ದಿನದ ಸುದ್ದಿ
ಕೊರೊನಾವೈರಸ್ ಮಹಾಮಾರಿ : ಇರಾನ್ ದಿಗ್ಬಂಧನ ತೆಗೆಯಲು ಆಗ್ರಹ

ಇರಾನ್ ಕೊರೊನಾವೈರಸ್ ಮಹಾಮಾರಿಯಿಂದ ಮೂರನೇ ಅತಿ ಹೆಚ್ಚು ಪೀಡಿತವಾದ ದೇಶವಾಗಿದ್ದು, ಅದರ ವಿರುದ್ಧ ಕ್ರಮಕೈಗೊಳ್ಳಲು ಅನುವಾಗುವಂತೆ ಅಮೆರಿಕ ಅದರ ಮೇಲೆ ವಿಧಿಸಿರುವ ಕಟುವಾದ ಆರ್ಥಿಕ ದಿಗ್ಬಂಧನದ ಕ್ರಮಗಳನ್ನು ಹಿಂತೆಗೆಯಬೇಕೆಂದು ಹಲವು ವಿಭಾಗಗಳಿಂದ ಆಗ್ರಹಪೂರ್ವಕ ಕರೆ ನೀಡಲಾಗುತ್ತಿದೆ. ಇರಾನ್ ನಲ್ಲಿ ಕೊರೊನಾವೈರಸ್ ಸೋಂಕು ತಗಲಿದವರ ಸಂಖ್ಯೆ (ಮಾ. 17ರ ಹೊತ್ತಿಗೆ) 16 ಸಾವಿರದಾಟಿದ್ದು ಸಾವುಗಳ ಸಂಖ್ಯೆ 1000 ಸಮೀಪಿಸಿದೆ. ಪಶ್ಚಿಮ ಏಶ್ಯಾದಲ್ಲೆ ಉತ್ತಮ ವೈದ್ಯಕೀಯ ಸೇವೆ ಹೊಂದಿರುವ ಇರಾನ್ ನ ವೈದ್ಯಕೀಯ ವ್ಯವಸ್ಥೆ ಅಮೆರಿಕದ ಆರ್ಥಿಕ ದಿಗ್ಬಂಧನದಿಂದಾಗಿ ದುರ್ಭರ ಸ್ಥಿತಿಯಲ್ಲಿದೆ.
ಅಮೆರಿಕದ ಆರ್ಥಿಕ ದಿಗ್ಬಂಧನಗಳು ಸೃಷ್ಟಿಸಿರುವ ವೈದ್ಯಕೀಯ ಸಲಕರಣೆ, ಔಷಧಿ ಇತ್ಯಾದಿಗಳ ತೀವ್ರ ಕೊರತೆಯಿಂದಾಗಿ ಇರಾನ್ ನ ವೈದ್ಯಕೀಯ ವ್ಯವಸ್ಥೆ ಸಾಮಾನ್ಯ ಸ್ಥಿತಿಯನ್ನು ಸಹ ನಿಭಾಯಿಸಲಾಗದ ದುಸ್ಥಿತಿಯಲ್ಲಿದೆ. ಕೊರೊನಾವೈರಸ್ ಸೋಂಕು ತಗಲಿದವರ ಮಹಾಪೂರದ ಅಸಾಮಾನ್ಯ ಸ್ಥಿತಿಯನ್ನು ಎದುರಿಸುವ ಸ್ಥಿತಿಯಲ್ಲಿ ಅದು ಖಂಡಿತ ಇಲ್ಲ. ಕೋಟಿಗಟ್ಟಲೆ ಮುಖಗವುಸು (ಮಾಸ್ಕ್) ಗಳನ್ನು ಅದು ತುರ್ತಾಗಿ ಆಮದು ಮಾಡಬೇಕಾಗಿದೆ. ಆದರೆ ದಿಗ್ಬಂಧನದಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಅದು ಕೊರೊನಾವೈರಸ್ ವಿರುದ್ಧ ಹೋರಾಡುವ ಸ್ಥಿತಿಯಲ್ಲಿ ಇಲ್ಲ. ಅಮೆರಿಕ ಇಂತಹ ಪರಿಸ್ಥಿತಿಯಲ್ಲೂ ಆರ್ಥಿಕ ದಿಗ್ಬಂಧನಗಳನ್ನು ಮುಂದುವರೆಸಿರುವುದನ್ನು ಇರಾನಿನ ವಿದೇಶ ಸಚಿವ“ಮೆಡಿಕಲ್ ಭಯೋತ್ಪಾದನೆ” ಮತ್ತು “ಅನೈತಿಕ’ ಕ್ರಮ ಎಂದುಕರೆದಿದ್ದಾರೆ.
ದಿಗ್ಬಂಧನ ಔಷಧಿಗೆ ಅನ್ವಯವಾಗುವುದಿಲ್ಲ ಎಂದು ಅಮೆರಿಕ ಹೇಳುತ್ತದೆ. ಆದರೆ ವಾಸ್ತವದಲ್ಲಿ ಇರಾನಿಗೆ ಯಾವುದೇ ವೈದ್ಯಕೀಯ ನೆರವು ನೀಡುವ ಕಂಪನಿಗಳ ಅಥವಾಸ್ವಿಸ್ ಮಾನವೀಯ ಸಂಸ್ಥೆಗಳ ಮೇಲೂ ನಿರ್ಬಂಧ ಹೇರುವ ಮೂಲಕ ಔಷಧಿ ಪೂರೈಕೆಯಾಗದಂತೆ ನೋಡಿಕೊಳ್ಳುತ್ತಿದೆ. ವಿದೇಶದಲ್ಲಿರುವ ಇರಾನ್ ನ ಹಣಕಾಸು ಮೂಲಗಳನ್ನು ಬ್ಲಾಕ್ ಮಾಡುವ ಮೂಲಕ ಅದುಯಾವುದೇ ತುರ್ತು ಖರೀದಿ ಮಾಡದಂತೆ ಮಾಡಿದೆಎಂದು ಇರಾನ್ ಸರ್ಕಾರದ ಮೂಲಗಳು ತಿಳಿಸಿವೆ.
ಅಮೆರಿಕದ ಮತ್ತು ಜಗತ್ತಿನ ಎಲ್ಲೆಡೆ ಹಲವಾರು ಮಾನವೀಯ ಧೋರಣೆಯ ಎನ್.ಜಿ.ಒ ಗಳು, ಚಳುವಳಿಗಳು, ಪ್ರಗತಿಪರ ವ್ಯಕ್ತಿಗಳು ಸಂಘಟನೆಗಳು ಕೊರೊನಾವೈರಸ್ ಮಹಾಮಾರಿಯಿಂದ ಸಾವಿರಾರು ಜೀವಗಳನ್ನು ರಕ್ಷಿಸುವ ದೃಷ್ಟಿಯಿಂದ ಇರಾನ್ ಮೇಲಿನ ದಿಗ್ಬಂಧನ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿವೆ, ಮನವಿ ಮಾಡಿವೆ. ಅಧ್ಯಕ್ಷ ಟ್ರಂಪ್ ಇದಕ್ಕೆಲ್ಲ ಸ್ಪಂದಿಸುವ ವ್ಯಕ್ತಿಯಲ್ಲ ಎಂದು ಅವರಿಗೆಲ್ಲ ಗೊತ್ತಿರುವುದರಿಂದ ಅವರಲ್ಲಿ ಹಲವರು ಈಗಾಗಲೇ ವೈದ್ಯಕೀಯ ಉಪಕರಣ, ಔಷಧಿ ಮತ್ತಿತರ ಕೊರೊನಾವೈರಸ್ ಮಹಾಮಾರಿಯ ವಿರುದ್ಧ ಹೋರಾಟಕ್ಕೆ ಬೇಕಾಗುವ ಸಲಕರಣೆಗಳ ಉತ್ಪಾದಕರು ಹಂಚಿಕೆದಾರರು ಅಮೆರಿಕದ ದಿಗ್ಬಂಧನ ಧಿಕ್ಕರಿಸಿ ಇವನ್ನು ಇರಾನಿಗೆ ಕಳಿಸಲು ಮನವಿ ಮಾಡಿದ್ದಾರೆ. ಇದರ ಸುತ್ತಜಾಗತಿಕ ಚಳುವಳಿಯನ್ನು ಹರಿಯಬಿಡಲು ಪ್ರಯತ್ನಿಸುತ್ತಿದ್ದಾರೆ.
ಅಮೆರಿಕದ ದಿಗ್ಬಂಧನವನ್ನು ಧಿಕ್ಕರಿಸಿ ಚೀನಾ ಈಗಾಗಲೇ ಇರಾನಿಗೆ ವೈದ್ಯಕೀಯ ನೆರವು ಕಳಿಸುತ್ತಾ ಬಂದಿದೆ. ಅಮೆರಿಕಕ್ಕೆ ದಿಗ್ಬಂಧನವನ್ನು ಹಿಂತೆಗೆಯಬೇಕೆಂದು ಸಹ ಅದು ಆಗ್ರಹಪಡಿಸಿದೆ. ರಶ್ಯ ಸಹ ಅದೇ ಆಗ್ರಹವನ್ನು ಮಾಡಿದೆ. “ಜಾಗತಿಕ ಮಹಾಮಾರಿಯ ಸಮಯ, ಪ್ರಾದೇಶಿಕ-ರಾಜಕೀಯ ಮೇಲಾಟದಲ್ಲಿ ತೊಡಗುವ ಸಮಯವಲ್ಲ. ಅದೂ ಯಾವುದೇ ಆಧಾರವಿಲ್ಲದ ತನ್ನ ಹಿತಾಸಕ್ತಿ ಕಾಪಾಡಲು ಅಮೆರಿಕದಲ್ಲಿ ಉತ್ಪಾದಿಸಲಾದ ಆಪಾದನೆಗಳನ್ನು ಮಾಡುತ್ತಾಕೂಡುವ ಸಮಯವಲ್ಲ” ಎಂದು ರಶ್ಯದ ವಿದೇಶ ಸಚಿವಾಲಯ ಹೇಳಿದೆ. ಇರಾನಿನ ಕೊರೊನಾವೈರಸ್ ಮಹಾಮಾರಿಗೆ ಬಲಿಯಾದವರಲ್ಲಿ ಅಮೆರಿಕದ ದಿಗ್ಬಂಧನಕ್ಕೆ ಬಲಿಯಾದವರೇ ಹೆಚ್ಚು. ಅದನ್ನು ಹಿಂತೆಗೆಯದಿದ್ದರೆ ಅದರ ಬಲಿಗಳ ಸಂಖ್ಯೆ ಹೆಚ್ಚಲಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.
(ಈ ವಾರದ ಜನಶಕ್ತಿ ವಾಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
