ದಿನದ ಸುದ್ದಿ
ನೀವ್ ಕಾರಣ ನೀವೇ ಪ್ರೇರಣಾ..!

- ಹ.ರಾ.ಮಹಿಶ
“ಅಕ್ಟೋವರ್ 9″ ಬಹುಜನ ನಾಯಕ ದಾದಾಸಾಹೇಬ್ ಕಾನ್ಷಿರಾಂಜಿಯವರು ಪರಿನಿಬ್ಬಾಣ ಹೊಂದಿದ ದುಃಖದ ದಿನ.ಭಾರತದ ಜಾಗೃತಗೊಂಡ ಬಹುಜನ ಸಮಾಜವು ಇತರರನ್ನೂ ಜಾಗೃತಗೊಳಿಸಿತ್ತಾ ಅವರ ಮಾರ್ಗವನ್ನು ಚಾಚೂತಪ್ಪದೆ ಅನುಸರಿಸಿ ನಡೆಯುತ್ತೇವೆಂದು ಶಪಥ ಮಾಡಬೇಕಾದ ಸಂಕಲ್ಪದಿನ.
ಕಳೆದ ಹನ್ನೆರಡು ವರ್ಷಗಳ ಹಿಂದೆ ದಾದಾಸಾಹೇಬರು ದೇಹ ತ್ಯಜಿಸಿದ ಈ ದಿನ ಬಹುಜನ ಚಳವಳಿಯ ಪ್ರಮುಖರು ಮೈಸೂರಿನ ಗಂಗೋತ್ರಿಯ ಗಾಂಧಿಭವನದಲ್ಲಿ ಸೇರಿಕೊಂಡೆವು (ಮಾನ್ಯ ಮಹೇಶಣ್ಣ ಮುಂತಾದವರು ಉತ್ತರಪ್ರದೇಶದ ಲಕ್ನೊ ಗೆ ಹೊರಟರು) ಇನ್ನುಳಿದವರು ಸೇರಿ ಸಂತಾಪ ಸಭೆ ಮಾಡಿದೆವು. ಆಕಾಶವೇ ಕಳಚಿಬಿದ್ದಂತೆ ದಿಕ್ಕುಗಾಣದಂತಾಗಿತ್ತು ಎಲ್ಲರ ಮುಖದಲ್ಲಿಯೂ ದುಗುಡ ದುಃಖ ದುಮ್ಮಾನಗಳು ಮಡುಗಟ್ಟಿತ್ತು.
ಗಾಢಮೌನ ಮೆಲುದನಿಯ ಕಡಿಮೆ ಮಾತುಗಳಲ್ಲೇ ಸಭೆ ಮುಕ್ತಾಯವಾಗಿ ಮುಂದಿನ ಭಾನುವಾರ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ಸಂತಾಪ ಸಮಾರಂಭ ಏರ್ಪಡಿಸುವ ಬಗ್ಗೆ ಭಾಗವಹಿಸುವವರ ಬಗ್ಗೆ ಕಾರ್ಯಕ್ರಮದ ರೂಪರೇಷೆಯ ಬಗ್ಗೆ ಚರ್ಚಿಸಲಾಯಿತು.
ಇನ್ನೇನು ಸಭೆ ಮುಗಿಯುವಂತಿತ್ತು… ಹನಸೋಗೆ ಸೋಮಣ್ಣ ಹಿಂದೆಂದಿಗಿಂತ ತುಸು ಹೆಚ್ಚು ಗಂಭೀರವಾಗಿ ಕುಳಿತಿದ್ದರು.. ಕೈಯಲ್ಲೊಂದು ಹಾಡು ಬರೆದ ಹಾಳೆಯಿತ್ತು. ಅವರ ಪಕ್ಕದಲ್ಲೇ ಕುಳಿತಿದ್ದ ನಾನು ಅವರ ಮುಖನೋಡಿ ಸೋಮಣ್ಣ ಹೊಸ ಹಾಡು ಬರ್ದಿದ್ದೀರ ಸಾಹೇಬರ ಕುರಿತು ಎಂದೆ “ತಮಟೆ ತಗೊಳ್ಳಿ ನುಡಿಸಿ ಈಗ ಹಾಡುತ್ತೇನೆ” ಎಂದರು ನಾನು ತಮಟೆಯನ್ನು ಎದೆಗೊರಗಿಸಿಕೊಂಡು ಸಿದ್ದವಾಗಿ ಕೂತು… ಸೋಮಣ್ಣ ಹೊಸ ಹಾಡು ಹಾಡುತ್ತಾರೆ ಎಲ್ಲರೂ ಕೇಳಿಸಿಕೊಂಡು ದನಿಗೂಡಿಸೋಣ ಎಂದು ಸಭೆಗೆ ಹೇಳಿದೆ…. ಎಲ್ಲರೂ ಆ ದುಃಖದಲ್ಲಿಯೂ ಕುತೂಹಲದಿಂದ ಆಲಿಸಲಣಿಯಾಗಿ ಕುಳಿತರು…. ಸೋಮಣ್ಣ ಮೊಟ್ಟಮೊದಲಿಗೆ ಆ ಹಾಡು ಹಾಡಲು ಶುರುಮಾಡಿದರು ನಾನು ಕಣ್ಮುಚ್ಚಿ ದನಿಗೂಡಿಸಿ ತಮಟೆ ನುಡಿಸುತ್ತಾ ಹೋದೆ… ಅಬ್ಬಬ್ಬಾ ಅದೇನು ಸಾಹಿತ್ಯ ಅದೆಂಥ ಪದಜೋಡನೆ ಎಂಥಾ ಭಾವತುಂಬಿದ ರಾಗ ಸೋಮಣ್ಣನ ವಿಶೇಷ ಧನಿಯಲ್ಲಿ…..
” ನೀವ್ ಕಾರಣ ನೀವೇ ಪ್ರೇರಣ…
ಜೈಭೀಮನ ತುಂಬಿ ಮನ
ಮೇಲೇಳಲು ಕೂಡಿ ಬಾಳಲು
ಈ ದೇಶ ನಾವೆ ಆಳಲು…..
ಎಲ್ಲರ ಕಣ್ಣುಗಳೂ ತೇವವಾದವು…. ದನಿ ಜೋರಾಯಿತು..
ನಮನ ಭಾವ ನಮನ ದಾದಾಕಾನ್ಷಿರಾಮಜಿ
ನಮನ ಭೀಮ ನಮನ ದಾದಾಕಾನ್ಷಿರಾಂಜಿ
ನಮನ ಹೃದಯ ನಮನ ದಾದಾ ಕಾನ್ಷಿರಾಮಜಿ…
ಎಲ್ಲರ ದನಿ ತಾರಕಕ್ಕೇರಿ ಹಾಡಿ ಹಾಡಿ ಹಾಡಿ ಇಡೀ ಗಂಗೋತ್ರಿಯೇ ಧ್ಯಾನಸ್ಥವಾದಂತೆ ಅನುರಣಿಸಿತು
ಆ ನಮ್ಮ ಹಾಡಿನ ಕೂಗು ದೂರದ ಉತ್ತರಪ್ರದೇಶದಲ್ಲಿ ತಣ್ಣಗೆ ಮಲಗಿದ್ದ ದಾದಾಸಾಹೇಬರಿಗೂ ಕೇಳಿ… ಅಲ್ಲಿಂದಲೇ ನಮ್ಮ ಕಂಡು ಹತ್ತಿರ ಬಂದು ಮೆಲ್ಲಗೆ ನಮ್ಮೆದೆಯೊಳಗಿಳಿದು ಹೃದಯದ ತುಂಬಿಕೊಂಡಂತೆ ಎದೆಭಾರವಾಯಿತು…
ಈಗಲೂ ದಾದಾಸಾಹೇಬ್ ಕಾನ್ಷಿರಾಂಜಿ ಎಂದರೆ ನೆನಪಾಗೋದು ಸೋಮಣ್ಣ ಬರೆದ “ಭೀಮಬಂದರು ಜೈಭೀಮ ಬಂದರು” ಹಾಗೂ ನೀವ್ ಕಾರಣ ನೀವೇ ಪ್ರೇರಣಾ ಹಾಡುಗಳು…
ಥ್ಯಾಂಕ್ಯು ಸೋ ಮಚ್ ಸೋಮಣ್ಣ… ಜೈ ಭೀಮ್ ನಮೋ ಬುದ್ಧಾಯ..
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

-
ನಿತ್ಯ ಭವಿಷ್ಯ7 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ5 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ19 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ18 hours ago
ನಟ ಮನದೀಪ್ ರಾಯ್ ನಿಧನ