ರಾಜಕೀಯ
ಬಜೆಟ್ ಮಂಡನೆ | ಅನ್ನಭಾಗ್ಯ ಯೋಜನೆಗೆ ಕತ್ತರಿ
ಸುದ್ದಿದಿನ ಡೆಸ್ಕ್ : ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆ ಅಬಾಧಿತವಾಗಿದ್ದು, ಯೋಜನೆಯ ಕೊಂಚ ಬದಲಾವಣೆ ಮಾಡಲಾಗಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರದಾರರಿಗೆ ವಿತರಿಸುತ್ತಿದ್ದ ಧಾನ್ಯ ಕಡಿತಗೊಳಿಸಿದ್ದು, ಫಲಾನುಭವಿಗಳು ಇನ್ನು 5 ಅಕ್ಕಿ, 1 ಲೀಟರ್ ಪಾಮ್ ಆಯಿಲ್ ಹಾಗೂ ಒಂದು ಕೆಜಿ ಸೆಕ್ಕರೆ, ಅಥವಾ ಅರ್ಧ ಕೆಜಿ ತೊಗರಿ ಬೇಳೆ ಪಡೆಯಲಿದ್ದಾರೆ.
ಮೊದಲಿಗೆ ಅನ್ನಭಾಗ್ಯ ಯೋಜನೆ ಅಡಿ ಪ್ರತಿ ಫಲಾನುಭವಿಗೆ 7 ಕೆಜಿ, ಒಂದು ಕೆಜಿ ತೊಗರಿ ಬೇಳೆ ವಿತರಿಸಲಾಗುತ್ತಿತ್ತು. ಆದರೆ, ಈಗ ಅಕ್ಕಿ ಎರಡು ಕೆಜಿ, ತೊಗರಿಬೇಳೆ ಒಂದು ಕೆಜಿ ಕಡಿತಗೊಳ್ಳಲಿದೆ.
ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಜಾರಿ
ಪ್ರಸಕ್ತ ಬಜೆಟ್ನಲ್ಲಿ ಸಿಎಂ ಕುಮಾರಸ್ವಾಮಿ ಅವರು “ಮುಖ್ಯಮಂತ್ರಿ ಮಾತೃಶ್ರೀ ಯೋಜನೆ” ಜಾರಿ ಮಾಡಿದ್ದು, ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ 6 ತಿಂಗಳವರೆಗೆ 1 ಸಾವಿರ ರೂಪಾಯಿ ಸಹಾಯಧನ ನೀಡಲು ನಿರ್ಧರಿಸುದ್ದಾರೆ. ಈ ಯೋಜನೆಗಾಗಿ ಸರ್ಕಾರ 350 ಕೋಟಿ ರೂ. ಮೀಸಲಿರಿಸಿದೆ.
ಸುದ್ದಿದಿನ.ಕಾಂ|ವಾಟ್ಸಪ್|9986715401