ದಿನದ ಸುದ್ದಿ

ನಿಮ್ಮ ಪ್ರಶ್ನೆಗೆ ಉತ್ತರಿಸಲು ‘ನಾಳೆ ಟ್ವಿಟರ್ ನಲ್ಲಿ ಲೈವ್’ ಬರಲಿದ್ದೇನೆ ; ಸಂವಾದದಲ್ಲಿ ಭಾಗವಹಿಸಿ : ಸಿದ್ದರಾಮಯ್ಯ

Published

on

ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆ ರಂಗೇರಿರುವ ಈ‌ ಸಂಧರ್ಭದಲ್ಲಿ, ರಾಜಕೀಯವಲಯದಲ್ಲಿ ಎಲ್ಲಿಲ್ಲದ ಚಟುವಟೆಕೆ ಗರಿಗೆದರಿದೆ. ಪಕ್ಷಗಳ ನಾಯಕರು ತಮ್ಮವಿರೋಧಿ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಈ ಚುನಾವಣಾ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ನಾಳೆ ಮಾರ್ಚ್ 26 (ನಾಳೆ) ನೇರ ಪ್ರಸಾರದಲ್ಲಿ ಮಾತುಕತೆ ಗೆ ಬರಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಹೀಗಿದೆ, “ಮಾರ್ಚ್ 26 ರಂದು ಮಧ್ಯಾಹ್ನ 2:30ಕ್ಕೆ ನಾನು ಟ್ವಿಟ್ಟರ್ ಲೈವ್‌ನಲ್ಲಿ ನಿಮ್ಮೊಂದಿಗೆ ಸಂವಾದ ನಡೆಸಲಿದ್ದೇನೆ.
ನಿಮ್ಮ ಪ್ರಶ್ನೆಗಳನ್ನು #ಸಿದ್ದರಾಮಯ್ಯನವರಿಗೆನಿಮ್ಮಪ್ರಶ್ನೆ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಕೇಳುವುದರ ಮೂಲಕ ಸಂವಾದದಲ್ಲಿ ಭಾಗವಹಿಸಿ.
ಧನ್ಯವಾದಗಳು” ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version