ರಾಜಕೀಯ
ನಾನು ಬಿಜೆಪಿಯಲ್ಲಿ ಶಕ್ತಿಶಾಲಿಯಾಗಿ ಬೆಳೆದಿದ್ದೇನೆ : ಶ್ರೀರಾಮುಲು
ಸುದ್ದಿದಿನ,ಕೊಪ್ಪಳ : ಶ್ರೀರಾಮುಲು ಎಂಬ ವ್ಯಕ್ತಿಯಾದ ನಾನು ಬಿಜೆಪಿಯಲ್ಲಿ ಶಕ್ತಿಶಾಲಿಯಾಗಿ ಬೆಳೆದಿದ್ದೇನೆ ಎಂದು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾದಲ್ಲಿ ಶ್ರೀರಾಮುಲು ಹೇಳಿದರು.
ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಮಲು ಮಾತನಾಡಿ, ಯಾರೂ ತೇಜೋವಧೆ ಮಾಡುವ ಕೆಲಸ ಮಾಡಬಾರದು. ರಾಮುಲು ಎಂದರೆ ಕಾಂಗ್ರೆಸ್ ನಾಯಕರು ನಡುಗುತ್ತಾರೆ.ಜನಾರ್ದನ ರೆಡ್ಡಿ ಬಂಧನದಲ್ಲಿ ಸರ್ಕಾರ ಕೈವಾಡವಿದೆ.ಸರ್ಕಾರ ಉದ್ದೇಶಪೂರಕವಾಗಿ ಜನಾರ್ದನ ರೆಡ್ಡಿ ಬಂಧಿಸಿದೆ. ಸಿಎಂ ಕುಮಾರಸ್ವಾಮಿ ರಾಜಕೀಯ ರಿವೇಂಜ್ ತೀರಿಸಿಕೊಳ್ಳುತ್ತಿದ್ದಾರೆ ಎಂದರು.
ಜನಾರ್ದನ ರೆಡ್ಡಿ ಬಂಧನದ ವಿಷಯದಲ್ಲಿ ಬಿಜೆಪಿ ಸ್ಪಂಧಿಸಿದೆ.ಎಲ್ಲರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.ಬಿಎಸ್ ವೈ, ಜಗದೀಶ್ ಶೆಟ್ಟರ್ ಎಲ್ಲರೂ ಜನಾರ್ಧನರೆಡ್ಡಿ ವಿಷಯದಲ್ಲಿ ಮಾತನಾಡಿದ್ದಾರೆ ಎಂದರು ಶ್ರೀರಾಮಲು.
ಸುದ್ದಿದಿನ.ಕಾಂ|ವಾಟ್ಸಾಪ್|9986715401