ದಿನದ ಸುದ್ದಿ
ತನ್ನ ಹೆಣ್ಣು ಮಕ್ಕಳ ರಕ್ಷಣೆ ಕೋರಿ ಮೋದಿ, ಯೋಗಿಗೆ ಪತ್ರ ಬರೆದ ತಂದೆ..!
ಸುದ್ದಿದಿನ ಡೆಸ್ಕ್ : ನೆರೆಹೊರೆಯವರು ತನ್ನ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಅವರನ್ನು ರಕ್ಷಿಸುವಂತೆ ಮುಸ್ಲಿಂ ಸಮುದಾಯದ ಹಣ್ಣು ಮಕ್ಕಳ ತಂದೆಯೊಬ್ಬ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾನೆ.
Meerut: Father of 4 girls writes to PM Modi&CM Yogi seeking justice for daughters saying they are being harassed by 4 men; 2 of the girls say, "we stopped going to madrasas due to it.They barged into our house,threatened us of acid attack.Even living at home has become difficult" pic.twitter.com/LLqV087q1y
— ANI UP (@ANINewsUP) June 26, 2018
ಮನೆಯಲ್ಲಿ ವಾಸಿಸುವುದೇ ಕಷ್ಟಕರವಾಗಿದೆ. ತನ್ನ ಹೆಣ್ಣು ಮಕ್ಕಳು ಆತಂಕದಿಂದಲೇ ಬದುಕು ಬೇಕಾಗಿದೆ ಎಂದು ಮಿರತ್ ಜಿಲ್ಲೆಯಿಂದ 25 ಕಿಮೀ ದೂರ ಇರುವ ಮಾವನ ಪಟ್ಟಣದ ವಾಸಿ ವ್ಯಕ್ತಿ ಪ್ರಧಾನಿ, ಮುಖ್ಯಮಂತ್ರಿಗೆ ಭಾನುವಾರ ಪತ್ರ ಬರೆದಿದ್ದಾನೆ. 17, 16, 14 ಮತ್ತು 12 ವಯಸ್ಸಿನ ನಾಲ್ವರು ಹಣ್ಣು ಮಕ್ಕಳಿದ್ದು, ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ.
ಪುಂಡ ಹುಡುಗರು ಮನೆಗೆ ಬಂದು ದಾಂಧಲೆ, ಹಣ್ಣು ಮಕ್ಕಳ ಮೇಲೆ ಆಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಹಣ್ಣು ಮಕ್ಕಳು ಮನೆಯಿಂದ ಹೊರಗೆ ಬರುವುದು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. 12 ವರ್ಷದ ಬಾಲಕಿ ಮೇಲೆ ದಾಳಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾನೆ.
ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಆದಿತ್ಯನಾಥ್, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ ತಡೆಯಲು ಆ್ಯಂಟಿ ರೊಮಿಯೊ ತಂಡ ರಚಿಸಿದ್ದಾರೆ. ಇದು ಹೆಚ್ಚು ಯಶಸ್ಸು ಸಿಕ್ಕಿದ್ದರೂ ಕೆಲವು ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.