ದಿನದ ಸುದ್ದಿ

ದಾವಣಗೆರೆ | ಕಸಿ-ಸಸಿಗಳ ಸಸ್ಯಾಭಿವೃದ್ದಿ : ಸರ್ಕಾರಿ ದರದಲ್ಲಿ ಮಾರಾಟಕ್ಕೆ ಲಭ್ಯ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ಕಸಿ/ಸಸಿಗಳನ್ನು ಸಸ್ಯಾಭಿವೃದ್ದಿ ಮಾಡಿ ಸರ್ಕಾರಿ ಮಾರಾಟ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಆಸಕ್ತ ರೈತರು ಈ ಕೆಳಗಿನ ತೋಟಗಾರಿಕೆ ಕ್ಷೇತ್ರಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಕಸಿ/ ಸಸಿಗಳ ಸುದುಪಯೋಗ ಪಡೆದುಕೋಳ್ಳಬಹುದಾಗಿದೆ.

  1. ಆವರಗೊಳ್ಳ ತೋಟಗಾರಿಕ ಕ್ಷೇತ್ರದಲ್ಲಿ ನುಗ್ಗೆ, ತೆಂಗು, ಅಡಿಕೆ, ಅಲಂಕಾರಿಕ ಗಿಡಗಳು ಲಭ್ಯವಿದ್ದು ಕ್ಷೇತ್ರದ ಅಧಿಕಾರಿ ದೂರವಾಣಿ ಸಂಖ್ಯೆ: 7975479338, 9844966636 ಇವರನ್ನು ಸಂರ್ಪಕಿಸಬಹುದಾಗಿದೆ.
  2. ವ್ಯಾಸಗೊಂಡನಹಳ್ಳಿ ತೋಟಗಾರಿಕೆ ಕೇತ್ರದಲ್ಲಿ ತೆಂಗು, ಕರಿಬೇವು, ನಿಂಬೆ ಸಸಿಗಳು ಲಭ್ಯವಿದ್ದು ಕ್ಷೇತ್ರದ ಅಧಿಕಾರಿಗಳ ದೂರವಾಣಿ ಸಂಖ್ಯೆ: 9164408129 ಇವರನ್ನು ಸಂರ್ಪಕಿಸಬಹುದಾಗಿದೆ.
  3. ಬೇಲಿಮಲ್ಲೂರು ತೋಟಗಾರಿಕೆ ಕ್ಷೇತ್ರದಲ್ಲಿ ಕರಿಬೇವು, ನಿಂಬೆ, ಕಾಳುಮೆಣಸು, ಅಡಿಕೆ ಸಸಿಗಳು ಲಭ್ಯವಿದ್ದು ಕ್ಷೇತ್ರದ ಅಧಿಕಾರಿಗಳ ದೂರವಾಣಿ ಸಂಖ್ಯೆ:9731709133 ಇವರನ್ನು ಸಂರ್ಪಕಿಸಬಹುದಾಗಿದೆ.
  4. ಕಚೇರಿ ನರ್ಸರಿ ದಾವಣಗೆರೆ ಇಲ್ಲಿ ಅಡಿಕೆ, ಅಲಂಕಾರಿಕ ಸಸಿಗಳು , ಕರಿಬೇವು ಸಸಿಗಳು ಲಭ್ಯವಿದ್ದು ಕ್ಷೇತ್ರದ ಅಧಿಕಾರಿಗಳ ದೂರವಾಣಿ ಸಂಖ್ಯೆ: 9964065115 ಇವರನ್ನು ಸಂರ್ಪಕಿಸಬಹುದಾಗಿದೆ.
  5. ಗರಗ ತೋಟಗಾರಿಕೆ ಕ್ಷೇತ್ರ ಚನ್ನಗಿರಿ ಕ್ಷೇತ್ರದಲ್ಲಿ ತೆಂಗು, ಮಾವು, ನುಗ್ಗೆ, ನಿಂಬೆ, ಅಡಿಕೆ ಸಸಿಗಳು ಲಭ್ಯವಿದೆ ಕ್ಷೇತ್ರದ ಅಧಿಕಾರಿಗಳ ದೂರವಾಣಿ ಸಂಖ್ಯೆ: 9686375020 ಇವರನ್ನು ಸಂರ್ಪಕಿಸಬಹುದಾಗಿದೆ.
  6. ಬುಳ್ಳಾಪುರ ತೋಟಗಾರಿಕೆ ಕ್ಷೇತ್ರ ಹರಿಹರ ಇಲ್ಲಿ ತೆಂಗು ಖಿಘಿಆ, ತೆಂಗು ಸಸಿಗಳು ಲಭ್ಯವಿದ್ದು ಕ್ಷೇತ್ರದ ಅಧಿಕಾರಿಗಳ ದೂರವಾಣಿ ಸಂಖ್ಯೆ: 9008900370 ಇವರನ್ನು ಸಂರ್ಪಕಿಸಬಹುದಾಗಿದೆ.

ಈ ಎಲ್ಲಾ ಸಸಿಗಳು ತೋಟಗಾರಿಕೆ ಕ್ಷೇತ್ರದಲ್ಲಿ ಮಾರಾಟಕ್ಕೆ ಲಭ್ಯವಿದ್ದು ರೈತರು ಸದುಪಯೋಗ ಪಡೆದುಕೋಳ್ಳಬೇಕೆಂದು ದಾವಣಗೆರೆ ಹಿರಿಯ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version