ಬಹಿರಂಗ
ರಾವಣ ದುಷ್ಟನೇ..? ಯಾಕೆ ವೈದಿಕರು ಅವನನ್ನು ದ್ವೇಷಿಸುತ್ತಾರೆ..?
- ವಿ.ಎಸ್.ಬಾಬು
ಒಂದು ಜನಾಂಗವನ್ನು ನಾಶ ಮಾಡಬೇಕಾದರೆ ಮೊದಲು ಆ ಜನಾಂಗದ ಆಹಾರ ಪದ್ಧತಿಗಳನ್ನು ಆಚಾರಗಳನ್ನು, ಅವರಾಡುವ ಭಾಷೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕು. ಇವೆಲ್ಲಕ್ಕೂ ಮೊದಲು ಆ ಜನಾಂಗ ರಾಜಕೀಯ ಅಧಿಕಾರವನ್ನು ಕಳೆದುಕೊಳ್ಳಬೇಕು! ಹೀಗೆ ತಮ್ಮೆಲ್ಲ ವೈಭವ ಅಂತಸ್ತು, ಅಧಿಕಾರವನ್ನು ಕಾಲಕ್ರಮೇಣ ಕಳೆದುಕೊಂಡು ಹೀನಾಯ, ಅಸ್ಪೃಶ್ಯ ಸಮಾಜವಾಗಿ ಮಾರ್ಪಾಡಾಗಿದ್ದು ನಾಗ ಜನಾಂಗ! ಈ ಜನಾಂಗದವರೇ ಅಸುರರು, ರಾಕ್ಷಸರು, ದೈತ್ಯರು ಎಂಬ ಪ್ರಬಲ ಗಣಗಳು! ಇವರ ಪಳೆಯುಳಿಕೆಗಳೇ ಇಂದು ನಾವು ನೋಡುತ್ತಿರುವ ಇಲ್ಲಿನ ಮೂಲನಿವಾಸಿಗಳು; ಅಂದರೆ ಅಸ್ಪೃಶ್ಯರು. ಶೂದ್ರರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು!
ಇದೇ ನಾಗ ಜನಾಂಗದ ಪ್ರಬಲ ದೊರೆ, ಮಹಾನ್ ಬೌದ್ಧ ಭಿಕ್ಕು, ಅಹಿಂಸಾವಾದಿ, ಮಹಾಜ್ಞಾನಿ, ರಾಕ್ಷಸ ಗಣದ ನಾಯಕ, ಅಮೋಘ ಸಂಗೀತಕಾರ, ಚಕ್ರವರ್ತಿ ರಾವಣನನ್ನು ಪರಿಚಯ ಸದ್ಯದ ಅಗತ್ಯವಾಗಿದೆ. ದುರಂತವೆಂದರೆ ದಸರಾ ಉತ್ಸವದ ಸಮಯದಲ್ಲಿ ಉತ್ತರ ಭಾರತದ ದೆಹಲಿಯಲ್ಲಿ ರಾಮಲೀಲಾ ಹಾಡುವಾಗ ರಾವಣ, ಕುಂಭಕರ್ಣ, ಮೇಘನಾದ ಇವರುಗಳ ಪ್ರತಿಕೃತಿಗಳನ್ನು ಸುಟ್ಟರು. ಇದು ಇನ್ನೂ ಬೇರೆ ಬೇರೆ ರಾಜ್ಯಗಳಲ್ಲೂ ಸಹ ನಡೆಯುತ್ತದೆ! ಇದರಲ್ಲಿ ಖುದ್ದು ಭಾಗವಹಿಸಿ ನೂರಾರು ಮನುವಾದಿಗಳು ಆನಂದ ವ್ಯಕ್ತಪಡಿಸಿದರು. ಏಕೆಂದರೆ ಅವರಿಗೆ ತಮ್ಮ ಇತಿಹಾಸದ ಪ್ರಜ್ಞೆಯಿದೆ! ಆದರೆ ನಮ್ಮ ಪೂರ್ವಿಕನಾದ ರಾವಣನನ್ನು ನಾವೇ ಸುಟ್ಟು ಆನಂದಿಸುತ್ತೇವಲ್ಲ ಇದೇನಿದು ನಮ್ಮ ದುರಂತ? ಯಾರು ಆ ರಾವಣ?
[Dr.K. Jamnandas ರವರ #Ravana_A_Nonvoilent_Gana_Nayaka_Chief_of_Republics_contemporary_with_the_Buddha ಎನ್ನುವ ಲೇಖನದಲ್ಲಿ ಅಧ್ಯಾಯ 6] ರಾವಣನನ್ನು ಗೌತಮ ಬುದ್ಧರ ಸಮಕಾಲೀನ ಎಂದಿದ್ದಾರೆ!
ಆರ್ಯ ಕುಲಪ್ರವರ್ತಕರಿಗೆ ಇತಿಹಾಸ ಪ್ರಜ್ಞೆಯಿದೆ. ಅವರಿಗೆ ರಾವಣನನ್ನು ತಾವು ಏಕೆ ಸುಟ್ಟಿದ್ದು ಎಂಬ ಅರಿವಿದೆ. ಆದರೆ ಅವರ ಜೊತೆ ಸೇರಿ ಇಲ್ಲಿನ ಮೂಲನಿವಾಸಿಗಳು ರಾವಣನನ್ನು ತಮ್ಮ ಕೈಯಾರೆ ತಮ್ಮ ಹಿರಿಯರನ್ನೆ ತಮ್ಮ ಪೂರ್ವಿಕರನ್ನೆ ಸುಡುತ್ತಿದ್ದಾರಲ್ಲ, ಇದನ್ನು ನೋಡಿ ಅಥವಾ ದುಃಖವಾಗುತ್ತಿದೆ. “ರಾವಣ, ಕುಂಭಕರ್ಣರನ್ನು ನಾವು ಯಾಕೆ ಸುಡುತ್ತೇವೆ” ಎಂಬ ಪ್ರಜ್ಞೆಯಿಲ್ಲ ! ಮೇಲುನೋಟಕ್ಕೆ “ರಾವಣ ಕೆಟ್ಟವನು ರಾಮ ಒಳ್ಳೆಯವನು” ಎಂದಷ್ಟೇ ತಿಳಿದಿರುವ ನಮಗೆ “ರಾವಣ ಯಾರು? ಯಾಕೆ ವೈದಿಕರು ಅವನನ್ನು ದ್ವೇಷಿಸುತ್ತಾರೆ?” ಎಂಬುದರ ಅರಿವಿಲ್ಲ ! ಬಂಧುಗಳೇ ಬನ್ನಿ ಮಹಾನ್ ನಾಯಕ ರಾವಣನನ್ನು ಪರಿಚಯ ಮಾಡಿಕೊಳ್ಳೋಣ.
ರಾವಣನು ಪುಲಸ್ತ್ಯ ವಂಶದ ವಿಶ್ರವಸುವಿನ ಮೊಮ್ಮಗ. ಪುಲಸ್ತ್ಯ ವಂಶದ ಅಸುರರು ಜಗತ್ತಿನ ನಾನಾ ಭಾಗಗಳಲ್ಲಿ ಆಳ್ವಿಕೆ ಮಾಡಿದವರು! ಸೋಮಾಲಿಯಾ, ಮಾಲ್ಡೀವ್ಸ್, ಸುಮಾತ್ರ, ಜಾವಾ, ಸಿಂಹಳ, ಕೊಂಕಣ ಮುಂತಾದ ಕಡೆಗಳಲ್ಲಿ ರಾಜ್ಯಭಾರ ಮಾಡಿದ ಇವರನ್ನು “ಅಸುರ ಸಾಮ್ರಾಟರು” ಎಂದು ಕರೆಯುತ್ತಿದ್ದರು. ಆದಿವಾಸಿಗಳ ಕುಲಗಳು ಪ್ರಾಣಿ, ಪಕ್ಷಿ, ಮರ ಇವುಗಳ ಹೆಸರುಗಳನ್ನು ಹೊಂದಿದ್ದವು. ಆದಿವಾಸಿ ಭಾಷೆಯಲ್ಲಿ ‘ಪುಲೈ’ ಎಂದರೆ ‘ಸಿಂಹ’ ಎಂದು ಹೆಸರು. ಪುಲಸ್ತ್ಯ ವಂಶವು ಪುಲೈ ಎಂದು ಹೆಸರು ಪಡೆದಿತ್ತು. ಪ್ರಕೃತಿಯ ಆರಾಧಕನಾದ ರಾವಣನನ್ನು ವಾಲ್ಮೀಕಿಯೇ ಸ್ವತಃ ‘ಮಹಾತ್ಮ’ ಎಂದು ಕರೆದಿದ್ದಾನೆ.
ತೃಣಬಿಂದು ಪುಲಸ್ತ್ಯ ನ ಹೆಂಡತಿ. ವಿಶ್ರವಸುವಿನ ಹೆಂಡತಿ ಕೇಕಯ, ಆಕೆ ರಾವಣನ ತಾಯಿ. ವಿಶ್ರವಸುವಿನ ಇನ್ನೊಂದು ಹೆಸರು ಕುಬೇರ ವಿರೇಂದು. ಇವನ ಮಗನೇ ರಾವಣ! ರಾವಣನ ಪೂರ್ತಿ ಹೆಸರು ಏನು ಎಂಬುದನ್ನು [ರಾಮದೇವ್ ಪಾಸ್ವಾನರ ಪುಸ್ತಕ “ಭಾರತ್ ಸೆ ಆರ್ಯರಲ್ಲಿ ರಾ ಜುನೇರ್ ವ ರೇಂದು ನ ರೇಂದರ್ ಎಂದು ಹೇಳಿದೆ.] ಇದರ ಸಂಕ್ಷಿಪ್ತ ರೂಪ (Ra Va Na) ರಾವಣ!
ಚಂದ್ರಿಕ ಪ್ರಸಾದ್ ಜಿದ್ನಾಸು ಎಂಬ ಪ್ರಸಿದ್ಧ ಇತಿಹಾಸಕಾರರು ‘ರಾವಣನ ಗೋಂಡ ಆದಿವಾಸಿ ಕುಲಕ್ಕೆ ಸೇರಿದವನು ಮತ್ತು ಅವನ ಆಡಳಿತ ಭಾರತ ದೇಶದ ಮಧ್ಯಭಾಗದಿಂದ ಸಿಂಹಳದವರೆಗೂ ಹಬ್ಬಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.
[ಪೂರ್ಣಲಿಂಗಮ್_ಪಿಳ್ಳೆ ಎಂಬ ಇತಿಹಾಸಕಾರರು ತಮ್ಮ ‘ರಾವಣ ದ ಕಿಂಗ್ ಆಫ್ ಲಂಕಾ’ ಎಂಬ ಕೃತಿಯಲ್ಲಿ Ravana is represented as the Titanic. Inotherwords the auntibrahmnical aboriginal fetish worshipping monarch of Lanka of Ceylon’ ಎಂದಿದ್ದಾರೆ.]
ಮೂಲತಃ ರಾವಣ ಪ್ರಕೃತಿ ಆರಾಧಕನಾಗಿದ್ದು ಆರ್ಯರು ನಡೆಸುತ್ತಿದ್ದ ಯಜ್ಞಯಾಗಗಳನ್ನು ಸರ್ವನಾಶ ಮಾಡಿ ಸಾವಿರಾರು ಗಿಡಮರಗಳನ್ನು, ಪ್ರಾಣಿಗಳನ್ನು ರಕ್ಷಿಸುವುದಕ್ಕೆಂದೇ ಪ್ರಬಲ ದೈತ್ಯ ಸೇನೆಯನ್ನು ಹೊಂದಿದ್ದ. ಆರ್ಯರು ತಯಾರಿಸುತ್ತಿದ್ದ ಹೇರಳ, ‘ಮಧುಪರ್ಕ’ವನ್ನು ಭೂಮಿಗೆ ಚೆಲ್ಲಿ ಅವರಿಗೆ ದಕ್ಕದಂತೆ ಮಾಡಿ ಗೋಬ್ರಾಹ್ಮಣರನ್ನು ಕಾಡಿನಿಂದ ಅಟ್ಟಿಸಿಕೊಂಡು ಹೋಗಲೆಂದೇ ಸಾವಿರಾರು ಅಸುರರನ್ನು ನೇಮಿಸಿದ್ದ ! ಸದಾ ಕಾಲವೂ ಎಚ್ಚರವಾಗಿದ್ದು ರಾತ್ರಿ ವೇಳೆ ಬೆಳಗು ಹಸುಗಳನ್ನು, ಕುದುರೆಗಳನ್ನು, ಆಡುಗಳನ್ನು, ಕುರಿಗಳನ್ನು ಈ ಋಷಿ-ಮುನಿಗಳು ಕದ್ದು ತಮ್ಮ ಆಶ್ರಮಗಳಲ್ಲಿ ಕಟ್ಟಿಕೊಳ್ಳುತ್ತಿದ್ದವದನ್ನು ತಪ್ಪಿಸಲು ಅಸುರರು ನಾನಾ ಸಾಹಸಗಳನ್ನು ಮಾಡಬೇಕಾಗಿತ್ತು. ಕಾಡಿನಲ್ಲಿ ಆರ್ಯರು ಅಳೆಯುತ್ತಿದ್ದುದು, ಋಷಿಗಳು ಕಾಡಿನಲ್ಲಿ ವಾಸವಾಗಿದ್ದುದು ಎಲ್ಲವೂ ಆಹಾರಕ್ಕೆ ಹೊರತು ಯಾವ ಧರ್ಮ ರಕ್ಷಣೆಗೂ ಅಲ್ಲ. ಆರ್ಯರಿಗೆ ಉನ್ನತಮಟ್ಟದ ಜೀವನದ ಕಲ್ಪನೆಯೇ ಇರಲಿಲ್ಲ ! ಆ ರೀತಿ ಭವ್ಯ ಬದುಕನ್ನು ಬದುಕಿದವರು ಅಸುರರು; ಇಲ್ಲಿನ ಮೂಲನಿವಾಸಿಗಳು!
ಮರಾಠಿ ವಿಶ್ವಕೋಶ ಪುಟ 781 ರಲ್ಲಿ ವಿಶ್ವಾಮಿತ್ರನ ಯಜ್ಞ ಮಾಡುತ್ತಿದ್ದಾಗ ಇದನ್ನು ನಾಶಪಡಿಸಲು ಮಾರೀಚ ಮತ್ತು ಸುಬಾಹು ಎಂಬ ಅಸುರರು ಬಂದಾಗ ಅವರನ್ನು ಅಟ್ಟಿಸಿಕೊಂಡು ಹೋದವರು ರಾಮ ಲಕ್ಷ್ಮಣರು ಎಂಬ ಉಲ್ಲೇಖವಿದೆ! ರಾಮ ಲಕ್ಷ್ಮಣ ಕಾಡಿಗೆ ಬಂದದ್ದು ಅಸುರರನ್ನು ಹಾಳುಮಾಡಲು ಮತ್ತು ಋಷಿಗಳಿಗೆ ಯಜ್ಞದಲ್ಲಿ ನೆರವಾಗಲೇ ಹೊರತು ಇನ್ಯಾವ ಲೋಕ ಕಲ್ಯಾಣಕ್ಕಾಗಲಿ ಅಲ್ಲ ! ಯಾಗಗಳನ್ನು ನಾಶಮಾಡಿದ ಅಸುರರನ್ನು ಮನಬಂದಂತೆ ಹೀಯಾಳಿಸುವ ಆರ್ಯರು ಜಗತ್ತಿನ ಪ್ರಥಮ ಜೀವವಿರೋಧಿಗಳು! ಮೂಲನಿವಾಸಿಗಳ ಬದುಕು, ಸಂಸ್ಕೃತಿಯನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ರಾವಣ ಆರ್ಯರ ವೈರಿಯಾಗಿದ್ದುದು ಸರಿ! ಇದರಲ್ಲಿ ತಪ್ಪೇನು? [ಚಾತುರ್ಸೇ ನ್ ಎಂಬ ಲೇಖಕರ ಕೃತಿ “Wayam Raksham” ನಲ್ಲಿ ರಾಕ್ಷಸರು Wayam Rakshan ಎನ್ನುವ ರಕ್ಷಕರನ್ನು ಹೊಂದಿದ್ದು, ಅವರು ಯಜ್ಞಗಳನ್ನು ನಾಶಪಡಿಸುವ ಕೆಲಸವೊಂದನ್ನೇ ಮಾಡುತ್ತಿದ್ದರು ಎಂದು ಹೇಳಿದ್ದಾರೆ!]
‘Wayam Raksham’ ಎಂದರೆ ‘We Protect’ ಎಂದು ಅರ್ಥ.
ಮುಂದುವರೆಯುವುದು…..
ಸುದ್ದಿದಿನ.ಕಾಂ|ವಾಟ್ಸಾಪ್|9980346243