ತುಂಬಿ ಹರಿದು,ಹೆಚ್ಚುವರಿ ನೀರನ್ನು ಜಲಾಶಯಗಳಿಂದ ಹೊರಬಿಡುತ್ತಿದ್ದರೂ ಸಹ ತಾಂತ್ರಿಕ ಕಾರಣಗಳಿಂದ ಸುತ್ತಲಿನ ಕೆರೆಗಳಿಗೆ ನೀರು ಬಾರದರಿರುವುದು ಶ್ರೀಗಳ ಬೇಸರಕ್ಕೆ ಕಾರಣವಾಗಿದೆ. ಹೆಚ್ಚುವರಿ ನೀರಿನಿಂದ ಆಡಳಿತ ಮತ್ತು ಅಧಿಕಾರಿಗಳ ಜಾಗೃತಿವಹಿಸಿದ್ದರೆ ಎಲ್ಲಾ ಕೆರೆಗಳಿನ್ನು ತುಂಬಿಸಬಹುದಿತ್ತೆಂಬುದು ಮನೋ ಇಂಗಿತ.
ಈ ನಿಟ್ಟಿನಲ್ಲಿ ಈ ಯೋಜನೆಯಲ್ಲಿ ಇರುವ ದೋಷಗಳನ್ನು ಸರಿಪಡಿಸಿ 1 ನೇ ಹಂತದ ಯೋಜನೆಯ ಎಲ್ಲಾ ಕೆರೆಗಳಿಗೆ ಶತಾಯಗತಾಯ ನೀರು ತುಂಬಿಸುವಂತೆ ಶ್ರೀಗಳು ತಾಕೀತು ಮಾಡಿದರು.ಜಗಳೂರು ತರಳಬಾಳು ಹುಣ್ಣಿಮೆಯ ರೈತಕೊಡುಗೆ ಎನ್ನುವಂತೆ 2 ನೇ ಹಂತದ 2
ಯೋಜನೆಗಳಿಗೆ 500 ಕೋಟಿ ರೂಪಾಯಿ ಅನುದಾನ ಬಜೆಟ್ನಲ್ಲಿ ದೊರೆತಿದ್ದು,ಮೊದಲ ಹಂತದಲ್ಲಿ ಕಂಡುಬಂದ ಎಲ್ಲಾ ನ್ಯೂನತೆಗಳು 2 ನೇ ಹಂತದ ಕಾರ್ಯಯೋಜನೆಯಲ್ಲಿ ಪುನರಾವರ್ತನೆಯಾಗದಂತೆ ಎಚ್ಚರವಹಿಸಲು ಕ್ರಮವಹಿಸಿವ ಪರಮರ್ಶೆಯನ್ನು ಶ್ರೀಗಳು ನಡೆಸಿದರು.
ಜೊತೆಗೆ ಚಿಕ್ಕಮಂಗಳೂರು ಜಿಲ್ಲೆಯ ಹಬ್ಬೆ ಫಾಲ್ಸ್ ,ಮದಗದಕೆರೆ,ಅಯ್ಯನಕೆರೆ,ಲಿಂಗದಹಳ್ಳಿ ವ್ಯಾಪ್ತಿಯ ಎಲ್ಲಾ ಕೆರೆಗಳಿಗೆ ನೀರು ಹರಿಸುವ ಕುರಿತು ಶ್ರೀಗಳು ಸಮಾಲೋಚನೆ ನಡೆಸಿದರು. ಅಧಿಕಾರಿಗಳ ಮೇಲೆ ನಿಯಮಿತ ಒತ್ತಡ ಹಾಕಿದರೆ ಸಾರ್ವಜನಿಕ ಕೆಲಸಗಳು ಆಗುವುದು ಕಷ್ಟ ಎಂದು ಅರಿತಿರುವ ಶ್ರೀಗಳು ,ಈ ಸಭೆಯ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ಚೀಫ್ ಎಂಜಿನಿಯರ್ ಗಳು,ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಅಧಿಕಾರಿಗಳು ಹಾಜರಿದ್ದರು.
ರೈತಾಭ್ಯುದಯದ ಕಲ್ಯಾಣದ ಕನಸೇ ಶ್ರೀ ಜಗದ್ಗುರುವರ್ಯರ ಅಂತರಾಳದ ಆಶಯ ತ್ರೀಕಾಲವೂ ಸಮಾಜದ ಉತ್ಕೃಷ್ಟ ಉನ್ನತಿಗೆ ಶ್ರಮದಋಷಿಯಂತೆ ಕೈಂಕರ್ಯಬದ್ದರಾಗಿರುವ ಪರಮಾರಾಧ್ಯ ಶ್ರೀಗಳ ಪವಿತ್ರ ಪಾದಗಳಲ್ಲಿ ಭಕ್ತಿ ಪೂರ್ವಕ ಪ್ರಣಾಮಗಳನ್ನು ಸಲ್ಲಿಸಲಷ್ಟೇ ನಮಗೆ ಸಾಧ್ಯ.
-ಬಸವರಾಜ ಸಿರಿಗೆರೆ
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ದಾವಣಗೆರೆ | ವಿನೋಬನಗರದ ಶ್ರೀ ಚೌಡೇಶ್ವರಿ ಜಾತ್ರೆ ಸಂಭ್ರಮ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ4 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?