ರಾಜಕೀಯ
ಜನಾರ್ಧನ ರೆಡ್ಡಿ ಓರ್ವ ಕಳ್ಳ : ಟಪಾಲ್ ಗಣೇಶ್
ಸುದ್ದಿದಿನ,ಬಳ್ಳಾರಿ : ಮಾಜಿ ಸಚಿವ ಜನಾರ್ದನ ರೆಡ್ಡಿ ಓರ್ವ ಕಳ್ಳ, ಕಳ್ಳತನ ಮಾಡುವುದೇ ಅವರ ಚಾಳಿ, ಎನೋಬಲ್ ಇಂಡಿಯಾ ಮೂಲಕ ವಂಚಕ ಫೈನಾನ್ಸ್ ತೆರೆದರು,ಫೈನಾನ್ಸ್ ನಲ್ಲಿ ಜಮೆಯಾದ ಜನರ ಹಣವನ್ನು ಗಣಿಗಾರಿಕೆಯಲ್ಲಿ ತೊಡಗಿಸಿದರು, ಆದರೆ ಅಲ್ಲೂ ಅಕ್ರಮ ಗಣಿಗಾರಿಕೆ ಮಾಡಿದರು ಎಂದು ಟಪಾಲ್ ಗಣೇಶ್ ಗುಡುಗಿದರು.
ಸಾಮಾನ್ಯ ಕಳ್ಳರು ಹೊಟ್ಟೆ ಪಾಡಿಗೆ ಕಳ್ಳತನ ಮಾಡುತ್ತಾರೆ, ಆದರೆ ಇವರು ಬಿಳಿ ಬಟ್ಟೆ ಹಾಕಿಕೊಂಡು ರಾಜಕೀಯದ ನೆರವಿನಲ್ಲಿ ಕಳ್ಳತನ ಮಾಡುತ್ತಾರೆ, ಜನಾರ್ದನ ರೆಡ್ಡಿಯ ಜಾಮೀನನ್ನು ರದ್ದು ಮಾಡಬೇಕು, ಎಲ್ಲ ಪ್ರಕರಣಗಳನ್ನು ಜೈಲಿನಲ್ಲಿಟ್ಟೇ ಮುಗಿಸಬೇಕು, ಇಲ್ಲದಿದ್ದರೆ ಇದು ಸಮಸ್ಯೆ ಬಗೆಹರಿಯಲ್ಲ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401