ರಾಜಕೀಯ
ಭಾರತದಲ್ಲಿ ಟ್ರಂಪ್ : ಮೋದಿ ಸರಕಾರದ ಅಡಿಯಾಳುತನದ ಪ್ರದರ್ಶನ

- ಈ ಟ್ರಂಪ್ ಭೇಟಿ, ಭಾರತವನ್ನು ಅಮೆರಿಕಾದ ಭೌಗೋಳಿಕ-ರಾಜಕೀಯ ಕಾರ್ಯವ್ಯೂಹಕ್ಕೆ ಸಂಪೂರ್ಣವಾಗಿ ಲಗತ್ತಿಸಿ ಮೋದಿ ಭಾರತದ ಎಲ್ಲ ಹಿತಾಸಕ್ತಿಗಳನ್ನು ಆ ಗುರಿ ಸಾಧನೆಗೆ ಅಡಿಯಾಳಾಗಿಸಿದ್ದನ್ನು ತೋರಿಸಿಕೊಟ್ಟಿದೆ. ಭೇಟಿಯ ಕೊನೆಯಲ್ಲಿ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಇದು ಚೆನ್ನಾಗಿ ಬಿಂಬಿತವಾಗಿದೆ. ಅಮೆರಿಕಾದ ಪ್ರಾಥಮಿಕ ಗುರಿ ಭಾರತವನ್ನು ಒಂದು ನಂಬಿಕಸ್ಥ ವ್ಯೂಹಾತ್ಮಕ ಮತ್ತು ಮಿಲಿಟರಿ ಮಿತ್ರನಾಗಿ ಮಾಡುವುದು ಎಂಬುದು ಭಾರತ-ಅಮೆರಿಕ ಪರಮಾಣು ವ್ಯವಹಾರಕ್ಕೆ ಸಹಿ ಹಾಕಿದಂದಿನಿಂದಲೇ ಸ್ಪಷ್ಟವಾಗಿತ್ತು. ಅಮೆರಿಕಾಕ್ಕೆ ಎದುರಾಗಿ ಭಾರತದ ಹಿತಗಳಿಗೆ ಅತ್ಯಗತ್ಯವಾದ ಒಂದು ವ್ಯಾಪಾರ, ವಾಣಿಜ್ಯ, ದತ್ತಾಂಶ ಸ್ಥಳೀಯಕರಣ ಅಥವ ಬೇರೆ ಯಾವುದೇ ವಿಷಯದಲ್ಲಿ ಮಾತುಕತೆಗಳಿಗೆ ಮೋದಿ ಸರಕಾರಕ್ಕೆ ಯಾವುದೇ ಅವಕಾಶ ಉಳಿದಿಲ್ಲ.
-ಪ್ರಕಾಶ ಕಾರಟ್
ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರವರ ಭಾರತ ಭೇಟಿ ಇತ್ತೀಚಿನ ಸಮಯದಲ್ಲಿ ಯಾವುದೇ ಅಮೆರಿಕನ್ ಅಧ್ಯಕ್ಷರ ಭೇಟಿಯಂತಿರಲಿಲ್ಲ. ಇದೊಂದು ಅಧಿಕೃತ ಭೇಟಿಯಾದರೂ, ಅಹಮದಾಬಾದಿನ ಮೊಟೆರ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಇವೆಂಟ್ ಈ ಭೇಟಿಯ ಪ್ರಧಾನ ಸಂಗತಿಯಾಗಿತ್ತು. ಇಲ್ಲಿ ನರೇಂದ್ರ ಮೋದಿ ಕಳೆದ ವರ್ಷ ಅಮೆರಿಕಾದ ಹ್ಯೂಸ್ಟನ್ನಲ್ಲಿ ನಡೆದ ಹೌಡಿ ಮೋದಿಯ ಭಾರತೀಯ ಆವೃತ್ತಿಯನ್ನು ಪ್ರದರ್ಶಿಸಿದರು. ಆದರೆ ಈ ಪ್ರದರ್ಶನವನ್ನು ಕೇವಲ ಒಂದು ತಮಾಷೆ ಎಂದು ತಳ್ಳಿ ಹಾಕುವಂತಿಲ್ಲ. ಇದು ಮೋದಿಯ ಭಾರತ ಟ್ರಂಪ್ನ ಅಮೆರಿಕಾಕ್ಕೆ ಸಂಪೂರ್ಣ ನಿಷ್ಠೆಯನ್ನು-ತಾತ್ವಿಕವಾಗಿ, ರಾಜಕೀಯವಾಗಿ, ವ್ಯೂಹಾತ್ಮಕವಾಗಿ ಮತ್ತು ಸಾಮರಿಕವಾಗಿ- ಘೋಷಿಸಿರುವ ಪರಿ. ಹಿಂದೆಂದೂ ಬಲಪಂಥೀಯ ರಾಜಕೀಯ ಮತ್ತು ಸಿದ್ಧಾಂತ ಇಂದಿನಷ್ಟು ಭಾರತ-ಅಮೆರಿಕ ಸಂಬಂಧಗಳನ್ನು ಜೋಡಿಸುವ ಅಂಟು ಆಗಿರಲಿಲ್ಲ. ಮೋದಿ ಈ ನಮಸ್ತೆ ಟ್ರಂಪ್ನ್ನು ನವಂಬರ್ ತಿಂಗಳ ಅಧ್ಯಕ್ಷೀಯ ಚುನಾವಣೆಗಲ್ಲಿ ತನ್ನ ಗೆಳೆಯ ಟ್ರಂಪ್ರವರ ಪ್ರಚಾರಕ್ಕೆಂದೇ ರೂಪಿಸಿದಂತಿದೆ.
ಈ ಟ್ರಂಪ್ ಭೇಟಿ, ಭಾರತವನ್ನು ಅಮೆರಿಕಾದ ಭೌಗೋಳಿಕ-ರಾಜಕೀಯ ಕಾರ್ಯವ್ಯೂಹಕ್ಕೆ ಸಂಪೂರ್ಣವಾಗಿ ಲಗತ್ತಿಸಿ ಮೋದಿ ಭಾರತದ ಎಲ್ಲ ಹಿತಾಸಕ್ತಿಗಳನ್ನು ಆ ಗುರಿ ಸಾಧನೆಗೆ ಅಡಿಯಾಳಾಗಿಸಿದ್ದನ್ನು ತೋರಿಸಿಕೊಟ್ಟಿದೆ.
ಭೇಟಿಯ ಕೊನೆಯಲ್ಲಿ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಇದು ಚೆನ್ನಾಗಿ ಬಿಂಬಿತವಾಗಿದೆ. ಸಮಗ್ರ ಭೌಗೋಳಿಕ-ವ್ಯೂಹಾತ್ಮಕ ಭಾಗೀದಾರಿಕೆ ಎಂದು ಅದರಲ್ಲಿ ಪ್ರಕಟಿಸಿರುವಂತದ್ದು ಭಾರತವು ಅಮೆರಿಕ ಸಂಯುಕ್ತ ಸಂಸ್ಥಾನಗಳ ವ್ಯೂಹಾತ್ಮಕ, ರಕ್ಷಣಾ ಮತ್ತು ಭದ್ರತಾ ಹಿತಾಸಕ್ತಿಗಳೊಂದಿಗೆ ತನ್ನನ್ನು ಏಕೀಭವಿಸಿಕೊಂಡಿದೆ ಎಂಬ ಘೊಷಣೆಯಲ್ಲದೆ ಬೇರೇನೂ ಅಲ್ಲ.
ಅಮರಿಕಾದ ಪ್ರಾಥಮಿಕ ಗುರಿ ಭಾರತವನ್ನು ಒಂದು ನಂಬಿಕಸ್ಥ ವ್ಯೂಹಾತ್ಮಕ ಮತ್ತು ಮಿಲಿಟರಿ ಮಿತ್ರನಾಗಿ ಮಾಡುವುದು ಎಂಬುದು ಭಾರತ-ಅಮೆರಿಕ ಪರಮಾಣು ವ್ಯವಹಾರಕ್ಕೆ ಸಹಿ ಹಾಕಿದಂದಿನಿಂದಲೇ ಸ್ಪಷ್ಟವಾಗಿತ್ತು. ಅಧ್ಯಕ್ಷ ಟ್ರಂಪ್ ತನ್ನ ಅಹಮದಾಬಾದ್ ಭಾಷಣದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವು ಭಾರತದ ಪ್ರಧಾನ ರಕ್ಷಣಾ ಭಾಗೀದಾರನಾಗಬೇಕು ಎಂಬುದು ನನ್ನ ನಂಬಿಕೆ, ಆ ರೀತಿಯಲ್ಲಿ ಅದು ಕೆಲಸ ಮಾಡುತ್ತಿದೆ ಎಂದರು.
ಭಾರತ ಈಗಾಗಲೇ ಕಳೆದ ಒಂದು ದಶಕದಲ್ಲಿ ಅಮೆರಿಕಾದಿಂದ 15ರಿಂದ 18 ಬಿಲಿಯ ಡಾಲರುಗಳ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಉಪಕರಣಗಳನ್ನು ಖರೀದಿಸಿದೆ. ಅಮೆರಿಕಾದೊಡನೆ ಭಾರತ ವ್ಯಾಪಾರದಲ್ಲಿ ಸರಿಯಾದ ರೀತಿಯಲ್ಲಿ ವ್ಯವಹರಿಸುತ್ತಿಲ್ಲ ಎಂಬ ಟ್ರಂಪ್ ಮಾತಿನ ಹಿಂದೆ ಇರುವುದು ಭಾರತ ಅಮೆರಿಕನ್ ಶಸ್ತಾಸ್ತ್ರ ಉತ್ಪಾದಕರಿಂದ ಹೆಚ್ಚೆಚ್ಚು ವೆಚ್ಚದಾಯಕ ಶಸ್ತ್ರಾಸ್ತೃಗಳನ್ನು ಖರೀದಿಸಬೇಕು ಎಂಬ ಒತ್ತಡವೇ. ಈ ಭೇಟಿ ಕಾಲದಲ್ಲಿ 3 ಬಿಲಿಯ ಡಾಲರುಗಳ ಮೌಲ್ಯದ 24 ಎಂಹೆಚ್ 60 ಆರ್ ನಾವಿಕ ಹೆಲಿಕಾಪ್ಟರ್ಗಳನ್ನು ಮತ್ತು ಆರು ಅಪಾಚೆ ಹೆಲಿಕಾಪ್ಟರುಗಳನ್ನು ಖರೀದಿಸುವ ಒಪ್ಪಂದವನ್ನು ಪ್ರಕಟಿಸಲಾಯಿತು.
ಬುನಾದಿ ಮಿಲಿಟರಿ ಒಪ್ಪಂದಗಳು ಎನ್ನಲಾದ ಮೂರು ಒಪ್ಪಂದಗಳಲ್ಲಿ ಎರಡಕ್ಕೆ ಸಹಿ ಹಾಕಿದ ಮೇಲೆ ಮೂರನೇ ಒಪ್ಪಂದ, ಮೂಲ ವಿನಿಮಯ ಸಹಕಾರ ಒಪ್ಪಂದ ಎಂಬುದನ್ನು ಬೇಗನೇ ಪೂರ್ಣಗೊಳಿಸಲಾಗುವುದು ಎಂದು ಜಂಟಿ ಹೇಳಿಕೆ ಸೂಚಿಸುತ್ತದೆ. ಈ ತ್ರಿವಳಿ ಒಪ್ಪಂದಗಳೊಂದಿಗೆ, ಭಾರತದ ಸಶಸ್ತ್ರ ಪಡೆಗಳು ಅಂತರ್ನಿರ್ವಹಣೆ ಮತ್ತು ಜಂಟಿ ಚಟುವಟಿಕೆಗಳ ರೂಪದಲ್ಲಿ ಏಷ್ಯಾದಲ್ಲಿ ಅಮೆರಿಕಾದ ಮಿತ್ರರುಗಳ, ಅಂದರೆ ಜಪಾನ್ ಮತ್ತು ದಕ್ಷಿಣ ಕೊರಿಯಾದ ಸಶಸ್ತ್ರ ಪಡೆಗಳಾಗಿ ಬಿಡುತ್ತವೆ.
ಈ ಜಂಟಿ ಹೇಳಿಕೆ, ಮೋದಿ ಸರಕಾರ ಅಮೆರಿಕ ಸಂಯುಕ್ತ ಸಂಸ್ಥಾನಗಳ ಭಾರತ-ಶಾಂತಸಾಗರ ಕಾರ್ಯವ್ಯೂಹದೊಂದಿಗೆ ತನ್ನನ್ನು ಸಂಪೂರ್ಣವಾಗಿ ಹೊಂದಿಸಿಕೊಂಡಿದೆ ಎಂಬುದನ್ನು ಬಿಂಬಿಸುತ್ತದೆ. ಅದು ಅಮೆರಿಕ-ಭಾರತ-ಜಪಾನ್ ತ್ರಿಪಕ್ಷೀಯ ಶೃಂಗ ಮತ್ತು ಅಮೆರಿಕ, ಜಪಾನ್ಮ ಆಸ್ಟ್ರೇಲಿಯ ಮತ್ತು ಭಾರತ ಇರುವ ಚತುರ್ಪಕ್ಷೀಯ ವೇದಿಕೆಯನ್ನು ಬಲಪಡಿಸುವ ಮಾತಾಡುತ್ತದೆ.
ಆಂತರಿಕ ಭದ್ರತಾ ರಂಗದಲ್ಲಿ ಭಾರತ ಅಮೆರಿಕಾದ ಆಂತರಿಕ ಭದ್ರತಾ ಇಲಾಖೆಯೊಂದಿಗೆ ಸಹಕಾರವನ್ನು ಬೆಳೆಸುತ್ತದೆ, ಅಂದರೆ ನಾವು ಅಮೆರಿಕನ್ ಭದ್ರತಾ ಏಜೆಂಸಿಗಳು ಭಾರತದ ಆಂತರಿಕ ಭದ್ರತಾ ವ್ಯವಹಾರಗಳಲ್ಲಿ ಹೆಚ್ಚಿನ ಪಾತ್ರವಹಿಸುವುದನ್ನು ನಿರೀಕ್ಷಿಸಬಹುದು.
ಈಗ ಭಾರತ-ಅಮೆರಿಕಾ ಸಂಬಂಧಗಳನ್ನು ಬಾಧಿಸುತ್ತಿರುವ ಪ್ರಶ್ನೆಯೆಂದರೆ, ವ್ಯಾಪಾರ ಸಂಬಂಧಗಳು. ಭಾರತೀಯ ಸರಕುಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುವುದು, ಭಾರತದ ಸಾಮಾನ್ಯೀಕೃತ ವ್ಯಾಪಾರ ಆದ್ಯತೆಗಳ ವ್ಯವಸ್ಥೆಯನ್ನು ಹಿಂತೆಗೆದುಕೊಳ್ಳುವುದು ಮುಂತಾದ ಟ್ರಂಪ್ ಆಡಳಿತದ ವೈಷಮ್ಯಭರಿತ ನಡೆಗಳ ನಂತರ, ಅಮೆರಿಕ ಡಬ್ಲ್ಯುಟಿಒ ದಲ್ಲಿ ಭಾರತ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಇನ್ನು ಮುಂದೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳೆಂದು ವರ್ಗೀಕರಿಸಬಾರದು ಎಂದು ಹೇಳುವವರ ನೇತೃತ್ವವನ್ನು ವಹಿಸಿಕೊಂಡಿದೆ.
ಒಂದು ಸಮತ್ವಹೀನ ಇ-ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಲು ಭಾರತದ ಮೇಲೆ ಅಮೆರಿಕಾ ಒತ್ತಡ ಹೇರುತ್ತಿದೆ, ಮತ್ತು ವೈದ್ಯಕೀಯ ಉಪಕರಣಗಳ ಮೇಲೆ ಬೆಲೆ ನಿಯಂತ್ರಣ ಹಾಕುವ ಭಾರತದ ಧೋರಣೆಯನ್ನು ವಿರೋಧಿಸುತ್ತಿದೆ. ಇವೆಲ್ಲವನ್ನು ಕುರಿತಂತೆ ಭಾರತದ ಯಾವೊಂದೂ ನಿಲುವನ್ನು ಅಮೆರಿಕಾ ಒಪ್ಪುವಂತೆ ಮಾಡಲು ಸಾಧ್ಯವಾಗಿಲ್ಲ ಎಂಬುದು ಭೇಟಿ ಕಾಲದಲ್ಲಿನ ಹೇಳಿಕೆಗಳಿಂದ ಸ್ವಯಂವೇದ್ಯವಾಗುತ್ತದೆ. ಜಂಟಿ ಹೇಳಿಕೆ ಒಂದು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಪ್ರಸ್ತಾವಿತ ಮೊದಲ ಹಂತದ ಬಗ್ಗೆ ಮಾತುಕತೆಗಳ ಬಗ್ಗೆಯಷ್ಟೇ ಹೇಳುತ್ತದೆ.
ಅಮೆರಿಕಾಕ್ಕೆ ಎದುರಾಗಿ ಭಾರತದ ಹಿತಗಳಿಗೆ ಅತ್ಯಗತ್ಯವಾದ ಒಂದು ವ್ಯಾಪಾರ, ವಾಣಿಜ್ಯ, ದತ್ತಾಂಶ ಸ್ಥಳೀಯಕರಣ ಅಥವ ಬೇರೆ ಯಾವುದೇ ವಿಷಯದಲ್ಲಿ ಮಾತುಕತೆಗಳಿಗೆ ಮೋದಿ ಸರಕಾರಕ್ಕೆ ಯಾವುದೇ ಅವಕಾಶ ಉಳಿದಿಲ್ಲ.
ಭಾರತದ ವ್ಯೂಹಾತ್ಮಕ ಸ್ವಾಯತ್ತತೆ ಮತ್ತು ಒಂದು ಸ್ವತಂತ್ರ ವಿದೇಶಾಂಗ ಧೋರಣೆಯನ್ನು ಅನುಸರಿಸುವ ಸಾಮರ್ಥ್ಯವನ್ನು ತೀವ್ರವಾಗಿ ಸೀಮಿತಗೊಳಿಸುವಂತಹ ಒಂದು ಹಂತವನ್ನು ಭಾರತ-ಅಮೇರಿಕ ವ್ಯೂಹಾತ್ಮಕ ಸಂಬಂಧಗಳಲ್ಲಿ ತಲುಪಿಯಾಗಿದೆ. ಇತ್ತೀಚೆಗೆ, ಅಮೆರಿಕ ಇರಾನಿನ ಉನ್ನತ ಸೇನಾಧಿಕಾರಿ ಸುಲೆಮಾನ್ರ ಹತ್ಯೆ ಮಾಡಿದಾಗ ಭಾರತ ಅದನ್ನು ಖಂಡಿಸಲಿಲ್ಲ. ಈ ಮೊದಲು, ಇರಾನಿನಿಂದ ತೈಲ ಆಮದು ಮಾಡಿ ಕೊಳ್ಳಬಾರದು ಎಂದು ಆಗ್ರಹಿಸಿದಾಗ ಮೋದಿ ಸರಕಾರ ತಕ್ಷಣವೇ ಅದನ್ನು ಪಾಲಿಸಿತು.
ಇದರ ಬದಲು ಈಗ ಭಾರತ ಅಮೆರಿಕಾದಿಂದ ತೈಲ ಮತ್ತು ಅನಿಲವನ್ನು ಖರೀದಿಸುವ ಒತ್ತಡಕ್ಕೆ ಒಳಗಾಗಿದೆ, ಮೋದಿ ಸರಕಾರ ಇದನ್ನೇ ಒಂದು ಸಾಧನೆಯಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಸಂಪೂರ್ಣವಾಗಿ ಏಕಪಕ್ಷೀಯವಾದ ಶಾಂತಿಯ ಪ್ರಸ್ತಾವವನ್ನು ಭಾರತ ಟೀಕಿಸಲೂ ಇಲ್ಲ. ಈ ಪ್ರಸ್ತಾವದ ಪ್ರಕಾರ ಇಸ್ರೇಲ್ ಸುಮಾರಾಗಿ ಎಲ್ಲ ಆಕ್ರಮಿತ ಪ್ರದೇಶಗಳನ್ನು ಸ್ವಾಧೀನಕ್ಕೆ ಪಡೆಯಬಹುದು. ಆಘಾತಕಾರಿ ಸಂಗತಿಯೆಂದರೆ ವಿದೇಶಾಂಗ ವ್ಯವಹಾರಗಳ ಮಂತ್ರಾಲಯ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ಗೆ ಈ ಟ್ರಂಪ್ ಶಾಂತಿ ಪ್ರಸ್ತಾವವನ್ನು ಪರಿಶೀಲಿಸಬೇಕು ಎಂದು ಹೇಳಿದೆ.
ಭಾರತ ಈ ರೀತಿಯಲ್ಲಿ ಒಂದು ಗಿರಾಕಿ ಸ್ಥಾನಮಾನಕ್ಕೆ ಇಳಿಸಲ್ಪಟ್ಟಿದ್ದರೂ, ಈ ದಿಕ್ಕಿನಲ್ಲಿ ಮೋದಿ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಭಾರತಕ್ಕೆ ಒಂದು ಮಹಾಮುನ್ನಡೆ ಎಂದು ಆಳುವ ವಲಯಗಳು ಮತ್ತು ಕಾರ್ಪೊರೇಟ್ ಮಾಧ್ಯಮಗಳು ಹಾಡಿ ಹೊಗಳುತ್ತಿರುವುದು ಈಗಿನ ಕಾಲಾವಧಿಯ ಲಕ್ಷಣ. ಟ್ರಂಪ್ಗೆ ಅಡಿಯಾಳುತನದ ಮೋದಿ ನಿಲುವು ಭಾರತಕ್ಕೆ ಮಾಡಿರುವ ಅನಾಹುತ ಅಪಾರ.
(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
