ದಿನದ ಸುದ್ದಿ
ರಾಜ್ಯ ಅಲೆಮಾರಿ ಬುಡಕಟ್ಟು ಸಮಿತಿಯಿಂದ ಸರ್ಕಾರಕ್ಕೆ ಹಲವು ಬೇಡಿಕೆಗಳ ಮನವಿ ಸಲ್ಲಿಕೆ

ಸುದ್ದಿದಿನ, ಬೆಂಗಳೂರು : ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಅಲೆಮಾರಿ ನಿಗಮವನ್ನು ಮತ್ತು ಸಂಶೋಧನಾ ಕೇಂದ್ರ ಅಲೆಮಾರಿ ಆಯೋಗ ನಿರ್ಮಿಸಬೇಕು ಎಂದು ಶುಕ್ರವಾರ ಸಚಿವ ಗೋವಿಂದ ಕಾರಜೋಳ ಅವರಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಬಜೆಟ್ ಪೂರ್ವ ಸಭೆ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಅಲೆಮಾರಿ ಬುಡಕಟ್ಟು ರಾಜ್ಯ ಸಮಿತಿಯು ಮನವಿಮಾಡಿತು.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ 2020-21 ನೇ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆಗೆ ಅಲೆಮಾರಿ ಬುಡಕಟ್ಟು ಮಹಾ ಸಭಾದ ವತಿಯಿಂದ ಭಾಗವಹಿಸಲಾಗಿತ್ತು. ಅಲೆಮಾರಿ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಕೆಳಕಂಡ ಸಲಹೆ ಹಾಗೂ ಬೇಡಿಕೆ ನೀಡಲಾಗಿದೆ.
- ಸದರಿ ಸಭೆಯಲ್ಲಿ SC/ST ಅಲೆಮಾರಿ ಸಮುದಾಯಗಳ ಪರವಾಗಿ SC/ST ಅಲೆಮಾರಿ ನಿಗಮವನ್ನು ಸ್ಥಾಪನೆ ಮಾಡಿ ಪತ್ರೇಕ ನಿರ್ದೇಶನಾಲಯ ರಚಿಸಿ 100 ಕೋಟಿ ಅನುದಾನ ಮೀಸಲಿಡಬೇಕು.
- ಅಲೆಮಾರಿಗಳ ಆಚರಣೆ ಕಲೆ ಸಂಸ್ಕೃತಿಯ ಉಳಿಸಿಕೊಳ್ಳಲು ಸಂಶೋಧನೆ ಹಾಗೂ ಅದ್ಯಯನ ಅಗತ್ಯ ಇದ್ದು ಸಂಶೋಧನಾ ಕೇಂದ್ರವನ್ನು ಬೆಂಗಳೂರು ವಿ.ವಿ ಯಲ್ಲಿ ಸ್ಥಾಪನೆ ಮಾಡಬೇಕು.
- ಪಾರಂಪರಿಕವಾಗಿ ಹಂದಿ ಸಾಕಾಣಿಕೆ ಮಾಡುತ್ತಿರುವ ಅಲೆಮಾರಿ ಸಮುದಾಯಗಳಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಭೂಮಿಯನ್ನು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಸುಧಾರಿತ ಮಾಂಸದ ಮಳಿಗೆಗಳನ್ನು ಸ್ಥಾಪಿಸಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.
- ಅಲೆಮಾರಿ ಸಮುದಾಯಗಳ ಶಿಕ್ಷಣಕ್ಕಾಗಿ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಸಂಚಾರಿ ಶಾಲೆಗಳನ್ನು ಸ್ಥಾಪಿಸಲು ವಿಶೇಷ ಅನುದಾನ ನೀಡಬೇಕು.
- ಸನಾದಿ ಅಪ್ಪಣ್ಣನವರ ಸಮಾಧಿ ಅಭಿವೃದ್ಧಿ ಪಡಿಸಿ ಪ್ರವಾಸಿ ಕೇಂದ್ರ ಮಾಡಬೇಕು ಹಾಗೂ ಸಂಗೀತ ಅಕಾಡೆಮಿ ಸ್ಥಾಪಿಸಬೇಕು.
- 12 ನೇ ಶತಮಾನದ ಬಸವಣ್ಣನ ಸಮಕಾಲೀನ ಶರಣ ನುಲಿಯ ಚಂದಯ್ಯನ ಜಯಂತಿಯನ್ನು ರಜೆ ರಹಿತವಾಗಿ ಸರಕಾರವೇ ಆಚರಿಲು ಆದೇಶ ಮಾಡಿ ಜಯಂತಿ ಆಚರಿಸಲು ಅನುದಾನವನ್ನು ಘೋಷಣೆ ಮಾಡಬೇಕು.
- 2019-20 ಸಾಲಿಗೆ ಕೋಶದಿಂದ ಅರ್ಜಿ ಆಹ್ವಾನ ತುರ್ತಾಗಿ ಮಾಡಬೇಕು.
ಹೀಗೆ ಅಲೆಮಾರಿಗಳ ಸಮಸ್ಯೆಗಳ ಕುರಿತು ಬಹಳ ಸವಿಸ್ತಾರವಾಗಿ ಮಾನ್ಯ ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು. ಆನಂದ್ ಕುಮಾರ್ ಏಕಲವ್ಯ ರವರು ಉಪಮುಖ್ಯ ಮಂತ್ರಿಗಳಿಗೆ ಬಜೆಟ್ ಪೂರಕವಾಗಿ ಅತ್ಯಂತ ನಿರ್ದಿಷ್ಟವಾಗಿ ಪ್ರಸ್ತಾಪವನ್ನು ಮಾಡಿದರು.
ಹಕ್ಕುಗಳ ಕುರಿತು ಕಿರಣ್ ಕುಮಾರ್ ಕೊತ್ತಗೆರೆ ಅವರು ನಿಗಮದ ಉಪಯೋಗ ಏನಿದೆ ಎಂದು ವರದಿ ಸಲ್ಲಿಸಿದರು. ಡಾ. ಬಾಲಗುರುಮೂರ್ತಿರವರಿಗೆ ಅಲೆಮಾರಿ ಕೋಶವನ್ನು ನಿಗಮ ಮಾಡಲು ಕೋರಿದರು. ಸಿಳ್ಳೇಕ್ಯಾತಾಸ್ ಮತ್ತು ಅದರ ಪರ್ಯಾಯ ಪದಗಳ ಕುರಿತು ಕುಲಶಾಸ್ತ್ರೀಯ ಸಮೀಕ್ಷೆ ಮಾಡಿಸಲು ಆಕ್ಷನ್ ಪ್ಲಾನ್ ಮಂಜೂರು ಮಾಡುವಂತೆ, ಅತಿ ಸೂಕ್ಷ್ಮ ಸಮುದಾಯವಾದ ಸಿಳ್ಳೇಕ್ಯಾತಾಸ್ ಸಮುದಾಯಕ್ಕೆ ಒನ್ ಟೈಮ್ ಸೆಟ್ಲ್ಮೆಂಟ್ ಕುರಿತು ಬಿ.ಹೆಚ್ .ಮಂಜುನಾಥ್ ಮಾತನಾಡಿದರು.ಚೆನ್ನದಾಸರ ಸಮುದಾಯದ ಕುರಿತು ಮಾತನಾಡಿದ ಬಿ.ಟಿ ದಾಸರು ನಡಾವಳಿ ಶೀಘ್ರವಾಗಿ ನೀಡುವಂತೆ ಕೋರಿದರು.
ಬಹಳ ಒತ್ತಡಗಳ ಮಧ್ಯೆಯೂ ಇದೇ ಮೊದಲ ಬಾರಿಗೆ ನಮ್ಮ ಅಲೆಮಾರಿ ಸಮುದಾಯಕ್ಕೆ ಸಮಯಾವಕಾಶವನ್ನು ಹೋರಾಟದ ಮುಖಾಂತರ ಪಡೆದುವಿಮಎಂದು ಹೇಳಲು ಹೆಮ್ಮೆ ಎನಿಸುತ್ತಿದೆ. ಇದೇ ಮೊಟ್ಟ ಮೊದಲ ಬಾರಿಗೆ ಅಲೆಮಾರಿಗಳ ಧ್ವನಿ ಜೋರಾಗೇ ಇತ್ತು.
ಈ ಸಂದರ್ಭದಲ್ಲಿ ಡಾ. ಬಾಲಗುರುಮೂರ್ತಿ ರಾಜ್ಯಾಧ್ಯಕ್ಷರು, ಕಿರಣ್ ಕುಮಾರ್ ಕೊತ್ತಿಗೆರೆ ರಾಜ್ಯಪ್ರಧಾನ ಕಾರ್ಯದರ್ಶಿ, ಆನಂದ ಏಕಲವ್ಯ ರಾಜ್ಯಉಪಾಧ್ಯಕ್ಷರು,ಬಿಎಚ್ ಮಂಜುನಾಥ್ ರಾಜ್ಯ ಉಪಾಧ್ಯಕ್ಷರು,ಬಿ.ಟಿ.ದಾಸರ ರಾಜ್ಯ ಉಪಾಧ್ಯಕ್ಷರು,ಸಿರಿವಾಟಿ ನರಸಿಂಹುಲು ರಾಜ್ಯ ಉಪಾಧ್ಯಕ್ಷರು, ಶ್ರೀಕಂಠಯ್ಯ ರಾಮನಗರ ಜಿಲ್ಲಾಧ್ಯಕ್ಷರು, ಎಸ್.ಕೆ. ದಾಸರ. ರಾಜ್ಯ ಸಲಹಾ ಸಮಿತಿ ಸಲಹೆಗಾರರು, ಬಸವರಾಜ ದಾಸರ, ರಾಜ್ಯ ಸಂಘಟನಾ ಕಾರ್ಯದರ್ಶಿ, ವೆಂಕಟೇಶ್ ದಾಸರ ಬೆಂಗಳೂರು ಸಂಘಟನಾ ಕಾರ್ಯದರ್ಶಿ ,ಮಹಿಳಾ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಸುಗುಣ ಅಶ್ವತ್ಥ್ ,ಯಮನೂರಪ್ಪ,ರಾಜ್ಯ ಉಪಾಧ್ಯಕ್ಷರು,ರಾಜ್ಯ ದೊಂಬರ ಸಂಘ, ರಾಯಚೂರು, ಮೇದ ಸಮುದಾಯದ ಮುಖಂಡರು ಉಪಸ್ಥಿತಿ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
