ಕ್ರೀಡೆ
ಬೆಣ್ಣೆನಗರಿಯ ಅಂತರಾಷ್ಟ್ರೀಯ ಕಬ್ಬಡ್ಡಿ ಪ್ರತಿಭೆ ಅನಿಲ್ ಮಲೇಷಿಯಾದಲ್ಲಿ ಆಡಲು ನಿಮ್ಮಿಂದ ಮಾತ್ರ ಸಾಧ್ಯ : ಸಹಕರಿಸಿ ; ಈ ಪ್ರತಿಭೆ ಬೆಳೆಸಿ

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಕ್ಕನೂರು ನಿವಾಸಿ ಅನಿಲ್ ಈಗ ಅಂತರಾಷ್ಟ್ರೀಯ ಮಟ್ಟದ ಕಬ್ಬಡಿ ಟೀಂಗೆ ಆಯ್ಕೆಯಾಗಿದ್ದಾರೆ.ಕೇವಲ ನಾಲ್ಕು ದಿನಗಳಲ್ಲಿ ಅನಿಲ್ ಮಲೇಷ್ಯಾಯಾದಲ್ಲಿ ನಡೆಯಲಿರು ಅಂತರಾಷ್ಟ್ರೀಯ ಕಬ್ಬಡಿ ಟೀಂನಲ್ಲಿ ಭಾರತವನ್ನು ಪ್ರತಿನಿಧಿಸಲು ಹೋಗಬೇಕಾಗಿದೆ.ಆದರೆ ಅವರಿಗೆ ಆರ್ಥಿಕ ಅಡಚಣೆಯಾಗಿದ್ದು ಆರ್ಥಿಕ ಸಹಾಯಕ್ಕೆ ಸಂಬಂಧಿಕರ ಮೊರೆ ಹೋಗಿದ್ದಾರೆ.
ಆದರೂ ಹಣ ಸಂಗ್ರಹವಾಗುತ್ತಿಲ್ಲ.ಮಲೇಷ್ಯಾಕ್ಕೆ ಹೋಗಲು 70 ಸಾವಿರ ಹಣ ಬೇಕಾಗಿದೆ.ಹೀಗಾಗಿ ದಾನಿಗಳ ಸಹಾಯ ಬೇಡುತ್ತಿದ್ದಾರೆ.ಮಗನಿಗೆ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಅನಿಲ್ ತಾಯಿ ಕೂಲಿ ನಾಲಿ ಮಾಡಿ ಮಗನನ್ನು ಮಲೇಷ್ಯಾಕ್ಕೆ ಹೋಗುವಂತೆ ಪ್ರೋತ್ಸಾಹಿಸುತ್ತಿದ್ದಾರೆ ಆದರೆ ಹಣದ ಸಂಗ್ರಹವಾಗುತ್ತಿಲ್ಲ. ಅನಿಲ್ ಈಗ ದಾನಿಗಳ ನೆರವಿಗಾಗಿ ಹಸ್ತ ಚಾಚಿದ್ದಾರೆ.
ಸಹಾಯ ಮಾಡಲಿಚ್ಚಿಸುವವರು, ಈ ಅಕೌಂಟ್ ನಂಬರ್ ಗೆ
Anil.A
STAT BANK OF INDIA
HARIHARA
A/C 38014193686
ifsc code-sbin0040466
ನಿಮ್ಮ ಹಣಸಂದಾಯ ಮಾಡಬಹುದು. ಹಾಗೇ ಈ ನಂಬರ್ ಗೆ ಕರೆಮಾಡಿ ಅವರ ಪರಿಸ್ಥಿತಿಯ ಬಗ್ಗೆ ಮೊ ನಂ : 9620007275 ತಿಳಿದುಕೊಳ್ಳಿ.

ಕ್ರೀಡೆ
ದಾವಣಗೆರೆ | ಮಹಿಳಾ ಸೇವಾ ಸಮಾಜ ಪ್ರೌಢ ಶಾಲೆ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆ

ಸುದ್ದಿದಿನ, ದಾವಣಗೆರೆ : 2022-23 ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಮಹಿಳಾ ಸೇವಾ ಸಮಾಜ ಪ್ರೌಢಶಾಲೆಯ ವಿದ್ಯಾರ್ಥಿ ಮಣಿಕಂಠ ಆರ್. ಅವರು 100 ಮೀ ಫ್ರೀ ಸ್ಟೈಲ್ 200ಮೀ ಫ್ರೀ ಸ್ಟೈಲ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗ ಆಡಳಿತ ಮಂಡಳಿ ಹಾಗೂ ಶಾಲಾ ಸಿಬ್ಬಂದಿವರ್ಗ ಅಭಿನಂದನ ಸಲ್ಲಿಸಿದ್ದಾರೆ.
ಜಿಲ್ಲಾಮಟ್ಟಕ್ಕೆ ಆಯ್ಕೆ
2022-23 ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ತಾಲ್ಲೂಕುಮಟ್ಟದ ಕ್ರೀಡಾಕೂಟಗಳಲ್ಲಿ ಮಹಿಳಾ ಸೇವಾ ಸಮಾಜ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ಣಿಮ ಎಂ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕುಮಾರಿ ಬಂಗಾರಿ ಅಂಜಲಿ 3 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹಾಗೂ ಶಾಲಾ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಭಾರತೀಯ ಒಲಂಪಿಕ್ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷೆ ಪಿ.ಟಿ. ಉಷಾ ಅವರನ್ನು ಅಭಿನಂದಿಸಿದ ರಾಜ್ಯಸಭಾ ಸಭಾಪತಿ

ಸುದ್ದಿದಿನ ಡೆಸ್ಕ್ : ಭಾರತೀಯ ಒಲಂಪಿಕ್ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ ಅವರನ್ನು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅಭಿನಂದಿಸಿದ್ದಾರೆ.
ಸದನ ಇಂದು ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿಯವರು ಮಾತನಾಡಿ, ದೇಶದಲ್ಲಿ ಮನೆಮಾತಾಗಿರುವ ಪಿ.ಟಿ. ಉಷಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಅತ್ಯುನ್ನತ ಅರ್ಜುನ ಮತ್ತು ಪದ್ಮಶ್ರೀ ಪುರಸ್ಕೃತರಾದ ಅವರು ಸದ್ಯ ಕ್ರೀಡೆಗಳನ್ನು ಮತ್ತು ಕ್ರೀಡಾ ಶಿಕ್ಷಣವನ್ನು ಉತ್ತೇಜಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
Thank you Hon, Chairman Sir and all my fellow Rajya Sabha members for the kind words, and the good wishes. I look forward to the responsibilities at hand with utmost sincerity! 🙏🏽 https://t.co/6qb1NcaCgD
— P.T. USHA (@PTUshaOfficial) December 12, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್ ಶಿಪ್ ; ಕರ್ನಾಟಕ ರಾಜ್ಯ ತಂಡಕ್ಕೆ ದಾವಣಗೆರೆ ಜಿಲ್ಲೆಯಿಂದ ಎನ್. ಜಿತೇಂದ್ರ ತೋಳಹುಣಸೆ ಆಯ್ಕೆ

ಸುದ್ದಿದಿನ,ದಾವಣಗೆರೆ : ಇದೇ ನವೆಂಬರ್ 17 ರಿಂದ 20 ರ ವರೆಗೆ ನಡೆಯಲಿರುವ ಉತ್ತರಕಾಂಡ ರಾಜ್ಯದ ಹರಿದ್ವಾರದಲ್ಲಿ 48ನೇ ಬಾಲಕರ ವಿಭಾಗದ ಜೂನಿಯರ್ ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್ ಶಿಪ್ಗೆ ಕರ್ನಾಟಕ ರಾಜ್ಯ ತಂಡಕ್ಕೆ ದಾವಣಗೆರೆ ಜಿಲ್ಲೆಯಿಂದ ಎನ್. ಜಿತೇಂದ್ರ ತೋಳಹುಣಸೆ ಇವರು ಆಯ್ಕೆಯಾಗಿರುತ್ತಾರೆ.
ಇವರಿಗೆ ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಯು ಆದ ಎಂ ನಾಗರಾಜ್ ಮತ್ತು ಚೇರ್ಮನ್ ಬಿ.ಜಿ .ಅಜಯ್ ಕುಮಾರ್ .ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷರು ಎಚ್. ನಿಜಗುಣ, ಗೌರವಾಧ್ಯಕ್ಷರು ಹಾಗೂ ಸೈಯದ್ ನಿಸಾರ್ ತರಬೇತುದಾರರಾದ ಬೇತುರೊಡಿ ನ ಡಿ .ರಾಜು ಹಾಗೂ ಸಿ.ಎಚ್ .ಪುಟ್ಟರಾಜ. ಕಬಡ್ಡಿಯ ಕ್ರೀಡಾಪಟುಗಳು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
