ರಾಜಕೀಯ
ಮೋದಿಯನ್ನು ಕಾಡುತ್ತಿದೆ ಮೈತ್ರಿಕೂಟ ಭೀತಿ

- ಕೇಂದ್ರದಲ್ಲಿ ಒಂದು ಜಾತ್ಯತೀತ ಸರಕಾರವನ್ನು ರಚಿಸಬಲ್ಲ ಒಂದು ಚುನಾವಣೋತ್ತರ ಮೈತ್ರಿಕೂಟ ರೂಪುಗೊಳ್ಳಲಿದೆ ಎಂಬ ಭೀತಿಯ ಭೂತ ಮೋದಿಯನ್ನು ಕಾಡುತ್ತಿದೆ, ಇಂತಹ ಒಂದು ಸರಕಾರ ಮೈತ್ರಿಕೂಟದ ಎಲ್ಲ ಅಂಗಪಕ್ಷಗಳು ಅಂಗೀಕರಿಸುವ ಒಂದು ಸಮಾನ ಕನಿಷ್ಟ ಕಾರ್ಯಕ್ರಮದ ಆಧಾರದಲ್ಲಿ ರಚನೆಗೊಳ್ಳುತ್ತದೆ. ಇಂತಹ ಒಂದು ಮೈತ್ರಿ ತನ್ನ ಜಾಗದಲ್ಲಿ ಅಧಿಕಾರಕ್ಕೆ ಬರಬಹುದು ಎಂಬ ಭೀತಿಯನ್ನೇ ಮೋದಿ ಮೈತ್ರಿಗಳ ವಿರುದ್ಧ ತನ್ನ ಆರ್ಭಟಗಳ ಮೂಲಕ ಪ್ರದರ್ಶಿಸುತ್ತಿದ್ದಾರೆ. ಆ ಭೀತಿಯ ಭೂತೋಚ್ಛಾಟನೆಗೆ ಅವರು ಪ್ರಯತ್ನಿಸುತ್ತಿದ್ದಾರೆ.
ಈ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಮಹಾಗಟ್ಬಂಧನ್ ಅಥವ ಪ್ರತಿಪಕ್ಷಗಳ ಮೈತ್ರಿಯನ್ನು ಮಹಾಮಿಲಾವಟ್(ಮಹಾ ಕಲಸುಮೇಲೋಗರ) ಎಂದು ಅದರ ಮೇಲೆ ದಾಳಿ ನಡೆಸದ ದಿನವೇ ಇಲ್ಲ. ಪ್ರತಿಪಕ್ಷಗಳ ಮುಖಂಡರುಗಳು ಅಧಿಕಾರದಾಹ ತುಂಬಿದ ಸಮಯಸಾಧಕರ ಒಂದು ಪಡೆ ಎಂದು ವರ್ಣಿಸದ ದಿನವೇ ಇಲ್ಲ.
ಪ್ರಚಾರದ ಆರಂಭದಿಂದಲೂ, ಮೋದಿಯವರ ಭಾಷಣಗಳಲ್ಲಿ, ಮಹಾಮಿಲಾವಟ್ ಸರಕಾರ ಹೇಗೆ ಅಭಿವೃದ್ಧಿಗೆ ಕಂಟಕವಾಗುತ್ತದೆ, ರಾಷ್ಟ್ರೀಯ ಭದ್ರತೆಯನ್ನು ಖಾತ್ರಿಪಡಿಸಲಾರದ ಒಂದು ದುರ್ಬಲ ಸರಕಾರವಾಗುತ್ತದೆ, ಹೇಗೆ ಉತ್ತರ ಪ್ರದೇಶ ಮತ್ತು ಇತರೆಡೆಗಳಲ್ಲಿನ ಪ್ರತಿಪಕ್ಷಗಳ ಮೈತ್ರಿ ಮುಖಂಡರ ವೈಯಕ್ತಿಕ ಹಿತಗಳಿಗಾಗಿ ಅಧಿಕಾರವನ್ನು ಬಾಚಿಕೊಳ್ಳುವ ಒಂದು ನೀತಿವಿಹೀನ, ಸಮಯಸಾಧಕರ ಗುಂಪಷ್ಟೇ ಆಗಿದೆ, ಎಂಬುದೇ ನಿರಂತರವಾದ ರಾಗಾಲಾಪ.
ಪ್ರತಿಪಕ್ಷಗಳ ಮೈತ್ರಿಯ ಮೇಲೆ ಇಂತಹ ಒಂದು ಸತತ ದಾಳಿ, ತನ್ನ ಆಳ್ವಿಕೆ ಹೋಗಿ ಒಂದು ಮೈತ್ರಿ ಸರಕಾರ ಬರುವ ಸಂಭವವಿದೆ ಎಂಬ ನಿಜವಾದ ಭೀತಿಯನ್ನು ಮೋದಿ ಹೊಂದಿದ್ದಾರೆ ಎಂಬುದನ್ನು ಪ್ರಕಟಪಡಿಸುತ್ತದೆ.
1977ರಿಂದೀಚೆಗೆ, ಕೆಲವು ಅಪವಾದಗಳನ್ನು ಬಿಟ್ಟರೆ, ಮೈತ್ರಿ ಸರಕಾರಗಳು ಒಂದು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಮೋದಿ ವರ್ಣನೆಗೆ ತದ್ವಿರುದ್ಧವಾಗಿ ಮೈತ್ರಿ ಸರಕಾರಗಳು ಸ್ಥಿರ ಸರಕಾರಗಳನ್ನು ಕೊಟ್ಟಿವೆ ಮತ್ತು ಅಭಿವೃದ್ಧಿ ಕುರಿತಂತೆ ಅವುಗಳ ದಾಖಲೆ ಬೇರೆ ಸರಕಾರಗಳಿಗಿಂತ ಭಿನ್ನವಾಗಿಯೇನೂ ಇಲ್ಲ, ಎಲ್ಲವೂ ಬಂಡವಾಳಶಾಹಿ ಅಭಿವೃದ್ಧಿಯ ಚೌಕಟ್ಟಿನಲ್ಲೇ ಇವೆ. ನಿಜಸಂಗತಿಯೆಂದರೆ, 1999-2004ರ ವಾಜಪೇಯಿ ನೇತೃತ್ವದ ಮೈತ್ರಿ ಸರಕಾರವನ್ನು ಬಿಜೆಪಿಯೇ ಪ್ರಕಾಶಮಾನ ಭಾರತದ ಒಂದು ಮಾದರಿ ಎಂದು ಹೇಳುತ್ತಿತ್ತು.
ಮೋದಿ ಏನೇ ಹೇಳಿಕೊಳ್ಳಲಿ, ಒಂದು ಸಮಾನ ಕನಿಷ್ಟ ಕಾರ್ಯಕ್ರಮವನ್ನು ಆಧರಿಸಿದ ಒಂದು ಚುನಾವಣೋತ್ತರ ಮೈತ್ರಿಯು ಸ್ಥಿರ ಸರಕಾರವೊಂದರ ರಚನೆಗೆ ಆಧಾರವಾಗುವುದಿಲ್ಲ ಎಂದು ನಂಬಲು ಕಾರಣಗಳೇನೂ ಇಲ್ಲ. 2004ರ ಚುನಾವಣೆಗಳ ನಂತರ ಯುಪಿಎ ರಚನೆಗೊಂಡು ಒಂದು ಸಮಾನ ಕನಿಷ್ಟ ಕಾರ್ಯಕ್ರಮ ಅಂಗೀಕಾರವಾಯಿತು ತಾನೇ. ಬಿಜೆಪಿಯ ಅನುಭವವೂ ಇದೇ. 1998 ರಲ್ಲಿ ಮತ್ತು 1999ರಲ್ಲಿ ಚುನಾವಣೆಗಳ ನಂತರ ಎನ್ಡಿಎ ಮೈತಿಕೂಟ ರಚಿಸಲು ಅದು ಆಳ್ವಿಕೆಯ ಅಜೆಂಡಾ ಎಂಬುದನ್ನು ರೂಪಿಸಿತು. ಆ ಸಮಯದಲ್ಲಿ ಬಿಜೆಪಿ ಇಂತಹ ಒಂದು ಸರಕಾರದ ರಚನೆಗಾಗಿ, 370ನೇ ವಿಧಿಯ ರದ್ಧತಿ, ರಾಮಮಂದಿರ ನಿರ್ಮಾಣ ಮತ್ತು ಸಮಾನ ನಾಗರಿಕ ಸಂಹಿತೆಯ ತನ್ನ ಮೂಲ ಬೇಡಿಕೆಗಳನ್ನು ಬದಿಗಿಟ್ಟಿತ್ತು. ಮೋದಿ ಈಗ ಇಂತಹ ಮೈತ್ರಿ ಸರಕಾರಗಳನ್ನು ದೂಷಿಸುವುದೆಂದರೆ, ತನ್ನದೇ ಪಕ್ಷದ ಸರಕಾರಗಳನ್ನೂ ಖಂಡಿಸಿದಂತೆಯೇ ಸರಿ.
ಇಂತಹ ಮಹಾಮಿಲಾವಟ್ ಗ್ಯಾಂಗ್ ಸರಕಾರದಲ್ಲಿ ಇದ್ದಾಗ ಮಾವೋವಾದಿ ಚಟುವಟಿಕೆಗಳು ಭುಗಿಲೆದ್ದವು ಎಂದು ದೂಷಿಸಿರುವುದು, ಮತ್ತು ತನ್ನ ಸರಕಾರ ಬಂದ ಮೇಲೆ ಅವನ್ನು ಪರಿಣಾಮಕಾರಿ ಭದ್ರತಾ ಕಾರ್ಯಾಚರಣೆಗಳ ಮೂಲಕ ಮೆಟ್ಟಿ ಹಾಕಲಾಯಿತು ಎಂದಿರುವುದು ಕೂಡ ಮೋದಿಯ ಅಸಂಬದ್ಧ ಹೇಳಿಕೆ. ಮೋದಿಯ ಈ ಸುಳ್ಳು, ಪ್ರಸಕ್ತ ಚುನಾವಣಾ ಪ್ರಚಾರದ ವೇಳೆಯಲ್ಲೇ ಬಯಲಿಗೆ ಬಂದಿದೆ. ಗದ್ಚಿರೊಲಿಯಲ್ಲಿ ಒಂದು ಮಾವೋವಾದಿ ದಾಳಿಯಲ್ಲಿ 15 ಭದ್ರತಾ ಸಿಬ್ಬಂದಿಯ ಪ್ರಾಣ ಹೋದವು, ಮತ್ತು ಛತ್ತಿಸ್ಗಡ್ನ ದಾಂತೆವಾಡದಲ್ಲಿ ಒಂದು ಸ್ಫೋಟಕ ಉಪಕರಣದಿಂದ ಉಂಟಾದ ಕಾರ್ ಸ್ಫೋಟದಲ್ಲಿ ಆ ಕಾರಿನಲ್ಲಿದ್ದ ಒಬ್ಬ ಬಿಜೆಪಿ ಶಾಸಕ ಮತ್ತು ನಾಲ್ವರು ಭದ್ರತಾ ಸಿಬ್ಬಂದಿ ಕೊಲ್ಲಲ್ಪಟ್ಟರು.
ಈ ಪರಿಶುದ್ಧ ಮೋದಿ ಸರಕಾರದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಸನ್ನಿವೇಶ ಹೇಗೆ ಹದಗೆಟ್ಟಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಅಲ್ಲಿ 2014ರಿಂದ 2019ರ ನಡುವೆ ಭಯೋತ್ಪಾದಕ ದಾಳಿಗಳ ಸಂಖ್ಯೆ 109ರಿಂದ 626ಕ್ಕೆ ಏರಿದೆ ಮತ್ತು ಕೊಲ್ಲಲ್ಪಟ್ಟ ಭದ್ರತಾ ಸಿಬ್ಬಂದಿಯ ಸಂಖ್ಯೆ 130ರಿಂದ 483ಕ್ಕೇರಿದೆ.
ಹೀಗೆ ಇಲ್ಲಿರುವ ಪ್ರಶ್ನೆ ಒಂದು ಏಕ ಪಕ್ಷ ಬಹುಮತದ ಸರಕಾರ ಇದೆಯೇ ಅಥವ ಒಂದು ಮೈತ್ರಿಕೂಟದ ಸರಕಾರ ಇದೆಯೇ ಎಂಬುದಲ್ಲ. ಆ ಸರಕಾರ ಯಾವ ಧೋರಣೆಗಳನ್ನು ಮತ್ತು ಕಾರ್ಯಕ್ರಮವನ್ನು ಅನುಸರಿಸುತ್ತಿದೆ ಎಂಬುದೇ ಪ್ರಶ್ನೆ.
ನೋಟುರದ್ಧತಿಯ ಕರಾಳ ಧೋರಣೆಯನ್ನು ಹೇರಿದ್ದು ಲೋಕಸಭೆಯಲ್ಲಿ ಬಹುಮತ ಹೊಂದಿದ್ದ ಬಿಜೆಪಿಯ ನೇತೃತ್ವದ ಒಂದು ನಿರ್ಣಾಯಕ ಸರಕಾರವೇ ತಾನೇ? ಈ ವಿಧ್ವಂಸಕಾರಿ ಹೆಜ್ಜೆಗೆ ಯಾರನ್ನೂ ಹೊಣೆ ಮಾಡಲಾಗಿಲ್ಲ.
ಮಹಾಗಟ್ಬಂಧನ್ ರಚಿಸಿಕೊಂಡಿರುವ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಪಕ್ಷಗಳು ಮೋದಿಯವರ ಪ್ರಧಾನ ಗುರಿ, ಏಕೆಂದರೆ, ಈ ಮೈತ್ರಿಕೂಟ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಒಂದು ನಿರ್ಣಾಯಕ ಸೋಲು ಉಣ್ಣಿಸುವ ಬೆದರಿಕೆ ಒಡ್ಡಿದೆ. ಆದರೆ ಪ್ರತಿಪಕ್ಷಗಳ ಮೈತ್ರಿಗಳ ಮೇಲೆ ದಾಳಿ ಮಾಡುವ ಭರದಲ್ಲಿ ಎನ್ಡಿಎ 40 ಪಕ್ಷಗಳ ಒಂದು ಮಹಾಗಟ್ಬಂಧನ್ ಎಂಬುದನ್ನು ಮೋದಿ ಮರೆತಿದ್ದಾರೆ.
ಕೇಂದ್ರದಲ್ಲಿ ಒಂದು ಜಾತ್ಯತೀತ ಸರಕಾರವನ್ನು ರಚಿಸಬಲ್ಲ ಒಂದು ಚುನಾವಣೋತ್ತರ ಮೈತ್ರಿಯ ಭೀತಿಯ ಭೂತ ಮೋದಿಯನ್ನು ಕಾಡುತ್ತಿದೆ, ಇಂತಹ ಒಂದು ಸರಕಾರ ಮೈತ್ರಿಕೂಟದ ಎಲ್ಲ ಅಂಗಪಕ್ಷಗಳು ಅಂಗೀಕರಿಸುವ ಒಂದು ಸಮಾನ ಕನಿಷ್ಟ ಕಾರ್ಯಕ್ರಮ.
(ಈ ವಾರದ ಜನಶಕ್ತಿವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
–ಪ್ರಕಾಶ ಕಾರಟ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ7 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ5 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ19 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ18 hours ago
ನಟ ಮನದೀಪ್ ರಾಯ್ ನಿಧನ