ದಿನದ ಸುದ್ದಿ

‍ಸೈನಿಕರಿಗೆ ಸಹಕರಿಸದ ನಾಗರಿಕ

Published

on

ನಮ್ಮ ದೇಶದ ಗಡಿಯಲ್ಲಿ ಸೈನಿಕರು ಎದೆಗುಂದದೆ ವಿರಾವೇಶದಿಂದ ಹೋರಾಟ ಮಾಡಿ, ನಮ್ಮನ್ನು ರಕ್ಷಿಸುತ್ತಾರೆ. ರಕ್ಷಣೆ ಮಾಡುವ ‌ಉದ್ದೇಶದಿಂದ ಹೋರಾಟ ಮಾಡುತ್ತಾ ಪ್ರತಿದಿನವು ಒಬ್ಬರು, ಇಬ್ಬರು ವೀರಮರಣ ಹೊಂದುತ್ತಲ್ಲಿದ್ದಾರೆ.

ದೇಶದ ‌ಒಳಗೆ ಹಾಗು ಗಡಿಯಲ್ಲಿ ಸಂಭವಿಸುವ ಅವಘಡ, ‍ಅಪಘಾತಗಳಿಂದ ರಕ್ಷಿಸಲು ಮೊದಲಿಗೆ ಧಾವಿಸುವುದೆ ಸೈನಿಕರು. ಅವರಿಗೂ ಸಹ ಕುಟುಂಬವಿರುತ್ತದೆ. ಆ ಕುಟುಂಬದಿಂದ ದೂರವಿದ್ದ, ಅವರ ಪರಿವೆಯಿಲ್ಲದೆ ಜೀವನವನ್ನು ಸಾಗಿಸುತ್ತಾ, ಕಷ್ಟಕ್ಕೆ ಸಿಲುಕಿದವರೆ ತಮ್ಮ ಪರಿವಾರದ ಸದಸ್ಯರೆಂದು ಭಾವಿಸಿ ರಕ್ಷಿಸುತ್ತಾರೆ.

ಇಂತಹ ಮಹಾನ ವ್ಯಕ್ತಿಗಳ ವಿರುದ್ದ ಸಂಚು ಮಾಡುವ ಉಗ್ರರಿಗೆ ಸಹಾಯ ಮಾಡುತ್ತಾ ಸೈನಿಕರ ಮೇಲೆ ಕಲ್ಲು ತುರಾಟ, ಬೆಂಕಿಹಚ್ಚಿ ಪ್ರತಿಭಟನೆ ಮಾಡುವುದು, ಬಂದ್ ಗೆ ಕರೆ ನೀಡುವುದು ಎಷ್ಟರ ಮಟ್ಟಿಗೆ ಸರಿ?.

ಸಾರ್ವಜನಿಕರು ಹೀಗೆ ಮುಂದುವರೆಸಿದರೇ ನಮ್ಮ ದೇಶದ ಸೈನಿಕರು ತಮ್ಮ ಕೆಲಸವನ್ನು ತೊರೆದು ಹಿಂದಿರುಗಿದರೆ ಆಶ್ಚರ್ಯ ಪಡಬೇಕಾಗಿಲ್ಲ.

ಕಾಂಚನಾ ಬಸವರಾಜ ಪೂಜಾರಿ
ಪತ್ರಿಕೋದ್ಯಮ ಮತ್ತು ಸಮುಹ ಸಂವಹನ ವಿಭಾಗ
ಪ್ರಥಮ ವರ್ಷದ ವಿದ್ಯಾರ್ಥಿನಿ 
ಅಕ್ಕ ಮಹಾದೇವಿ ವಿಶ್ವವಿದ್ಯಾನಿಲಯ ತೋರವಿ
ವಿಜಯಪುರ

Trending

Exit mobile version