ಬಹಿರಂಗ

ಯುವ ನಾಯಕ ಚಂದ್ರಶೇಖರ್ ರಾವಣ್ ಆಜಾದ್ ನಾಳೆ ಕರ್ನಾಟಕಕ್ಕೆ : ಮುಕ್ತ ಮನಸ್ಸಿನಿಂದ ನಾವೆಲ್ಲ ಸ್ವಾಗತಿಸೋಣ

Published

on

ಳೆದ ಕೆಲವಾರು ವರ್ಷಗಳಿಂದ ಉತ್ತರ ಪ್ರದೇಶದ ಮೇಲ್ಜಾತಿ ಪರವಾದ ಹಾಗೂ ಗೂಂಡಾ ಸರ್ಕಾರದ ವಿರುದ್ಧ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಚಂದ್ರಶೇಖರ್ ರಾವಣ್ ಆಜಾದ್ ಅವರನ್ನು ಒಂದು ವರ್ಗದ ದಲಿತ ನಾಯಕತ್ವ ಬಿಜೆಪಿ ಏಜೆಂಟ್ ಎಂದು ಬಿಂಬಿಸಲು ಪ್ರಯತ್ನ ಪಡುತ್ತಿದೆ. ಆದರೆ ಭೀಮ್ ಆರ್ಮಿಯ ನಾಯಕ ಚಂದ್ರಶೇಖರ್ ಆಜಾದ್ ತಾನೇನು ಎಂಬುದನ್ನು ತನ್ನ ಕೃತಿಯಲ್ಲಿ, ಹೋರಾಟದಲ್ಲಿ ತೋರಿಸುತ್ತಿದ್ದಾರೆ.

ಸಮುದಾಯಕ್ಕಾಗಿ ನಿಸ್ವಾರ್ಥವಾದ ಹೋರಾಟ ಕಣದಲ್ಲಿ ರೂಪಿತಗೊಂಡ ಈ ಯುವ ನಾಯಕ ನಾಳೆ ಕರ್ನಾಟಕದ ನೆಲಕ್ಕೆ ಬರುತ್ತಿರುವುದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ. ಭೀಮ್ ಆರ್ಮಿಯ ಕುರಿತು, ಚಂದ್ರಶೇಖರ್ ರಾವಣ್ ಅವರ ಚಿಂತನೆಗಳ ಕುರಿತು ಮತ್ತಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

ಕೆಲವು ಹೋರಾಟದ ಸ್ನೇಹಿತರು ಚಂದ್ರಶೇಖರ್ ರಾವಣ್ ಅವರು ಕರ್ನಾಟಕಕ್ಕೆ ಬರುವುದನ್ನು ತಮ್ಮ ಸಂಪರ್ಕಗಳ ಮೂಲಕ ತಡೆಯಲು ಯತ್ನಿಸಿದರಂತೆ, ಕೆಲವರು ಅವರಿಗೆ ಎಚ್ಚರಿಕೆ ಹೇಳಲು ಯುತ್ನಿಸಿದರಂತೆ! ಕಾದು ನೋಡುತ್ತಾರಂತೆ!! ಎಲ್ಲಿಗೆ ಬಂತು ಗೆಳೆಯರ ಸ್ಥಿತಿ ಎಂದು ಖೇದವಾಗುತ್ತದೆ.
ಅಂತಹ ಗೆಳೆಯರಿಗೆ ಸಣ್ಣ ಮನವಿ.
ಜಿಗ್ನೇಶ್ ಮೇವಾನಿ ಇರಲಿ ಕನ್ಹಯ್ಯ ಇರಲಿ ಚಂದ್ರಶೇಖರ್ ರಾವಣ್ ಇರಲಿ ಇವರು ಯಾರೂ ಆಡುವ ಮಕ್ಕಳಲ್ಲ. ಇವರು ತಮ್ಮ ತಮ್ಮ ಸುತ್ತ ಕಳೆದ ಹತ್ತಾರು ವರ್ಷಗಳಿಂದ ಎಲ್ಲಾ ರೀತಿಯ ಸಾಮಾಜಿಕ ರಾಜಕೀಯ – ಸಂಘರ್ಷದಲ್ಲಿ ತೊಡಗಿಕೊಂಡು, ನಾನಾ ರೀತಿಯ ಸೈದ್ಧಾಂತಿಕ ತಾತ್ವಿಕ ಸಂಘರ್ಷದ ಕುಲುಮೆಯಲ್ಲಿ ತಮ್ಮನ್ನು ತಾವು ಹದಗೊಳಿಸಿಕೊಂಡವರು. ನಾನು ನೀವು ಊಹಿಸಲೂ ಕಷ್ಟವಾದ ರೀತಿಯಲ್ಲಿ ಪ್ರಭುತ್ವಗಳನ್ನು ಎದುರು ಹಾಕಿ ಕೊಂಡಿರುವ ಮಹಾನ್ ಯುವ ತಾರೆಗಳು ಇವರು.

ಇವರು ಒಬ್ಬರನ್ನು ನೋಡಿ ಮತ್ತೊಬ್ಬರು ಕಲಿಯಬಲ್ಲವರೇ ವಿನಃ ಒಬ್ಬರದ್ದನ್ನು ಕಾಪಿ ಹೊಡೆಯುವವರಲ್ಲ. ಹಾಗೆಯೇ ಪ್ರತಿಯೊಬ್ಬರೂ ತಮ್ಮ ಮಿತಿಯಲ್ಲಿ ವಿಶೇಷ ರೀತಿಯಲ್ಲಿಯೇ ಗುರುತಿಸಿಕೊಂಡವರು. ಅವರನ್ನೆಲ್ಲ “ಯಾರೋ” ಭಾಷಣಕ್ಕೆ ಕರೆದು Divert ಮಾಡಿಬಿಡುತ್ತಾರೆ ಎಂದೋ, ಅವರ ಹೋರಾಟದ ಹಾದಿಯನ್ನೇ ಬದಲಿಸಿಬಿಡುತ್ತಾರೆ ಎಂದೋ ಯೋಚಿಸುವುದು ನೀವು ಆ ತಳಮಟ್ಟದ ಹೋರಾಟಗಾರರಿಗೆ ಮಾಡುವ ಅಪಮಾನವೇ ವಿನಃ ಬೇರೇನೂ ಅಲ್ಲ. ದಯವಿಟ್ಟು ಅಂತಹ ಕೆಲಸ ಮಾಡುವ ಮೂಲಕ , ಇಂತಹ ತಪ್ಪು ಸಂದೇಶಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿತ್ತುವ ಮೂಲಕ ನಿಮ್ಮನ್ನು ನೀವು ಸಣ್ಣವರಾಗಿಸಿಕೊಳ್ಳಬೇಡಿ ಎಂದಷ್ಟೇ ನಿಮಗೆ ಸವಿನಯ ಪ್ರಾರ್ಥನೆ.

ಹರ್ಷಕುಮಾರ್ ಕುಗ್ವೆ

  • ಕೃಪೆ : ಫೇಸ್ ಬುಕ್ ಪೋಸ್ಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version