ರಾಜಕೀಯ
ವಿದ್ಯಾವಂತರಾದ ನಾವು ಬಹುಜನ ಚಳವಳಿಗೆ ಮಾಡುತ್ತಿರುವುದಾದರೂ ಏನು?
ಮಾನ್ಯ ಚಾಮರಾಜನಗರ ಲೋಕಸಭಾ ವ್ಯಾಪ್ತಿಯ ಬಂಧುಗಳೇ ಇತ್ತೀಚಿನ ವರದಿಯಂತೆ ಕರ್ನಾಟಕ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷದ ಬಲವರ್ಧನೆಯು ಸಮೃದ್ಧವಾಗಿದೆ. ಈ ನಿಟ್ಟಿನಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಆನೆ ಸದ್ದಿಲ್ಲದೆ ಘೀಳಿಟ್ಟಿದೆ.
ಈ ಚುನಾವಣೆಯಲ್ಲಿ ಆನೆಯ ಮೇಲೆ ರಾಜ್ಯಧಿಕಾರವನ್ನು ಏರಲು ಮುನ್ನುಗುತ್ತಿರುವವರು ಯುವಕರ ಕಣ್ಮಣಿ, ನಾಡಿನ ಖ್ಯಾತ ಹೆಸರಾಂತ ಕನ್ನಡ ವಿದ್ವಾಂಸರು, ಪ್ರಗತಿಪರ ಚಿಂತಕರು ಹಾಗು ಎರಡನೇ ತಲೆಮಾರಿನ ಫುಲೆ-ಅಂಬೇಡ್ಕರ್ವಾದವನ್ನು ನಾಡಿನಾದ್ಯಂತ ಪಸರಿಸುತ್ತಿರುವ ಡಾ. ಶಿವಕುಮಾರರವರು. ಇವರು ಬಹುಜನ ಸಮಾಜ ಪಾರ್ಟಿ ಚಾಮರಾಜನಗರ ಲೋಕಸಬಾ ಕ್ಷೇತ್ರ (ಮೀಸಲು)ದಿಂದ ಸ್ಪರ್ಧಿಸಿದ್ದಾರೆ. ನಾಡಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಇವರು ೨೦೧೯ರ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಮುನ್ನುಗುತ್ತಿದ್ದಾರೆ. ಕ್ಷೇತ್ರದ ಎಲ್ಲಾ ಧರ್ಮಿಯ, ಜಾತಿಯ ಜನರು ಕಾಂಗ್ರೆಸ್, ಬಿಜೆಪಿ ಆಡಳಿತದಿಂದ ಬೇಸತ್ತು ಹೊಸ ಮುಖದತ್ತ ಒಲವು ತೋರುತ್ತಿದ್ದಾರೆ.ಈ ಸಮಯದಲ್ಲಿ ಬಹುಜನ ಚಳವಳಿಯ ಯುವಕರು, ನೌಕರರರು ಪ್ರಗತಿಪರರು ಡಾ. ಶಿವಕುಮಾರರವರನ್ನು ತಮ್ಮ ತನು-ಮನ-ಧನವನ್ನು ಉದಾರ ಮನೋಭಾವದಿಂದ ಅರ್ಪಿಸಿ ಇವರ ಬೆನ್ನೆಲುಬಾಗಿ ನಿಲ್ಲಬೇಕಿದೆ.
ಬಂಧುಗಳೇ ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕರ್ನಾಟಕದಲ್ಲಿ ಕಳೆದ 20 ವರ್ಷಗಳಿಂದ ಚಳವಳಿಯ ಒಂದು ಭಾಗವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಲಕ್ಷಾಂತರ ವಿದ್ಯಾರ್ಥಿಗಳು ಸಾವಿರಾರು ನೌಕರರು, ಕೆಲವು ಜನಪ್ರತಿನಿಧಿಗಳು, ಕಲಾವಿದರು ಚಳವಳಿಯಿಂದ ಸೃಷ್ಠಿಯಾಗಿದ್ದಾರೆ. ನಾವೆಲ್ಲರೂ ಸೇರಿ ವರ್ಷಪೂರ್ತಿ ಚಳವಳಿಯ ರಥವನ್ನು ಎಳೆದು ಚುನಾವಣೆಗಳು ಬಂದಾಗ ಎಷ್ಟು ಜನರು ನಿಷ್ಕ್ರೀಯರಾಗುವುದು ಅಥವ ಕೆಲಸವನ್ನು ಚುರುಕುಗೊಳಿಸದಿರುವುದು ಅಥವ ತಮ್ಮ ತಮ್ಮ ಬೂತುಗಳಲ್ಲಿ ಮತಬ್ಯಾಂಕ್ ಭದ್ರಪಡಿಸದಿರುವುದು ನಾನಾ ಕಾರಣಗಳಿಂದ ರಾಜಕಾರಣ ಮಾಡದಿರುವ ಕಾರಣ ಗಾಂಧಿವಾದಿ ಕಾಂಗ್ರೆಸ್, ಕೋಮುವಾದಿ ಬಿಜೆಪಿ, ಬಂಡವಾಳಶಾಹಿ ಜೆ.ಡಿ.ಎಸ್ ಪಕ್ಷಗಳು ದೇಶದಲ್ಲಿ ರಾರಾಜಿಸುತ್ತಿವೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಚುನಾವಣೆ ಫಲಿತಾಂಶ ಕಾಣುವವರೆಗೂ ಮೈಮರೆಯದೆ ಕೆಲಸ ಮಾಡಬೇಕಿದೆ.
ಮತ್ತೊಂದು ವಿಷಯವನ್ನು ತಮ್ಮ ಗಮನಕ್ಕೆ ತಿಳಿಯಪಡಿಸಿಸುವುದೇನೆಂದರೆ ಈ 5 ವರ್ಷಗಳ ಅವಧಿಯಲ್ಲಿ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಹೆಚ್ಚಾಗಿ ಪ್ರಶ್ನಿಸುತ್ತಿರುವವರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗು ವಿದ್ಯಾರ್ಥಿ ಸಂಘಟನೆಗಳು. ಉದಾಹರಣೆಗೆ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ, ದಲಿತ ಹೆಣ್ಣು ಮಕ್ಕಳಾದ ದಾನಮ್ಮ ಪ್ರಕರಣ, ಅನಿತಾಳ ಆತ್ಮಹತ್ಯೆ ಪ್ರಕರಣ, ಎಸ್.ಸಿ/ಎಸ್.ಟಿ ತಿದ್ದುಪಡಿ ವಿಧೇಯಕ, ಊನಾ ದೌರ್ಜನ್ಯ ಪ್ರಕರಣ, ಮುಸ್ಲಿಂ ವಿದ್ಯಾರ್ಥಿ ನಜೀಬ್ ನಾಪತ್ತೆ, ಬ್ಯಾಕ್ಲಾಗ್ ಭರ್ತಿ ಮಾಡಿ, ನಿರುದ್ಯೋಗ ನಿವಾರಿಸಿ ಎಂಬ ಹೋರಾಟ, ಆರ್.ಎಸ್.ಎಸ್ ಬಂಧುತ್ವದ ವಿರೋಧಧ ಹೋರಾಟ, ಸಂಶೋಧನಾ ವಿದ್ಯಾರ್ಥಿಗಳ ಫೆಲೋಷಿಪ್ ಗಾಗಿ, ಕೆಲವು ಸಚಿವರನ್ನು ವಜಾಗೊಳಿಸಿದಾಗ ಅವರ ಪರವಾಗಿ ಬೀದಿಗಿಳಿದಿದ್ದು, ಸಂವಿಧಾನವನ್ನು ಬದಲಾಯಿಸಬೇಕೆಂದಾಗ ಪ್ರಜಾಪ್ರಭುತ್ವವಾದಿಗಳಿಗೆ ಅಪ್ಪ-ಅಮ್ಮ ಇಲ್ಲ ಎಂದು ಚೀಡಿಸಿದಾಗ ಹೋರಾಟ ರೂಪಿಸಿದ್ದು, ಇಂತಹ ೧೦ ಹಲವು ಹೋರಾಟಗಳನ್ನು ವಿದ್ಯಾವಂತರಾದ ನಾವು ರೂಪಿಸಿದ್ದು ಯಾರ ವಿರುದ್ಧ? ಯಾವ ಸರ್ಕಾರದ ವಿರುದ್ಧ?
ವಿದ್ಯಾವಂತ ಬಂಧುಗಳೇ ದಯಮಾಡಿ ಒಮ್ಮೆ ಸೂಕ್ಷ್ಮಮತಿಯರಾಗಿ ಯೋಚಿಸಿ. ಇಂತಹ ಸಾವಿರಾರು ಹೋರಾಟಗಳನ್ನು ಮಾಡಿದ್ದು ಕೇಂದ್ರದ ಬಿಜೆಪಿ ಮತ್ತು ರಾಜ್ಯ ಕಾಂಗ್ರೆಸ್ ಮತ್ತು ಜೆ.ಡಿಎಸ್ ಸರ್ಕಾರದ ವಿರುದ್ಧವಲ್ಲವೇ? ಜಾಗೃತರಾಗಿ. ದಾದಾಸಾಹೇಬ್ ಕಾನ್ಷಿರಾಮ್ಜೀ ಹೇಳುವ ಹಾಗೆ ಅನ್ಯಾಯ, ದೌರ್ಜನ್ಯ-ದಬ್ಬಾಳಿಕೆಗಳು ಆಳುವ ವರ್ಗದ ಮೇಲೆ ನಡೆಯುವುದಿಲ್ಲ. ಬದಲಾಗಿ ಗುಲಾಮರ ಮೇಲೆ ನಡೆಯುತ್ತಿದೆ. ಈ ಮಾತು ಈ ಸಂದರ್ಭದಲ್ಲಿ ನಾವು ನೆನೆಯಬೇಕಲ್ಲವೇ? ನಾವೆಲ್ಲ ಇಷ್ಟೊಂದು ದೊಡ್ಡ ಪ್ರತಿಭಟನೆ, ಹೋರಾಟ, ಉಪವಾಸಗಳನ್ನು 5 ವರ್ಷಗಳ ಕಾಲ ಕಾಂಗ್ರೆಸ್ ಬಿಜೆಪಿ ಸರ್ಕಾರಗಳ ವಿರುದ್ಧ ತೊಡೆ ತಟ್ಟಿ ನಿಂತು ನಮ್ಮಗಳ ಬುದ್ಧಿಶಕ್ತಿಯನ್ನು ವರ್ಷವಿಡಿ ಇಂತಹ ಹೋರಾಟಗಳಿಗೆ ವ್ಯಯಿಸಿ, ಚುನಾವಣೆ ಇನ್ನೂ (ಏಪ್ರಿಲ್) ಒಂದು ತಿಂಗಳು ಇದ್ದು, ಈ ಸಮಯದಲ್ಲಿ ಕಾಂಗ್ರೆಸ್-ಬಿಜೆಪಿಯ ಪರವಾಗಿ ಕೆಲಸ ಮಾಡುವುದು ನ್ಯಾಯವೇ? ಇದು ಅನ್ಯಾಯವಲ್ಲದೇ ಮತ್ತೇನು? ಮಾನ್ಯ ಶೈಕ್ಷಣಿಕ ಮಿತ್ರರೇ ನಮ್ಮಗಳ ವಿರೋಧಾಭಾಸವನ್ನು ಕಾಂಗ್ರೆಸ್ ಬಿಜೆಪಿ ಮಿತ್ರರಿಗೆ ತಿಳಿಸಿ ಜಾಗೃತಗೊಳಿಸಿ ಅವರೆಲ್ಲರನ್ನು ಬಾಬಾಸಾಹೇಬ್ ಅಂಬೇಡ್ಕರ್ರವರ ಚಳವಳಿಯ ರಥದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾದ ಡಾ.ಶಿವಕುಮಾರರವರನ್ನು ಜಯಶೀಲರನ್ನಾಗಿಸುವುದು ನಮ್ಮ ನಿಮ್ಮೇಲರ ಆದ್ಯ ಕರ್ತವ್ಯವವಲ್ಲವೇ? ಚಿಂತಿಸಿ.
ಜೈ ಭೀಮ್ ಜೈ ಭಾರತ್
–ಡಾ. ನವೀನ್ ಮೌರ್ಯ
ಸಂಶೋಧಕರು, ಮೈಸೂರು ವಿಶ್ವವಿದ್ಯಾನಿಲಯ
ಸುದ್ದಿದಿನ.ಕಾಂ|ವಾಟ್ಸಾಪ್|9986715401