ದಿನದ ಸುದ್ದಿ
ಸರ್ಕಾರಿ ಶಾಲಾ ಮಕ್ಕಳ ಪ್ರತಿಭೆಗೆ ಹೆಗಲಾದವರನ್ನು ನೆನೆಯೋಣ
- ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು ವಿಶ್ವನಗರ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಶ್ವನಗರ, ಶುಕ್ರವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ನಮ್ಮ ವಿಶ್ವನಗರ ಶಾಲೆಯ ಮಕ್ಕಳು ಅತೀ ಹೆಚ್ಚು ಪ್ರಥಮ ಬಹುಮಾನಗಳನ್ನು ಪಡೆಯುವ ಮೂಲಕ ಕ್ಲಸ್ಟರ್ ನಲ್ಲಿ ಬೆಸ್ಟ್ ಸ್ಕೂಲ್ ಆಗಿ ಹೊರಹೊಮ್ಮಿದ್ದಾರೆ.
ಎಲ್ಲಾ ಮಕ್ಕಳಿಗೂ ಹಾಗೂ ಸಹಕರಿಸಿದ ಪೋಷಕರಿಗೂ ಶಾಲೆಯ ಪರವಾಗಿ ಆತ್ಮೀಯ ಅಭಿನಂದನೆಗಳು ಶುಭವಾಗಲಿ….ಹಾಗೂ ಇಂದು ಪ್ರತಿಭಾ ಕಾರಂಜಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ. ಇದರಲ್ಲಿ ನಮ್ಮ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಲ್ಲಾ ಸಹ ಶಿಕ್ಷಕರ ಸಹಕಾರವು ತುಂಬಾ ಚೆನ್ನಾಗಿತ್ತು.
ಊಟದ ವ್ಯವಸ್ಥೆ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಶ್ರೀಮತಿ ಪದ್ಮಾವತಿ ಬಿ, ಎಲ್ಲಾ ಮಕ್ಕಳಿಗೂ ಸ್ಪರ್ಧೆಗಳಲ್ಲಿ ಅತ್ಯುತ್ತಮವಾಗಿ ಅಭ್ಯಾಸ ನಡೆಸಿ ಮಕ್ಕಳಿಗೆ ಇಷ್ಟೊಂದು ಬಹುಮಾನ ಬರಲು ಸಹಕರಿಸುವುದಲ್ಲದೇ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶ್ರೀಮತಿ ಮಂಜುಳಾ ಮೇಡಂ, ಶ್ರೀಮತಿ ನಾಗಲಕ್ಷ್ಮಿ ಮೇಡಂ ಶ್ರೀಮತಿ ರಾಜೇಶ್ವರಿ ಮೇಡಂ ಹಾಗೂ ಶ್ರೀ ವಿಜಯ್ ಇವರಿಗೂ ತುಂಬು ಹೃದಯದ ಧನ್ಯವಾದಗಳು.
ನಮ್ಮ ಕಾರ್ಯಕ್ರಮಕ್ಕೆ ನಮ್ಮ ಎಸ್. ಡಿ. ಎಂ. ಸಿ. ಅಧ್ಯಕ್ಷರು ಹಾಗೂ ಸದಸ್ಯರ ಕೊಡುಗೆ ಅಪಾರವಾಗಿತ್ತು.. ತಾವೇ ಜವಾಬ್ದಾರಿ ವಹಿಸಿಕೊಂಡು ಪೋಷಕರು ನಿರ್ವಹಣೆ ಮಾಡಿದ್ದು ತುಂಬಾ ಉತ್ತಮವಾಗಿತ್ತು. ನಮ್ಮ ಅಧ್ಯಕ್ಷರು ನಮ್ಮನ್ನು ಪ್ರೋತ್ಸಾಹಿಸುವ ರೀತಿ ನಮಗೆ ತುಂಬಾ ಸಂತೋಷವಾಯಿತು.
ನಮ್ಮ ಕಾರ್ಯಕ್ರಮಕ್ಕೆ ನಮ್ಮ ದಾನಿಗಳ ಕೊಡುಗೆ ಅಪಾರವಾದದ್ದು, ಶ್ರೀಯುತ ಶಭರೀಶ್. ಗ್ರಾಮ ಪಂಚಾಯಿತಿ ಅಧ್ಯಕ್ಷರು ಅರಬಿಳಚಿ. ಇವರು ನಮ್ಮ ಕ್ಲಸ್ಟರ್ ನ ಎಲ್ಲಾ ವಿಜೇತ ಮಕ್ಕಳಿಗೆ ಬಹುಮಾನದ ಕೊಡುಗೆ ನೀಡಿದರು.
ಶ್ರೀ ಮಧುಕುಮಾರ್. ಮಾಜಿ ತಾಲೂಕು ಪಂಚಾಯಿತಿ ಸದಸ್ಯರು. ನಮ್ಮ ಶಾಲೆಗೆ ಡಕ್ ಹಾಗೂ ಸ್ಪೀಕರ್ ಬಾಕ್ಸ್ ಕೊಡಿಸಿದ್ದಾರೆ. ಶ್ರೀ ಅಕ್ಬರ್ ಹಾಗೂ ಅವರ ಪುತ್ರರಾದ ಖಲೀಂ ರವರು ನಮ್ಮ ಕಾರ್ಯಕ್ರಮಕ್ಕೆ ವೇದಿಕೆಗೆ ಬೇಕಾಗುವ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಶ್ರೀ ರಾಜಣ್ಣನವರು ಮಕ್ಕಳಿಗೆ ತಟ್ಟೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಶ್ರೀ ಪಳನಿಯವರು ಮಕ್ಕಳಿಗೆ ತಿಂಡಿಗೆ ಅಡಿಕೆ ಪ್ಲೇಟ್ ಗಳನ್ನು ಉಚಿತವಾಗಿ ನೀಡಿದ್ದಾರೆ. ಶ್ರೀ ಚಲುವರಾಜುರವರು,ಕಾರ್ಯಕ್ರಮಕ್ಕೆ ಧನಸಹಾಯ ಮಾಡಿರುತ್ತಾರೆ, ಶ್ರೀ ಅಂಗಡಿ ಕುಮಾರ್ ರವರು, ಹಾಗೂ ಶ್ರೀ ದಯಾನಂದ್ ರವರು ತಲಾ ಒಂದು ಮೂಟೆ ಅಕ್ಕಿಯನ್ನು ಕೊಟ್ಟಿರುತ್ತಾರೆ.
ಶ್ರೀ ಮುನಿವೇಲುರವರು ತೆಂಗಿನಕಾಯಿಗಳನ್ನು ನೀಡಿ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆಗೆ ಸಹಕರಿಸಿರುತ್ತಾರೆ. ನಮ್ಮ ಅಡುಗೆಯವರ ಕಾರ್ಯವನ್ನು ನೆನೆಯಲೇಬೇಕು.. ತುಂಬಾ ಶ್ರಮವಹಿಸಿದ್ದಾರೆ ಅವರಿಗೂ ಧನ್ಯವಾದಗಳು.
ಪೋಷಕರು ಹಾಗೂ ನಮ್ಮ ಗ್ರಾಮದ ಮುಖಂಡರುಗಳು ಕಾರ್ಯಕ್ರಮದ ಯಶಸ್ಸಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿರುತ್ತಾರೆ ಅವರಿಗೂ ಧನ್ಯವಾದಗಳು.
ತಮಿಳು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಪೆರಿಸ್ವಾಮಿಯವರು ಹಾಗೂ ಸಿಬ್ಬಂದಿ ವರ್ಗದವರು ಅವರ ಶಾಲೆಯಿಂದ ಕೊಠಡಿ, ಹಾಗೂ ಎಲ್ಲಾ ಪರಿಕರಗಳನ್ನು ನೀಡುವುದರ ಮೂಲಕ ಸಹಕರಿಸಿದ್ದಾರೆ ಅವರಿಗೂ ಧನ್ಯವಾದಗಳು… ನಮ್ಮ ಅಂಗನವಾಡಿ ಸಿಬ್ಬಂದಿ ವರ್ಗದವರಿಗೂ ಹಾಗೂ ತಮ್ಮ ಮಕ್ಕಳನ್ನು ಅತ್ಯುತ್ತಮವಾಗಿ ತಯಾರು ಮಾಡಿ ಬಹುಮಾನಗಳನ್ನು ಪಡೆದ ಎಲ್ಲಾ ಪೋಷಕರಿಗೂ, ಮುಖ್ಯವಾಗಿ ನಮ್ಮ ಮಕ್ಕಳಿಗೆ ಅನಂತ ಅನಂತ ಧನ್ಯವಾದಗಳು.
ಬಾಳೆಕಂದು ಮಾವಿನಸೊಪ್ಪು ಕಟ್ಟಿದ ಹಾಗೂ ಊಟದ ವ್ಯವಸ್ಥೆ ಮಾಡಿದ ಪ್ರಜ್ವಲ್ ಮತ್ತು ತಂಡದವರಿಗೆ, ಉತ್ತಮವಾಗಿ ರಂಗೋಲಿ ಹಾಕಿ,,,ಎಲ್ಲರನ್ನೂ ಸ್ವಾಗತಿಸಿದ ಅರ್ಚನಾ ಮತ್ತು ತಂಡದವರ ಸ್ವಾಗತ ಕಮಿಟಿಗೂ, ಬೆಳಿಗ್ಗೆಯಿಂದ ಸಂಜೆಯವರೆಗೂ ಎಲ್ಲೂ ಕಸ ಇರದಂತೆ ನೋಡಿಕೊಂಡ ಮನೋಜ್ ಮತ್ತು ತಂಡದ ಸ್ವಚ್ಛತಾ ಕಮಿಟಿಯವರಿಗೂ ನಮ್ಮ ಶಾಲೆಯ ಪರವಾಗಿ ಆತ್ಮೀಯ ಅಭಿನಂದನೆಗಳು.
ಇಂದು ಕಾರ್ಯಕ್ರಮಕ್ಕೆ ಆಗಮಿಸಿದ ಅರಬಿಳಚಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀಮತಿ ಬೀಬಿಆಯಿಷಾರವರಿಗೂ, ಸದಸ್ಯರಾದ ಶ್ರೀಮತಿ ಸುಶೀಲಮ್ಮನವರಿಗೂ,ಶ್ರೀ ಗುಣಶೇಖರ್ ರವರಿಗೆ ,ತಾಯಂದಿರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ದೀಪಾರವರಿಗೂ ಉಪಾಧ್ಯಕ್ಷರಾದ ಶ್ರೀಮತಿ ಮೀನಾರವರಿಗೂ ಹಾಗೂ ಎಲ್ಲಾ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳು.
ಇಂದಿನ ಕಾರ್ಯಕ್ರಮದಲ್ಲಿ ನಮ್ಮ ಮುಖ್ಯ ಶಿಕ್ಷಕರಾದ ಶ್ರೀಮತಿ ಸಾವಿತ್ರಮ್ಮನವರು ಹಾಗೂ ಸಿ ಆರ್ ಪಿ ಯವರಾದ ಶ್ರೀ ಜಾಪರ್ ರವರಿಗೆ* *ಹೃದಯಾಂತರಾಳದ ನಮನಗಳು..ಇವರು ಜಂಟಿ ಯಾಗಿ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾಗಿದ್ದಾರೆ ಅವರಿಗೆ ಆತ್ಮೀಯವಾಗಿ ವಂದಿಸುತ್ತಾ….ನಮ್ಮ ಕ್ಲಸ್ಟರಿನ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರಿಗೂ ಹಾಗೂ ಸಿಬ್ಬಂದಿಯವರಿಗೂ ನಮ್ಮ ಶಾಲೆಯ ವತಿಯಿಂದ ಕೃತಜ್ಞತಾಪೂರ್ವಕ ಧನ್ಯವಾದಗಳು….ನಿಮ್ಮೆಲ್ಲರ ಸಹಕಾರದಿಂದ ಇಂದು ಕಾರ್ಯಕ್ರಮ ಯಶಸ್ವಿಯಾಗಿದೆ ಎಲ್ಲರಿಗೂ ಧನ್ಯವಾದಗಳು.
ನಾನು ಎನ್ನುವುದು ಅಜ್ಞಾನ
ನನ್ನದು ಎನ್ನುವುದು ಅವಿವೇಕ
ನನ್ನಿಂದಲೇ ಎನ್ನುವುದು ಅಹಂಕಾರ
ಇಲ್ಲಿ ಸೇವೆಯೊಂದೇ ಆ ದೇವರಿಗೆ ಸಲ್ಲುವುದು ಸತ್ಯ
ಎಲ್ಲಾ ನೀನೇ ಕಾಣೋ ಉಡುಗಿರಿ ಶ್ರೀ ರಂಗನಾಥ
ಸುದ್ದಿದಿನ.ಕಾಂ|ವಾಟ್ಸಾಪ್|9980346243