ದಿನದ ಸುದ್ದಿ
ಬಹುಜನ ನಾಯಕನ ‘ದಾದಾಸಾಹೇಬ್ ಕಾನ್ಸಿರಾಂ’ ಪರಿನಿಬ್ಬಾಣದ ಸ್ಮರಣೆ
ಭಾರತದ ಬಹುಜನ ರಾಜಕಾರಣ ಕಟ್ಟಿ ಯಶಸ್ವಿಯಾದ ರಾಜಕೀಯ ಸಾಮಾಜಿಕ ವಿಜ್ಞಾನಿ ‘ದಾದಾಸಾಹೇಬ್ ಕಾನ್ಸಿರಾಂ ಜೀ’ ಅವರನ್ನು ‘ಪೊಲಿಟಿಕಲ್ ಲೆಜೆಂಡ್ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತದೆ. ರಾಜಕಾರಣ ಎಂದರೆ ನಮಗೆ ಬೇಡವೇ ಬೇಡ ಎನ್ನುವ ಅಸಮರ್ಥ ಅಸಹಾಯಕ ಸಮುದಾಯದ ಎದೆಯೊಳಗೆ ಅರಸೊತ್ತಿಗೆಯ ಕನಸು ಬಿತ್ತಿದ ಮಹಾನ್ ಚೇತನ ಕಾನ್ಸಿರಾಮ್ ಜಿ.
ಭಾರತದಲ್ಲಿ ಯಾವುದಾದರೂ ಒಂದು ಹಿಂದೂಳಿದ ವರ್ಗ ದಲಿತ,ಅಲ್ಪಸಂಖ್ಯಾತ, ಎಂದು ಬಹುಜನ ಪರಿವರ್ತನಾ ಚಳವಳಿ ಯಶಸ್ವೀ ಆಗಿದೆ ಅಧಿಕಾರ ಇಡಿದ ರಾಜಕಾರಣ ಮಾದರಿ ಇದ್ದರೆ ಅದೊಂದು BSP ಎಂದು ಹೇಳಬಹುದು. ಭಾರತಾದ್ಯಂತ ಕಾನ್ಸಿರಾಂ ಜೀ ರಾಜಕಾರಣ ವಿದ್ಯೆ ಬಳಸಿಕೊಂಡು ಇಂದಿಗೂ ರಾಜಕಾರಣ ಮಾಡಿ ಕಡಿಮೆ ಸಂಖ್ಯೆಯ ಶಾಸಕರು ಆಯ್ಕೆಯಾದರು ಮುಖ್ಯಮಂತ್ರಿ ಪದವಿ ಪಡೆಯಬಹುದು ಎಂದು ತೋರಿಸಿಕೊಟ್ಟರು.
ಇಂದಿಗೂ ಭಾರತದಲ್ಲಿ ಬ್ರಾಹ್ಮಣಶಾಹಿ ವ್ಯವಸ್ಥೆ ಅಡಿಯಲ್ಲಿ ಹುಟ್ಟಿದ ಪಕ್ಷಗಳಾದ CONGRESS,BJP, ಅಂತಹ ಪಕ್ಷಗಳು ಪರ್ಯಾಯವಾಗಿ ರಾಜಕಾರಣ ಮಾಡಬಹುದು ಮತ್ತು ಅತಿ ಕಡಿಮೆ ಸಮಯದಲ್ಲಿ BSP ರಾಷ್ಟ್ರದ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.
ಹಿಂದೂಳಿದ ವರ್ಗದ ಮಹಾತ್ಮರ ಬಗ್ಗೆ ಸಂಶೋಧನೆ ನಡೆಸಿ ಇವತ್ತಿಗೂ ಸಂತ ರವಿದಾಸ್, ಜ್ಯೋತಿ ಬಾಹುಪುಲೆ ದಂಪತಿಗಳ ಶಾಹುಮಹರಾಜ್,ಸಯ್ಯಾಜಿ ಗಾಯಕವಾಡ,ನಾಲ್ವಡಿ ಕೃಷ್ಣರಾಜ ಒಡೆಯರ್,ಪೆರಿಯಾರ್ ನಾರಯಣಗುರು,ಬುದ್ದ ಬಸವ ಬಾಬಾಸಾಹೇಬ್ ಸಂವಿಧಾನವನ್ನು ಅಂತಹ ಮಹನೀಯರು ವಿಚಾರಧಾರೆ ತನ್ನ ಮೊದಲ ತತ್ವ ಸಿದ್ದಾಂತ ಚಳವಳಿಯನ್ನು ಮುನ್ನಡೆಗೆ ಕಾರಣವಾದ ಬಹುಜನ ಚಳವಳಿ ಒಂದು ಪರಿವರ್ತನಾ ಹಾದಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಬಹುಶಃ ಭಾರತದಲ್ಲಿ ಕಾಂಗ್ರೆಸ್ ಬಿಜೆಪಿ ಹೊರತುಪಡಿಸಿ ಶೋಷಿತ ವರ್ಗದ ಜನರು ಕೂಡ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಹಿಡಿಯಬಹುದು ಎಂದು ತೊರೊಸಿಕೊಟ್ಟ ರಾಜಕೀಯ ನಿಪುಣ ಕಾನ್ಸಿರಾಮ್ ಜೀ.
ದಲಿತ,ಅಲ್ಪಸಂಖ್ಯಾತ, ಹಿಂದೂಳಿದ ವರ್ಗಗಳು ಅಧಿಕಾರ ವಂಚಿತ ಸಣ್ಣಪುಟ್ಟ ಸಮುದಾಯದವರು ನಾವು ಕೂಡ ಸ್ವಂತ ಪವರ್ ಪಾಲಿಟಿಕ್ಸ್ ಮಾಡಬೇಕು ಅದನ್ನು ತಮ್ಮ ಜೀವಿತಾವಧಿಯಲ್ಲಿ ನೋಡಲೇಬೇಕು ಎಂದು ಪಣತೊಟ್ಟ ದಾದಾಸಾಹೇಬ್ ಕಾನ್ಸಿರಾಮ್ ದೇಶ ಬಹುದೊಡ್ಡ ಪ್ರಮಾಣದ ಜನಸಂಖ್ಯೆಯುಳ್ಳ ಉತ್ತರ ಪ್ರದೇಶದಲ್ಲಿ ಕುಮಾರಿ ಮಾಯಾವತಿ ಮೇಡಂ ಅವರಿಗೆ ನಾಲ್ಕು ಸಾರಿ ಮುಖ್ಯಮಂತ್ರಿ ಮಾಡೋದು ಎಂದರೆ ಸಾಮಾನ್ಯ ಕಾರ್ಯವಲ್ಲ.
ಬಹುತೇಕ ಇತ್ತೀಚೆನ ವರ್ಷಗಳ ರಾಜಕಾರಣದಲ್ಲಿ ಕಾನ್ಸಿರಾಮ್ ಜೀ ಅವರ ರಾಜಕೀಯ ಲೆಕ್ಕಾಚಾರ ಮಾದರಿ ಬಳಸಿಕೊಂಡು ಇಪ್ಪತ್ತೈದು ಶಾಸಕರನ್ನು ಹೊಂದಿರುವ ಪಕ್ಷಗಳು ಕೂಡ ಮುಖ್ಯಮಂತ್ರಿ ನಾನೆ ಆಗುವೆ ಎಂದು ಆತ್ಮವಿಶ್ವಾಸದಿಂದ ಹೇಳಬಹುದು ಎಂದರೆ ಆದರ ಮೂಲಪುರುಷ ಕಾನ್ಸಿರಾಮ್ ರಾಜಕಾರಣ ಮಾದರಿ ಕೊನೆಗೆ ಉ.ಪ್ರ.ಬಿಹಾರ್,ಕರ್ನಾಟಕದ ಜೆಡಿಎಸ್ ಪಕ್ಷ ಕೂಡ ಅಲ್ಪಸ್ವಲ್ಪ ಶಾಸಕರು ಹೊಂದಿದ್ದರೂ ಕೂಡ ಮುಖ್ಯಮಂತ್ರಿ ಗಾದಿಯನ್ನು ಅನುಭವಿಸಲು ಸಾಧ್ಯವಾಗಿದೆ ಎಂದರೆ ಕಾನ್ಸಿರಾಮ್ ರಾಜಕಾರಣ ತಂತ್ರ ನೀತಿಗಳನ್ನು ಇವೆಲ್ಲವೂ ಪಕ್ಷಗಳು ಅವರು ನಾಯಕರು ಅನುಸರಿಸಿ ಅಧಿಕಾರ ಪಡೆದುಕೊಂಡರು.
ಕರ್ನಾಟಕದಲ್ಲಿ ಒಂದೂವರೆ ಕೋಟಿಗೂ ಅಧಿಕ
ಜನಸಂಖ್ಯೆ ಅಸ್ಪೃಶ್ಯರಾದ ದಲಿತ ವರ್ಗದವರು
ಇದ್ದಾರೆ ಹಾಗೂ ವಾಲ್ಮೀಕಿ, ಅಲ್ಪಸಂಖ್ಯಾತ,ಗೊಲ್ಲರ ಸಮುದಾಯ,ಮಡಿವಾಳ,ಉಪ್ಪಾರ,ಸವಿತಾ,ಇನ್ನಿತರ ಸಣ್ಣಪುಟ್ಟ ಸಮುದಾಯದವರು ಕೂಡಿಕೊಂಡು ಬಹುಜನ ಸಮಾಜದ ಚಳುವಳಿ ಮುನ್ನಡೆಸಿದರೆ ಕೇವಲ ಹತ್ತು ವರ್ಷಗಳಲ್ಲಿ ಒಬ್ಬ ಮುಖ್ಯಮಂತ್ರಿಯಾದರು ಆಗಬಹುದು.
ಆದರೆ ಈ ಸಮುದಾಯದವರು ಕೇವಲ ಹಲವು ಪಕ್ಷಗಳಿಗೆ ಮತಬ್ಯಾಂಕ್ ಆಗಿವೆ ಸ್ವಂತ ಅಧಿಕಾರ ಗದ್ದುಗೆ ಹಿಡಿಯಬಹುದು ಎನ್ನುವ ಆಶಭಾವನೆ ಕಳಕೊಂಡು ಕಮರಿ ಹೋಗಿವೆ ಆದರೆ ನಮ್ಮ ಮುಂದೆ ಇರುವ ಒಕ್ಕಲಿಗರ ಸಮುದಾಯದವರು ತಮ್ಮದೆ ಜಾತಿ ಜನಸಂಖ್ಯೆ ಇಟ್ಟುಕೊಂಡು ಪಕ್ಷ ಕಟ್ಟಿ ಎರಡು ಬಾರಿ ಮುಖ್ಯಮಂತ್ರಿ, ಒಂದು ಬಾರಿ ದೇಶದ ಪ್ರಧಾನಿ ಆದರೂ ಇದೇ ರೀತಿ ಸಂಘಪರಿವಾರದ ಪೋಷಕ ಪಾತ್ರದಲ್ಲಿ ವಹಿಸಿಕೊಂಡ ಲಿಂಗಾಯತರು ಸತತ ಮುಖ್ಯಮಂತ್ರಿ ಗಾದಿ ಅನುಭವಿಸುತ್ತಲೇ ಇದ್ದಾರೆ ಆದರೆ ಜನಸಂಖ್ಯೆನೆ ಇಲ್ಲದ ಬ್ರಾಹ್ಮಣರು ಎಲ್ಲಾ ಸಚಿವ ಸಂಪುಟದಲ್ಲಿ ನಾಲ್ಕು ಖಾತೆಯನ್ನು ಹೊಂದಬಹುದು.
ಈ ದಲಿತರಲ್ಲೆ ಬಲಾಡ್ಯ ಸಮುದಾಯಗಳಾದ,ವಾಲ್ಮಿಕಿ,ಮಾದಿಗರು,ಹೊಲೆಯರು, ಗಳು,ಮುಸ್ಲಿಂರು,ಸದಾಕಾಲವೂ BJP,CONG,ಪಕ್ಷಗಳು ಕಾಲಕೆಳಗೆ ಅಧಿಕಾರ ಪಡೆದು ತನ್ನದೆ ಸಮುದಾಯದ ಜನರ ಮೇಲೆ ದಿನ ನಿತ್ಯ ನಡೆಯುವ ದೌರ್ಜನ್ಯ ಹಿಂಸೆ ಕೊಲೆ ಅತ್ಯಾಚಾರ ಮಾಡುವುದನ್ನು ಕನಿಷ್ಟ ವಿರೋಧ ವ್ಯಕ್ತಪಡಿಸದಷ್ಟು ನಿಷ್ಪ್ರಯೋಜಕ ಅಸಹಾಯಕ ಜೀವಂತ ಸಮಾಧಿ ಆಗಿದ್ದಾರೆ.
ಕರ್ನಾಟಕದಲ್ಲಿ ಬಹುಸಂಖ್ಯಾತರಾದ ದಲಿತ,
ಅತಿ ಹಿಂದೂಳಿದ ವರ್ಗ,ಅಲ್ಪಸಂಖ್ಯಾತರು ಈ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಅಧಿಕಾರದಿಂದ ವಂಚಿತ ಈ ಸಮುದಾಯಗಳು ಅಧಿಕಾರವನ್ನು ಹಿಡಿಯಬಹುದು ಏಕೆಂದರೆ ಈ ಚಳವಳಿ ಮರೆಮಾಚಿದ ಇತಿಹಾಸವನ್ನು ಪೂರ್ವಿಕರು ಬಗ್ಗೆ ತನ್ನ ಚಳವಳಿ ಭಾಗವಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಬಹುಜನ ಚಳುವಳಿ ನೇತೃತ್ವವನ್ನು ಅಹಿಂದ ವರ್ಗಕ್ಕೆ ಕೈಗೆ ಕೊಟ್ಟು ತ್ಯಾಗ ಮನೋಭಾವ ಇಟ್ಟುಕೊಂಡು ರಾಜಕಾರಣ ಯುದ್ಧನೀತಿ ನಿರೂಪಿಸಿದರೆ ಅನೇಕ ಸಣ್ಣಪುಟ್ಟ ಅಧಿಕಾರ ವಂಚಿತ ಸಮುದಾಯಗಳು ಅಧಿಕಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರೆ
ಈ ರಾಜ್ಯದ ಸುಧಾರಣೆ ಕಾಣಲು ಸಾದ್ಯ ಜೊತೆಗೆ ಕಾನ್ಸಿರಾಂ ಜೀ ಅವರ ರಾಜಕೀಯ ವಿಚಾರಧಾರೆ ಪ್ರಸ್ತುತ ರಾಜಕಾರಣದಲ್ಲಿ ಸಮೀಕರಣವನ್ನು ಬಳಸಿಕೊಂಡು ಒಂದು ಅದ್ಭುತ ಯಶಸ್ಸನ್ನು ದಾಖಲಿಸಬಹುದು ಸಕ್ಸಸ್ ಮಾದರಿ ರಾಜಕಾರಣ ಬಗ್ಗೆ ಹೆಚ್ಚು ಗಮನ ಹರಿಸಿದರೆ ಈ ಮಾದರಿ ರಾಜಕಾರಣ ಸಕ್ಸಸ್ ಆಗಬಹುದು.
-ಹನುಮೇಶ್ ಗುಂಡೂರು, ವಕೀಲರು
ಸುದ್ದಿದಿನ.ಕಾಂ|ವಾಟ್ಸಾಪ್|9980346243