ದಿನದ ಸುದ್ದಿ
ದಿವ್ಯ ಜ್ಯೋತಿ ಬಸವಣ್ಣ..!
- ನೇತ್ರಾವತಿ ಸಿ ಎಂ .ನೆಲ್ಲಿಕಟ್ಟೆ
ನಾ ಕಂಡಂತೆ ನನ್ನ ದೃಷ್ಠಿ ಕೋನದಲ್ಲಿ ಆಗಿನ 12 ನೇ ಶತಮಾನದಲ್ಲಿ ಆಲದ ಮರವಂತೆ ಆಳವಾಗಿ ಬೇರೂರಿದ್ದ ಜಾತಿಯನ್ನು ತೊಲಗಿಸಲು ಪ್ರಕಾಶಮಾನವಾಗಿ
ಬಂದವರು ಬಸವಣ್ಣ. ಅವರು ಮಾಡಿದ ಕಾಯಕಗಳು ಇಂದಿಗೂ ಜೀವಂತವಾಗಿವೆ.
ಬ – ಬಲವಾಗಿ
ಸ- ಸಮಾನತೆ
ವ- ವರ್ಣಾತೀತ
ಣ್ಣ- ನಾಯಕನಾಗಿ
ಹೆಸರಿನಲ್ಲಿ ಸೂಚಿಸಿದಂತೆ ನಿಜವಾದ ಜಾತಿ ನಿರ್ಮೂಲನ ನಾಯಕನಾಗಿ ಹೊರ ಹೊಮ್ಮಿದವರು ನಮ್ಮ ಬಸವಣ್ಣನವರು. ಜಾತಿ ಎನ್ನುವ ಪದ 12ನೇ ಶತಮಾನದಲ್ಲಿ ಮೈಗಂಟಿದ ಚರ್ಮದಂತಿತ್ತು,ಅಂತಹ ಕೆಟ್ಟ ಜಾತಿಯ ಚರ್ಮವನ್ನು ಹೊಡೆದೋಡಿಸಲು ಬಲವಾಗಿ ಎಲ್ಲಾರ ಸಮಾನತೆಗಾಗಿ, ವರ್ಣಾತೀತ ನಿರ್ಮೂಲನೆಗಾಗಿ ನಮ್ಮೆಲ್ಲರ ಗಟ್ಟಿ ನಾಯಕರಾಗಿ ಬಂದವರೆ ನಮ್ಮ ಬಸವಣ್ಣನವರು.
ಅಂದಿನ ಕಾಲದಲ್ಲಿ ಶಿಕ್ಷಣವು ಮೇಲು ವರ್ಗದವರಿಗೆ ಮಾತ್ರ ಮೀಸಲಾಗಿತ್ತು. ಅದಲ್ಲದೆ ಕೆಳ ಜಾತಿಯವರು ಕೇವಲ ಶಿಕ್ಷಣ ಮಾತ್ರವಲ್ಲದೆ ಆರ್ಥಿಕ, ಸಾಮಾಜಿಕ, ರಾಜಕೀಯ, ಸಮಾಜದ ಎಲ್ಲಾ ಸೌಲಭ್ಯಗಳಿಂದ ವಂಚಿತರಾದ ಸಮಾಜದ ಧ್ವನಿಯಾಗಿ
ಬಂದವರೆ ನಮ್ಮ ಬಸವಣ್ಣ.
” ಶರಣರ ಕೂಡ ಸರಸವ ಹಾಡುತ್ತ
ನಡೆದಾನೆ ಬಸವಣ್ಣ ,
ದಾಸೋಹ ಇಟ್ಟು ಊಟ ಮಾಡಿಸಿ
ಕೊಡುತ್ತಿದ್ದ ದಕ್ಷಿಣೆ ”
ಇಂತಹ ತತ್ವ ಪದಗಳ ಮೂಲಕ ದಲಿತರಿಗೆ.”ಕಾಯಕವೇ_ ಕೈಲಾಸ ” ಎಂಬ ತತ್ವದಡಿಯಲ್ಲಿ ಬೋಧಿಸಿ ಗುಡಿ ಗುಂಡಾರಗಳಿಗೆ ಹೋಗುವ ಬದಲು ತನ್ನ ಕಾಯಕದಲ್ಲಿ ನಿಷ್ಠೆಯ ಮೂಲಕ ಕೆಲಸ ಮಾಡಿದರೆ ಅದರಲ್ಲಿ ದೇವರ ಕಾಣಬೇಕು ಎಂದು ಬಸವಣ್ಣ ಹೇಳುವುದರ ಮೂಲಕ ನಿರಾಕಾರ ದೇವರುಗಳನ್ನು ಆರಾಧಿಸಿ ಆದರೆ ಅವನು ಸೃಷ್ಠಿಸಿದ ಸೃಷ್ಠಿಗಳನ್ನು ಆರಾಧಿಸಬೇಡಿ.
“ಎನ್ನ ಕಾಲೆ ಕಂಬ ಎನ್ನದೇಹವೇ ದೇಗುಲ
ಎನ್ನ ಶಿರವೇ ಹೊನ್ನ ಕಲಶವಯ್ಯ! ಕೂಡಲಸಂಗಮದೇವ.”
ಎಂಬ ವಚನಗಳ ಮೂಲಕ ಮೂರ್ತಿ ಪೂಜೆಯನ್ನು ಖಂಡಿಸುತ್ತಾರೆ.ತಾವು ಮಾಡುವ ಕೆಲಸದಲ್ಲಿ ದೇವನನ್ನು ಕಾಣಿರಿ ಎಂದು ಹೇಳುತ್ತ ಅಂತರ್ಜಾತೀಯ
ಮೇಲ್ಜಾತಿಯ ವಿವಾಹಕ್ಕೆ ಪ್ರೋತ್ಸಾಹಿಸುತ್ತಾ , ಅಂತಹ ಕಠಿಣ ಶಿಕ್ಷೆಗಳಿದ್ದರೂ ಎದೆಗುಂದದೆ ಧೈರ್ಯವಾಗಿ ಸಮರ್ಥವಾಗಿ ಜಾತಿಯನ್ನು ಖಂಡಿಸಿದ ಮಹಾನ್ ಚೇತನ ಭಕ್ತಿ ಭಂಡಾರಿ ಬಸವಣ್ಣವರು ಅನುಭವ ಮಂಟಪದ ಮೂಲಕ ಸರ್ವರಿಗೂ ತಮ್ಮ ವಚನಗಳ ಮೂಲಕ ಎಲ್ಲಾ ಶರಣರಲ್ಲಿಯು ಸಮಾನತೆ ಉರಿದುಂಬಿಸುವಂತೆ ತಮ್ಮ ವಚನಗಳ ಮೂಲಕ ಜಾತಿಯ ಕೊಳೆಯನ್ನು ತೊಲಗಿಸಲು ಶ್ರಮಿಸಿದರು.
ಇದನ್ನೂ ಓದಿ | ಕೊರೋನ ರೋಗವನ್ನೆದುರಿಸಲು ಆಹಾರ ನಿಯಂತ್ರಣ
ಮೇಲ್ಜಾತಿಯ ಮಹಿಳೆಯನ್ನು ಕೆಳ ಜಾತಿಯ ಪುರುಷನೊಂದಿಗೆ ವಿವಾಹ ಮಾಡುವುದರ ಮೂಲಕ ಜಾತಿ ಎಂಬ ವಿಷ ಬೀಜದ ಕಳಂಕಕ್ಕೆ ಅಂತರ್ಜಾತೀಯ ವಿವಾಹ ಮಾಡುವುದರ ಮೂಲಕ ನಾವೆಲ್ಲರೂ ಒಂದೇ ಸಮಾನತೆಯ ತತ್ವವನ್ನು ಎತ್ತಿ ಹಿಡಿದ ಮಹನೀಯ, ಎಳೆ ಎಳೆಯಾಗಿ ಬಸವಣ್ಣನವರ ಬಗ್ಗೆ ಕೂಲಂಕುಷವಾಗಿ ಅವಲೋಕಿಸಿದಾಗ ಬಸವಣ್ಣನವರ ವಚನಗಳಲ್ಲಿ ವಿಶ್ವ ಸಂಸ್ಥೆ ಘೋಷಿಸಿದ ಎಲ್ಲಾ ಮಾನವ ಹಕ್ಕುಗಳ ವಿಚಾರಗಳೆಲ್ಲವೂ ಸೇರಿದೆ.
ಬಸವಣ್ಣನವರು ಪ್ರಜಾಪ್ರಭುತ್ವ,ಮೌಲ್ಯವನ್ನು ಎತ್ತಿ ಹಿಡಿದುಕೊಳ್ಳುವ ಮೂಲಕ ಬದುಕಿನುದ್ದಕ್ಕೂ ಸಮಾನತೆಯನ್ನು ಕಾಪಾಡಿಕೊಂಡಿದ್ದಾರೆ. ಜಾತಿ ಎಂಬ ಸಂಕೋಲೆಗಳಿಂದ ಬಿಡಿಸಿಕೊಳ್ಳಲು ಹಲವಾರು ವಚನಗಳ ಮೂಲಕ ನಾವೆಲ್ಲರೂ ಸಮಾನರು ಎಂದು ಹೇಳುತ್ತ ಬಂದಿದ್ದಾರೆ. ಇದನ್ನು ಪ್ರಸ್ತುತ ನಾವೆಲ್ಲರೂ ಪ್ರತಿಯೊಬ್ಬರು ಬಸವಣ್ಣನವರ ನಿಯಮಗಳಿಗೆ ಬದ್ಧರಾಗಿ ಹೋಗುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರ ಮೇಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243