ದಿನದ ಸುದ್ದಿ

CAB ಯಿಂದ ಆಗುವುದೇನು..?

Published

on

  • ಶ್ರೀನಿವಾಸ್ ಕಕ್ಕಿಲಾಯ

ತಾವು ಮತೀಯ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಓಡಿ ಬಂದಿದ್ದೇವೆ, ನಮಗೆ ಪೌರತ್ವ ಕೊಡಿ ಎಂದು ಕೇಳಿರುವವರು ಕೇವಲ 4044 ಜನರು. ಅವರಿಗಷ್ಟೇ ಈ CAB ನೆರವಾಗಲಿದೆ.
ಇನ್ನು ಅಸ್ಸಾಂನಲ್ಲಿ ಭಾರತೀಯರಲ್ಲ ಎಂದು ಗುರುತಿಸಲಾಗಿರುವವರು 19.1 ಲಕ್ಷ, ಅವರಲ್ಲಿ 15 ಲಕ್ಷ ಹಿಂದೂಗಳು ಮತ್ತು ಆದಿವಾಸಿಗಳು. ಅವರು ಯಾರೂ ಮತೀಯ ಕಿರುಕುಳದ ಕಾರಣಕ್ಕೆ ಇಲ್ಲಿಗೆ ಬಂದವರಲ್ಲ, ಬದಲಿಗೆ ಆರ್ಥಿಕ ಕಾರಣಗಳಿಗಾಗಿ ನುಸುಳಿ ಬಂದವರು.

ಎಲ್ಲಾ ನುಸುಳುಕೋರರನ್ನು ಹೊರಹಾಕುತ್ತೇವೆ ಎಂದು ಆರ್ಭಟಿಸುತ್ತಿದ್ದ ಅಮಿತ್ ಶಾ ತಂದಿರುವ ಈ ಮಸೂದೆ ಈ ನುಸುಳಿ ಬಂದವರಿಗೆ ಪೌರತ್ವ ನೀಡಲಿದೆಯೇ? ನೀಡುವುದಿದ್ದರೆ ಅವರಿಂದ ಮತೀಯ ಕಿರುಕುಳಕ್ಕೊಳಗಾದವರು ಎಂದು ಹೊಸ ಸುಳ್ಳನ್ನು ಹೇಳಿಸುತ್ತದೆಯೇ?

ಈ CAB ಯಿಂದ ಯಾರಿಗೂ ಉಪಕಾರವಿಲ್ಲ, ಎಲ್ಲರಿಗೂ ತೊಂದರೆಯೇ. ಅದಕ್ಕಾಗಿಯೇ ಈಶಾನ್ಯ ರಾಜ್ಯಗಳು ಈಗ ಹೊತ್ತಿ ಉರಿಯುತ್ತಿರುವುದು.
ಭಾಜಪದ ನಾಯಕರಿಗಾಗಲೀ, ಅವರ ಬಾಲಂಗೋಚಿ ಭಕ್ತರಿಗಾಗಲೀ ತಲೆಯಲ್ಲಿರುವುದು ವಿಷ ಮಾತ್ರ, ಅದಕ್ಕಿಂತ ಆಚೆ ಅವರ ಯೋಚನೆಗಳು ಹೋಗುವುದಿಲ್ಲ.

ನೋಟು ರದ್ದತಿ, ಜಿಎಸ್ ಟಿ, 370 ರದ್ದತಿ ಯಂತಹ ವಿನಾಶಕಾರಿ, ದೇಶದ್ರೋಹಿ ನಿರ್ಧಾರಗಳನ್ನು ಇದೇ ಭಕ್ತ ಮಂಡಳಿ ಸಂಭ್ರಮಿಸಿರಲಿಲ್ಲವೇ? ಏನಾಯಿತು? ಅವೆಲ್ಲವೂ ಸಂಪೂರ್ಣ ವಿಫಲವಾಗಿ ದೇಶವನ್ನು ಹಾಳುಗೆಡವಿರುವುದು, ಕೇಂದ್ರದ ಖಜಾನೆಯನ್ನೇ ಖಾಲಿ ಮಾಡಿ ರಾಜ್ಯಗಳಿಗೆ ನೀಡಬೇಕಾದ ತೆರಿಗೆಯ ಹಣವನ್ನೂ ನೀಡಲಾಗದಂತೆ, ಶಾಲಾ ಮಕ್ಕಳ ಪರೀಕ್ಷೆಗಳನ್ನು ನಡೆಸುವುದಕ್ಕೂ ಹಣವಿಲ್ಲದಂತೆ ಪ್ರಪಾತಕ್ಕೆ ತಳ್ಳಿರುವುದು ಕಾಣುತ್ತಿಲ್ಲವೇ?

ಭಕ್ತರನ್ನು ಬಿಟ್ಟು ಬಿಡಿ, ಚರ್ಚೆಗೆ ನಿಲ್ಲಬೇಡಿ. ನಮ್ಮ ಅಮೂಲ್ಯ ಸಮಯ ಏನಿದ್ದರೂ ನಮ್ಮವರಿಗೆ ತಿಳಿಸಿ ಹೇಳುವುದಕ್ಕೆ, ಇನ್ನೂ ಭಕ್ತರ ಪಾಶಕ್ಕೆ ಸಿಲುಕಿಲ್ಲದವರಿಗೆ ತಿಳಿಸಿ ಹೇಳುವುದಕ್ಕೆ ವ್ಯಯಿಸೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version