ದಿನದ ಸುದ್ದಿ
ಮದುವೆಯಾಗಿ 1ವರ್ಷವೂ ಆಗಿಲ್ಲ, ಹೇಗೆ ಬದುಕಲಿ : ಎನ್ಕೌಂಟರ್ ಆದ ಆರೋಪಿಯ ಪತ್ನಿ
ಸುದ್ದಿದಿನ,ಹೈದರಾಬಾದ್ : ಪಶು ವೈದ್ಯೆ ಪ್ರಿಯಾಂಕಾ ಪ್ರಕರಣದಲ್ಲಿ ಎನ್ಕೌಂಟರ್ ಆದ ಚನ್ನಕೇಶವುಲು ಪತ್ನಿ ತನ್ನ ಆರೋಪಿ ಗಂಡನನ್ನು ಕಳೆದುಕೊಂಡಿರುವುದಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ನನ್ನ ಪತಿ ಇಲ್ಲದೆ ನಾನು ಹೇಗೆ ಬದುಕಲಿ, ನಾನು ಸಾಯ್ತೇನೆ ಎಂದು ಗೋಳಾಡಿದ್ದಾರೆ. ಚನ್ನಕೇಶವುಲು ಮದುವೆಯಾಗಿ ಒಂದು ವರ್ಷವೂ ಆಗಿಲ್ಲ.
ವಿಚಾರಣೆ ಬಳಿಕ ವಾಪಸ್ ಕಳುಹಿಸುವುದಾಗಿ ಹೇಳಿದ್ದರು. ಹೀಗೆ ಹೇಳಿ ಪೊಲೀಸರು ನನ್ನ ಪತಿಯನ್ನು ಕರೆದೊಯ್ದಿದ್ದರು. ಆದ್ರೆ ಈಗ ನನ್ನ ಪತಿಯನ್ನು ಕೊಂದಿದ್ದಾರೆ. ನನ್ನ ಪತಿ ಇಲ್ಲದೆ ನಾನು ಹೇಗೆ ಜೀವನ ಮಾಡಲಿ. ನನ್ನ ಪತಿ ಇಲ್ಲದೆ ನಾನು ಬದುಕುವುದಿಲ್ಲ ಎಂದು ಚನ್ನಕೇಶವುಲು ಪತ್ನಿ ಅಳುತ್ತಲೆ ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಆದರೆ ಇಂತಹ ಕಾಮುಕರನ್ನು ಮಟ್ಟ ಹಾಕಿರುವುದಕ್ಕೆ ದೇಶದಾದ್ಯಂತ ಮೆಚ್ಚುಗೆ, ಸಂತೋಷ ವ್ಯಕ್ತವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243