ರಾಜಕೀಯ
ಉಮೇಶ್ ಜಾಧವ್ ಮೇಲೆ ಮತ್ತೆ ಕೇಸ್ : ಸಿದ್ದರಾಮಯ್ಯ ಕಿಡಿ
ಸುದ್ದಿದಿನ, ಮಂಗಳೂರು: ಉಮೇಶ್ ಜಾಧವ್ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಸ್ಪೀಕರ್ ರಾಜೀನಾಮೆ ಪರಿಶೀಲನೆ ನಡೆಸುತ್ತಿದ್ದಾರೆ. ನಾವು ಜಾಧವ್ ಸೇರಿ ನಾಲ್ಕು ಜನರ ಮೇಲೆ ಪಿಟಿಷನ್ ಹಾಕಿದ್ದೇವೆ. ಪಿಟಿಷನ್ ಇನ್ನೂ ಪೆಂಡಿಂಗ್ ಇದೆ. ಬಿಜೆಪಿ ಸಮಾವೇಶದಲ್ಲಿ ಭಾಗವಹಿಸೋದು ಅಪರಾಧ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಮಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ರಾಜೀನಾಮೆ ಅಂಗೀಕಾರವಾಗದೇ ಬಿಜೆಪಿ ಸಮಾವೇಶದಲ್ಲಿ ಹೇಗೆ ಭಾಗವಹಿಸುತ್ತಾರೆ..?. ಕಾಂಗ್ರೆಸ್ MLA ಆಗಿ ಸಮಾವೇಶ ಭಾಗಿಯಾಗಿದ್ದಾರೆ. ಜಾಧವ್ ಮೇಲೆ ಮತ್ತೆ ಕೇಸ್ ಬಗ್ಗೆ ಚಿಂತಿಸಲಾಗುವುದು ಎಂದು ಕಿಡಿಕಾರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401