ದಿನದ ಸುದ್ದಿ
ದಾವಣಗೆರೆ | ನಾಳೆ ಮಾದಿಗರ ಸಮಗ್ರ ಅಭಿವೃದ್ಧಿ ಚಿಂತನಾ ಸಭೆ ; ಬಂಧುಗಳು ಭಾಗವಹಿಸಲು ಮನವಿ
ಸುದ್ದಿದಿನ, ದಾವಣಗೆರೆ : ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕೃತಿಕ ಸಂಘದ ರಾಜ್ಯ ಅಧ್ಯಕ್ಷರಾದ ಸಿ.ಕೆ. ಮಹೇಶ್ರವರ ಅಧ್ಯಕ್ಷತೆಯಲ್ಲಿ ನಾಳೆ (ಶನಿವಾರ) ಬೆಳಿಗ್ಗೆ 1 ಗಂಟೆಗೆ ಕೆ.ಟಿ.ಜೆ. ನಗರದ 10ನೇ ತಿರುವಿನಲ್ಲಿರುವ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಮಾದಿಗರ ಜನಾಂಗದ ಅಭಿವೃದ್ಧಿ ಕುರಿತು ಚಿಂತನಾ ಮಂಥನಾ ಸಭೆಯಲ್ಲಿ ಕರೆಯಲಾಗಿದೆ.
ಮಾದಿಗ ಸಮುದಾಯದ ಅಧಿಕಾರಿ ವರ್ಗದವರು, ನೌಕರರ ಬಂಧುಗಳು ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಯುವಜನರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗರ ಚಿಂತನಾ-ಮಂಥನ ಸಭೆಗೆ ಆಗಮಿಸಿ ಸಲಹೆ ನೀಡಿ, ಸಹಕರಿಸಿ, ಯಶಸ್ವಿಗೊಳಿಸಬೇಕೆಂದು ಕೆ.ಟಿ.ಜೆ. ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಮಾಜಿ ಕಾರ್ಯದರ್ಶಿ ಸೋಮಲಾಪುರ ಹನುಮಂತಪ್ಪ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243