ನೆಲದನಿ
ಈವತ್ತಿನ ಗಾಂಧಿ…!
- ರಾಜಾರಾಮ್ ತಲ್ಲೂರ್
ನಾವು ಈವತ್ತು ತಲುಪಿರುವ ಸ್ಥಿತಿಯನ್ನು ಸಮರ್ಥವಾಗಿ ಬಿಂಬಿಸಬಲ್ಲ ಗಾಂಧೀ ಚಿತ್ರವೊಂದಕ್ಕೆ ಹುಡುಕಾಡಿದಾಗ ನನಗೆ ಸಿಕ್ಕಿದ ಚಿತ್ರ ಇದು.
1944ರಲ್ಲಿ (ಫೆಬ್ರವರಿ 22) ಕಸ್ತೂರ್ಬಾ ಗಾಂಧಿ ತೀರಿಕೊಂಡಾಗ ಅವರ ಶರೀರದ ಎದುರು ದುಗುಡವೇ ಮೈವೆತ್ತು ಕುಳಿತಂತೆ ಕುಳಿತಿರುವ ಗಾಂಧಿ.
2015-16 ರ ಹೊತ್ತಿಗೆ ದೇಶದ ಪ್ರಧಾನಮಂತ್ರಿಗಳು ತಮ್ಮ ಭಾಷಣಗಳಲ್ಲೆಲ್ಲ ಗಾಂಧಿ 150 ತಲುಪುವ ಹೊತ್ತಿಗೆ ದೇಶ ಹಾಗಾಗಬೇಕು, ಹೀಗಾಗಬೇಕು ಎಂದೆಲ್ಲ ಕನಸುಗಳನ್ನು ಬಿತ್ತಿದ್ದರು. ಗಾಂಧಿಗೆ ಸ್ವಚ್ಛಭಾರತ ನೂರೈವತ್ತನೇ ಹುಟ್ಟುಹಬ್ಬಕ್ಕೆ ದೇಶದ ಕೊಡುಗೆ ಎಂದಿದ್ದರು.
ಆದರೆ ಈಗ 150 ಮುಖದೆದುರು ಬಂದು ನಿಂತಿದೆ. ಏನಾಗಿದೆ?
“ಹೌಡಿ…”ಯಲ್ಲಿ ಹೊಸ ರಾಷ್ಟ್ರಪಿತನ ಘೋಷಣೆ ಆಗಿದೆ. ಗೋಡ್ಸೆ ಕೂಡ ಎಷ್ಟು ದೊಡ್ಡ ದೇಶಭಕ್ತ ಎಂದು ತೋರಿಸಲು ಅವನ ಪಿಸ್ತೂಲು ಹರಾಜಿಗೆ ಹಾಕಿನೋಡಿ ಎಂಬ ಸಲಹೆ ಬಂದಿದೆ. ದೇಶ ಒಂದು ಒಕ್ಕೂಟವಾಗಿ ಹಿಂದೆಂದೂ ಕಾಣದಷ್ಟು ಹಿಂಸೆಯ, ವಿಘಟನೆಯ ಮನಸ್ಥಿತಿಯನ್ನು ಮೈದುಂಬಿಕೊಳ್ಳುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ, 15-16ರಲ್ಲಿ ಈ ಸರ್ಕಾರ ಗಾಂಧಿ150ರ ಬಗ್ಗೆ ತೋರಿದ್ದ ಉತ್ಸಾಹದ 5%ಕೂಡ ಇಂದು ಗಾಂಧಿ150ರ ದಿನ ಕಾಣುತ್ತಿಲ್ಲ. ಆ ಎಲ್ಲ ಉತ್ಸಾಹ “ಹೌಡಿ…”ಗೇ ಮುಗಿದುಬಿಟ್ಟಿದೆ. ಇತ್ತ ಇನ್ನೊಂದು ಕಡೆ ಗಾಂಧಿಕಟ್ಟಿದ ಪಕ್ಷ ತಮ್ಮದೆಂದು ಕ್ಲೇಮ್ ಮಾಡುವ ಪಕ್ಷ ಕೂಡ ಗಾಂಧಿಗಿಂತ ಗಹನವಾದ ತನ್ನದೇ ತಾಪತ್ರಯಗಳಲ್ಲಿ ಮುಳುಗಿಬಿಟ್ಟಿದೆ.
ಇದೆಲ್ಲದರ ನಡುವೆ ಒಂದೇ ಸಮಾಧಾನ ಎಂದರೆ, ಗಾಂಧಿಯನ್ನು ಉಳಿಸಿಕೊಳ್ಳಲು ಇವರ್ಯಾರೂ ಬೇಕಾಗಿಲ್ಲ. ತನ್ನ ಬದುಕು-ವಿಚಾರಗಳ ಮೂಲಕವೇ ಗಾಂಧಿ ಅಜರಾಮರ.
ಸುದ್ದಿದಿನ.ಕಾಂ|ವಾಟ್ಸಾಪ್|9980346243