ಲೈಫ್ ಸ್ಟೈಲ್
ತುರ್ತು ಪರಿಸ್ಥಿತಿಯಲ್ಲಿ ಸಹಾಯದ ಹಸ್ತ ಚಾಚಿದರೆ ಜೀವ ಉಳಿಸಿದ ಪುಣ್ಯ ನಿಮ್ಮದು !
ನಾವು ದಿನನಿತ್ಯದ ಜೀವನದಲ್ಲಿ ಒಂದಲ್ಲ ಒಂದು ತುರ್ತುಸ್ಥಿತಿಯನ್ನು ನೋಡಿರುತ್ತೇವೆ. ಇದ್ದಕ್ಕಿದ್ದಂತೆ ನಿಶ್ಯಕ್ತಿಯಿಂದ ಕುಸಿದು ಬೀಳುವುದು, ರಸ್ತೆ ಅಪಘಾತಗಳು, ಬೆಂಕಿ ಅವಘಡಗಳು, ಎದೆನೋವು, ಉಸಿರಾಟದ ತೊಂದರೆ, ಕೈ ಕಾಲುಗಳು ಸೆಳೆತಕ್ಕೊಳಗಾಗುವುದು ಅಥವಾ ಸ್ವಾಧೀನ ಕಳೆದುಕೊಳ್ಳುವುದು, ಹಾವು ಕಡಿತ ಹೀಗೆ ಅನೇಕ ಘಟನೆಗಳ್ನು ನಮ್ಮಕಣ್ಣೆದುರಿಗೇ ನಡೆಯುತ್ತಿದ್ದರೂ ಕೆಲವೊಮ್ಮೆ ಏನು ಮಾಡಬೇಕೆಂದು ತೋಚದೇ ಹಾಗೇ ನಿಂತುಬಿಡುವುದು ಸಾಮಾನ್ಯ. ಆದರೆ ಆ ತುರ್ತು ಸ್ಥಿತಿಯಲ್ಲಿ ಸಮಯ ಮೀರಿ ಜೀವಕ್ಕೇ ಅಪಾಯ ಉಂಟಾಗಬಹುದು. ಸಮಯ ತನ್ನ ಗುರಿ ಸಾಧಿಸಿಕೊಳ್ಳುವ ಮುನ್ನವೇ ನಾವು ಸ್ವಲ್ಪಜಾಣತನದಿಂದ ವರ್ತಿಸಿದರೆ ಆ ವ್ಯಕ್ತಿಯ ಜೀವಿತಾವಧಿಗೆ ಮರುಹುಟ್ಟು ನೀಡಿದಂತಾಗುತ್ತದೆ.
ತುರ್ತುಸ್ಥಿತಿಯ ನಿರ್ವಹಣೆಯಲ್ಲಿ ಕ್ರಮವಾಗಿ ವಾಯು ನಾಳ, ಉಸಿರಾಟ ಹಾಗೂ ರಕ್ತ ಸಂಚಲನೆ (A= AIRWAY, B=BREATHING, C=CIRCULATION) ಎಂಬ ಮೂರು ಅಂಶಗಳು ಮುಖ್ಯವಾಗುತ್ತವೆ. ಯಾವುದೇ ತುರ್ತುಸ್ಥಿತಿಯಲ್ಲಿ ಮೊಟ್ಟಮೊದಲು ಈ ಮೂರು ಅಂಶಗಳ ಪರೀಕ್ಷೆಯನ್ನು ಮೊದಲು ಮಾಡಬೇಕಾಗುತ್ತದೆ. ಬದಲಾಗಿ ಕೆಲವೊಂದು ಸಂದರ್ಭಗಳಲ್ಲಿ (ಉದಾ:ವಿಪರೀತ ರಕ್ತಸ್ರಾವ) ರಕ್ತ ಸಂಚಲನೆ, ಉಸಿರಾಟ ನಂತರ ವಾಯುನಾಳ ಎಂಬ ಕ್ರಮವಾಗಿ ಪರೀಕ್ಷಿಸಬೇಕಾಗುತ್ತದೆ. ನಂತರವಷ್ಟೇ ಆ ನಿರ್ಧಿಷ್ಟ ಸಂದರ್ಭಾನುಸಾರ ಚಿಕಿತ್ಸೆ ನೀಡಬೇಕಾಗುತ್ತದೆ. ಈಗ ನಿರ್ಧಿಷ್ಟ ಸಂದರ್ಭಗಳಲ್ಲಿ ಏನು ಮಾಡಬೇಕೆಂದು ತಿಳಿದುಕೊಳ್ಳೋಣ.
ನಿಶ್ಯಕ್ತಿಯಿಂದ ಕುಸಿದು ಬೀಳುವುದು
- ಈ ತರಹದ ಘಟನೆಗಳು ಸಾಮಾನ್ಯವಾಗಿ ರಕ್ತದಲ್ಲಿ ಕಾರ್ಬೊಹೈಡ್ರೇಟ್ ಅಂಶ ಅಥವಾ ರಕ್ತದೊತ್ತಡ ಕಡಿಮೆಯಾದರೆ ಉಂಟಾಗುತ್ತವೆ. ಈ ರೀತಿ ಸಂಭವಿಸಿದಲ್ಲಿ ವ್ಯಕ್ತಿಯ ಕೈಯಲ್ಲಿ ನಾಡಿಮಿಡಿತವನ್ನು ಪರೀಕ್ಷಿಸಬೇಕು.
- ತಕ್ಷಣವೇ ವ್ಯಕ್ತಿಯನ್ನು ಮಲಗಿಸಿ ಎರಡೂ ಕಾಲುಗಳನ್ನು ದೇಹಭಾಗಕ್ಕಿಂತ ಮೇಲ್ಮಟ್ಟಕ್ಕೆ ಇರಿಸಿಕೊಳ್ಳಬೇಕು
ಸಕ್ಕರೆ ಅಥವಾ ಅಲ್ಲೇ ಹತ್ತಿರದಲ್ಲಿ ಯಾರಾದರೂ ಬಳಿ ಚಾಕೋಲೇಟ್ ಇದ್ದಲ್ಲಿತಿನ್ನಿಸಬೇಕು
ವ್ಯಕ್ತಿಗೆ ಸಾಕೆನಿಸುವಷ್ಟು ನೀರುಕುಡಿಸಬೇಕು
ಉಸಿರಾಟದ ತೊಂದರೆ
- ಉಸಿರಾಟದ ತೊಂದರೆ ಹೊಗೆ ಅಥವಾ ಧೂಳಿನಿಂದ ಸಂಭವಿಸಿದ್ದರೆ ವ್ಯಕ್ತಿಯನ್ನುತಕ್ಷಣ ಆ ಸ್ಥಳದಿಂದ ಶುಭ್ರ ಗಾಳಿಯೆಡೆಗೆ ಕರೆದೊಯ್ಯಬೇಕು.
- ಅಸ್ತಮಾಎಂಬಿತ್ಯಾದಿ ಅಲರ್ಜಿಯಿಂದ ಸಂಭವಿಸಿದ್ದರೆ ವ್ಯಕ್ತಿಯನ್ನು ಮಲಗಿಸಿ ದೇಹದ ಮೇಲ್ಭಾಗವನ್ನುಎತ್ತರದ ಭಂಗಿಯಲ್ಲಿಅಂದರೆ 45ಡಿಗ್ರಿ ಕೋನದಲ್ಲಿ ಮಲಗಿಸಬೇಕು
- ಉಸಿರಾಟ ದೀರ್ಘವಾಗಿ ತೆಗೆದುಕೊಳ್ಳಲು ಸೂಚಿಸಬೇಕು
ಎದೆನೋವು
- ವ್ಯಕ್ತಿಯನ್ನು 45ಡಿಗ್ರಿ ಕೋನದಲ್ಲಿ ಮಲಗಿಸಬೇಕು
- ವ್ಯಕ್ತಿಯ ನಾಡಿಮಿಡಿತವನ್ನು ಪರೀಕ್ಷಿಸಬೇಕು.
- ದೀರ್ಘ ಉಸಿರಾಟವನ್ನು ಪ್ರೋತ್ಸಾಹಿಸಬೇಕು
- ನೀರು ಕುಡಿಸಬೇಕು (ಅನ್ನನಾಳದಲ್ಲಿ ಯಾವುದೇ ವಸ್ತು ಸಿಲುಕಿಕೊಂಡರೆ ನೀರು ಕುಡಿಸುವಂತಿಲ್ಲ)
- ಇದ್ಯಾವುದಕ್ಕೂ ಎದೆನೋವು ಕಡಿಮೆಯಾಗದಿದ್ದರೆ ತಕ್ಷಣವೇ ವೈದ್ಯರ ಸಮಾಲೋಚನೆ ಪಡೆಯಬೇಕು
ರಸ್ತೆ ಅಪಘಾತಗಳು
- ಮೊದಲು ವ್ಯಕ್ತಿಯನ್ನು ಮಲಗಿಸಿ ರಕ್ತಸ್ರಾವದ ಜಾಗಕ್ಕೆ ಒಂದು ಬಟ್ಟೆಯನ್ನು ಬಿಗಿಯಾಗಿಕಟ್ಟಬೇಕು
- ಕುತ್ತಿಗೆಗೆ ಪೆಟ್ಟಾದಲ್ಲಿ ವ್ಯಕ್ತಿಯನ್ನು ಸಮತಟ್ಟಾಗಿ ಮಲಗಿಸಿ, ವ್ಯಕ್ತಿಯು ತಲೆಯನ್ನು ಅತ್ತಿತ್ತತಿರುಗದಂತೆ ಹಿಡಿದುಕೊಳ್ಳಬೇಕು
- ತಲೆಗೆ ಪೆಟ್ಟುಉಂಟಾದಲ್ಲಿ ವ್ಯಕ್ತಿಯನ್ನು ಕೂರಿಸಿ ಯಾವುದೇ ತಡವಿಲ್ಲದೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು
- ಕೈಕಾಲುಗಳು ಪೆಟ್ಟಾದಲ್ಲಿದೇಹದ ಭಾರವನ್ನು ಊರದೇ ಅದೇ ಜಾಗಕ್ಕೆ ಮರದತುಂಡು ಅಥವಾ ರಟ್ಟನ್ನು ಕಟ್ಟಿಕೊಂಡು ಹಾಗೆಯೇ ಆಸ್ಪತ್ರೆಗೆ ಕರೆದೊಯ್ಯಬೇಕು.
ಬೆಂಕಿ ಅವಘಡಗಳು
- ಮೊದಲು ಬೆಂಕಿಯನ್ನು ನಂದಿಸಿ ವ್ಯಕ್ತಿಯನ್ನು ಆ ಸ್ಥಳದಿಂದ ಪಾರು ಮಾಡಬೇಕು
- ವಾಯುನಾಳ ಅಥವಾ ಉಸಿರಾಟದ ತೊಂದರೆಯಿದ್ದಲ್ಲಿ ವ್ಯಕ್ತಿಯನ್ನು ಶುಭ್ರಗಾಳಿಯಲ್ಲಿ ಕರೆದೊಯ್ಯಬೇಕು
- ಬೆಂಕಿ ಅವಘಡಗಳ ಸಂದರ್ಭದಲ್ಲಿ ಆ ವ್ಯಕ್ತಿಯ ಉಳಿವು ದೇಹದ ಎಷ್ಟು ಶೇಕಡಾ ಭಾಗ ಸುಟ್ಟುಹೋಗಿದೆ ಎಂಬುದನ್ನು ಅವಲಂಬಿಸಿರುತ್ತದೆ
ಕೈಕಾಲುಗಳು ಸೆಳೆತಕ್ಕೊಳಗಾಗುವುದು
- ವ್ಯಕ್ತಿಯನ್ನು ಎಡ ಮಗ್ಗುಲಲ್ಲಿ ಮಲಗಿಸಬೇಕು
- ವ್ಯಕ್ತಿಯ ಬಾಯಲ್ಲಿ ಕರ್ಚಿಫ್ ಅಥವಾ ಬಟ್ಟೆಯನ್ನು ಇಡಬೇಕು
- ಯಾವುದೇ ಕಾರಣಕ್ಕೂ ನೀರನ್ನು ಕುಡಿಸಬಾರದು
ಹಾವು ಕಡಿತ
- ಹಾವು ಕಡಿದಜಾಗಕ್ಕೆ ಏನನ್ನೂ ಹಚ್ಚಬಾರದು
- ಬಾಯಿಂದ ಆ ಜಾಗದ ರಕ್ತವನ್ನು ಹೊರಹಾಕಲು ಪ್ರಯತ್ನಿಸಬಾರದು
- ಹಾವು ಕಡಿದಜಾಗದ ಹತ್ತಿರದ ಭಾಗಕ್ಕೆ ತುಂಬಾ ಬಿಗಿಯೂ ಸಡಿಲವೂ ಅಲ್ಲದೇ ದಾರವನ್ನು ಅಥವಾ ಕರ್ಚಿಫ್ನನ್ನು ಕಟ್ಟಬೇಕು
- ವ್ಯಕ್ತಿಗೆಯಾವುದೇ ತೊಂದರೆಗಳು ಶುರುವಾಗುವ ಮೊದಲೇ ಅವನನ್ನು ಆಸ್ಪತ್ರೆಗೆ ಕರೆದು ಹೋಗುವುದು ಒಳಿತು.
ಇದನ್ನು ಓದಿ: ರಕ್ತದಾನ-ಜೀವದಾನ
ರಕ್ತಸ್ರಾವ
- ರಕ್ತಸ್ರಾವವನ್ನು ನಿಲ್ಲಿಸಿ ಅಲ್ಲಿಗೊಂದು ಬಟ್ಟೆಯನ್ನು ಕಟ್ಟಬೇಕು
- ಮೂಗಿನಿಂದರಕ್ತ ಸೋರಿದರೆತಕ್ಷಣ ಮೂಗನ್ನುಗಟ್ಟಿಯಾಗಿ ಸ್ವಲ್ಪ ನಿಮಿಷಗಳ ಕಾಲ ಹಿಡಿದುಕೊಳ್ಳಬೇಕು
- ವಿಪರೀತರಕ್ತಸ್ರಾವವಾಗಿದ್ದರೆ ವ್ಯಕ್ತಿಯ ಕಾಲುಗಳನ್ನು ದೇಹದ ಭಾಗದಿಂದ ಮೇಲ್ಭಾಗದಲ್ಲಿ ಹಿಡಿದುತಕ್ಷಣಆಸ್ಪತ್ರೆಗೆಕರೆದೊಯ್ಯಬೇಕು
- ಯಾವುದೇ ಸಂದರ್ಭಗಳಲ್ಲಿ ವ್ಯಕ್ತಿಯ ನಾಡಿಮಿಡಿತದ ಕೊಂಚವೂ ಇಲ್ಲದೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ತಕ್ಷಣವೇ ಕಾರ್ಡಿಯೋಪಲ್ಮೊನರಿ ರಿಸಸಿಟೇಷನ್ (CPR) ಮಾಡಬೇಕಾಗುತ್ತದೆ. CPR ಅಂದರೆ ನಿಂತುಹೋಗುತ್ತಿರುವ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯವನ್ನು ಪುನರುಜ್ಜೀವನ ಗೊಳಿಸುವುದು. ಇದರಲ್ಲಿನಾಡಿಮಿಡಿತ ಮತ್ತು ಸ್ವಾಭಾವಿಕ ಉಸಿರಾಟ ಮರುಕಳಿಸುವವರೆಗೂ 30:2 ಅನುಪಾತದಲ್ಲಿ ಕ್ರಮವಾಗಿ ಎದೆ ಒತ್ತುವುದು ಹಾಗೂ ಬಾಯಲ್ಲಿ ಗಾಳಿ ಊದುವುದು ಮಾಡಬೇಕಾಗುತ್ತದೆ. ವಾಹನ ಸಿಕ್ಕ ನಂತರ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. CPRನ್ನು ವೈದ್ಯಕೀಯರಲ್ಲದ ವ್ಯಕ್ತಿಗಳೂ ಕೂಡ ಮಾಡಬಹುದು.
ಈ ಮೇಲಿನ ಎಲ್ಲಾ ಪ್ರಥಮ ಚಿಕಿತ್ಸೆಗಳು ಕೇವಲ ಆಯಾ ಸಂದರ್ಭಗಳಿಗಷ್ಟೇ ಸೀಮಿತವಾಗಿರುತ್ತವೆ ಮತ್ತು ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.
English summary: Tips for emergency healthcare in Kannada. First aid tips in Kannada

ಲೈಫ್ ಸ್ಟೈಲ್
ರೆಸಿಪಿ | ಖರ್ಜೂರದ ಹೋಳಿಗೆ ಮಾಡೋದು ಹೇಗೆ ಗೊತ್ತಾ..?

ಬೇಕಾಗುವ ಪದಾರ್ಥಗಳು
- ಖರ್ಜೂರ : ಅರ್ಧ ಕೆ.ಜಿ.
- ಸಕ್ಕರೆ : ಅರ್ಧ ಲೋಟ
- ಗಸಗಸೆ : ಸ್ವಲ್ಪ
- ಯಾಲಕ್ಕಿ : ಸ್ವಲ್ಪ
- ಹುರಿಗಡಲೆಹಿಟ್ಟು : 1-2 ಸೌಟು
- ಮೈದಾ : 2 ಲೋಟ
- ರವೆ : ಅರ್ಧ ಲೋಟ
- ಅಕ್ಕಿ ಹಿಟ್ಟು : ಸ್ವಲ್ಪ
- ತುಪ್ಪ : ಸ್ವಲ್ಪ
- ಉಪ್ಪು : ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಖರ್ಜೂರದ ತುಂಬು, ಬೀಜ ತೆಗೆದು ಸ್ವಚ್ಚಗೊಳಿಸಿಕೊಂಡ
ಒರಳಲ್ಲಿ ರುಬ್ಬಬೇಕು. ಖರ್ಜೂರ ಸಣ್ಣಗಾದ ಮೇಲೆ ಹುರಿದ ಗಸಗಸೆ, ಯಾಲಕ್ಕಿ, ಸಕ್ಕರೆ, ಹುರಿಗಡಲೆಹಿಟ್ಟು ಹಾಕಿ ರುಬ್ಬಿ ಹೂರಣವನ್ನು ಸಿದ್ಧಗೊಳಿಸಬೇಕು. ಹೋಳಿಗೆ ಹಿಟ್ಟಿನಂತೆ ಮೇಲೆ ಹೇಳಿದ ಪ್ರಮಾಣ ಹಿಟ್ಟನ್ನು ನಾದಿ ಕಣಕವನ್ನು ಸಿದ್ಧಗೊಳಿಸಬೇಕು. ಸ್ವಲ್ಪ ದಪ್ಪ ಲಟ್ಟಿಸಿ, ಅಂಗೈ ಅಗಲ ಹೋಳಿಗೆ ಲಟ್ಟಿಸಿ ಬೇಯಿಸಬೇಕು. ಬೇಯಿಸುವಾಗ ತುಪ್ಪ ಹಚ್ಚಬೇಕು. ಈ ಹೋಳಿಗೆ 8-10 ದಿನ ಇಟ್ಟರೂ ಕೆಡುವುದಿಲ್ಲ. ಇದು ಪೌಷ್ಟಿಕ ಆಹಾರವಾಗಿದ್ದು, ಖರ್ಜೂರದಲ್ಲಿ ಜೀವಸತ್ವ ಹೆಚ್ಚಾಗಿರುವುದು.
ಇದನ್ನೂ ಓದಿ : ನರದೌರ್ಬಲ್ಯ ನಿವಾರಣೆಗೆ ಬೆಳ್ಳುಳ್ಳಿ ಬಳಸಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್
ನರದೌರ್ಬಲ್ಯ ನಿವಾರಣೆಗೆ ಬೆಳ್ಳುಳ್ಳಿ ಬಳಸಿ

100 ಗ್ರಾಂ ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು
- ಸಾರಜನಕ : 3.5 ಗ್ರಾಂ
- ಪಿಷ್ಠ : 28.3 ಗ್ರಾಂ
- ಮೇದಸ್ಸು : 0.5 ಗ್ರಾಂ
- ಸುಣ್ಣ : 28 ಮಿಲಿಗ್ರಾಂ
- ರಂಜಕ : 310 ಮಿಲಿಗ್ರಾಂ
- ಕಬ್ಬಿಣ : 1.8 ಮಿಲಿಗ್ರಾಂ
- ನಿಯಾಸಿನ್ : 0.4 ಮಿಲಿಗ್ರಾಂ
- ಸಿ’ ಜೀವಸತ್ವ : 14 ಮಿಲಿಗ್ರಾಂ
ಬೆಳ್ಳುಳ್ಳಿಯಿಂದ ತಯಾರಿಸಬಹುದಾದ ಅಡುಗೆಗಳು
1. ಬೆಳ್ಳುಳ್ಳಿ ಮೆಣಸಿನಸಾರು
3. ಬೆಳ್ಳುಳ್ಳಿ ಚಟ್ಟಿಪುಡಿ.
2. ಬೆಳ್ಳುಳ್ಳಿ ಬಜ್ಜಿ
ಇದನ್ನೂ ಓದಿ | ಏನಿದು ? ಗಡಿಮಾರಿ..!
ಬೆಳ್ಳುಳ್ಳಿಯಲ್ಲಿರುವ ಔಷಧೀಯ ಗುಣಗಳು
1. ಬೆಳ್ಳುಳ್ಳಿಯನ್ನು ಆಹಾರದ ಜೊತೆ ಸೇವಿಸುವುದರಿಂದ ಹಸಿವು ಹೆಚ್ಚಾಗುತ್ತದೆ ನರದೌರ್ಬಲ್ಯ ನಿವಾರಣೆಯಾಗುತ್ತದೆ.
2. ಶೀತಕಾಲದಲ್ಲಿ ಉಂಟಾಗುವ ಕಿವಿ ನೋವಿಗೆ ಬೆಳ್ಳುಳ್ಳಿ ಹಾಕಿ ಕಾಯಿಸಿದ
3. ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ಕಿವಿಗೆ ಹಾಕುವುದರಿಂದ ನೋವು ಶಮನವಾಗುತ್ತದೆ. 3. ಸುಟ್ಟ ಬೆಳ್ಳುಳ್ಳಿಯ ಎರಡು ತೊಳೆಗಳನ್ನು ಮಕ್ಕಳಿಗೆ ತಿನ್ನಿಸುವುದರಿಂದ ಜಂತು ಹುಳುಗಳು ಸಾಯುತ್ತವೆ.
4. ಎರಡು ಬೆಳ್ಳುಳ್ಳಿ ತೊಳೆಗಳ ಜೊತೆಗೆ ಐದಾರು ತುಳಸಿ ಎಲೆಗಳನ್ನು ಬೆರೆಸಿ ಅರೆದು ಹಚ್ಚುವುದರಿಂದ ಹುಳುಕಡ್ಡಿ ನಿವಾರಣೆಯಾಗುತ್ತದೆ.
5. ಬೆಳ್ಳುಳ್ಳಿಯೊಡನೆ ಹರಳೆಣ್ಣೆಯನ್ನು ಹಾಕಿ ಕಾಯಿಸಿ ನಂತರ ಆರಿಸಿ ನೋವಿರುವ ಭಾಗಗಳಿಗೆ ಉಜ್ಜುವುದರಿಂದ ಊತ ಮತ್ತು ನೋವು ಕಡಿಮೆಯಾಗುತ್ತದೆ.
6. ಬಾಣಂತಿಯರ ಆಹಾರದ ಜೊತೆ ಬೆಳ್ಳುಳ್ಳಿಯನ್ನು ಬಳಸುವುದರಿಂದ ಶೀತದ ಬಾಧೆ ತಟ್ಟುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್
ಏನಿದು ? ಗಡಿಮಾರಿ..!

- ಡಾ.ಎನ್.ಬಿ.ಶ್ರೀಧರ್,ಶಿವಮೊಗ್ಗ
ಈಗ ಸ್ವಲ್ಪ ದಿನಗಳ ಹಿಂದೆ ಶಿವಮೊಗ್ಗದಿಂದ ಸಾಗರಕ್ಕೆ ಕಾರ್ಯನಿಮಿತ್ತ ಹೋಗುವಾಗ ರಸ್ತೆಯ ಬದಿಯಲ್ಲಿ ಒಂದು ಮರದ ಗಾಡಿ, ಅದಕ್ಕೆ ಎಳೆಯಲು ಎರಡು ಮರದ ರೆಂಬೆಗಳು, ಅದರ ಮೇಲೊಂದು ದೇವರ ದೇವತೆಯ ಮೂರ್ತಿ, ಅದರ ಕೈಲೊಂದು ಖಡ್ಗ, ಹಿಂದುಗಡೆ ಕಸಬರಿಗಳ ಮತ್ತು ಕಸದ ರಾಶಿ ಕಂಡೆ. ಕೆಲವೊಮ್ಮೆ ಗಂಡು ಮತ್ತು ಹೆಣ್ಣು ಇರುವ ಜೋಡಿ ಮೂರ್ತಿಗಳೂ ಸಹ ಕಂಡು ಬಂದವು.
ಒಂದಲ್ಲ ಎರಡಲ್ಲ.. ಶಿವಮೊಗ್ಗದಿಂದ ಸಾಗರದವರೆಗಿನ ರಸ್ತೆಯಲ್ಲೆ ಮೂರು ನಾಲ್ಕು ಈ ತರದ ಪ್ರತಿಕೃತಿಗಳು ಕಂಡು ಬರುತ್ತವೆ. ಬಹಳ ವರ್ಷಗಳಿಂದಲೂ ಇದು ಬಹಳ ಸಹಜವಾಗಿ ಕಂಡು ಬರುವ ಈ ದೃಶ್ಯ ಶಿವಮೊಗ್ಗ-ಹೊಸನಗರ, ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿಯೂ ಕಂಡು ಬರುವುದು ಸಾಮಾನ್ಯ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಆಚರಣೆ ಉತ್ತರ ಕರ್ನಾಟಕದಲ್ಲಿ ಕಾಣಸಿಗದು.
ಏನಿದರ ಅರ್ಥ ? ಅಂತ ನೋಡಲು ಹೋದಾಗ ಇದರ ಹೆಸರು “ಗಡಿಮಾರಿ” ಎಂದು ತಿಳಿದು ಬಂದಿತು. ಊರಲ್ಲಿ ಯಾವುದಾದರೂ ಸೋಂಕು ರೋಗ ಕಂಡು ಬಂದರೆ ಅಥವಾ ಇತರ ದುರ್ಘಟನೆಗಳು ನಡೆದರೆ ಆ ಘಟನೆಗೆ ಕಾರಣವಾದ ದುಷ್ಟ ಶಕ್ತಿಯನ್ನು ಊರ ಗಡಿ ದಾಟಿಸಲು ಈ ಪದ್ಧತಿ ಇದೆ ಎಂದು ಹಲವು ಹಿರಿಯರು ಹೇಳಿದರು.
ಈ ಬಗ್ಗೆ ಸದ್ಯದ ಯುವಕರಿಗೆ ಇರುವ ಮಾಹಿತಿ ಅಷ್ಟಕ್ಕಷ್ಟೇ. ಒಂದು ಊರಿನ ಗಡಿ ದಾಟಿಸುವಾಗ ಆ ಮೂರ್ತಿಯ ಜೊತೆಗೆ ಊರಲ್ಲಿರುವ ಕಸ, ಕಡ್ಡಿ ಇತ್ಯಾದಿಗಳನ್ನು ಹೇರಿಕೊಂಡು ಮತ್ತೊಂದು ಊರಿನ ಗಡಿಯ ಹತ್ತಿರ ಬಂದರೆ ಅವರ ಕೆಲಸ ಮುಗಿದಂತೆ.
ಮರದಿಂದ ತಯಾರಿಸಿದ ಬೊಂಬೆಗೆ ಕೆಂಪು, ಬಿಳಿ ಹಳದಿ ಮತ್ತು ಕಪ್ಪು ಬಣ್ಣ ಬಳಿದು ಅದನ್ನು ಚಿಕ್ಕ ಮರದ ಕೈಗಾಡಿಯಲ್ಲಿ ಕುಳ್ಳಿರಿಸಿ ಬೊಂಬೆಯ ಕುತ್ತಿಗೆಗೆ ಹೂವಿನ ಹಾರ ಹಾಕಿ ಪೂಜೆ ಮಾಡುತ್ತಾರೆ. ನಂತರ ಬೊಂಬೆಗೆ ಊದುಬತ್ತಿ ಇಟ್ಟು, ಆರತಿ ಬೆಳಗಿ ಊರಿನ ಜನರೆಲ್ಲ ಮಾರಿಯನ್ನು ಕೈಗಾಡಿಯ ಮುಖೇನ ದೂಡಿಕೊಂಡು ಬಂದು ತಮ್ಮ ಗ್ರಾಮದ ಗಡಿ ದಾಟಿಸಿ ಬಿಡುವುದು ಸಂಪ್ರದಾಯ.
ಕೆಲವೊಮ್ಮೆ ಮುಂದಿನ ಊರಿಗೆ ಒಯ್ಯದಿದ್ದರೆ, ಇದು ಇಟ್ಟಲ್ಲೇ ಕೊಳೆತು ಅಥವಾ ಗೆದ್ದಲು ಹಿಡಿದು ಮಣ್ಣು ಸೇರಲು ಹಲವಾರು ವರ್ಷಗಳು ಬೇಕಾಗುತ್ತವೆ. ಹೀಗಾಗಿ ಸಾಗರ, ತೀರ್ಥಹಳ್ಳಿಯ ರಸ್ತೆಯ ಇಕ್ಕೆಲಗಳಲ್ಲಿ ಇಂಥ ನೂರಾರು ಬೀದಿ ದೇವರು ಯಾವಾಗಲೂ ಕಂಡುಬರುತ್ತವೆ.
ರಾಜ್ಯದ ನಾನಾ ಭಾಗಗಳಲ್ಲಿ ನಾನಾ ರೀತಿಯ ಆಚರಣೆ, ನಂಬಿಕೆ ಈಗಲೂ ಜೀವಂತ. ಈ ನಂಬಿಕೆ ಅನ್ನುವುದು ಹಾಗೆ. ಅದು ಎಲ್ಲಿ, ಹೇಗೆ ಹುಟ್ಟಿಕೊಳ್ಳುತ್ತದೆಯೋ ಗೊತ್ತಿಲ್ಲ. ಅದು ಸಂಪ್ರದಾಯ ಅಥವಾ ಆಚರಣೆ ರೂಪದಲ್ಲಿ ಅವತರಿಸುತ್ತದೆ. ಇಂಥದ್ದೇ ಭಕ್ತಿಯ ಈ ಗಡಿ ಮಾರಿ ದೇವರು!!
ಈ ಗಡಿಮಾರಿಯ ಉಗಮಕ್ಕೆ ತರಹೆವಾರಿ ಕಥೆಗಳಿದ್ದರೂ ಯಾರೂ ಅಷ್ಟು ನಿಖರವಾದ ಮಾಹಿತಿ ನೀಡಲಿಲ್ಲ. ಸಾಗರ ಮತ್ತು ತೀರ್ಥಹಳ್ಳಿಯ ಹಳೆಯ ತಲೆಮಾರಿನ ರೈತರ ಪ್ರಕಾರ, ಇದು ಊರಿನ ಮಾರಿ ದೇವತೆಯಂತೆ. ಪ್ರತೀ ವರ್ಷ ಮಳೆಗಾಲಕ್ಕೂ ಮುನ್ನ ಹಳ್ಳಿಯ ಜನರು ಖಾಯಿಲೆ, ಕೋಟಲೆ, ಕಷ್ಟ-ನಷ್ಟ, ಬಡತನ, ದಾರಿದ್ರ್ಯಡಕ್ಕೆ ಈಡಾಗುತ್ತಿದ್ದರಂತೆ. ಹಸುಗಳು ಖಾಯಿಲೆ ಬೀಳುತ್ತಿದ್ದವಂತೆ.
ಇದನ್ನೂ ಓದಿ | ದಾವಣಗೆರೆ | ಫೆ.24 ರಂದು ಮಹಾನಗರಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ
ಇದಕ್ಕೆಲ್ಲ ಊರ ಮಾರಿಯ ಮುನಿಸೇ ಕಾರಣ ಎಂದುಕೊಂಡ ಹಳ್ಳಿಗರು ಊರಿನ ಮಾರಿಯನ್ನು ಊರಿನ ಗಡಿ ದಾಟಿಸಿ ಬರಲು ಇಂಥ ಆಚರಣೆಯನ್ನು ಶುರುವಿಟ್ಟುಕೊಂಡರಂತೆ. ಇನ್ನು ಹಲವಾರು ಅಂತೆ ಕಂತೆಗಳ ಬೊಂತೆಯೇ ಈ ನಂಬಿಕೆಯ ಹಿಂದಿವೆ.
ಅವರವರ ನಂಬಿಕೆಯಂತೆ ಪೂಜೆಗೊಂಡ ಈ “ಗಡಿಮಾರಿ” ಯನ್ನು ಊರು ದಾಟಿಸುವ ಪದ್ಧತಿಯೇ ವಿಶಿಷ್ಟ. ವಿವಿಧ ವಾಧ್ಯಗಳು, ಕೆಲವೊಮ್ಮೆ ಡೊಲ್ಲು, ತಮಟೆ ಮೆರವಣಿಗೆಯೊಂದಿಗೆ ಹೊರಟ ಮಂದಿ, ಗಡಿಮಾರಿಯನ್ನು ತಮ್ಮ ಊರಿನ ಗಡಿದಾಟಿಸಿ, ಮುಂದಿನ ಊರಿನ ಗಡಿಗೆ ಸೇರಿಸುತ್ತಾರೆ. ಹೀಗೆ ಗಡಿಮಾರಿ ಸಾಗಿ ಹೋದಂತೆ, ಹಿಂದೆ ದಾರಿಯುದ್ದಕ್ಕೂ, ಹಳೇ ಪೊರಕೆ, ಮೊರ, ಚಾಪೆ, ತಟ್ಟಿ, ಬುಟ್ಟಿ, ಒಡೆದ ಮಡಿಕೆ-ಕುಡಿಕೆ, ಹಳೆಯ ಬಟ್ಟೆಗಳನ್ನು ಎಸೆಯುತ್ತ ಹೋಗುತ್ತಾರೆ.
ಸ್ವಲ್ಪ ದಿನಗಳ ನಂತರ ತಮ್ಮ ಗಡಿಯಲ್ಲಿ ಕುಳಿತ ಈ ಗಡಿಮಾರಿಯನ್ನು ಮತ್ತೊಂದು ಗ್ರಾಮದ ಜನರು ತಮ್ಮ ಊರಿನಲ್ಲಿ ಸಂಗ್ರಹವಾದ ಹಳೆಯ ವಸ್ತುಗಳನ್ನು ಸೇರಿಸಿ ತಮ್ಮ ಊರಿಗೆ ಬಂದ ಗಡಿಮಾರಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ತಮ್ಮ ಮುಂದಿನ ಊರಿನ ಎಲ್ಲೆಗೆ ದಾಟಿಸುತ್ತಾರೆ.
ಹೀಗೆ ಎಲ್ಲೆಯಿಂದ ಎಲ್ಲೆಗೆ ಸಂಚಾರಿಸುತ್ತ ಹೋಗುವ ಗಡಿಮಾರಿಯನ್ನು ಕೊನೆಗೆ ಯಾವುದಾದರೊಂದು ನೀರಿರುವ ಜಾಗದಲ್ಲಿ ವಿಸರ್ಜಿಸುತ್ತಾರೆ. ಪ್ರತಿ ಊರಲ್ಲಿ ಕಾಯಿಲೆ ಕಸಾಲೆ ಕಷ್ಟ ಇದ್ದಾಗ ಈ “ಗಡಿಮಾರಿ” ದೇವರನ್ನು ತಯಾರಿಸಿ ಅವರ ಊರಿನ ಗಡಿ ದಾಟಿಸುತ್ತಾರೆ. ಅದಕ್ಕಾಗಿಯೇ ಹಲವಾರು ಗಡಿಮಾರಿಗಳು ನಮಗೆ ರಸ್ತೆಯ ಗುಂಟ ಕಾಣಲು ಸಿಗುವುದು.
ಪ್ರತಿಯೊಂದು ಆಚರಣೆಗೂ ಅದರದೇ ಆದ ಹಿನ್ನೆಲೆ ಇರುತ್ತದೆ. ಗಡಿಮಾರಿಯನ್ನು ಗಡಿಪಾರು ಮಾಡುವ ವಿಶಿಷ್ಟ ಆಚರಣೆಯ ಕಾರಣದಿಂದ, ಗ್ರಾಮವನ್ನು ಶುದ್ಧೀಕರಿಸುವ ಕ್ರಿಯೆ ಮೊದಲಾಗಿ, ಜನರು ತಮ್ಮ ಮನೆಯಲ್ಲಿರುವ ಹಳೆಯ ಸಾಮಾನುಗಳನ್ನು ಹೊರಗೆ ಹಾಕುವುದರಿಂದ, ಊರೆಲ್ಲ ಸ್ವಚ್ಛವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಕಡಿಮೆಯಾಗುವುದೆಂಬುದು ಇದರ ಹಿಂದಿನ ಗೂಢ ಮರ್ಮವಿರಬಹುದೇನೋ..!
ಈಗಲೂ ಅಲ್ಲಿ ಇಲ್ಲಿ ಇಂಥ ಆಚರಣೆಗಳು, ನಂಬಿಕೆಗಳು, ಆರಾಧನೆಗಳು ಇದ್ದರೂ, ಅಂದಿನ ಆರಾಧನಾ ವಿಧಾನಗಳಲ್ಲಿ ಜನಪದರಿಗಿದ್ದ ತನ್ಮಯತೆ, ಸಮರ್ಪಣಾ ಭಾವಗಳನ್ನು ಪ್ರಸ್ತುತ ಕಾಣಲು ಸಾಧ್ಯವಿಲ್ಲ. ಕೆಲವೊಮ್ಮೆ ರಸ್ತೆಯಲ್ಲಿ ಹೋಗುತ್ತಿರುವ ವಾಹನ ಸವಾರನ್ನು ಅಡ್ಡಗಟ್ಟಿ ಒತ್ತಾಯದಿಂದ ಹಣ ವಸೂಲಿ ಮಾಡಿ “ಎಣ್ಣೆ” ಹಾಕುವ ವಸೂಲಿ ದಂಧೆಯಾಗಿಯೂ ಗೋಚರಿಸುತ್ತದೆ.
ಇನ್ನು ಕೆಲವು ವರ್ಷ ಕಳೆದರೆ ಈ ಗಡಿಮಾರಿಗಳು ಗಡಿ ದಾಟಿದರೂ ಆಶ್ಚರ್ಯವಿಲ್ಲ! ಈ ಗಡಿಮಾರಿಯನ್ನು ಊರಿಂದ ಹೊರಗಟ್ಟುವ ದಿನ ಊರಿನ ಗಡಿಯಲ್ಲಿ ಕೋಳಿಯನ್ನು ಬಲಿಕೊಡುವ ಸಂಪ್ರದಾಯವೂ ಚಾಲ್ತಿಯಲ್ಲಿದೆ. ಇಲ್ಲಿ ಬಲಿ ನೀಡಿದ ಕೋಳಿಗಳನ್ನು ಹಳ್ಳಿಗರು ತಂತಮ್ಮ ಮನೆಗೆ ಕೊಂಡೊಯ್ದು ಹಬ್ಬದ ಅಡುಗೆ ಮಾಡಿ ಸವಿಯುತ್ತಾರೆ.
ಗಡಿಮಾರಿ ಓಡಿಸುವ ದಿನ ಮನೆಗೆ ನೆಂಟರಿಷ್ಟರು, ಬಂಧು ಬಳಗ ಬರುವ ವಾಡಿಕೆಯೂ ಇಡೀ ಊರಿನಲ್ಲಿ ಇದೊಂಥರಾ ಜಾತ್ರೆಯ ವಾತಾವರಣ ಸಷ್ಟಿಸುತ್ತದೆ. ಇದೊಂದು ಹಳ್ಳಿ ಜನರ ದುಗುಡ ನಿವಾರಣೆಯ ದಾರಿಯಾಗಿದೆ ಎಂದರು ಸಹ ಆಶ್ಚರ್ಯವಿಲ್ಲ..!
ಈ ಗಡಿಮಾರಿ ದೇವರು ಘಟ್ಟದ ಮೇಲಿನವರ ನಂಬಿಕೆಯಾದರೂ ಬೊಂಬೆ ತಯಾರಿಯಲ್ಲಿ ಕಲಾವಿದನ ಕೈಚಳಕ ಗಮನ ಸೆಳೆಯದೇ ಇರದು. ಬೊಂಬೆ ಕೆತ್ತನೆಯಲ್ಲಿ ನೈಪುಣ್ಯ ತೋರಿಸುವ ಕಲಾವಿದ, ಅದರ ಮುಖ, ಹುಬ್ಬು, ಕಣ್ಣು, ತುಟಿ, ಗಾಂಭೀರ್ಯ ಎಲ್ಲವನ್ನೂ ಚಿತ್ರಿಸಿದ ಚಂದಕ್ಕೆ ಬೆರಗಾಗಲೇಬೇಕು. ತಲೆತಲಾಂತರಗಳು ಉರುಳಿದರೂ ಇಂದಿಗೂ ಬೀದಿ ದೇವರು ಅದರದ್ದೇ ಆದ ಗತ್ತು-ಗೈರತ್ತುಗಳಿಂದ ಮಲೆನಾಡಿನ ಜನರ ಆರಾಧ್ಯ ದೇವತೆಯಾಗಿ ಉಳಿದಿದೆ.
ಇತ್ತೀಚೆಗೆ ಈ ಮೂರ್ತಿಗಳನ್ನು ತಯಾರಿಸುವವರು ಸಿಗದೇ, ಪೂರ್ತಿ ಕಸುಬು ಬಾರದವರು ತಯಾರಿಸುವುದರಿಂದ ಇವು ವಿಕಾರವಾಗಿ ಭೂತದಂತೆ ಕಾಣಿಸುವುದೂ ಇದೆ.
ಅದರಲ್ಲೂ ಪಶುಗಳಲ್ಲಿ ಸಾಮಾನ್ಯವಾಗಿ ಬರುವ ಕಾಲುಬಾಯಿ ಜ್ವರವೆಂಬ ವೈರಾಣು ಕಾಯಿಲೆ ಬಂದಾಗ ಈ ರೀತಿ ಗಡಿಮಾರಿಗಳು ಊರಿಂದ ಊರಿನ ಗಡಿಯಲ್ಲಿ ಕಂಡು ಬರುವುದು ಸಾಮಾನ್ಯ.
ಇದೊಂದು ಗ್ರಾಮೀಣ ಜನರ ಮನಸ್ಸಿನ ದುಗುಡ ತುಮುಲವನ್ನು ಹಗುರಗೊಳಿಸಲು ಇರುವ ಸಂಪ್ರದಾಯ ಹಾಗೇ ಇರಲಿ ಎಂದು ಸ್ವೀಕರಿಸಬೇಕೋ ಅಥವಾ ರೋಗಗಳನ್ನು ನಿಯಂತ್ರಿಸಲು ಉತ್ತಮ ಲಸಿಕೆಗಳು, ಉತ್ತಮ ತಂತ್ರಜ್ಞಾನವಿರುವ ಈ ಆಧುನಿಕ ಯುಗದಲ್ಲಿ ಇಂತಹ ಆಚರಣೆ ಎಷ್ಟರ ಮಟ್ಟಿಗೆ ಸರಿ ?! ಇದು ಮೌಢ್ಯವಲ್ಲವೇ? ಎಂಬ ಪ್ರಶ್ನೆಗಳಿಗೆಲ್ಲಾ ಓದುಗರೇ ಉತ್ತರಿಸಬೇಕು.!
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ6 days ago
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!
-
ಭಾವ ಭೈರಾಗಿ6 days ago
ಕರುಣಾಳು ಅವನು, ಅವನು ನನ್ನವನು..!
-
ದಿನದ ಸುದ್ದಿ6 days ago
ದಿಶಾ ಕೇಸ್ | ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ..! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು..!
-
ದಿನದ ಸುದ್ದಿ6 days ago
ಬಡವರನ್ನು ಸಬಲೀಕರಣಗೊಳಿಸಲು ಉಚಿತ ಅನಿಲ ಸಂಪರ್ಕ ನೀಡಿದ್ದೇವೆ : ಪ್ರಧಾನಿ ಮೋದಿ
-
ಲೈಫ್ ಸ್ಟೈಲ್5 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ಕ್ರೀಡೆ5 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್5 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ
-
ಭಾವ ಭೈರಾಗಿ5 days ago
ಕವಿತೆ | ಅವಳು