ದಿನದ ಸುದ್ದಿ
ಎನ್ ಇ ಪಿ ನೀತಿ ರದ್ದತಿಗೆ ದಲಿತ ವಿದ್ಯಾರ್ಥಿ ಒಕ್ಕೂಟ ಆಗ್ರಹ
- ವರದಿ : ಮಹಾಲಿಂಗಪ್ಪ ಜೆ ಎಚ್ ಎಮ್ ಹೊಳೆ
ಸುದ್ದಿದಿನ,ಜಗಳೂರು : ಪಟ್ಟಣದ ತಾಲೂಕು ಕಛೇರಿ ಮುಂಬಾಗ ಜಮಾಯಿಸಿ ಶಿರಸ್ಥೆದಾರ್ ಚಂದ್ರಪ್ಪ ಅವರ ಮುಖಾಂತರ ಉನ್ನತ ಶಿಕ್ಷಣ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದರು.
ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕು ಸಂಚಾಲಕ ಅಸಗೋಡು ಶಿವಕುಮಾರ್ ಅವರು ಮಾತನಾಡಿ, ಅಂತಿಮ ವರ್ಷದ ಪದವಿಯಲ್ಲಿ ಪೇಲ್ ಆದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಗೆ ಅವಕಾಶ ನೀಡಬೇಕು. ಪದವಿ ಕಾಲೇಜುಗಳಲ್ಲಿ ಕ್ಯಾರಿ ಓವರ್ ಸಿಸ್ಟಮ್ ನಡಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದ ವ್ಯಾಸಂಗದಲ್ಲಿ ಬಡ್ತಿಗೆ ಅವಕಾಶವಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಎರಡಕ್ಕಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾದವರಿಗೆ ಮರುಪರೀಕ್ಷೆ ನಡೆಸಬೇಕು.ದೇಶದಲ್ಲಿ ಯುಜಿಸಿ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು.ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಇರುವ ಅವಕಾಶದಂತೆ ದಾವಣಗೆರೆ ವಿಶ್ವವಿದ್ಯಾನಿಲಯ ಅನುಸರಿಸಬೇಕು ಎಂದು ಒತ್ತಾಯಿಸಿದರು.
ಬರಪೀಡಿತ ತಾಲೂಕಿನಲ್ಲಿ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿ ಪಡೆದು ತೇರ್ಗಡೆಹೊಂದುತ್ತಿದ್ದು. ಸ್ನಾತಕೋತ್ತರ ಪದವಿಗೆ ಚಿತ್ರದುರ್ಗ,ಚಳ್ಳಕೆರೆ,ದಾವಣಗೆರೆ ವಿಶ್ವವಿದ್ಯಾನಿಲಯ ಕ್ಯಾಂಪಸ್ ಗೆ ತೆರಳುವ ಅನಿವಾರ್ಯತೆಎದುರಾಗಿದೆ.ಕೂಡಲೇ ಅರ್ಹತೆಯಿರುವ ವಿಭಾಗಗಳ ಸ್ನಾತಕೋತ್ತರ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.
ಸಂದರ್ಭದಲ್ಲಿ ಡಿಎಸ್ ಎಸ್ ತಾಲೂಕು ಸಂಚಾಲಕ ಸತೀಶ್ ಮಲೆಮಾಚಿಕೆರೆ,ದಲಿತ ವಿದ್ಯಾರ್ಥಿ ಒಕ್ಕೂಟದ ಹುಚ್ಚವ್ವನಹಳ್ಳಿ ಜೀವನ್ ,ಎಸ್ ಎಫ್ ಐ ಜಿಲ್ಲಾ ಸಂಚಾಲಕ ಅನಂತರಾಜ್, ಎಐಎಸ್ ಎಫ್ ರಾಜ್ಯ ಸಹಕಾರ್ಯದರ್ಶಿ ಮಾದಿಹಳ್ಳಿ ಮಂಜಪ್ಪ,ಎಐಎಸ್ ಎಫ್ ಮುಖಂಡರಾದ ಮಧುದೇವಿಕೆರೆ, ಕಿರಣ್, ಲಿಂಗಣ್ಣಹಳ್ಳಿ ಮಂಜುನಾಥ್,ಪ್ರಗತಿ ಪರ ಸಂಘಟನೆ ಮುಖಂಡರಾದವಿವೇಕಾನಂದ, ಅಜಯ್, ಕಾರ್ತಿಕ, ರಾಕೇಶ್, ಗುರು, ತಿಮ್ಮಣ್ಣ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243