ದಿನದ ಸುದ್ದಿ

ಪವಿತ್ರ ರಂಜಾನ್ ನ ವಿಶೇಷತೆ

Published

on

ರಂಜಾನ್ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕ್ಕೆ ,ಐಕತ್ಯೆಯನ್ನು ಸಾರುವ ಹಬ್ಬ. ತನು ಮನ ಧನ ಧಾನ್ಯ ದೇವರಿಗೆ ಅರ್ಪಿಸುವ ಮೂಲಕ ಪಾಪವನ್ಮು ದೂರಮಾಡುವ ಮುಸ್ಲಿಂ ಧರ್ಮದ ಶ್ರೇಷ್ಠ ಹಬ್ಬ ಪವಿತ್ರ ಶ್ರದ್ಧಾ ಭಕ್ತಿಯ ಅಲ್ಲಾನ ನಾಮ ಸ್ಮರಣೆಯ ಹಬ್ಬ ಈ ರಂಜಾನ್. ಉಪವಾಸ ವೃತ್ತ ಜಪವನ್ನು ಮಾಡುತ್ತಾ. ರಂಜಾನ ತಿಂಗಳಲ್ಲಿ ಮುಸ್ಲಿಂ ಭಾಂದವರು ಉಪವಾಸ ಇದು ಪ್ರಾರ್ಥನೆ ಮಾಡ್ತಾರೆ. ಸದ್ಕಾ ಫಿತ್ರಾ ಜಕಾತ್ ಎಂಬ ಅನೇಕ ನಿಯಮಗಳನ್ನು ಪಾಲಿಸುವ ಮೂಲಕ ಒಳ್ಳೆಯ ಮಾರ್ಗದಲ್ಲಿ ಸಾಗಲು ದೇಹವನ್ನು ಶುದ್ಧವಾಗಿ ಇಟ್ಟುಕೊಳ್ಳಲು ಸಂಪ್ರಾದಯಿಕವಾಗಿ ಆಚರಿಸುವ ಹಬ್ಬವೇ ಈ ರಂಜಾನ್.

ಪ್ರತಿಯೊಬ್ಬ ಮುಸ್ಲಿಂ ಸ್ನೇಹಿತರು ತನ್ನ ಇಂದ್ರಿಯಗಳನ್ನು ಬಲಪಡಿಸಿಕೊಳಲು ಅಂಗಾಗಳನ್ನು ನಿಯಂತ್ರಣದಲ್ಲಿಟುಕೊಳ್ಳಲು ಮುಸ್ಲಿಂ ಬಾಂಧವರು ದಿನನಿತ್ಯ ರೋಜಾ ಎಂಬ ಹೆಸರಿನಲ್ಲಿ‌ ಕಡ್ಡಯವಾಗಿ ಉಪವಾಸ ಇರುತ್ತಾರೆ. ಕೇವಲ ದೇಹವನ್ನು ಮಾತ್ರ ಉಪವಾಸ ಮಾಡುದಲ್ಲದೆ ಶಾರೀಕವಾಗಿ ಮಾನಸಿಕವಾಗಿಯು ಸಹ ಮನಸ್ಸಲಿ‌ ಯಾವುದೇ ಕಲ್ಮಶಗಳಿಲ್ಲದೆ. ಕೆಟ್ಟದನ್ನು ನೋಡದೆ ಕೆಟ್ಟದನ್ನು ಮಾತನಾಡದೇ ಕೆಟ್ಟದನ್ನು ಆಲೋಚಿಸದೆ .ತಪ್ಪು ಮಾರ್ಗವನ್ನು ಮೂಲೆಗೆ ಕಟ್ಟಿ.ತಮ್ಮ ಎಲ್ಲಾ ಅಂಗಾಗಗಳನ್ನು ಸಹ ಪರಿಪೂರ್ಣವಾಗಿ ಶುದ್ಧವಾಗಿಟುಕೊಂಡು ರೋಜಾ ಎಂಬ ಪದಕ್ಕೆ ಭಾವಪೊರ್ಣವಾಗಿ ಜೀವ ತುಂಬುತ್ತಾರೆ.

ರಂಜಾನ್ ತಿಂಗಳಿನಲ್ಲಿ ರೋಜಾ ಮಾಡುವಾಗ ದಿನನಿತ್ಯ ಸೊರ್ಯ ಹುಟ್ಟವ ಮುಚಿಂತವಾಗಿ 4 ಘಂಟೆ ಗೆ ಎದ್ದು ಉಪವಾಸ ಪ್ರಾರಂಭಿಸುವ ಮೂಲಕ ಸಂಜೆ 7 ಘಂಟೆ ವರೆಗು ಒಂದು ತೊಟ್ಟು ನೀರು ಕುಡಿಯದೇ ಭಕ್ತಿಯಿಂದ ಅಲ್ಲಾಹುವಿನ ಜಪ‌‌ ಮಾಡುತ್ತಾರೆ. ನೀರಷ್ಟೆ ಅಲ ಬಾಯಲಿರುವ ಉಗಳನ್ನು ಸಹ ನುಂಗದೆ ಧಾರ್ಮಿಕ ವಿಧಿ ವಿಧಾನ ಗಳಿಂದ ಪ್ರಾರ್ಥನೆ ಮಾಡುವ ಮೂಲಕ ನಿರಂತರವಾಗಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ದೊಡ್ಡವರುವಚಿಕ್ಕವರು ಮಹಿಳೆಯರು ಸೇರಿದಂತೆ ಎಂತಹ ಕಷ್ಟ ಬಂದರು ಅಂದಿನ ಉಪವಾಸ ಪರಿಪೂರ್ಣಗೊಳಿಸುತ್ತಾರೆ. ಎಷ್ಟೋ ಬಾರಿ ರೋಜಾ ಹೊತ್ತಿನಲ್ಲಿರುವಾಗ ಉಪವಾಸ ಮುರಿಯದ್ದೆ ಪ್ರಾಣ ಬಿಟ್ಟಿದ್ದಾರೆ ಮತ್ತು ಪ್ರಾಣ ಉಳಿಸ್ಸಿದ್ದಾರೆ.ಇವರು ದಿನ ನಿತ್ಯ 5 ಹೊತ್ತು ನಮಾಜ್ (ಪ್ರಾರ್ಥನೆ)
ಮಾಡುತ್ತಾರೆ. ವಿಶೇಷ ಅಂದರೆ ಹಬ್ಬದ ಕೊನೆಯದಿನಗಳ ಮುಂಚಿತವಾಗಿ ಪ್ರತಿಯೊಬ್ವರು ಗೋಧಿ ಅಕ್ಕಿ ಅಥವಾ ಧನ ಸಹಾಯ ನೀಡುವುದು ಕಡ್ಡಾಯ ವಾಗಿರುತ್ತದೆ.

ಜಕಾತ್ ಹೆಸರಿನಲ್ಲಿ ಆರ್ಥಿಕವಾಗಿ ಮುಂದಿರುವ ವ್ಯಕ್ತಿ ನ್ಯಾಯಮಾರ್ಗದಲ್ಲಿ ಸಂಪಾದನೆ ಮಾಡಿದ ಹಣದಲ್ಲಿ ಕಡುಬಡವರಿಗೆ ಸಹಾಯ ಮಾಡುವುದು‌. ಇಸ್ಲಾಂ ಧರ್ಮದಲ್ಲಿ ಕಡ್ಡಾಯ. ಅಲ್ಲಾನ ಅದೇಶದಂತೆ “ಜೆವರಿಲ” ಎಂಬ ದೇವದೊತನ ಮುಖಾಂತರ ಮಹ್ಮದ್ ಪೈಗಂಬರರ ಮೇಲೆ‌ ರಂಜಾನ್ ತಿಂಗಳು ಪ್ರತಿಷ್ಟಿತ ರಾತ್ರಿಯಂದು ಮುಸ್ಲಿಂ ಪವಿತ್ರ ಗ್ರಂಥ ಖುರಾನ್ ಅವತೀರ್ಣವಾಗುತ್ತದೆ.ಈ ರಾತ್ರಿಗೆ ಮುಸ್ಲಿಂ ಮೇಧಾವಿಗಳು ಇದನ್ನು ” ಶಬ್ – ಏ- ಕದರ್” ಪ್ರತಿಷ್ಟಿತ ರಾತ್ರಿ ಎಂದು ಕರೆಯುತ್ತಾರೆ. ಲೋಕ ಕಲ್ಯಾಣಕ್ಕಾಗಿ ರಾತ್ರಿ ಇಡೀ ವಿಶೇಷ ಪ್ರಾರ್ಥನೆ ಮಾಡುತ್ತಾರೆ. ಹೀಗೆ ತಮ್ಮಪವಿತ್ರ ರಂಜಾನ್ ರೋಜವನ್ಮು ಮಾಡಿ ಹಬ್ಬದ ದಿನಸಲದಲಿ ಎಲ್ಲರ ಮನೆಯಲ್ಲಿಯು ಸಹ ಹೊಸ ಬಟ್ಟೆ ಹೊಸ ವಸ್ತು ಹೊಸ ಅಡುಗೆ ಅಲಂಕಾರ ಮಾಡಿ .ಅಂದಿನ‌ ಕೊನೆಯ ದಿನ ಭಕ್ತಿಪೂರ್ವಕವಾಗಿ ರೋಜ್ ವನ್ಮು ಮುರಿದು ಅಲ್ಲನ ಪಾದಕ್ಕೆ ನಮೀಸುತ್ತಾರೆ.ಹಿಂದೊ ಮುಸ್ಲಿಂ ಎಂಬ ಬೇಧ ಭಾವ ಇಲ್ಲದೆ ಹೃದಯ ಪೂರ್ವಕವಾಗಿ ಅಪೂಗೆ ಕೊಡುತ್ತಾ ಮನೆಗೆ ಸ್ವಾಗತಿಸುತ್ತಾರೆ.ಇದು ಪವಿತ್ರ ರಂಜಾನ್ ನ ವಿಶೇಷ ತೆ .

ಪತ್ರಕರ್ತ
ರಾಯಚೂರು                      ಸುದ್ದಿದಿನ.ಕಾಂ|                ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version