ದಿನದ ಸುದ್ದಿ
ಇ-ಕಾಮರ್ಸ್ ಡ್ರೋಣ್ ಬಳಕೆಗೆ ಅನುಮತಿ; ಇಂಗ್ಲಿಷ್ ಗೊತ್ತಿದ್ರೆ ಮಾತ್ರ ಪರ್ಮಿಷನ್

ಸುದ್ದಿದಿನ ಡೆಸ್ಕ್: ಆನ್ಲೈನ್ನಲ್ಲಿ ಏನಾದ್ರು ಆರ್ಡರ್ ಮಾಡಿದರೆ ಇದನ್ನು ನಿಮಗೆ ತಲುಪಿಸಲು ಇನ್ಮುಂದೆ ನೀವು ಮನೆ ಬಾಗಿಲಿನಲ್ಲಿ ಡೆಲಿವರಿ ಬಾಯ್ ಬದಲು
ಡ್ರೋಣ್.ಗಾಗಿ ಕಾಯಬೇಕಾಗುತ್ತದೆ. ನಾಗರಿಕ ವಿಮಾನಯಾನ ಇಲಾಖೆಯು ಡ್ರೋಣ್ ನೀತಿ ಜಾರಿಗೆ ತಂದಿದ್ದು, ಕಮರ್ಷಿಯಲ್ ಬಳಕೆಗಾಗಿ ಅವಕಾಶ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳುವ ಇ- ಕಾಮರ್ಸ್ ಕಂಪನಿಗಳು ಡ್ರೋಣ್ ಬಳಸಿಕೊಂಡು ತಮ್ಮ ಉತ್ಪನ್ನ ಮಾರಾಟ ಮಾಡುವ ಸಾಧಗಯತೆ ಹೆಚ್ಚಾಗಿದೆ. ಇದರೊಂದಿಗೆ ಶೀಘ್ರ ಗ್ರಾಹಕರ ತಲುಪಿ ತಮ್ಮ ವಹಿವಾಟು ಹೆಚ್ಚಿಸಿಕೊಳ್ಳಲಿವೆ.
ಕೇಂದ್ರ ಸರ್ಕಾರ ವಿಮಾನಯಾನ ಇಲಾಖೆ ಇ- ಕಾಮರ್ಸ್ ಕಂಪನಿಗಳು ಡ್ರೋಣ್ ಬಳಕೆಯ ಯೋಜನೆಗೆ ಸಹಿ ಹಾಕಿದ್ದು, ಡಿಸೆಂಬರ್ ನಂತರ ಕಂಪನಿಗಳು ಇದರ ಪಡರದುಕೊಳ್ಳಲಿವೆ.
ಇಂಗ್ಲಿಷ್ ಗೊತ್ತಿದ್ರೆ ಮಾತ್ರ ಪರ್ಮಿಷನ್
ಸರ್ಕಾರ ರಚಿಸಿರುವ ಡ್ರೋಣ್ ನೀತಿಯಲ್ಲಿ ಡ್ರೋಣ್ ಗಳನ್ನು ಐದು ಕ್ಯಾಟಗರಿಗಳಾಗಿ ವಿಂಗಡಿಸಿವೆ. ನ್ಯಾನೋ ಕ್ಯಾಟಗರಿಯಲ್ಲಿ 250ಗ್ರಾಂರಿಂದ 150 ಕೆಜಿ ತೂಕದವರೆಗಿನ ಡ್ರೋಣ್, ಮಕ್ಕಳು ಆಟಿಕೆಯಾಗಿ ಬಳಸುತ್ತಿರುವ 250ರಿಂದ 2 ಕೆಜಿ ತೂಕದ ಮೈಕ್ರೋ ಡ್ರೋಣ್ ಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿದೆ. ಎಲ್ಲ ಡ್ರೋಣ್ ಬಳಕೆದಾರರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಯುನಿಕ್ ಐಡೆಂಟಿಫಿಕೇಷನ್ ನಂಬರ್ (UIN) ನೀಡಲಿದೆ. ಡ್ರೋಣ್ ಬಳಕೆದಾರರಿಗೆ 18 ವರ್ಷ ವಯಸ್ಸಾಗಿರಬೇಕು. ಎಸ್ಸೆಸ್ಸೆಲ್ಸಿ ಪಾಸ್ ಆಗಿದ್ದು, ಇಂಗ್ಲಿಷ್ ಜ್ಞಾನ ಹೊಂದಿರಬೇಕು.
ನ್ಯಾನೋ, ಮೈಕ್ರೋ ವಿಧದಲ್ಲಿ ಐದು ಕ್ಯಾಟಗರಿ
ರಿಮೋಟ್ ಪೈಲೆಟೆಡ್ ಏರ್ಕ್ರಾಫ್ಟ್ ಸಿಸ್ಟಮ್ (RPAS) ಚಾಲಿತ ನ್ಯಾನೋ ಡ್ರೋಣ್.ಗಳಿಗೆ ಅನ್ ಮ್ಯಾನ್ಡ್ ಏರ್ಕ್ರಾಫ್ಟ್ ಆಪರೇಟರ್ ಪರ್ಮಿಟ್ (UAOP) ಪರವಾನಿಗೆ ಅಗತ್ಯವಿಲ್ಲ. 50 ಅಡಿ ಎತ್ತರದಲ್ಲಿ ಹಾರಾಟ ಮಾಡುವಂಥವು. 200 ಅಡಿ ಎತ್ತರದಲ್ಲಿ ಕಣ್ಣಿಗೆ ಕಾಣುವ ಅಂತರದಲ್ಲಿ ಹಗಲು ವೇಳೆ ಹಾರಾಟ ಮಾಡುವ ಡ್ರೋಣ್ ಗಳಿಗೆ ಸೆಕ್ಯುರಿಟಿ ಮತ್ತು ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ ಪರವಾನಗಿ ಅಗತ್ಯವಿದೆ. 400ಅಡಿ ಎತ್ತರದವರೆಗೆ ಮಾತ್ರ ಹಾರಾಟ ಮಾಡಬಹುದಾಗಿದೆ.
ನೋ ಫ್ಲೈಯಿಂಗ್ ಜೋನ್ ಹಾರಾಡುವಂತಿಲ್ಲ
ದೇಶದಲ್ಲಿ ಕೆಲವೊಂದು ಪ್ರದೇಶಗಳನ್ನು ‘ನೋ ಫ್ಲೈಯಿಂಗ್ ಜೋನ್’ ಎಂದು ಗುರುತಿಸಿರುವ ಕಡೆ ಹಾರಾಟ ಮಾಡುವಂತಿಲ್ಲ. ಅವುಗಳೆಂದರೆ, ಏರ್ಪೋರ್ಟ್, ಅಂತಾರಾಷ್ಟ್ರೀಯ ಗಡಿಭಾಗ, ದೆಹಲಿಯ ವಿಜಯ್ ಚೌಕ್, ಎಲ್ಲಾ ರಾಜ್ಯಗಳ ರಾಜ್ಯ ಕಾರ್ಯದರ್ಶಿಗಳ ಕಚೇರಿ, ಸ್ಟ್ರಟೆಜಿಕ್ ಲೋಕೇಷನ್, ಮಿಲಿಟರಿ ಸ್ಥಳಗಳಲ್ಲಿ ಹಾರಾಟ ಮಾಡುವಂತಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
