ದಿನದ ಸುದ್ದಿ
ಮಂಗನಕಾಯಿಲೆ : ಮಂಕುಬೂದಿ ಎರಚುವ ತಂತ್ರ ಯಾರ ರಕ್ಷಣೆಗಾಗಿ?

ಮಂಗನಕಾಯಿಲೆ ಇದೀಗ ಜಿಲ್ಲೆಯಾದ್ಯಂತ ವ್ಯಾಪಿಸಿರುವುದು ಅಧಿಕೃತವಾಗಿದೆ.ಈ ಹಿಂದೆ ಯಾವುದೋ ಒಂದು ಗ್ರಾಮ, ಪಂಚಾಯ್ತಿ ವ್ಯಾಪ್ತಿಯಲ್ಲಿ ರೋಗ ಕಾಣಿಸಿಕೊಳ್ಳುತ್ತಲೇ ಆರೋಗ್ಯ, ಅರಣ್ಯ ಮುಂತಾದ ಸಂಬಂಧಪಟ್ಟ ಇಲಾಖೆ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ರೋಗ ತಡೆಯಲಾಗುತ್ತಿತ್ತು. ಅಂತಹ ಹೊಣೆಗಾರಿಕೆಯನ್ನು ಜಿಲ್ಲಾಡಳಿತ ಸಕಾಲದಲ್ಲಿ ನಿರ್ವಹಿಸುವ ಮೂಲಕ ಜೀವಹಾನಿ ತಡೆಯಲಾಗುತ್ತಿತ್ತು.
ಆದರೆ ಈ ಬಾರಿ ಕಳೆದ ಸರಿಸುಮಾರು ಮೂರು ತಿಂಗಳಿನಿಂದ ರೋಗ ತಡೆರಹಿತವಾಗಿ ಹಬ್ಬುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಕಂಡರಿಯದ ಪ್ರಮಾಣದಲ್ಲಿ ಸಾವು ಸಂಭವಿಸಿವೆ. ಈಗಲೂ ದಿನಂಪ್ರತಿ ಹತ್ತಾರು ಜನರು ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನೂರಾರು ಮಂದಿ ವಿವಿಧ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂದರೆ ರೋಗ ತಡೆ ಮತ್ತು ಮುಂಜಾಗ್ರತಾ ಕ್ರಮಗಳಲ್ಲಿ ಗಂಭೀರ ಲೋಪಗಳಾಗಿವೆ. ಆರಂಭದಲ್ಲಿ ಎಲ್ಲಾ ಇಲಾಖೆಗಳೂ ರೋಗವನ್ನು ನಿರ್ಲಕ್ಷಿಸಿದ್ದರೂ ಆರು ಸಾವುಗಳ ಬಳಿಕ ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ ಸ್ಥಳೀಯ ಪಂಚಾಯ್ತಿಗಳ ಕಾಳಜಿಯ ಕಾರಣದಿಂದ ಇದೀಗ ಸ್ಥಳೀಯ ಸಿಬ್ಬಂದಿ ಸಾಕಷ್ಟು ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ.

ಆದರೆ ಆರಂಭದಲ್ಲಿ ಪದ್ಮಾ ಕೋಮರಾಜ್(ಮೊದಲ ಪ್ರಕರಣ) ಸೇರಿದಂತೆ ಶ್ವೇತಾ ಜೈನ್ ಅವರ ಪ್ರಕರಣಗಳಲ್ಲಿ ಸಂಪೂರ್ಣ ಲೋಪ ಅಗಿರುವುದು ತಾಲೂಕು ಆಸ್ಪತ್ರೆ ಮತ್ತು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗಳಲ್ಲಿ. ಆಸ್ಪತ್ರೆಗಳಲ್ಲಿ ಅದು ಮಂಗನಕಾಯಿಲೆ ಎಂಬುದು ದೃಢಪಟ್ಟ ಬಳಿಕ ಕೂಡ ಅಗತ್ಯ ಚಿಕಿತ್ಸೆ ಮತ್ತು ಕಾಳಜಿ ತೋರುವಲ್ಲಿ ಗಂಭೀರ ಲೋಪವಾಗಿ ಅಮೂಲ್ಯ ಜೀವಗಳು ಬಲಿಯಾದವು.
ಈ ಆಸ್ಪತ್ರೆಗಳಲ್ಲಿ; ಸಾಗರ ಸಾರ್ವಜನಿಕ ಆಸ್ಪತ್ರೆ ಆಡಳಿತ ಹೊಣೆಗಾರಿಕೆ ಅಲ್ಲಿನ ವೈದ್ಯಾಧಿಕಾರಿ ಡಾ ಬೋಸ್ಲೆ ಅವರದ್ದಾದರೆ, ಮೆಗ್ಗಾನ್ ಆಸ್ಪತ್ರೆಯ ಹೊಣೆಗಾರಿಕೆ ನೇರವಾಗಿ ಅದರ ನಿರ್ದೇಶಕ ಡಾ ಲೇಪಾಕ್ಷಿ ಅವರದ್ದು. ಅಂತಿಮವಾಗಿ ಈ ಎರಡೂ ಆಸ್ಪತ್ರೆಗಳು ಜಿಲ್ಲಾಧಿಕಾರಿಗಳ ಅಧಿಕಾರ ವ್ಯಾಪ್ತಿಯಲ್ಲೇ ಇವೆ.
ಅಲ್ಲದೆ ಶ್ವೇತಾ ಜೈನ್ ಸಾವು ಸಂಭವಿಸುವವರೆಗೂ, ಅರಳಗೋಡು ಜನ ಆಕೆಯ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸುವವರೆಗೂ ಸ್ವತಃ ಜಿಲ್ಲಾಧಿಕಾರಿಗಳೇ, ಮಂಗನಕಾಯಿಲೆ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗದಂತೆ ಮತ್ತು ಮೆಗ್ಗಾನ್ ಸೇರಿದಂತೆ ಸರ್ಕಾರಿ ಅಸ್ಪತ್ರೆಗಳಲ್ಲೇ ದಾಖಲಾಗುವಂತೆ ಬಹಿರಂಗ ಸೂಚನೆ ನೀಡಿದ್ದರು.
ಹಾಗಾದರೆ, ನಿರ್ಲಕ್ಷ್ಯ, ಹೊಣೆಗೇಡಿತನದಿಂದಾಗಿ ಸಂಭವಿಸಿರುವ ಸರಣಿ ಸಾವುಗಳ ಹೊಣೆಗಾರಿಕೆ ಹೊರಬೇಕಾದವರು ಸಾಗರದ ತಾಲೂಕು, ಮೆಗ್ಗಾನ್ ಆಸ್ಪತ್ರೆಗಳ ಆಡಳಿತಾಧಿಕಾರಿಗಳು ಮತ್ತು ಅಂತಿಮವಾಗಿ ಜಿಲ್ಲಾಧಿಕಾರಿಗಳೇ ಅಲ್ಲವಾ?
ಆದರೆ ಆರೋಗ್ಯ ಇಲಾಖೆ ಡಿಎಚ್ಒ ಮತ್ತು ಕೆಎಫ್ಡಿ ವಿಭಾಗದ ವೈದ್ಯರ ತಲೆದಂಡ ನೀಡಿ ತಿಪ್ಪೆಸಾರಿಸುವ ಪ್ರಯತ್ನ ಮಾಡಿದೆ. ನಿಜವಾದ ತಪ್ಪಿತಸ್ಥರನ್ನು ರಕ್ಷಿಸುವ ಮತ್ತು ಅದೇ ಹೊತ್ತಿಗೆ ಜನರಕಣ್ಣಿಗೆ ಮಂಕುಬೂದಿ ಎರಚಿ ಜನರನ್ನು ಮಂಗಮಾಡುವ ಪ್ರಯತ್ನಗಳನ್ನು ಅರ್ಥಮಾಡಿಕೊಳ್ಳಬೇಕಿದೆ.
–ಶಶಿ ಸಂಪಳ್ಳಿ
(ಇವರ ಗಮನಕ್ಕೆ : ಕೆಎಫ್ ಡಿ ಜನಜಾಗೃತಿ ಒಕ್ಕೂಟ,Chief Minister of Karnataka chief secretary of Karnataka, NHRCB, Bjp Shivamogga KPCCPresident, Kpcc Dinesh Gundu Rao)
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ನಿರುದ್ಯೋಗಿಗಳಿಗೆ ಉಚಿತ ವಸತಿಯುತ ತರಬೇತಿ

ಸುದ್ದಿದಿನ, ದಾವಣಗೆರೆ : 2022-23ನೇ ಸಾಲಿನಲ್ಲಿ ಗ್ರಾಮಾಂತರ ಕೈಗಾರಿಕಾ ವಿಭಾಗ ( Rural Industrial Department ) , ದಾವಣಗೆರೆ ( Davangere ) ಕಚೇರಿಯ ಜಿಲ್ಲಾ ಉದ್ಯಮ ಕೇಂದ್ರ ಲೆಕ್ಕಶೀರ್ಷಿಕೆಯಡಿ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ( unemployeds ) 1) ಮೊಬೈಲ್ ರಿಪೇರಿ, 2) ಮೋಟಾರ್ ರೀವೈಂಡಿಂಗ್, 3) ಗೃಹ ಎಲೆಕ್ಟ್ರಿಕಲ್ ವೈರಿಂಗ್ ತಾಂತ್ರಿಕ ವಿಷಯಗಳ ಕುರಿತು ಕೆನರಾ ಬ್ಯಾಂಕ್ನ ಆರ್-ಸೆಟಿ ತರಬೇತಿ ಸಂಸ್ಥೆ, ತೋಳಹುಣಸೆ, ದಾವಣಗೆರೆ ತಾ. ಮೂಲಕ ಸಂಪೂರ್ಣ ಉಚಿತ ಹಾಗೂ ವಸತಿಯುತ ತರಬೇತಿ ( Free Training ) ನೀಡಿ, ಪ್ರತಿ ಅಭ್ಯರ್ಥಿಗೆ ರೂ. 5,000/- ಮೊತ್ತದ ಉಚಿತ ಉಪಕರಣಗಳ ಕಿಟ್ನ್ನು ಸಹ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ನ ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪ ನಿರ್ದೇಶಕರು(ಖಾಗ್ರಾ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಯುಕ್ತ ಆಸಕ್ತ ಅಭ್ಯರ್ಥಿಗಳು ತರಬೇತಿಗಾಗಿ ಆರ್-ಸೆಟಿ ತರಬೇತಿ ಸಂಸ್ಥೆ, ತೋಳಹುಣಸೆ, ದಾವಣಗೆರೆ ತಾ. ಅಥವಾ ಉಪ ನಿರ್ದೇಶಕರು(ಖಾಗ್ರಾ), ಗ್ರಾಮೀಣ ಕೈಗಾರಿಕಾ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಡಿ.ಸಿ. ಕಚೇರಿ ಪಕ್ಕ, ದಾವಣಗೆರೆ ಇಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ತರಬೇತಿಯು 30 ದಿನಗಳ ವಸತಿಯುತ ತರಬೇತಿಯಾಗಿದ್ದು, ದಾವಣಗೆರೆ ಜಿಲ್ಲೆಯ ಗ್ರಾಮೀಣ ಅಭ್ಯರ್ಥಿಗಳಿಗೆ ಮಾತ್ರ (18 ರಿಂದ 45 ವರ್ಷ ವಯಸ್ಸಿನವರಿಗೆ ಮಾತ್ರ) ಅನ್ವಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ದೂರವಾಣಿ ಸಂ. : 9448929717, 9845691958, 7019980484, 9964111314.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಹದಡಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನ

ಸುದ್ದಿದಿನ,ದಾವಣಗೆರೆ : ದಾವಣಗೆರೆ ( Davangere ) ತಾಲ್ಲೂಕಿನ ಹದಡಿ (Hadadi) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ “ಹರ್ ಘರ್ ತಿರಂಗಾ” ( Har Ghar Tiranga ) ಅಭಿಯಾನದಲ್ಲಿ (Campaign) ವಿದ್ಯಾರ್ಥಿಗಳು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿ ಭಾಗವಹಿಸಿದ್ದರು, ಇದೇ ವೇಳೆ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Big Breaking | ಜಮ್ಮು ಮತ್ತು ಕಾಶ್ಮೀರದ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ; 3 ಯೋಧರು ಹುತಾತ್ಮ

ಸುದ್ದಿದಿನ,ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ(Jammu-Kashmir) ರಾಜೌರಿಯಲ್ಲಿ (Rajouri) ಇಂದು ಮುಂಜಾನೆ ಇಬ್ಬರು ಉಗ್ರರು (Terrorist) ಸೇನಾ ಶಿಬಿರದೊಳಗೆ (Army Camp) ನುಸುಳಲು ಯತ್ನಿಸಿದ ಪರಿಣಾಮ ಮೂವರು ಯೋಧರು (Soldiers) ಹುತಾತ್ಮರಾಗಿದ್ದಾರೆ (Killed ). ಎನ್ಕೌಂಟರ್ನಲ್ಲಿ (Encounter) ಇಬ್ಬರೂ ಉಗ್ರರು ಹತರಾಗಿದ್ದಾರೆ. ರಾಜೌರಿಯ ದರ್ಹಾಲ್ನಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ನಡೆದಿದೆ.
“ಭಯೋತ್ಪಾದಕರು ಪರ್ಗಲ್ನಲ್ಲಿರುವ ಸೇನಾ ಶಿಬಿರದ ಬೇಲಿಯನ್ನು ದಾಟಲು ಪ್ರಯತ್ನಿಸಿದರು. ಸೆಂಟ್ರಿ ಸವಾಲು ಹಾಕಿದರು ಮತ್ತು ಗುಂಡಿನ ಚಕಮಕಿ ನಡೆಯಿತು” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ – ADGP) ಮುಖೇಶ್ ಸಿಂಗ್ ಹೇಳಿದ್ದಾರೆ.
ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅವರು ಹೇಳಿದರು. ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರಿಗೂ ಗಾಯಗಳಾಗಿವೆ.

One Officer is also among the injured Army personnel in the terrorist attack and has been rushed for medical treatment. 16 Corps Commander Lt Gen Manjinder Singh is constantly monitoring the situation on the ground. The area is being sanitised: Indian Army officials https://t.co/pXJONGqwm2
— ANI (@ANI) August 11, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಚನ್ನಗಿರಿ | ಸರ್ಕಾರಿ ಹುದ್ದೆಗಳ ಅಕ್ರಮ ನೇಮಕಾತಿ ; ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ
-
ನಿತ್ಯ ಭವಿಷ್ಯ7 days ago
ಶನಿವಾರ ರಾಶಿ ಭವಿಷ್ಯ-ಆಗಸ್ಟ್-6,2022 : ಈ ರಾಶಿಯವರ ನಿಮ್ಮೆಲ್ಲ ಕನಸು ನನಸಾಗುವ ದಿನ ಬಂದಿದೆ!
-
ದಿನದ ಸುದ್ದಿ5 days ago
ಪ್ರತೀ ಮಗುವಿನ ಭವಿಷ್ಯವೂ ಮುಖ್ಯ: ಶಾಸಕ ರಿಜ್ವಾನ್ ಅರ್ಷದ್
-
ದಿನದ ಸುದ್ದಿ3 days ago
ಹದಡಿ ಕೆರೆ ಏರಿ ದುರಸ್ತಿಗೆ 1.70 ಕೋಟಿ ಮಂಜೂರು : ಸಚಿವ ಬೈರತಿ ಬಸವರಾಜ್
-
ನಿತ್ಯ ಭವಿಷ್ಯ6 days ago
ಭಾನುವಾರ- ರಾಶಿ ಭವಿಷ್ಯ ಆಗಸ್ಟ್-7,2022 : ಈ ರಾಶಿಯವರ ಪ್ರಯತ್ನಿಸಿದ ಕೆಲಸ ಕಾರ್ಯರೂಪಕ್ಕೆ ಬರಲಿದೆ! ಈ ರಾಶಿಯವರು ಇನ್ಮುಂದೆ ಆರ್ಥಿಕ ಸಂಕಷ್ಟದಿಂದ ಮುಕ್ತಿ!
-
ದಿನದ ಸುದ್ದಿ6 days ago
ಕರ್ನಾಟಕದಲ್ಲಿ ವ್ಯಾಪಕ ಮಳೆ; ತುರ್ತು ಪರಿಹಾರಕ್ಕೆ 200 ಕೋಟಿ ರೂಪಾಯಿ ಬಿಡುಗಡೆ
-
ನಿತ್ಯ ಭವಿಷ್ಯ5 days ago
ಸೋಮವಾರ ರಾಶಿ ಭವಿಷ್ಯ-ಆಗಸ್ಟ್-8,2022 : ಈ ರಾಶಿಯವರ ಜೊತೆ ಮದುವೆಯಾದರೆ ಸುಖವಾಗಿ ಇರಬಹುದು! ಈ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ನಿಮ್ಮ ಕಷ್ಟ ಪರಿಹಾರ!
-
ದಿನದ ಸುದ್ದಿ3 days ago
ಎನ್ಇಪಿ-2020ರ ಯಶಸ್ಸಿನಲ್ಲಿ ಗ್ರಂಥಪಾಲಕರ ಪಾತ್ರ ಮಹತ್ವದ್ದು : ಪ್ರೊ. ಪಿ ಎಸ್ ಯಡಪಡಿತ್ತಾಯ