ದಿನದ ಸುದ್ದಿ
ಅತಿ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ: ಬಿಜೆಪಿ ಟೀಕಿಸಿದ ಹೊರಟ್ಟಿ
ಕಲಬುರಗಿ: ಅತಿ ಹೆಚ್ಚು ಊಟ ಮಾಡಿದರೆ ವಾಂತಿ ಆಗುತ್ತದೆ. ಇದು ಬಿಜೆಪಿಗೆ ಬೇಕಾ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಪ್ರಶ್ನಿಸಿದ್ದಾರೆ. ಪಕ್ಷಾಂತರ ಮಾಡುವುದು ಸರಿಯಲ್ಲ. ಆದರೆ ನಮ್ಮವರ ತಪ್ಪಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಗೆ ಹೋಗುವವರಿಗೆ ಈಗ ಅಲ್ಲಿ ಗೌರವ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಒಂದೇ ಅಲ. ಎಲ್ಲ ಪಕ್ಷದಲ್ಲೂ ಈ ಅಸಮಧಾನ ಇದ್ದೆ ಇರುತ್ತದೆ. ಆದರೆ, ಬಿಜೆಪಿಯಲ್ಲಿ ಹೈಕಮಾಂಡ್ ಬಲಿಷ್ಠವಾಗಿರುವುದಕ್ಕೆ ಎಲ್ಲರೂ ಸುಮ್ಮನಿದ್ದಾರೆ. ಕಾಂಗ್ರೆಸ್, ಜೆಡಿಎಸ್’ನಲ್ಲಿ ಹಾಗೆ ಇದ್ದಿದ್ದರೆ ಏನು ಬೇಕಾದರೂ ಆಗಬಹುದಿತ್ತು. ಬೇರೆ ಪಕ್ಷ ಆಗಿದ್ದರೆ ಗಲಾಟೆ ಆಗುತ್ತಿತ್ತು. ಆದರೆ, ಬಿಜೆಪಿಯಲ್ಲಿ ಅನಿವಾರ್ಯವಾಗಿ ಸುಮ್ಮನಿದ್ದಾರೆ. ಕಸ ಹೊಡೆದವರು ಮಂತ್ರಿ ಆಗದೆ ಹೋದರೆ ನೋವು ಆಗುತ್ತದೆ ಎಂದು ಹೇಳಿದ್ದಾರೆ..