ದಿನದ ಸುದ್ದಿ
ಉತ್ತರ ಕರ್ನಾಟಕ ಸಂತ್ರಸ್ತರಿಗೆ ‘ರವಿ ಚನ್ನಣ್ಣನವರ್’ ಸಹಾಯ, ಟೀಂ ಜೊತೆ ಸೇರಿ 7 ಲಕ್ಷ ಸಂಗ್ರಹ..!
ಸುದ್ದಿದಿನ, ಬೆಂಗಳೂರು : ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಸಹಾಯಕ್ಕ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಮತ್ತು ಅವರ ಟೀಂ ಮುಂದಾಗಿದೆ. ಬರೋಬ್ಬರಿ 7 ಲಕ್ಷ ರೂಪಾಯಿ ಮೌಲ್ಯದ ದಿನ ಬಳಕೆ ಸಾಮಾಗ್ರಿಗಳನ್ನ ಬೆಳಗಾವಿಗೆ ಕಳುಹಿಸಲು ರವಿ.ಡಿ.ಚನ್ನಣ್ಣನವರ್ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ನೆಲಮಂಗಲ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ ಸಂಗ್ರಹಿಸಿದ್ದ 7ಲಕ್ಷ ರೂಪಾಯಿಗಳ ದಿನ ಬಳಕೆ ಸಾಮಾಗ್ರಿಗಳನ್ನ ಎರಡು ಲಾರಿಗಳ ಮೂಲಕ ಬೆಳಗಾವಿಗೆ ಕಳುಹಿಸುವುದಕ್ಕೆ ರವಿ.ಡಿ.ಚನ್ನಣ್ಣನವರ್ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಮೂಲಕ ಕರ್ನಾಟಕದ ನೆರೆ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಿ ದೇಣಿಗೆ ಸಂಗ್ರಹಿಸಿ ತಲುಪಿಸುತ್ತಿದ್ದಾರೆ.
ಕೃಪೆ : ಉದಯ ಕಾಲ ನ್ಯೂಸ್
ಸುದ್ದಿದಿನ.ಕಾಂ|ವಾಟ್ಸಾಪ್|9980346243