ದಿನದ ಸುದ್ದಿ
ಫ್ರಾಯ್ಡ್ ಮತ್ತು ಬೌದ್ಧಧರ್ಮ

- ರಾಣಪ್ಪ ಡಿ ಪಾಳಾ
ಎರಡು ಸಾವಿರದ ಆರು ನೂರು ವರ್ಷಗಳ ಹಿಂದೆ ಭಾರತೀಯ ನೆಲದಲ್ಲಿ ಬೌದ್ಧಧರ್ಮವು ಮಾನವನ ಮನಸ್ಸಿನ ಮೇಲೆ ಸಂಶೋಧನೆ ನಡೆಸಿತು. ಮನಸ್ಸು ದುಃಖದ ಕೇಂದ್ರಬಿಂದು ಬೌದ್ಧಧರ್ಮ ಸಾಬೀತಾಯಿತು. ಬುದ್ಧನು ತನ್ನ ಸ್ವ-ಪರಿಶೋಧನೆಯ ಮೂಲಕ, ಉಪಪ್ರಜ್ಞೆ ಜಾಗೃತಿಯು ದುಃಖವನ್ನು ಉಂಟುಮಾಡಬಹುದು ಮತ್ತು ಪರಿಹರಿಸಬಹುದು ಎಂದು ಕಂಡುಹಿಡಿದನು.
ಸಿಗ್ಮಂಡ್ ಫ್ರಾಯ್ಡ್ 1856 ರಲ್ಲಿ ಆಸ್ಟ್ರಿಯಾದಲ್ಲಿ ಜನಿಸಿದರು. ಮನೋವಿಜ್ಞಾನಿ ಫ್ರಾಯ್ಡ್ ಮನೋವಿಶ್ಲೇಷಣಾ ವಿಧಾನವನ್ನು ಆಧುನಿಕ ವಿಜ್ಞಾನಕ್ಕೆ ಪರಿಚಯಿಸಿದರು. (ಬುದ್ಧ ಮತ್ತು ಬೌದ್ಧರು ಎರಡು ಸಾವಿರ ವರ್ಷಗಳ ಹಿಂದೆ ಈ ಮನೋರೋಗವನ್ನು ರಚಿಸಿದ್ದಾರೆ.)
ತನ್ನ ತಂದೆಯ ಮರಣದಿಂದ ಫ್ರಾಯ್ಡ್ ತುಂಬಾ ಖಿನ್ನತೆಗೆ ಒಳಗಾದ. ಆಗ ಮಾತ್ರ ಅವನು ಮನಸ್ಸು ಮಾಡಿದ. ಅವನು ಇನ್ನೂ ಕಾಣದ ತನ್ನ ಉಪಪ್ರಜ್ಞೆ ಜಗತ್ತಿನಲ್ಲಿ ಪ್ರವೇಶಿಸಿದನು. ಆತ್ಮವನ್ನು ವಿಶ್ಲೇಷಿಸುವ ಮೂಲಕ ಅವನು ತನ್ನ ದುಃಖದಿಂದ ಮುಕ್ತನಾದನು. ತನ್ನದೇ ಆದ ಸ್ವಯಂ ಪರೀಕ್ಷೆಯ ಮೂಲಕ, “ತೊಂದರೆಯಿಂದ ಹೊರಬರಲು ಏಕೈಕ ಮಾರ್ಗವೆಂದರೆ ಅದನ್ನು ನೋಡುವುದು” ಎಂದು ಅವರು ಕಂಡುಕೊಂಡರು. ಬೌದ್ಧಧರ್ಮ ಬಹಳ ಹಿಂದೆಯೇ ಈ ‘ಮನಸ್ಸನ್ನು’ ಕಲಿಸಿತು.
ಬೌದ್ಧಧರ್ಮವು ಜನನದ ಅರ್ಹತೆಗಳನ್ನು ವ್ಯಾಖ್ಯಾನಿಸಿದಾಗ ಅದರ ತತ್ತ್ವಶಾಸ್ತ್ರದಿಂದ ಜನ್ಮ ತತ್ವಶಾಸ್ತ್ರವನ್ನು ಮುರಿಯಿತು. ಬೌದ್ಧಧರ್ಮವೆಂದರೆ “ವೀಕ್ಷಕ ಅಥವಾ ಪಕ್ಷಿ, ಅವರ ಮನಸ್ಸು ಅವರ ಜ್ಞಾನವನ್ನು ನಿರ್ಧರಿಸುತ್ತದೆ. ಜ್ಞಾನವು ಒಬ್ಬರ ಗುಣಗಳನ್ನು ಮತ್ತು ಅಸ್ತಿತ್ವವನ್ನು ನಿರ್ಧರಿಸುತ್ತದೆ.”
ಮನಸ್ಸು, ಬಾಹ್ಯ ಪ್ರಪಂಚದ ಬೋಧನೆಯಲ್ಲಿ, ಬಾಹ್ಯ ಪ್ರಪಂಚದ ಸಾಕ್ಷಾತ್ಕಾರದಲ್ಲಿ ಬೆಳೆಯುತ್ತದೆ. ಬೋಧನೆ ಅಥವಾ ಅರಿವಿಲ್ಲದೆ ಮನಸ್ಸು ಇಲ್ಲ. ಆಧುನಿಕ ಮನೋವಿಶ್ಲೇಷಣೆಯಲ್ಲಿ ಬೌದ್ಧಧರ್ಮವು ಹೀಗೆ ಹೇಳುತ್ತದೆ: “ಜನರು ಜನಿಸಿದಾಗ ಅವರು ಖಾಲಿ ಹಾಳೆಗಳಾಗಿ ಜನಿಸುತ್ತಾರೆ. ಈ ಜಗತ್ತಿನಲ್ಲಿ, ಅವರು ನೋಡುವ, ಕೇಳುವ ಮತ್ತು ಕಲಿಯುವದರಿಂದ ಒಳ್ಳೆಯದು ಮತ್ತು ಕೆಟ್ಟದ್ದನ್ನು ಗ್ರಹಿಸಲು ಸಾಧ್ಯವಾಗುತ್ತದೆ.”
(ರಾಣಪ್ಪ ಡಿ ಪಾಳಾ
ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ
ಮನೋವಿಜ್ಞಾನ ವಿಭಾಗ
ಮೊ : 9663727268)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
