Connect with us

ಸಿನಿ ಸುದ್ದಿ

ಸದ್ಯ ಎಲ್ಲರ ಗಮನವೂ ದಕ್ಷಿಣದತ್ತ..!

Published

on

  • ಚೇತನ್ ನಾಡಿಗೇರ್

ಳೆದ ಐದು ತಿಂಗಳಲ್ಲಿ ದಕ್ಷಿಣದ ಮೂರು ಚಿತ್ರಗಳು ಜಗತ್ತಿನಾದ್ಯಂತ ಸುದ್ದಿ ಮಾಡಿದ್ದೇ ಮಾಡಿದ್ದು, ಹಿಂದಿ ಮತ್ತು ದಕ್ಷಿಣ ಭಾರತದ ಚಿತ್ರರಂಗಗಳ ಕುರಿತು ದೊಡ್ಡ ಚರ್ಚೆ ನಡೆಯುತ್ತಿದೆ. ಬಾಲಿವುಡ್ನವರಿಗೆ ಚಿತ್ರ ಮಾಡುವುದಕ್ಕೆ ಬರುವುದಿಲ್ಲ, ಅಲ್ಲಿನ ಸ್ಟಾರ್ಗಳಿಗೆ ಅಹಂಕಾರ ಹೆಚ್ಚಿದೆ.

ಹಿಂದಿ ಚಿತ್ರಗಳು ಬಹಳ intellectual ಅಥವಾ class ಆಗುತ್ತಿರುವುದರಿಂದ ಎಲ್ಲರಿಗೂ ತಲುಪುತ್ತಿಲ್ಲ, ಅಲ್ಲಿ family values ಕಡಿಮೆಯಾಗಿ ಸಮಸ್ಯೆಗಳನ್ನು ಹೆಚ್ಚು ಬಿಂಬಿಸುತ್ತಿರುವುದರಿಂದ ಜನರಿಗೆ ಇಷ್ಟವಾಗುತ್ತಿಲ್ಲ, ಮಾಸ್ ಸಿನಿಮಾಗಳನ್ನು ಮಾಡುವುದಕ್ಕೆ ದಕ್ಷಿಣದವರೇ ಬೆಸ್ಟು, ಒಳ್ಳೆಯ ಸಿನಿಮಾಗಳನ್ನು ಕೊಡಲಿಕ್ಕಾಗದೇ ಬಾಲಿವುಡ್ ಮಂದಿ ದಕ್ಷಿಣದವರನ್ನು ಕಾಪಿ ಮಾಡುತ್ತಿದ್ದಾರೆ, ಹಿಂದಿಯಲ್ಲಿ ರೀಮೇಕ್ ಚಿತ್ರಗಳ ಸಂಖ್ಯೆ ಹೆಚ್ಚುತ್ತಿವೆ … ಹೀಗೆ ನಾನಾ ರೀತಿಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಹಾಗಾದರೆ, ಬಾಲಿವುಡ್ ಅಥವಾ ಹಿಂದಿ ಚಿತ್ರರಂಗಕ್ಕೆ ಇನ್ನು ಉಳಿಗಾಲವಿಲ್ಲವಾ?

ಎರಡು ವರ್ಷಗಳ ಹಿಂದೆ ಮೊದಲ ಲಾಕ್ಡೌನ್ ಎದುರಾದಾಗ, ಎಲ್ಲ ಕಡೆ ಮಲಯಾಳಂ ಚಿತ್ರಗಳ ಚರ್ಚೆ ನಡೆಯಿತು. ಅಲ್ಲೆಷ್ಟು ಒಳ್ಳೆಯ ಚಿತ್ರಗಳು ಬರುತ್ತಿವೆ, ಅಲ್ಲಿನ ಸ್ಟಾರ್ ನಟರು ಎಂಥೆಂಥಾ ಸಿನಿಮಾಗಳನ್ನು ಮಾಡುತ್ತಿದ್ದಾರೆ, ಮಲಯಾಳಂನಲ್ಲಿ ಎಂತೆಂಥಾ ವೈವಿಧ್ಯಮಯ ಕಥೆಗಳು ಬರುತ್ತಿವೆ ಎಂದೆಲ್ಲಾ ಜನ ಮಾತಾಡಿಕೊಳ್ಳ ತೊಡಗಿದರು.

ಹಾಗೆ ನೋಡಿದರೆ, ಅದು ದಿಢೀರನೇ ಆದ ಬೆಳವಣಿಗೆಯಲ್ಲ. ಮಲಯಾಳಂನಲ್ಲಿ ಎಷ್ಟೋ ವರ್ಷಗಳಿಂದ ಒಳ್ಳೆಯ ಚಿತ್ರಗಳು ಬರುತ್ತಲೇ ಇವೆ. ಅದು ನಮಗೆ ಗೊತ್ತಿರಲಿಲ್ಲ ಅಷ್ಟೇ. ಯಾವುದೇ ಒಂದು ಚಿತ್ರರಂಗದಲ್ಲಿ ರಾತ್ರೋರಾತ್ರಿ ಬದಲಾವಣೆಗಳಾಗುವುದಿಲ್ಲ. ಅದಕ್ಕೆ ಸಾಕಷ್ಟು ವರ್ಷಗಳು ಬೇಕು. ನಿರಂತರ ಪ್ರಯತ್ನಗಳಾಗುತ್ತಲೇ ಇರಬೇಕು. ಯಾವತ್ತೋ, ಯಾವುದೋ ಒಂದು ಕಾರಣದಿಂದ ಅದು ಸುದ್ದಿಯಾಗುತ್ತದೆ ಅಷ್ಟೇ.

ಮಲಯಾಳಂ ಚಿತ್ರರಂಗಕ್ಕೆ ಆಗಿದ್ದೂ ಅದೇ. ಬಹುಶಃ ಅದಕ್ಕೊಂದು ವೇದಿಕೆ ಕಲ್ಪಿಸಿಕೊಟ್ಟಿದ್ದು ಕರೊನಾ ಸಮಯ. ಆಗ ಎಲ್ಲರೂ ಮನೆಯಲ್ಲಿದ್ದರು. ಓಟಿಟಿಗಳಲ್ಲಿ ಮಲಯಾಳಂ ಚಿತ್ರಗಳು ಸಿಗುತ್ತಿದ್ದವು. ಅದನ್ನು ನೋಡಿ ಮಲಯಾಳಂನಲ್ಲಿ ಅದ್ಭುತ ಚಿತ್ರಗಳು ಬರುತ್ತಿವೆ ಎಂದು ಆ ಚಿತ್ರಗಳ ಬಗ್ಗೆ ಗೌರವ ಹೆಚ್ಚಾಯಿತು. ಒಂದಿಷ್ಟು ಸಮಯ ಅದೊಂದು ಸಮೂಹ ಸನ್ನಿಯೇ ಆಗಿ ಹೋಯಿತು.

ಯಾರು ನೋಡಿದರೂ, ಮಲಯಾಳಂ ಚಿತ್ರಗಳ ಬಗ್ಗೆ ಮಾತನಾಡುವವರೇ. ಹಾಗಂತ ಈಗ ಮಲಯಾಳಂನಲ್ಲಿ ಚಿತ್ರಗಳು ಬರುತ್ತಿಲ್ಲವಾ? ‘ದೃಶ್ಯಂ 2’, ‘ಅಯ್ಯಪ್ಪನುಂ ಕೋಶಿಯುಂ’, ‘ಡ್ರೈವಿಂಗ್ ಲೈಸೆನ್ಸ್’ನ ಹೊರತಾಗಿ ಯಾವೊಂದು ಒಳ್ಳೆಯ ಚಿತ್ರ ಬಂದೇ ಇಲ್ಲವಾ? ಖಂಡಿತಾ ಬಂದಿದೆ. ಆದರೆ, ನಮ್ಮ ಗಮನ ಆ ಕಡೆ ಇಲ್ಲ ಅಷ್ಟೇ. ಏಕೆಂದರೆ, ಆಗೇನೋ ಎಲ್ಲರ ಬಳಿ ಸಮಯವಿತ್ತು. ಗಮನವೂ ಆ ಕಡೆ ಇದ್ದುದರಿಂದ, ಮಲಯಾಳಂ ಚಿತ್ರಗಳ ಬಗ್ಗೆ ಹೆಚ್ಚು ಚರ್ಚೆಯಾಯಿತು.

15 ವರ್ಷಗಳ ಹಿಂದೆ ಇರಾನ್ ಚಿತ್ರಗಳ ಬಗ್ಗೆಯೂ ಇದೇ ರೀತಿ ಚರ್ಚೆಯಾಗಿತ್ತು. ಎಲ್ಲರೂ ಇರಾನ್ ಚಿತ್ರಗಳ ಬಗ್ಗೆ ಮಾತನಾಡ ತೊಡಗಿದರು, ಅಲ್ಲಿನ ಚಿತ್ರಗಳು ಹೇಗೆ ವಿಭಿನ್ನವಾಗಿ ನಿಲ್ಲುತ್ತವೆ ಎಂದು ಚರ್ಚಿಸಿದರು, ಕಡಿಮೆ ಬಜೆಟ್ನಲ್ಲಿ ಅಂಥ ಸಿನಿಮಾಗಳನ್ನು ನಿರ್ಮಿಸುವುದಕ್ಕೆ ಹೇಗೆ ಸಾಧ್ಯ ಎಂದು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದರು. ಅಬ್ಬಾಸ್ ಕಿರೋಸ್ತಾಮಿ, ಮೊಹ್ಸನ್ ಮಕ್ಮಲ್ಬಫ್, ಜಾಫರ್ ಪನಾಹಿ, ಮಜಿದ್ ಮಜೀದಿ ಮುಂತಾದವರು ಭಾರತದಲ್ಲೂ ದೊಡ್ಡ ಹೆಸರು ಮಾಡಿದರು.

ಹಾಗೆ ನೋಡಿದರೆ, ಅವರು ಭಾರತದಲ್ಲಿ ಸುದ್ದಿಯಾಗುವುದಕ್ಕಿಂತ ಅದೆಷ್ಟೋ ವರ್ಷಗಳ ಮುಂಚೆಯೇ ಸಕ್ರಿಯವಾಗಿದ್ದರು. ಒಂದಿಷ್ಟು ಅದ್ಭುತ ಚಿತ್ರಗಳನ್ನು ನಿಡಿದ್ದರು ‘ವೇರ್ ಈಸ್ ಮೈ ಫ್ರೆಂಡ್ಸ್ ಹೌಸ್’, ‘ಚಿಲ್ಡ್ರನ್ ಆಫ್ ಹೆವೆನ್’, ‘ದಿ ವೈಟ್ ಬಲೂನ್’, ‘ದಿ ಕಲರ್ ಆಫ್ ಪ್ಯಾರಡೈಸ್’, ‘ದಿ ಸರ್ಕಲ್’, ‘ಟೆನ್’, ‘ಕ್ಲೋಸ್ ಅಪ್’ನಂತಹ ಅದ್ಭುತ ಚಿತ್ರಗಳು ಬಂದಿದ್ದವು. ಆದರೆ, ಅದು ನಮಗೆ ಗೊತ್ತಿರಲಿಲ್ಲ ಅಷ್ಟೇ. ಅದು ಗೊತ್ತಾಗಿದ್ದು ಸಿಡಿ ಕ್ರಾಂತಿಯಿಂದ. 20 ವರ್ಷಗಳ ಹಿಂದೆ, ಸಿಡಿ ಮತ್ತು ಡಿವಿಡಿ ಕ್ರಾಂತಿಯಿಂದ ಇರಾನಿ ಚಿತ್ರಗಳು ಮನೆಮನೆ ತಲುಪಿದವು.

ಬರೀ ಇರಾನಿ ಚಿತ್ರಗಳಷ್ಟೇ ಅಲ್ಲ, ಕೊರಿಯನ್ ಸೇರಿದಂತೆ ಬೇರೆಬೇರೆ ಭಾಷೆಗಳ ಚಿತ್ರಗಳು ಸಹ ಇಲ್ಲಿ ನೋಡುವಂತಾಯಿತು. ಹಾಗಂತ, ಅಲ್ಲಿ ಇದು ಹೊಸದಲ್ಲ. ಎಷ್ಟೋ ವರ್ಷಗಳಿಂದ ಅಂತಹ ಚಿತ್ರಗಳು ಅಲ್ಲಿ ನಿರ್ಮಾಣವಾಗುತ್ತಿತ್ತು. ಅದು ನಮಗೆ ತಡವಾಗಿ ಗೊತ್ತಾಯಿತು ಅಷ್ಟೇ. ಹಾಗಾದರೆ, ಈಗ ಇರಾನ್ನಲ್ಲೋ ಅಥವಾ ಕೊರಿಯಾದಲ್ಲೋ ಒಳ್ಳೆಯ ಚಿತ್ರಗಳು ಬರುತ್ತಿಲ್ಲವೇ? ಖಂಡಿತಾ ಬರುತ್ತಿರಬಹುದು. ಆದರೆ, ನಮ್ಮ ಫೋಕಸ್ ಅಲ್ಲಿಲ್ಲ ಅಷ್ಟೇ.

ಈಗ ಆಗುತ್ತಿರುವುದು ಸಹ ಅದೇ. ಉತ್ತರ ಭಾರತದ ಜನರಿಗೆ ದಕ್ಷಿಣ ಭಾರತದ ಚಿತ್ರಗಳು ಮುಂಚೆ ಇಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಹಿಂದಿ ಚಿತ್ರಗಳೇನೋ ದೇಶದ ಎಲ್ಲ ರಾಜ್ಯಗಳ ಎಲ್ಲ ನಗರಗಳಲ್ಲೂ ನೇರವಾಗಿ ಬಿಡುಗಡೆಯಾಗುತ್ತಿತ್ತು. ಆದರೆ, ಕನ್ನಡದ, ತೆಲುಗು-ತಮಿಳಿನ ಅಥವಾ ಮಲಯಾಳಂನ ಚಿತ್ರಗಳು ಅಲ್ಲಿ ಬಿಹಾರದಲ್ಲೋ, ಅಸ್ಸಾಂನಲ್ಲೋ ಅಥವಾ ಉತ್ತರ ಪ್ರದೇಶದಲ್ಲೋ ಬಿಡುಗಡೆಯಾಗುವುದು ಅಷ್ಟು ಸುಲಭವಾಗಿರಲಿಲ್ಲ.

ಡಬ್ಬಿಂಗ್ನಿಂದಾಗಿ, ಓಟಿಟಿಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಆ ಅಂತರ ಕಡಿಮೆಯಾಗಿತ್ತು. ಈಗ ಅಲ್ಲಿನ ಚಿತ್ರಮಂದಿರಗಳಲ್ಲಿ, ಇಲ್ಲಿನ ಚಿತ್ರಗಳು ನೇರವಾಗಿ ಬಿಡುಗಡೆ ಆಗುತ್ತಿರುವುದರಿಂದ, ಇಲ್ಲಿನ ಚಿತ್ರಗಳ ಬಗ್ಗೆ ಅವರಿಗೆ ಗೊತ್ತಾಗುತ್ತಿದೆ. ಹಿಂದಿಯಲ್ಲಿ ಇತ್ತೀಚೆಗೆ ಗಂಭೀರ ಚಿತ್ರಗಳನ್ನು ನೋಡಿ ಸುಸ್ತಾಗಿದ್ದ ಅವರಿಗೆ, ಇಲ್ಲಿನ ಚಿತ್ರಗಳನ್ನು ನೋಡಿ ಇಲ್ಲೇನೋ ವಿಶೇಷವಾಗುತ್ತಿದೆ ಎಂದನಿಸತೊಡಗಿದೆ. ಈ ತರಹದ ಚಿತ್ರಗಳು ಅಲ್ಲೇಕೆ ಬರುತ್ತಿಲ್ಲ ಎಂದು ಚರ್ಚೆ ನಡೆಯುತ್ತಿವೆ.

ಹಾಗೆ ನೋಡಿದರೆ, ಇತ್ತೀಚೆಗೆ ದೊಡ್ಡ ಸುದ್ದಿಯಾಗುತ್ತಿರುವ (‘ಈಗ’, ‘ಬಾಹುಬಲಿ’, ‘ಎಂದಿರನ್’, ‘RRR’ನಂತಹ ಕೆಲವು ಚಿತ್ರಗಳನ್ನು ಹೊರತುಪಡಿಸಿ) ಚಿತ್ರಗಳ್ಯಾವುವೂ ನಮಗೆ ಹೊಸದಲ್ಲ. ಅವೆಲ್ಲವೂ ಉತ್ತರದವರಿಗೆ ವಿಶೇಷವಾಗಿ ಕಾಣಿಸುತ್ತಿವೆ. ಅದು ಬಜೆಟ್ ಇರಬಹುದು, ಮೇಕಿಂಗ್ ಇರಬಹುದು ಅಥವಾ ಕಾರಣ ಏನೇ ಇರಬಹುದು, ಇಲ್ಲಿನ ಚಿತ್ರಗಳು ಒಟ್ಟಾರೆ ಇಷ್ಟವಾಗುತ್ತಿವೆ ಅಷ್ಟೇ.

ಹಾಗಂತ ಮುಂದೆ ಸಹ ಇದೇ ಮುಂದುವರೆಯುತ್ತದಾ? ಹೇಳುವುದು ಕಷ್ಟ. ಈಗ ಇಷ್ಟವಾಗಿದ್ದು ಮುಂದೆಯೂ ಇಷ್ಟವಾಗುತ್ತದೆ ಎಂದು ಹೇಳುವುದು ಕಷ್ಟ. ಮೇಲಾಗಿ, ಮೇಲಿಂದ ಮೇಲೆ ಹೀಗೆ ಸದ್ದು ಮಾಡುವ ಚಿತ್ರಗಳು ಬಂದರೆ, ಆಗ ಗಮನ ಈ ಕಡೆಯೇ ಇರಬಹುದು. ಆದರೆ, ಮುಂದಿನ ದಿನಗಳಲ್ಲಿ ಬೆರಳಣಿಕೆಯಷ್ಟು ಚಿತ್ರಗಳನ್ನು ಹೊರತುಪಡಿಸಿದರೆ, ಇಡೀ ದೇಶವೇ ಕಾಯುವ ಚಿತ್ರಗಳ ಸಂಖ್ಯೆ ಕಡಿಮೆ ಎಂದು ಹೇಳಬಹುದು.

ಹಾಗಾಗಿ, ಮುಂದೆ ಸಹ ದಕ್ಷಿಣದ ಚಿತ್ರಗಳಿಗೆ ಇದೇ ರೀತಿಯ ಕ್ರೇಜ್ ಮುಂದುವರೆಯುತ್ತದೆ ಎಂದು ಹೇಳುವುದು ಕಷ್ಟ. ಅಷ್ಟರಲ್ಲಿ ಜನರ ಗಮನ ಬೇರೆ ಕಡೆ ಹೋಗಿದ್ದರೆ, ಆಗ ಎಷ್ಟೇ ದೊಡ್ಡ ಚಿತ್ರ ಬಿಡುಗಡೆಯಾದರೂ, ಆ ಬಗ್ಗೆ ಆಸಕ್ತಿ ಇಲ್ಲದಿರಬಹುದು. ಹಾಗಾಗಿ, ದಕ್ಷಿಣದಿಂದ ಬಾಲಿವುಡ್ಗೆ ಅಪಾಯ ಅಥವಾ ಹಿಂದಿ ಚಿತ್ರಗಳ ಕಥೆ ಮುಗಿಯಿತು ಎಂದೆಲ್ಲ ಹೇಳುವುದು ತಪ್ಪಾಗುತ್ತದೆ.

ಸದ್ಯ ಎಲ್ಲರ ಗಮನವೂ ದಕ್ಷಿಣದತ್ತ ಇದೆ. ಅದ್ಯಾವಾಗ ಬದಲಾಗುತ್ತದೋ?

ಮುಂದುವರೆಯುತ್ತದೆ …

(ಚೇತನ್ ನಾಡಿಗೇರ್ ಅವರ ಫೇಸ್‌ಬುಕ್‌ ನಿಂದ ಆಯ್ದುಕೊಂಡ ಬರಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243,

ಕ್ರೀಡೆ

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

Published

on

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.

4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.

6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಚಿತ್ರ ವಿಮರ್ಶೆ | ಸೂಲಗಿತ್ತಿ ತಾಯವ್ವ

Published

on

~ಡಾ. ಪುಷ್ಪಲತ ಸಿ ಭದ್ರಾವತಿ

ಚಿತ್ರ – ತಾಯವ್ವ ,ನಿರ್ಮಾಣ – ಅಮರ ಫಿಲಂಸ್, ನಿರ್ದೇಶನ- ಸಾತ್ವಿಕ ಪವನ ಕುಮಾರ್,ತಾರಾಗಣ – ಗೀತಪ್ರಿಯ. ಬೇಬಿ ಯಶಿಕಾ, ಮತ್ತಿತರರು

ನಾವು ಎಷ್ಟೇ ಆಧುನಿಕತೆ, ಸಮಾನತೆ, ಸ್ವಾತಂತ್ರ್ಯ ಎಂದು ಹೆಣ್ಣು ಮಾತನಾಡಿದರೂ, ಈ ಸಮಾಜದ ಸಂಕೋಲೆಯಲ್ಲಿ ಇವತ್ತಿಗೂ ನಾವು ಕಂಡು ಕಾಣದಂತೆ ಬಂಧಿಯಾಗಿದ್ದೇವೆ. ಈ ಪುರುಷ ನಿರ್ಮಿತ ಸಮಾಜದಲ್ಲಿ ಹೆಣ್ಣನ್ನು ತನ್ನ ಸಂಕೂಲೆಯಲ್ಲಿಯೇ ಬಂಧಿಸಿಟ್ಟಿರುವನು. ಅದೊಂದು ಸ್ವೇಚ್ಛಾಚಾರದ, ಸಮಾನತೆಯ, ಹೆಸರಿನ ಮುಖವಾಡ ತೊಟ್ಟಿದೆ ಅಷ್ಟೇ. ಈ ಮುಖವಾಡಗಳ ನಡುವಿನ ಪುರುಷ ನಿಯಂತ್ರಿತ ಬದುಕಿನಲ್ಲಿ ಹೋರಾಟವೆಂಬುದು ಹೆಣ್ಣಿಗೆ ನಿತ್ಯವಾಗಿದೆ.

ಸ್ತ್ರೀ ಅವಳು ಪ್ರಕೃತಿ, ಪ್ರಕೃತಿ ಇಲ್ಲವಾದರೆ ಇನ್ನೂ ನಾವೆಲ್ಲ ತೃಣಮೂಲ. ಇಂತಹ ಸತ್ಯ ಅರಿವಿದ್ದರೂ ನಾವು ಪದೇ ಪದೇ ಈ ಪ್ರಕೃತಿಯನ್ನು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಹಾಗೆಯೇ ಪ್ರಕೃತಿಯ ಇನ್ನೊಂದು ರೂಪವಾದ ‘ಹೆಣ್ಣನ್ನು’ ನಾವು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಹೆಣ್ಣಿನ ಸರಾಸರಿ ಗಂಡಿಗಿಂತ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ” ಹೆಣ್ಣು ಭ್ರೂಣಹತ್ಯೆ” ಎಂಬುದು ಸಮಾಜದ ಅದು ಹಾಗೂ ವಿಶ್ವಕ್ಕೂ ಮಾರಕ. ಇಂತಹ ಒಂದು ವಿಷಯ ವಸ್ತುವನ್ನು ಕೇಂದ್ರಿಕರಿಸಿಕೊಂಡು ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ, ಎಚ್ಚರಿಕೆಯ ಕರೆಘಂಟೆಯೆಂಬಂತೆ “ತಾಯವ್ವ” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ.

ಕಳೆದ ವರ್ಷಗಳಲ್ಲಿಯೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿಂದೆ ಸುಮಾರು 500ಕ್ಕೂ ಹೆಚ್ಚಿನ ಭ್ರೂಣಗಳು ಸಿಕ್ಕವು. ವಿಚಾರ ಪ್ರಚಾರವೂ ಆಯಿತು. ಆದರೆ ಕೇವಲ ಸುದ್ದಿಯಾಗಿ ಕಣ್ಮರೆಯಾಗುತ್ತವೆ. ಇಂದಿನ ಸಮಾಜಕ್ಕೆ ಇಂತಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದು ಯುವಕರಿಗೆ ಹಾಗೂ ಸಮಾಜಕ್ಕೆ ಜಾಗೃತಿಮೂಡಿಸಬೇಕಾಗಿದೆ. ಇಂತಹ ಕಾರ್ಯದಲ್ಲಿ
” ತಾಯವ್ವ” ಸಿನಿಮಾ ಗೆದ್ದಿದೆ ಎಂದರೆ ಅತಿಶಯೋಕ್ತಿಯೆನಲ್ಲಾ. ಈ ಗೆಲುವು ಚಿತ್ರದ ನಾಯಕಿ ” ಗೀತ ಪ್ರಿಯಾ” ಅವರ ಶ್ರಮ, ಹಾಗೂ ಅವರ ಪೂರ್ಣ ಪ್ರಮಾಣದ ಪಾತ್ರದ ತಲ್ಲೀನತೆಯು ಸಿನಿಮಾದುದ್ದಕ್ಕೂ ಕಾಣುತ್ತದೆ.

ಮೂಲತಃ ” ಗೀತ ಪ್ರಿಯಾ” ಅವರು ಕಳೆದ 35 ವರ್ಷಗಳ ಅಧಿಕವಾಗಿ ತಮ್ಮನ್ನು ತಾವು ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಧ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ಇವರ ತಾಯಿ ನೆರಳಲ್ಲಿ ಹುಟ್ಟಿದ ಮಗುವೇ ” ಕೃಪಾನಿಧಿ ಗ್ರೂಪ್ ಸಂಸ್ಥೆ”. ಸದಾ ಮಿಡಿವ ತಾಯಿ ಹೃದಯ ಇವರದ್ದಾಗಿದ್ದರಿಂದಲೇ ತಮ್ಮ ಪ್ರಥಮ ಚಿತ್ರದಲ್ಲಿಯೇ ಗಂಭೀರ ವಿಷಯ ವಸ್ತುವಿನ ಆಯ್ಕೆ, ಗಂಭೀರವಾದ ಅಭಿನಯ, ಸಮಾಜಮುಖಿ ಕಾಳಜಿಯಿರುವುದರಿಂದಲೇ ಇದರೆಲ್ಲರ ಫಲಿತಗಳೆಂಬಂತೆೇ “ತಾಯವ್ವ” ರೂಪುಗೊಂಡಿದೆ.

ಸಿನಿಮಾ ಕಲಾಪ್ರಿಯರಿಗೆ ಒಂದೊಳ್ಳೆ ಸುಗ್ಗಿ, ಕುಟುಂಬದ ಸಮೇತ ಸಿನಿಮಾ ವೀಕ್ಷಿಸಬಹುದು. ಗೀತ ಪ್ರಿಯಾ ಅವರು ಈ ಸಿನಿಮಾದಲ್ಲಿ ಅಭಿನಯಿಸಿ, ಹಾಗೂ ಸಂಗೀತಕ್ಕೆ ತಮ್ಮ ಧ್ವನಿಯನ್ನು ನೀಡಿರುವುದು ಇನ್ನೂ ವಿಶೇಷ. ಬೇಬಿ ಯಶೀಕಾ ಮುಂದಿನ ಭವಿಷ್ಯ ಇನ್ನಷ್ಟು ಸಿನಿಮಾರಂಗದಲ್ಲಿ ಉಜ್ವಲವಾಗಿರಲಿ. ನಿರ್ದೇಶಕರ ಪ್ರಯತ್ನ. ಚಿತ್ರಕಥೆಯ ಹಿಡಿತ ಹಾಗೂ ಎಲ್ಲೂ ಸಡಿಲವಿರದೇ ಸಾಗಿರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರಸ್ತುತ ಕೊಡುಗೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮತ್ತೆ ತಾಯಿಯಾಗಬೇಕು : ನಟಿ ಸಮಂತಾ

Published

on

ಸುದ್ದಿದಿನಡೆಸ್ಕ್:ಇತ್ತೀಚೆಗೆ ನಟಿ ಸಮಂತಾ ಅವರ ಕಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಹೇಳಿಕೆಗಳ ಮೇಲೆ ನಾನಾ ರೀತಿಯ ಅನುಮಾನಗಳೂ ವ್ಯಕ್ತವಾಗಿವೆ.

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಸಮಂತಾ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇತ್ತೀಚಿಗೆ ಸಮಂತಾ ಅವರ ವೆಬ್ ಸಿರೀಸ್ ವಿಚಾರಕ್ಕೆ ಸುದ್ದಿಯಾಗಿದ್ದರು. ನಟಿಯ ಇತ್ತೀಚಿನ ವೆಬ್ ಸಿರೀಸ್ ಸಿಟಾಡೆಲ್ ಸಖತ್ ಸುದ್ದಿಯಾಗಿದೆ. ಸದ್ಯ ಈ ವೆಬ್ ಸೀರೀಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ವೆಬ್ ಸರಣಿಯ ಪ್ರಚಾರದ ವೇಳೆ ಮಾಡಿದ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದರ ಭಾಗವಾಗಿ ಸಮಂತಾ ರಾಜ್ ಮತ್ತು ಡಿಕೆ ಸಂದರ್ಶನವೊಂದರಲ್ಲಿ ಹೇಳಿದ್ದು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣದ ವೇಳೆ ನಾನು ಹಲವು ಭಾವನೆಗಳಿಗೆ ಒಳಗಾಗಿದ್ದೆ ಎಂದು ಸಮಂತಾ ಹೇಳಿದ್ದಾರೆ. ಅಲ್ಲದೇ ಅವರ ನಿರ್ದೇಶನದಲ್ಲಿ ನಟಿಸುವುದು ಕಷ್ಟ ಎಂದಿದ್ದಾರೆ. ನಂತರ ಅದೇ ಸಂದರ್ಶನದಲ್ಲಿ ನಟಿ ಬೇರೆ ವಿಚಾರವನ್ನೂ ಹೇಳಿದ್ದಾರೆ.

ಹನಿ ಬನ್ನಿ ವೆಬ್ ಸರಣಿಯಲ್ಲಿ ತಾಯಿ ಪಾತ್ರದ ಬಗ್ಗೆ ಮಾತನಾಡುತ್ತಾ, ಅವರು ಸಂವೇದನಾಶೀಲ ಕಾಮೆಂಟ್​ಗಳನ್ನು ಮಾಡಿದ್ದಾರೆ. ನನಗೆ ತಾಯಿಯಾಗುವ ಕನಸು ಇದೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕಾಗಿ ತಡವಾಗಿದೆ ಎಂದು ಅವರು ಭಾವಿಸುವುದಿಲ್ಲ. ನಾನು ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದು ಸಮಂತಾ ಹೇಳಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಸಮಂತಾ ಈ ಕಾಮೆಂಟ್ ಮಾಡಿದ ನಂತರ ಮತ್ತೊಮ್ಮೆ ಅವರ ಎರಡನೇ ಮದುವೆಯ ಸುದ್ದಿಗೆ ವೇಗ ಸಿಕ್ಕಿದೆ. ಈ ಹಿಂದೆ ರಾಜ್ ಹಾಗೂ ಡಿಕೆಶಿಯಲ್ಲಿ ರಾಜ್ ನನ್ನು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಇದೀಗ ಸಮಂತಾ ಎರಡನೇ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಮತ್ತೆ ತಾಯಿಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ರಾಜ್ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ವೇಗ ಸಿಕ್ಕಿದೆ. ಈ ಸುದ್ದಿಯಲ್ಲಿನ ಸತ್ಯಗಳ ಹೊರತಾಗಿ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸುದ್ದಿಗೆ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending