ಬಹಿರಂಗ

ಬುದ್ಧನನ್ನು ಕೊಂದ ಬ್ರಾಹ್ಮಣರು..!

Published

on

  • ವಿ.ಎಸ್. ಬಾಬು

ಮೌರ್ಯವಂಶದ ಕೊನೆಯ ದೊರೆಯಾದ ಬ್ರಹದ್ರಥ ಮೌರ್ಯನನ್ನು ಸೇನಾಪತಿ ಪುಶ್ಯಮಿತ್ರ ಶುಂಗನೆಂಬ ಸಾಮವೇದಿ ಬ್ರಾಹ್ಮಣರು ಕೊಂದು ಶುಂಗ ಸಾಮ್ರಾಜ್ಯವನ್ನು ಕಟ್ಟಿದ. ಅಂದಿನಿಂದ ಪ್ರಾರಂಭವಾಗಿದ್ದು ಶುಂಗ ಸಾಮ್ರಾಜ್ಯ. ಮೌರ್ಯ ಸಾಮ್ರಾಜ್ಯದ ಶ್ರೇಷ್ಠ ಮೌಲ್ಯಗಳನ್ನು ನಾಶಪಡಿಸಿ ಮತ್ತೆ ಆರ್ಯರ ಕುಲಾಚಾರಗಳನ್ನು ವಿಧಿವತ್ತಾಗಿ ಜಾರಿಗೆ ತಂದವನು ಈ ಪುಶ್ಯಮಿತ್ರ ಶುಂಗ ಯಾವ ಧರ್ಮ ಇಡೀ ಜಗತ್ತಿಗೆ ಬೆಳಕು ತೋರುವ ಧರ್ಮವಾಗಿ ಸತ್ಯ, ಅಹಿಂಸೆ, ಕರುಣೆ ಜಗತ್ತಿಗೆ ಶಾಶ್ವತವಾಗಿ ಕೊಟ್ಟು, ಪ್ರೀತಿಯಿಂದಲೇ ಜಗತ್ತನ್ನು ಗೆದ್ದಿತೋ ‘ನಿನಗೆ ನೀನೇ ಬೆಳಕಾಗು’ ಎಂದು ಬೋಧಿಸಿತ್ತೋ ಬೌದ್ಧ ಧರ್ಮದ ಅವನತಿ ಪ್ರಾರಂಭವಾಗಿದ್ದು ಇದೇ ಪುಶ್ಯಮಿತ್ರ ಶುಂಗನ ಆಡಳಿತ ಪ್ರಾರಂಭವಾದ ಮೇಲೆ.

ಯಾವ ಯಜ್ಞಯಾಗಗಳನ್ನು ಬಹಿಷ್ಕರಿಸಿ, ಅನಾಗರಿಕ ಆಚಾರಗಳಿಗೇ, ವ್ಯಭಿಚಾರಕ್ಕೆ ಮುಂಬರುವ ಕೊನೆ ಹಾಡಿದ್ದರೋ ಅವೆಲ್ಲವನ್ನೂ ವಿಧಿವತ್ತಾಗಿ ಪುಶ್ಯಮಿತ್ರ ಶುಂಗನು ಜಾರಿಗೆ ತಂದನು. ಸುಮಾರು 90 ಅಶ್ವಮೇಧ ಯಾಗಗಳನ್ನು ಮಾಡುವ ಮೂಲಕ ಅಧಿಕಾರ ಸ್ವೀಕರಿಸಿದ ಪುಶ್ಯಮಿತ್ರನ ಆಡಳಿತವನ್ನು ಖ್ಯಾತ ಇತಿಹಾಸಕಾರರಾದ Vincent Smith, E.J. Ropson ಮುಂತಾದವರು Revival of Brahmanism’ ಎಂದು ಹೇಳಿದ್ದಾರೆ.

ಈ ಕಾಲಘಟ್ಟವನ್ನು ಆರ್ಯರು ಬಹಳ ವಿಜೃಂಭಣೆಯಿಂದ ಕೊಂಡಾಡಲು ಪ್ರಾರಂಭಿಸಿದರು. ಇವರು ಹೇಳುವ ‘ಸುವರ್ಣ ಯುಗ’ ಎಲ್ಲರಿಗೂ ಅನ್ವಯಿಸ ತಕ್ಕದಲ್ಲ. ಕಾರಣ ಈ ಆರ್ಯರಿಗೆ ಎಲ್ಲ ಸುಖಭೋಗಗಳು ಸವಲತ್ತುಗಳು ಅನಾಯಾಸವಾಗಿ ಸಿಗುತ್ತಿದ್ದಂತಹ ಸಂದರ್ಭಗಳನ್ನು ‘ಸುವರ್ಣ ಯುಗ’ವೆಂದು ಕರೆಯುತ್ತಾರೆ. ಆದರೆ ಇಲ್ಲಿನ ಮೂಲ ನಿವಾಸಿಗಳಾದ ಬಹುಜನರಿಗೆ ಅಂತ ಕಾಲಘಟ್ಟಗಳು ‘ಕತ್ತಲ ಯುಗ’ಗಳಾಗಿವೆ.

ಪುಶ್ಯಮಿತ್ರ ಶೃಂಗನ ಆಳ್ವಿಕೆಯಲ್ಲಿ ‘ಮನುಸ್ಮೃತಿ’ಯು ರಚನೆಯಾಯಿತು. ಇದು ಆರ್ಯರ ಆಡಳಿತದಲ್ಲಿ ವಿದ್ಯುಕ್ತವಾಗಿ ಜಾರಿಗೆ ಬಂದ ಸಂವಿಧಾನವಾಯಿತು. ಇದನ್ನು ಬರೆದವನು ಸುಮತಿ ಭಾರ್ಗವನೆಂಬ ಬ್ರಾಹ್ಮಣ. ಅಂದಿನಿಂದ ವರ್ಣವ್ಯವಸ್ಥೆ ಜಾರಿಯಾಯಿತು. Vertical Order ರೂಪದಲ್ಲಿ ಸಮಾಜ ಸ್ಥಾಪನೆಯಾಗಿ ಪುಶ್ಯಮಿತ್ರ ಶೃಂಗ ಬ್ರಾಹ್ಮಣ ವಾದದ, ಬ್ರಾಹ್ಮಣ್ಯದ ಹರಿಕಾರನೆಂದು ಅಂದಿನಿಂದ ಗುರುತಿಸ್ಪಟ್ಟ ಹಾಗೆ ಜಗತ್ತಿಗೆ ಪ್ರಪ್ರಥಮವಾಗಿ ಬಂದ ಈ ಮನುಸ್ಮೃತಿಯು ‘ಈ ಧರ್ಮಶಾಸ್ತ್ರವನ್ನು ಸ್ವಯಂ ಸೃಷ್ಟಿಕರ್ತನಾದ ಬ್ರಹ್ಮನೇ ರಚಿಸಿ ಅದನ್ನು ಮೊದಲಲ್ಲಿ ನನಗೆ ಉಪದೇಶಿಸಿದನು. ಅಲ್ಲಿಂದ ಅದನ್ನು ಮರೀಚಿಗೆ, ಭೃಗು ಮುನಿ ಬಳಿಕ ಬ್ರಾಹ್ಮಣರಿಗೆ ಹೇಳಿದನು’ ಎಂಬ ಕಂತೆಬೊಂತೆಗಳಂತೆ ಕೂಡಿದ ಸಂವಿಧಾನವು ಜಾರಿಗೆ ಬಂತು.

ಅಂದ ಹಾಗೆ ಆಗ ಪ್ರಾರಂಭವಾದ ‘Hinduisation’ ಅಥವಾ ಬ್ರಾಹ್ಮಣೀಕರಣ ಇಂದಿನವರೆಗೆ ಮುಂದುವರೆದಿದೆ. ಬುದ್ಧ ಭಾರತದ ಕಾಲದಲ್ಲಿ ಭಗವಾನ್ ಬುದ್ಧರು ತಮ್ಮ ಶ್ರೇಷ್ಠ ಸಂದೇಶಗಳನ್ನು ಸಾರಿದ್ದ, ಪ್ರಸಿದ್ಧ ಬೌದ್ಧ ಕೇಂದ್ರಗಳಾಗಿದ್ದ ಕಾಶಿ, ಮಥುರಾ, ವಾರಣಾಸಿ, ಗಯಾ ಮುಂತಾದ ಸ್ಥಳಗಳು ಧ್ಯಾನಕ್ಕೆ, ಶಾಂತಿಗೆ, ವಿದ್ಯೆಗೆ ಜಗತ್ತಿನಾದ್ಯಂತ ಮನ್ನಣೆ ಪಡೆದಿದ್ದವು. ಲಕ್ಷಾಂತರ ಬೌದ್ಧ ವಿಹಾರಗಳು ಪ್ರತಿಭಾ ಕೇಂದ್ರಗಳಾಗಿ, ಸಕಲ ವಿದ್ಯೆಗಳಲ್ಲೂ ಪರಿಣಿತಿ ಹೊಂದಿದ್ದರು ಲಕ್ಷಾಂತರ ಗೌತಮ ಬುದ್ಧರ, ಬೌದ್ಧ ಬಿಕ್ಕುಗಳ ಪ್ರತಿಮೆಗಳು ಇಡೀ ವಿಶ್ವದ ತುಂಬಾ ಇದ್ದವು. ವಿಶ್ವ ಧರ್ಮವಾಗಿ ಬೆಳಗಿದ ಬೌದ್ಧ ಧರ್ಮವು ಅಂದು ಸಾರಿದ್ದ ಸರ್ವಕಾಲಿಕ ಸತ್ಯಗಳಿಂದ ವಿಶ್ವ ಮನ್ನಣೆ ಪಡೆದಿತ್ತು. ಸಾಮ್ರಾಟ್ ಅಶೋಕನ ಕಾಲದಲ್ಲಿ ಬೌದ್ಧ ಧರ್ಮವು ತನ್ನ ಉಚ್ಛ್ರಾಯ ಸ್ಥಿತಿಯನ್ನು ತಲುಪಿ, ಭಾರತವು ‘ಬೌದ್ಧ ಯುಗ ಸುವರ್ಣಯುಗ ಎಂದು ಪಡೆಯಿತು.

ಆದರೆ.., ಬೌದ್ಧ ಧರ್ಮದ ಅವನತಿ ಪುಶ್ಯಮಿತ್ರ ಶುಂಗನಿಂದ ಪ್ರಾರಂಭವಾಗಿ 7ನೆಯ ಶತಮಾನದಲ್ಲಿ ಶಂಕರಾಚಾರ್ಯರಿಂದ ಬೌದ್ಧಧರ್ಮ ಬೌದ್ಧ ಭಿಕ್ಕುಗಳು ಲಕ್ಷಾಂತರ ಸಂಖ್ಯೆಯಲ್ಲಿ ಕೊಲ್ಲಲ್ಪಡುವ ಮಟ್ಟಕ್ಕೆ ತಲುಪಿತು. ಸ್ವತಹ ಶಂಕರಾಚಾರ್ಯರು ಕ್ರಿ. ಶ. 7ನೇಯ ಶತಮಾನದಲ್ಲಿ ಬೌದ್ಧ ಭಿಕ್ಕುಗಳನ್ನು ಸಂಹಾರ ಮಾಡುವ ಮೂಲಕ, ಬೌದ್ಧ ವಿಹಾರಗಳನ್ನು ಧ್ವಂಸ ಮಾಡುವ ಮೂಲಕ ಹಿಂದೂ ಧರ್ಮದ ಪ್ರತಿಪಾದಕರಾಗಿ ಕಾಣಿಸಿಕೊಂಡರು. ಇತಿಹಾಸಕಾರರಾದ ಕನ್ನಿಂಗ್ ಹ್ಯಾಮ್ ರವರು ‘The most terrible antibuddhist was sage Shankaracharya’ ಎಂದು ಹೇಳಿದ್ದಾರೆ.

ಬೌದ್ಧ ವಿಹಾರಗಳಲ್ಲಿ ವಾಸಿಸುತ್ತಿದ್ದ ಭಿಕ್ಕುಗಳ ರುಂಡ ಮುಂಡಗಳನ್ನು ಚಂಡಾಡಿ, ಒಬ್ಬ ಬೌದ್ಧ ಭಿಕ್ಕುವಿನ ತಲೆಯನ್ನು ತಂದುಕೊಟ್ಟರೆ ನೂರು ವರಹಗಳ ಬಹುಮಾನವನ್ನು ಘೋಷಿಸಿದ್ದ ಶಂಕರಾಚಾರ್ಯರು ಭಾರತದಲ್ಲಿ ಬೌದ್ಧ ಧರ್ಮ ತತ್ತರಿಸುವಂತೆ ಮಾಡಿದರು. ಶಂಕರಾಚಾರ್ಯ ವಿರಚಿತ ಭಾಷ್ಯ ಅಥವಾ ಬ್ರಹ್ಮಸೂತ್ರ ಎಂಬ ಗ್ರಂಥದಲ್ಲಿ Buddha was an enemy of the people and taught contradictory and Confusing things’ ಎಂದು ಹೇಳಿದ್ದಾರೆ!

ಬ್ರಾಹ್ಮಣ್ಯದ ಪುನರುತ್ಥಾನಕ್ಕೆ ಅಪಾರವಾಗಿ ಶ್ರಮಿಸಿದವರು, ಬೌದ್ಧ ಧರ್ಮವನ್ನು ಉಗ್ರವಾಗಿ ವಿರೋಧಿಸುತ್ತಿದ್ದ ಶಂಕರರ ಜೊತೆಗೆ ದಿಮಾರಿಲಭಟ್ಟ, ವಾಚಸ್ಪತಿ ಮಿಶ್ರ, ಉದಯನ ಉದ್ಯುತಾಕರ ಮುಂತಾದವರು ಪ್ರಮುಖರು. ಶಂಕರಾಚಾರ್ಯರ ‘ಶಂಕರ ದಿಗ್ವಿಜಯಂ’ ಗ್ರಂಥದಲ್ಲಿ ಬೌದ್ಧ ಧರ್ಮವನ್ನು ನಾಶ ಮಾಡಿದ ಸವಿಸ್ತಾರ ವಿವರಣೆಗಳು ಹೇರಳವಾಗಿದೆ.

ಕ್ರಿ.ಶ. 788 ರ ಕಾಲಘಟ್ಟವನ್ನು ‘ಬೌದ್ಧ ಧರ್ಮದ ಅವನತಿಯು ತನ್ನ ಪರಾಕಾಷ್ಟೆಗೆ ತಲುಪಿದ ಯುಗ’ವೆಂದು ಇತಿಹಾಸಕಾರರು ಬಣ್ಣಿಸಿದ್ದಾರೆ. ಬೌದ್ಧಧರ್ಮವನ್ನು ವಿನಾಶಕಾರಿ ಅಥವಾ ಸರ್ವ ವಿನಾಶಕಾರಿ ಎಂದು ವರ್ಣಿಸುವ ಶಂಕರಾಚಾರ್ಯ ತನ್ನ ಧರ್ಮಯಾತ್ರೆ ಬೌದ್ಧ ವಿಹಾರಗಳ ನಾಶಕ್ಕಾಗಿ, ಬೌದ್ಧ ಭಿಕ್ಕುಗಳ ಸಂಹಾರಕ್ಕಾಗಿ ಎಂದು ಹೇಳಿದ್ದಾರೆ.

ಉಜ್ಜಯನಿಯ ರಾಜನಾದ ಸುಧನ್ವನೆಂಬವನು ಭೌದ್ಧ ಬಿಕ್ಕುಗಳ ತಲೆಗಳನ್ನು ಚಂಡಾಡಿದ್ದನ್ನು ಮಹಾನ್ ಯಾತ್ರಿಕ ಹ್ಯುಯನ್ ತ್ಯಾಂಗ್ ನು ದಾಖಲಿಸಿದ್ದಾನೆ. ಮೃಚ್ಛಕಟಿಕದಲ್ಲಿ ಬೌದ್ಧ ಬಿಕ್ಕುಗಳ ಮೂಗಿಗೆ ಸರಪಳಿ ಹಾಕಿ ಎತ್ತಿನಂತೆ ಎಳೆಸುತ್ತಿದ್ದುದರ ವಿವರಣೆಯಿದೆ! ಟಿಬ್ಬೆಟ್ಟಿನ ಬೌದ್ಧ ಗ್ರಂಥಗಳಲ್ಲಿ “Shankara lead a religious expendition againinst the Buddhas and caused their destruction from the Himalayas to the Indian Ocean” ಎಂದು ಹೇಳಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version