ರಾಜಕೀಯ

ಲಿಂಗಾಯತ ಧರ್ಮ ವಿಚಾರ ನನ್ನ ಆತ್ಮಸಾಕ್ಷಿಗೆ ತಕ್ಕ ಹೇಳಿಕೆ ನೀಡಿದ್ದೇನೆ : ಡಿ.ಕೆ.ಶಿ ಸ್ಪಷ್ಟನೆ

Published

on

ಸುದ್ದಿದಿನ,ಕೋಲಾರ : ನಾನು ಲೀಡರೇ ಅಲ್ಲ. ನಾನು ಲೀಡರ್ ಎಂದು ಎಲ್ಲೂ ಹೇಳಿಕೊಂಡಿಲ್ಲ, ಯಾರನ್ನು ಗೆಲ್ಲಿಸುತ್ತೇನೆ ಎಂದು ಎಲ್ಲೂ ಹೇಳಿಕೊಂಡಿಲ್ಲ. ಲಿಂಗಾಯತ ಧರ್ಮ ‌ವಿಚಾರ ನಾನು ನನ್ನ ಆತ್ಮಸಾಕ್ಷಿಗೆ ತಕ್ಕ ಹೇಳಿಕೆ ನೀಡಿದ್ದೇನೆ, ಆ ಹೇಳಿಕೆಗೆ ನಾನು ಬದ್ದನಾಗಿದ್ದೇನೆ ಎಂದು ಕೋಲಾರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅವರು, ನಾವು ರಾಜಕಾರಣಿಗಳು ಧಾರ್ಮಿಕ ವಿಚಾರದಲ್ಲಿ ಭಾಗಿಯಾಗಿದ್ದ ತಪ್ಪು. ಬಳ್ಳಾರಿಯಲ್ಲೂ‌ ನಾನು ಗೆಲ್ಲಿಸಿಕೊಳ್ತೇನೆ ಅಂತ ಹೇಳಿಕೊಂಡಿಲ್ಲ.ನನ್ನ ಹೇಳಿಕೆ ಹಿಂದೆ ಯಾರನ್ನೂ‌ ಮುಗಿಸುವ ಉದ್ದೇಶ ಇಲ್ಲ, ಇದು ನನ್ನ ವೈಯಕ್ತಿಕ ಹೇಳಿಕೆ ಎಂದು ಕೋಲಾರ ಹೊರವಲಯದಲ್ಲಿರುವ ಆರ್ ಎಲ್ ಜಾಲಪ್ಪ ಆಸ್ಪತ್ರೆಯ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸ್ಪಷ್ಟನೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version