ರಾಜಕೀಯ

ಬಜೆಟ್ ಮಂಡನೆ |ಏರಿದ್ದೆಷ್ಟು ? | ಇಳಿದದ್ದೆಷ್ಟು ?

Published

on

ಸುದ್ದಿದಿನ ಡೆಸ್ಕ್ : ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ರೈತರ ಸಾಲಾಮನ್ನಾ ಹಾಗೂ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದಿಂದ ಸರ್ಕಾರಕ್ಕೆ ಆಗುವಂತಹ ಹೊರೆ ಕಡಿಮೆ ಮಾಡಿಕೊಳ್ಳಲು ಕೆಲವು ಅಗತ್ಯ ಕ್ರಮಗಳನ್ನು ತೆಗೆದು ಕೊಂಡಿದ್ದಾರೆ.

ಆ ಎಲ್ಲ ಕಾರಣಗಳಿಗಾಗಿ ಕೆಲವು ದೈನಂದಿನ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿದ್ದಾರೆ. ಕೆಲವು ವಸ್ತುಗಳ ಬೆಲೆಯನ್ನು ಇಳಿಸಿದ್ದಾರೆ.

ಏರಿಕೆ

• ಮದ್ಯದ ಮೇಲೆ ಶೇ4ರಷ್ಟು ಅಬಕಾರಿ‌ ಸುಂಕ ಏರಿಕೆ

• ಅಬಕಾರಿ‌ ತೆರಿಗೆ 17 ಸ್ಲ್ಯಾಬ್ ಗಳಿಗೆ ಶೇ15 ರಿಂದ ಶೇ 34ಕ್ಕೆ ಏರಿಕೆ

• ತಂಬಾಕು ಉತ್ಪನ್ನಗಳು, ಮದ್ಯ, ಬೀಡಿ – ಸಿಗರೇಟ್ ಬೆಲೆ ಏರಿಕೆ

• ಪ್ರತಿ ಲೀಟರ್ ಡೀಸೆಲ್ ಗೆ 1.12 ಏರಿಕೆ

ಪ್ರತಿ ಲೀಟರ್ ಪೆಟ್ರೋಲ್ ಗೆ 1. 14 ರೂ ಏರಿಕೆ

ಪ್ರತಿ ಯೂನಿಟ್ ಗೆ 20 ಪೈಸೆ ವಿದ್ಯುತ್ ದರ ಏರಿಕೆ

ಇಳಿಕೆ

• ಸಿರಿಧಾನ್ಯಗಳಾದ ಸಾಮೆ, ನವಣೆ, ಅರಕ, ಬರಗು ಮೇಲಿನ ಹಿಟ್ಟುಗಳ ಮೇಲೆ ತೆರಿಗೆ ವಿನಾಯಿತಿ ಮಾಡಲಾಗಿದೆ.

• ತೆಂಗಿನಕಾಯಿ ಸಿಪ್ಪೆ, ದ್ವಿದಳ ಧಾನ್ಯಗಳ ಮೇಲಿನ ತೆರಿಗೆಯನ್ನು ಈ ಹಿಂದಿನಂತೆ ಮುಂದಯವರಿಸಲಾಗುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version