ದಿನದ ಸುದ್ದಿ
ಸಿದ್ದರಾಮಯ್ಯರ ದೇವಸ್ಥಾನ ಕಟ್ಟಿಸುತ್ತೇವೆ : ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಸುದ್ದಿದಿನ, ಬಾಗಲಕೋಟೆ : ಸಿದ್ದರಾಮಯ್ಯ ಅವರು ನಮ್ಮ ನಾಲ್ಕು ದಶಕಗಳ ಕಾಲದ ಬೇಡಿಕೆಯನ್ನು ಈಡೇರಿಸಿದರೆ ಅವರ ದೇವಸ್ಥಾನವನ್ನು ಕಟ್ಟುತ್ತೇವೆ ಎಂದು ಬೋವಿ ಸಮಾಜದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಗುರುವಾರ ಬದಾಮಿಯಲ್ಲಿ ನಡೆದ ಸಿದ್ದರಾಮೇಶ್ವೇರ ಜಯಂತಿಯ ವೇಳೆ ಮಾತನಾಡಿದ ಅವರು,ಸರ್ಕಾರಿ ಸುಮಾರು ನೋರು ಕುಟುಂಬಗಳಿದ್ದು, ಅವರನ್ನು ಆ ಸ್ಥಳದಿಂದ ತೆರವುಗೊಳಿಸಲಾಗುತ್ತಿದೆ. ಈ ವಿಷಯಕ್ಕೆ ಸಂಭಂದಿಸಿದಂತೆ ಅದೇ ಜಾಗದಲ್ಲಿ ಅವರಿಗೆ ಸೂರುಗಳನ್ನು ಕಲ್ಪಿಸಿ ಕೊಟ್ಟರೆ ಸಿದ್ದರಾಮಯ್ಯ ಅವರ ದೇವಸ್ಥಾನವನ್ನು ಬಾದಾಮಿಯಲ್ಲಿ ಕಟ್ಟಿಸುತ್ತೇವೆ ಎಂದು ಸ್ವಾಮೀಜಿ ತಿಳಿಸಿದರು.
ಬಾದಾಮಿಯಲ್ಲಿ ಇಂದು ಆಯೋಜಿಸಿದ್ದ ಬಾಗಲಕೋಟೆ ಜಿಲ್ಲಾ ಮಟ್ಟದ ಗಂಗಾ ಮತಸ್ಥ ಅಂಬಿಗರ ಸಮಾವೇಶದಲ್ಲಿ ಭಾಗವಹಿಸಿದೆ. pic.twitter.com/E60w4vypc5
— Siddaramaiah (@siddaramaiah) February 21, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401