ದಿನದ ಸುದ್ದಿ
ವಿಡಿಯೊ | ‘ನನ್ ಯಾರೂ ಟಚ್ ಮಾಡೋಕಾಗಲ್ಲ’ : ನಿತ್ಯಾನಂದನ
ಸುದ್ದಿದಿನ ಡೆಸ್ಕ್ : ಸ್ವಯಂಘೋಷಿತ ದೇವಮಾನವ ನಿತ್ಯಾನಂದ ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ…? ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋವನ್ನ ಹರಿಬಿಟ್ಟಿದ್ದಾರೆ.
ಯಾವ ಕೋರ್ಟ್ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ ನನ್ನನ್ನು ಮುಟ್ಟಲಾರರು ಎಂದಿದ್ದಾನೆ. ಅಹಮದಾಬಾದ್ ಅಪಹರಣ ಮತ್ತು ಅತ್ಯಾಚಾರ ಪ್ರಕರಣವೊಂದರಲ್ಲಿ ಗುಜರಾತ್ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಇನ್ನೂ ಇತ್ತೀಚೆಗೆ ನಿತ್ಯಾನಂದ ನಮ್ಮ ದೇಶ ಎಂದರೆ ಅದು ದೊಡ್ಡ ಹಿಂದು ರಾಷ್ಟ್ರ. ಅದರ ಹೆಸರು ಕೈಲಾಸ, ಅದಕ್ಕೆ ಗಡಿಗಳಿಲ್ಲ ಎಂದು ತನ್ನ ವೆಬ್ಸೈಟ್ನಲ್ಲಿ ನೀಡಿದ್ದ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ, ನ್ಯಾಯಾಲಯದ ಶಿಕ್ಷೆಯಿಂದ ಬಚಾವಾಗಲು ಪಾಸ್ಪೋರ್ಟ್ ಇಲ್ಲದೆ ದೇಶ ತೊರೆದಿದ್ದಾನೆ. ದಕ್ಷಿಣ ಅಮೆರಿಕದ ರಾಷ್ಟ್ರ ಈಕ್ವೆಡಾರ್ಗೆ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ದಕ್ಷಿಣ ಅಮೆರಿಕ ಈ ಮಾತನ್ನು ತಳ್ಳಿ ಹಾಕಿದೆ.
"No judiciary can touch me. M param shiva"
: #NithyanandaSwami from an undisclosed location. pic.twitter.com/WXdZ6bGCdO— Divesh Singh (@YippeekiYay_DH) November 22, 2019
ಸುದ್ದಿದಿನ.ಕಾಂ|ವಾಟ್ಸಾಪ್|9980346243